Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಐಎಎಸ್ ಅಧಿಕಾರಿ ಪೋಸ್ಟ್ಗೆ ಕಮೆಂಟ್: ನಗುವ ಇಮೋಜಿ ಹಾಕಿದ್ದವನ ಮೇಲೆ ಕೇಸ್...!
ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡೋದು, ಚಾಟ್ ಮಾಡೋದು, ವಿವಾದಾತ್ಮಕ ಹೇಳಿ ನೀಡೋದು, ಇಲ್ಲವೆ ಲೈವ್ ವಿಡಿಯೋ ಮಾಡೋದು ಎಲ್ಲವೂ ನಿತ್ಯ ನಾವು ನೋಡುವ ವಿಚಾರ, ಆದ್ರೆ ಇದೇ ಸೋಶಿಯಲ್ ಮೀಡಿಯಾ ನಿಮ್ಮ ಜೀವನಕ್ಕೆ ಕುತ್ತು ತರುತ್ತೆ ಅನ್ನೋದು ಕೂಡ ಹಲವು ಬಾರಿ ಸಾಬೀತಾಗಿದೆ. ನೀವು ಮಾಡುವ ಒಂದೊಂದು ಕಮೆಂಟ್ಗಳು ಕೂಡ ನಿಮ್ಮನ್ನು ಕಾನೂನಿನ ಅಡಿ ಶಿಕ್ಷೆಗೆ ಗುರಿ ಮಾಡಬಹುದು ಎಂಬುದು ನಿಮಗೆ ತಿಳಿದಿದ್ಯಾ?
ಇಲ್ಲೊಬ್ಬ ಫೇಸ್ಬುಕ್ನಲ್ಲಿ ಮಾಡಿದ್ದ ಒಂದೇ ಒಂದು ಕಮೆಂಟ್ ಈಗ ಜಾಮೀನು ಪಡೆಯಲು ಬರೋಬ್ಬರಿ 200ಕ್ಕೂ ಹೆಚ್ಚು ಕಿ.ಮೀ ದೂರ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆತ ಒಂದು ಇಮೋಜಿ ಜೊತೆಗೆ ಕಮೆಂಟ್ ಮಾಡಿದ್ದ. ಆತ ಈಗ ಜಾಮೀನು ಪಡೆದು ಹೊರಗೆ ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಇದು ನಿಮಗೆ ಅಚ್ಚರಿ ತರಬಹುದು. ಐಎಎಸ್ ಅಧಿಕಾರಿಯೊಬ್ಬರು ಹಾಕಿದ್ದ ಫೇಸ್ಬುಕ್ ಪೋಸ್ಟ್ಗೆ ಆತ ಕಮೆಂಟ್ ಮಾಡಿ ಈ ಅಚಾತುರ್ಯಕ್ಕೆ ಕಾರಣನಾಗಿದ್ದಾನೆ. ಆತನ ಇಮೋಜಿ ಹಾಗೂ ಕಮೆಂಟ್ ಸಂಬಂಧ ಅಧಿಕಾರಿ ದೂರು ನೀಡಿ ಈಗ ಜಾಮೀನು ಪಡೆಯಬೇಕಾದ ಸ್ಥಿತಿಗೆ ಆತ ಬಂದಿದ್ದಾನೆ.
ಏನಿದು ಘಟನೆ? ಅಸಲಿಗೆ ಆಗಿದ್ದೇನು?
ಈ ಘಟನೆ ನಡೆದಿದ್ದು 2023ರಲ್ಲಿ ನಲ್ಬರಿ ಪಟ್ಟಣದ ಐಎಎಸ್ ಮಹಿಳಾ ಅಧಿಕಾರಿಯೊಬ್ಬರು ಫೇಸ್ಬುಕ್ನಲ್ಲಿ ಬಹಳ ಆಕ್ಕೀವ್ ಆಗಿದ್ದರು. ನಿತ್ಯ ಒಂದೊಂದು ಫೋಟೋವನ್ನು ಹಾಕುವುದು ಅವರ ಅಭ್ಯಾಸವಾಗಿತ್ತು. ಅದೇ ರೀತಿ ಐಎಎಸ್ ಅಧಿಕಾರಿ ವರ್ಣಾಲಿ ದೇಕಾ ಅವರು ಹಾಕಿದ್ದ ಎಲ್ಲಾ ಪೋಸ್ಟ್ಗಳಿಗೂ ಇಬ್ಬರು ಯಾವಾಗಲು ಕೆಟ್ಟದಾಗಿ ಕೆಮೆಂಟ್ ಮಾಡುತ್ತಿದ್ದರು. ಹಾಗೂ ಜೋರಾಗಿ ನಗುವಂತಹ ಇಮೋಜಿ ಅದರ ಜೊತೆಗೆ ಹಾಕುತ್ತಿದ್ದರು.
ಒಂದು ದಿನ ದೇಕಾ ಹಾಕಿದ್ದ ಫೋಟೋಗೆ ನರೇಶ್ ಬರುವಾ ಮತ್ತು ಅಬ್ದುಲ್ ಸುಬರ್ ಚೌಧರಿ ಕಮೆಂಟ್ ಮಾಡಿದ್ದಾರೆ. ಇವನ್ನೇನು ಮೇಡಂ ಮೇಕಪ್ ಮಾಡಿಲ್ಲವೇ ಎಂದು ಆತ ಕಮೆಂಟ್ ಮಾಡಿ ನಗುವ ಇಮೋಜಿ ಹಾಕಿದ್ದ. ಅಮಿತ್ ಚಕ್ರವರ್ತಿ ಎಂಬಾತ ಈ ಕಾಮೆಂಟ್ಗೆ ನಗುವ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದ.
ಇದಕ್ಕೆ ಪ್ರತಿಕ್ರಿಸಿದ್ದ ದೇಕಾ ನಿಮಗೆ ಅದರಿಂದ ಏನು ಸಮಸ್ಯೆ ಎಂದು ಕೇಳಿದ್ದರು ಹಾಗೆ ಇದು ಮಾತಿಗೆ ಮಾತು ಬೆಳೆದಿತ್ತು. ನಂತರ ಮಹಿಳಾ ಅಧಿಕಾರಿ ಕೊಕ್ರಜಾರ್ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿ ಮೂವರಿಗೂ ನೋಟಿಸ್ ಜಾರಿ ಮಾಡಿದ್ದರು.
ಈಗ ಅಮಿತ್ ಚಕ್ರವರ್ತಿ ನಗುವ ಇಮೋಜಿ ಹಾಕಿದ್ದ ಪರಿಣಾಮ ಜಾಮೀನು ಪಡೆಯಬೇಕಾಗಿದೆ. ಹಾಗೆ 200 ಕಿ.ಮೀ ಪ್ರಯಾಣಿಸಿ ಕೋರ್ಟ್ಗೆ ಹಾಜರಾಗಬೇಕಿದೆ. ಈ ಸಂಬಂಧ ಮಾತನಾಡಿದ್ದ ಆತ ವರ್ಣಾಲಿ ದೇಕಾ ಐಎಎಸ್ ಅಧಿಕಾರಿ ಅಥವಾ ಉಪ ಆಯುಕ್ತೆ ಎಂದು ನನಗೆ ತಿಳಿದಿರಲಿಲ್ಲ. ಅವರ ಯಾವುದೇ ಪೋಸ್ಟ್ಗೆ ನಾನು ಕಮೆಂಟ್ ಮಾಡಿಲ್ಲ. ಆದ್ರೆ ಒಂದೇ ಇಮೋಜಿ ಹಾಕಿದ್ದೆ. ಇದಕ್ಕೆ ಕೇಸ್ ಹಾಕಿದ್ದಾರೆ ಎಂದು ಆತ ಹೇಳಿಕೊಂಡಿದ್ದಾನೆ.
ಸದ್ಯ ಮೂವರು ಈ ಪೋಸ್ಟ್ಗಳಿಗೆ ಮಾಡಿರುವ ಕಮೆಂಟ್ಗಳ ಸ್ಕ್ರೀನ್ ಶಾಟ್ಗಳನ್ನ ದೂರಿನ ಜೊತೆಗೆ ಸಲ್ಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354D ಹಾಗೂ ಸೆಕ್ಷನ್ 354A ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ.



Click it and Unblock the Notifications