Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಓಣಂ ಪ್ರಯುಕ್ತ ನಡೆಯುತ್ತಿದ್ದ ಇಡ್ಲಿ ಸ್ಪರ್ಧೆಯಲ್ಲಿ ಇಡ್ಲಿ ಗಂಟಲಿಗೆ ಸಿಕ್ಕಾಕಿಕೊಂಡು ಸಾವು
ಎಲ್ಲಾದರು ತಿನ್ನುವ ಸ್ಪರ್ಧೆ ಇದ್ದಾಗ ಗೆಲ್ಲುವ ಭರದಲ್ಲಿ ಪ್ರಾಣಕ್ಕೆ ಅಪಾಯ ತಂದುಕೊಳ್ಳಬೇಡಿ. ಕೇರಳದಲ್ಲಿ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಇಡ್ಲಿ ತಿಂದು ವ್ಯಕ್ತಿ ಸಾವನ್ನಪ್ಪಿದ್ದಾರೆ. ಇಂಥದ್ದೇ ಘಟನೆ ಈ ಹಿಂದೆ ಕರ್ನಾಟಕದಲ್ಲಿಯೂ ನಡೆದಿತ್ತು.

ಕೇರಳದ ಪ್ರಮುಖ ಓಣಂ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮ
ಕೇರಳದ ಪ್ರಮುಖ ಹಬ್ಬ ಓಣಂ, ಈ ದಿನದಂದು ಹೂವಿನ ರಂಗೋಲಿ ಹಾಕಿ, ಓಣಂ ಸದ್ಯ ರೆಡಿ ಮಾಡಿ ಹಬ್ಬವನ್ನು ಆಚರಿಸುತ್ತಾರೆ, ಮನರಂಜನೆಗಾಗಿ ಕೆಲ ಸ್ಪರ್ಧೆಗಳನ್ನು ಆಯೋಜಿಸುತ್ತಾರೆ, ಅದರಂತೆ ಇಡ್ಲಿ ತಿನ್ನುವ ಸ್ಪರ್ಧೆ ಇತ್ತು. ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿ ಒಂದೇ ಬಾರಿಗೆ ಮೂರು ಇಡ್ಲಿ ತಿನ್ನುವ ಪ್ರಯತ್ನ ಮಾಡಿದ್ದಾರೆ. ಇಡ್ಲಿ ಗಂಟಲಿನಲ್ಲಿ ಸಿಕ್ಕಾಕಿಕೊಂಡು ಸಾವು ಸಂಭವಿಸಿದೆ.
ಕೇರಳದ ವಲಯಾರ್ ಎಂಬ ಪ್ರದೇಶದಲ್ಲಿ ನಡೆದ ದುರಂತವಿದು
ವಲಯಾರ್ ಸ್ಥಳೀಯ ಕ್ಲಬ್ ಓಣಂ ಹಬ್ಬದ ಪ್ರಯುಕ್ತ ಹಲವು ಸಾಂಸ್ಕೃತಿ ಕಾರ್ಯಕ್ರಮ, ಕ್ರೀಡೆ, ಪೂಕಳಂ(ಹೂವಿನ ರಂಗೋಲಿ) ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಎಲ್ಲರೂ ಸಂತೋಷದಿಂದ ಪಾಲ್ಗೊಂಡಿದ್ದರು. ಆ ಕಾರ್ಯಕ್ರಮದಲ್ಲಿ ಇಡ್ಲಿ ತಿನ್ನುವ ಸ್ಪರ್ಧೆ ಇತ್ತು, ಅದರಲ್ಲಿ ಭಾಗವಹಿಸಿದವರು ಇಡ್ಲಿ ತಿನ್ನಲು ಪ್ರಾರಂಭಿಸಿದ್ದಾರೆ. ಸುತ್ತಲಿರುವವರು ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವ್ಯಕ್ತಿ ಅತೀ ಹೆಚ್ಚು ಇಡ್ಲಿ ತಿಂದು ಬಹುಮಾನ ಗೆಲ್ಲುವ ಹುಮ್ಮಸ್ಸಿನಲ್ಲಿ ಮೂರು ಇಡ್ಲಿ ಜೊತೆಗೆ ತಿನ್ನಲಾರಂಭಿಸಿದ್ದಾರೆ, ಆವಾಗ ಇಡ್ಲಿ ಗಂಟಲಿಗೆ ಸಿಕ್ಕಿ ಸಾವನ್ನಪ್ಪಿದ್ದಾರೆ.
ಯಾವುದೇ ಚಟ್ನಿ, ಸಾಂಬಾರ್ ಇಲ್ಲದೆ ತಿನ್ನಬೇಕಿತ್ತು
ಇಡ್ಲಿಯನ್ನು ಹಾಗೇ ತಿನ್ನುವುದು ಕಷ್ಟ, ಈ ಸ್ಪರ್ಧೆ ನಿಯಮ ಪ್ರಕಾರ ಇಡ್ಲಿಯನ್ನು ಸಾಂಬಾರ್, ಚಟ್ನಿ ಏನೂ ಬಳಸದೆ ತಿನ್ನಬೇಕಾಗಿತ್ತು. ಈ ಸ್ಪರ್ಧೆಯಲ್ಲಿ ಯಾರು ಹೆಚ್ಚು ಇಡ್ಲಿ ತಿನ್ನುತ್ತಾರೋ ಅವರಿಗೆ ಬಹುಮಾನ, ಸ್ಟಾರ್ಟ್ ಅಂತ ವಿಸಿಲ್ ಊದಿದ ತಕ್ಷಣ ಇವರು ನಾನು ಇಡ್ಲಿ ಬೇಗ ತಿಂದು ಮುಗಿಸಬೇಕೆಂದು 3 ಇಡ್ಲಿಯನ್ನು ಇಟ್ಟಿಗೆ ಬಾಯಿಗೆ ಹಾಕಿದ್ದಾರೆ. ಇದರಿಂದ ಇಡ್ಲಿ ಗಂಟಲಿನಲ್ಲಿ ಸಿಕ್ಕಾಕಿಕೊಂಡು ಸಾವು ಸಂಭವಿಸಿದೆ.
ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಸಾವು ಉಂಟಾಗಿತ್ತು
ಇಡ್ಲಿ ಗಂಡಲಿನಲ್ಲಿ ಸಿಕ್ಕಾಕಿಕೊಂಡು ಆ ವ್ಯಕ್ತಿ ಒದ್ದಾಡಲು ಪ್ರಾರಂಭಿಸಿದಾಗ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅದರೆ ವೈದ್ಯರು ಆತ ಮೃತ ಪಟ್ಟಿದ್ದಾನೆ ಎಂದು ತಿಳಿಸುತ್ತಾರೆ.
ಬರಿ ಇಡ್ಲಿ ತಿನ್ನುವುದು ಕಷ್ಟ
ನೀವು ಒಂದು ಇಡ್ಲಿ ಹಾಗೇ ತಿಂದು ನೋಡಿ ತಿನ್ನುವುದು ಕಷ್ಟವಾಗುವುದು ಇದಕ್ಕೆ ಚಟ್ನಿ ಅಥವಾ ಸಾಂಬಾರ್, ಕರಿ ಬೇಕೇಬೇಕು, ಇಡ್ಲಿ ವೇಗವಾಗಿ
ತಿನ್ನುವಾಗ ಗಂಟಲಿನಲ್ಲಿ ಸಿಕ್ಕಾಕಿಕೊಳ್ಳಬಹುದು, ಇಡ್ಲಿಯಂತೆ ಸಿಪ್ಪೆ ಸುಲಿದಇಡೀ ಮೊಟ್ಟೆ ಒಮ್ಮೆಲೇ ಬಾಯಿಗೆ ಹಾಕಿಕೊಳ್ಳುವುದು ಕೂಡ ಒಳ್ಳೆಯದಲ್ಲ, ಗಂಟಲಿನಲ್ಲಿ ಸಿಕ್ಕಾಕಿಕೊಳ್ಳಬಹುದು, ಇಂಥ ಸ್ಪರ್ಧೆಯಲ್ಲಿ ಭಾಗವಹಿಸುವಾಗ ಬಹುಮಾನಕ್ಕಿಂತ ನಿಮ್ಮ ಆರೋಗ್ಯ ಮುಖ್ಯ ಎಂಬುವುದು ನೆನಪಿರಲಿ.



Click it and Unblock the Notifications