Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಐಎಎಸ್ ಅಧಿಕಾರಿ ಪೋಸ್ಟ್ಗೆ ಕಮೆಂಟ್: ನಗುವ ಇಮೋಜಿ ಹಾಕಿದ್ದವನ ಮೇಲೆ ಕೇಸ್...!
ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡೋದು, ಚಾಟ್ ಮಾಡೋದು, ವಿವಾದಾತ್ಮಕ ಹೇಳಿ ನೀಡೋದು, ಇಲ್ಲವೆ ಲೈವ್ ವಿಡಿಯೋ ಮಾಡೋದು ಎಲ್ಲವೂ ನಿತ್ಯ ನಾವು ನೋಡುವ ವಿಚಾರ, ಆದ್ರೆ ಇದೇ ಸೋಶಿಯಲ್ ಮೀಡಿಯಾ ನಿಮ್ಮ ಜೀವನಕ್ಕೆ ಕುತ್ತು ತರುತ್ತೆ ಅನ್ನೋದು ಕೂಡ ಹಲವು ಬಾರಿ ಸಾಬೀತಾಗಿದೆ. ನೀವು ಮಾಡುವ ಒಂದೊಂದು ಕಮೆಂಟ್ಗಳು ಕೂಡ ನಿಮ್ಮನ್ನು ಕಾನೂನಿನ ಅಡಿ ಶಿಕ್ಷೆಗೆ ಗುರಿ ಮಾಡಬಹುದು ಎಂಬುದು ನಿಮಗೆ ತಿಳಿದಿದ್ಯಾ?
ಇಲ್ಲೊಬ್ಬ ಫೇಸ್ಬುಕ್ನಲ್ಲಿ ಮಾಡಿದ್ದ ಒಂದೇ ಒಂದು ಕಮೆಂಟ್ ಈಗ ಜಾಮೀನು ಪಡೆಯಲು ಬರೋಬ್ಬರಿ 200ಕ್ಕೂ ಹೆಚ್ಚು ಕಿ.ಮೀ ದೂರ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆತ ಒಂದು ಇಮೋಜಿ ಜೊತೆಗೆ ಕಮೆಂಟ್ ಮಾಡಿದ್ದ. ಆತ ಈಗ ಜಾಮೀನು ಪಡೆದು ಹೊರಗೆ ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಇದು ನಿಮಗೆ ಅಚ್ಚರಿ ತರಬಹುದು. ಐಎಎಸ್ ಅಧಿಕಾರಿಯೊಬ್ಬರು ಹಾಕಿದ್ದ ಫೇಸ್ಬುಕ್ ಪೋಸ್ಟ್ಗೆ ಆತ ಕಮೆಂಟ್ ಮಾಡಿ ಈ ಅಚಾತುರ್ಯಕ್ಕೆ ಕಾರಣನಾಗಿದ್ದಾನೆ. ಆತನ ಇಮೋಜಿ ಹಾಗೂ ಕಮೆಂಟ್ ಸಂಬಂಧ ಅಧಿಕಾರಿ ದೂರು ನೀಡಿ ಈಗ ಜಾಮೀನು ಪಡೆಯಬೇಕಾದ ಸ್ಥಿತಿಗೆ ಆತ ಬಂದಿದ್ದಾನೆ.
ಏನಿದು ಘಟನೆ? ಅಸಲಿಗೆ ಆಗಿದ್ದೇನು?
ಈ ಘಟನೆ ನಡೆದಿದ್ದು 2023ರಲ್ಲಿ ನಲ್ಬರಿ ಪಟ್ಟಣದ ಐಎಎಸ್ ಮಹಿಳಾ ಅಧಿಕಾರಿಯೊಬ್ಬರು ಫೇಸ್ಬುಕ್ನಲ್ಲಿ ಬಹಳ ಆಕ್ಕೀವ್ ಆಗಿದ್ದರು. ನಿತ್ಯ ಒಂದೊಂದು ಫೋಟೋವನ್ನು ಹಾಕುವುದು ಅವರ ಅಭ್ಯಾಸವಾಗಿತ್ತು. ಅದೇ ರೀತಿ ಐಎಎಸ್ ಅಧಿಕಾರಿ ವರ್ಣಾಲಿ ದೇಕಾ ಅವರು ಹಾಕಿದ್ದ ಎಲ್ಲಾ ಪೋಸ್ಟ್ಗಳಿಗೂ ಇಬ್ಬರು ಯಾವಾಗಲು ಕೆಟ್ಟದಾಗಿ ಕೆಮೆಂಟ್ ಮಾಡುತ್ತಿದ್ದರು. ಹಾಗೂ ಜೋರಾಗಿ ನಗುವಂತಹ ಇಮೋಜಿ ಅದರ ಜೊತೆಗೆ ಹಾಕುತ್ತಿದ್ದರು.
ಒಂದು ದಿನ ದೇಕಾ ಹಾಕಿದ್ದ ಫೋಟೋಗೆ ನರೇಶ್ ಬರುವಾ ಮತ್ತು ಅಬ್ದುಲ್ ಸುಬರ್ ಚೌಧರಿ ಕಮೆಂಟ್ ಮಾಡಿದ್ದಾರೆ. ಇವನ್ನೇನು ಮೇಡಂ ಮೇಕಪ್ ಮಾಡಿಲ್ಲವೇ ಎಂದು ಆತ ಕಮೆಂಟ್ ಮಾಡಿ ನಗುವ ಇಮೋಜಿ ಹಾಕಿದ್ದ. ಅಮಿತ್ ಚಕ್ರವರ್ತಿ ಎಂಬಾತ ಈ ಕಾಮೆಂಟ್ಗೆ ನಗುವ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದ.
ಇದಕ್ಕೆ ಪ್ರತಿಕ್ರಿಸಿದ್ದ ದೇಕಾ ನಿಮಗೆ ಅದರಿಂದ ಏನು ಸಮಸ್ಯೆ ಎಂದು ಕೇಳಿದ್ದರು ಹಾಗೆ ಇದು ಮಾತಿಗೆ ಮಾತು ಬೆಳೆದಿತ್ತು. ನಂತರ ಮಹಿಳಾ ಅಧಿಕಾರಿ ಕೊಕ್ರಜಾರ್ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿ ಮೂವರಿಗೂ ನೋಟಿಸ್ ಜಾರಿ ಮಾಡಿದ್ದರು.
ಈಗ ಅಮಿತ್ ಚಕ್ರವರ್ತಿ ನಗುವ ಇಮೋಜಿ ಹಾಕಿದ್ದ ಪರಿಣಾಮ ಜಾಮೀನು ಪಡೆಯಬೇಕಾಗಿದೆ. ಹಾಗೆ 200 ಕಿ.ಮೀ ಪ್ರಯಾಣಿಸಿ ಕೋರ್ಟ್ಗೆ ಹಾಜರಾಗಬೇಕಿದೆ. ಈ ಸಂಬಂಧ ಮಾತನಾಡಿದ್ದ ಆತ ವರ್ಣಾಲಿ ದೇಕಾ ಐಎಎಸ್ ಅಧಿಕಾರಿ ಅಥವಾ ಉಪ ಆಯುಕ್ತೆ ಎಂದು ನನಗೆ ತಿಳಿದಿರಲಿಲ್ಲ. ಅವರ ಯಾವುದೇ ಪೋಸ್ಟ್ಗೆ ನಾನು ಕಮೆಂಟ್ ಮಾಡಿಲ್ಲ. ಆದ್ರೆ ಒಂದೇ ಇಮೋಜಿ ಹಾಕಿದ್ದೆ. ಇದಕ್ಕೆ ಕೇಸ್ ಹಾಕಿದ್ದಾರೆ ಎಂದು ಆತ ಹೇಳಿಕೊಂಡಿದ್ದಾನೆ.
ಸದ್ಯ ಮೂವರು ಈ ಪೋಸ್ಟ್ಗಳಿಗೆ ಮಾಡಿರುವ ಕಮೆಂಟ್ಗಳ ಸ್ಕ್ರೀನ್ ಶಾಟ್ಗಳನ್ನ ದೂರಿನ ಜೊತೆಗೆ ಸಲ್ಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354D ಹಾಗೂ ಸೆಕ್ಷನ್ 354A ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ.



Click it and Unblock the Notifications