Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಗುಹೆಯಲ್ಲಿ ವಾಸವಿರುವ ಭೂಮಿ ಮೇಲಿನ ಕೊನೆಯ ವ್ಯಕ್ತಿ..! ಎಲ್ಲಿದ್ದಾನೆ ಈತ!
ಭೂಮಿ ಮೇಲೆ ಮಾನವ ಕಾಲಿಟ್ಟಾಗ ಆತ ಆರಂಭದಲ್ಲಿ ಎಲ್ಲೆಂದರಲ್ಲಿ ಇರುತ್ತಿದ್ದ ಆತನಿಗೆ ಆಶ್ರಯ ಪಡೆಯಬೇಕು ಎಂಬ ಆಲೋಚನೆ ಕೂಡ ಇರಲಿಲ್ಲ. ಹಾಗೆ ತದನಂತರ ಮರದ ಮೇಲೆ ಆಶ್ರಯ ಪಡೆದಾತ ಬರುಬರುತ್ತಾ ಗುಹೆಗಳಲ್ಲಿ ವಾಸ ಮಾಡಲು ಮುಂದಾದ. ಗುಹೆಗಳೇ ಶಿಲಾಯುಗದ ಜನರ ಆವಾಸ ಸ್ಥಾನ ಆಗಿತ್ತು. ಹಾಗೆ ಗುಹೆಗಳಲ್ಲೇ ಆದಿ ಮಾನವನ ಕುರುಹುಗಳು ಸಹ ಪತ್ತೆಯಾದವು. ಮಾನವನ ವಿಕಸನ ಸಿದ್ದಾಂತಗದಲ್ಲಿ ಬಹುತೇಕ ಆತನ ಇತಿಹಾಸ ಗುಹೆಗಳಲ್ಲಿ ನೋಡಬಹುದು.
ಇಂದಿಗೂ ಹಲವು ಬುಡಕಟ್ಟು ಜನರು ಆಧುನಿಕ ಜಗತ್ತಿನಿಂದ ದೂರವೇ ವಾಸವಿದ್ದರೂ ಅವರು ಗುಹೆಗಳಲ್ಲಿ ನೆಲೆಸಿಲ್ಲ. ಬದಲಿಗೆ ವಸತಿಯ ಆಲೋಚನೆಗಳು ಬಂದಿವೆ. ಹಾಗೆ ನಗರ ಜೀವನಕ್ಕೂ ಅವರು ತೆರೆದುಕೊಳ್ಳುತ್ತಿದ್ದಾರೆ. ಆದ್ರೆ ಗುಹೆಗಳಲ್ಲಿ ಬದುಕುವ ಯಾವೊಂದು ಜನಾಂಗ ಕೂಡ ಈಗ ನೋಡಲು ಸಿಗುವುದಿಲ್ಲ. ಆದ್ರೆ ಇಲ್ಲೊಬ್ಬ ವ್ಯಕ್ತಿ ಗುಹೆಯಲ್ಲೇ ನೆಲೆಸಿರುವುದು ಈಗ ಹಲವು ಅಚ್ಚರಿಗಳಿಗೆ ಕಾರಣವಾಗಿದೆ.

ಈತನನ್ನು ಕೊನೆಯ ಗುಹಾಂತರ ವ್ಯಕ್ತಿ ಎಂದು ಗುರುತಿಸಲಾಗಿದೆ. ಗುಹೆಯಲ್ಲಿ ವಾಸವಿವರು ಭೂಮಿಯ ಕೊನೆಯ ವ್ಯಕ್ತಿ ಆತ ಆಗಿದ್ದಾನೆ. ನಾಗರಿಕತೆಗಳು ಬೆಳೆದರೂ ಆತ ಮಾತ್ರ ಗುಹೆಯಿಂದ ಹೊರಬಂದಿಲ್ಲ. ಹಾಗಾದ್ರೆ ಯಾರು ಆತ? ಎಲ್ಲಿದ್ಧಾನೆ? ಆತನ ಪತ್ತೆ ಮಾಡಿದ್ದು ಯಾರು ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ.
ಫೇಮಸ್ ಟ್ರಾವೆಲಿಂಗ್ ವ್ಲಾಗರ್ ಒಬ್ಬರು ಹಲವು ವರ್ಷದಿಂದ ಗುಹೆಯಲ್ಲಿ ವಾಸವಿರುವ ವ್ಯಕ್ತಿಯೊಬ್ಬನನ್ನು ಪತ್ತೆ ಮಾಡಿದ್ದಾರೆ. ಯೆಮೆನ್ನ ಸೊಕೊಟ್ರಾ ಬಳಿಯ ಗುಹೆಯೊಂದರಲ್ಲಿ ವ್ಯಕ್ತಿಯೊಬ್ಬನನ್ನು ಅವರು ಪತ್ತೆ ಮಾಡಿದರು. ಅವರು ಭೂಮಿ ಮೇಲೆ ನೆಲೆಸಿರುವ ಹಾಗೆ ಗುಹೆಯಲ್ಲಿ ವಾಸವಿರುವ ಕೊನೆಯ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ.
ವಿಡಿಯೋದಲ್ಲಿ ಕಾಲಿನ್ ಎಂಬ ಪ್ರವಾಸಿಗ ತಾನು ಗುರುತಿಸಿದ ಗುಹೆಯಲ್ಲಿ ವಾಸವಿರುವ ವ್ಯಕ್ತಿಯನ್ನು ಪರಿಚಯಿಸಿದ್ದಾರೆ. ಆ ವ್ಯಕ್ತಿಯ ಪ್ರಕಾರ ಆತನಿಗೆ ಹಲವರು ಮಕ್ಕಳಿದ್ದರಂತೆ ಆದ್ರೆ ಅನಾರೋಗ್ಯದ ಕಾರಣದಿಂದ ಅವರು ಮೃತಪಟ್ಟರು ಎಂದು ಹೇಳಿಕೊಂಡಿದ್ದಾನೆ. ಆದರೆ ಆತ ಗುಹೆಯಲ್ಲಿ ಶಾಂತಿಯುತ ಜೀವನ ನಡೆಸುವುದನ್ನು ಮುಂದುವರೆಸಿರುವುದಾಗಿ ಆತ ಹೇಳಿಕೊಂಡಿದ್ದಾನೆ.
ಆತನನ್ನು ಹಲವರು ವರ್ಷಗಳಿಂದಲೂ ಮಾತನಾಡಿಸಿದ್ದಾರೆ. ಹಾಗೆ ಅಲ್ಪ ಸ್ವಲ್ಪ ಇಂಗ್ಲೀಷ್ ಕೂಡ ಕಲಿತ್ತಿದ್ದಾನೆ. ಸುಮಾರು 62 ವರ್ಷದ ಆತ ತಾನು ಪರಿಸರ, ಸಮುದ್ರ ಬಿಟ್ಟು ಬೇರೆ ಏನೂ ನೋಡಿಲ್ಲ ಎಂದು ಹೇಳುತ್ತಾನೆ. ಸಮುದ್ರದಲ್ಲಿನ ಮೀನುಗಳೇ ಆತನ ಆಹಾರವಂತೆ. ಬೆಳಗ್ಗೆ ಎದ್ದು ಗುಹೆಯಿಂದ ಹೊರಟು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಕಾಡುಗಳಲ್ಲಿ ಅಲೆದಾಡುತ್ತಾನೆ. ಸಂಜೆ ಆಗುತ್ತಿದ್ದಂತೆ ಗುಹೆಗೆ ಮರಳುತ್ತಾನೆ. ಹಾಗೆ ಬೆಂಕಿ ಮಾಡುವುದು ಕಲಿತಿರುವ ಆತ ಆಹಾರಗಳ ಬೇಯಿಸಿ ಕೂಡ ಸವಿಯುತ್ತಾನೆ.
ಆತನ ಬಳಿ ಮೊಬೈಲ್ ಇಲ್ಲ, ಬಟ್ಟೆಗಳೂ ಇಲ್ಲ, ಯಾವುದೇ ಆಯುಧವಿಲ್ಲ, ಗಾಳಿ ನೀರು ಮಾತ್ರವೇ ಆತನ ಆಸ್ತಿಯಾಗಿವೆ. ಸದ್ಯ ಆತ ಈ ಗುಹೆಯನ್ನು ಬಿಟ್ಟು ಬೇರೆ ಕಡೆ ತೆರಳುವುದನ್ನು ಬಯಸಿಲ್ಲವಂತೆ. ಹಾಗೆ ಆತನಿಗೆ ಗುಹೆಯಿಂದ ಹೊರಗೆ ಬದುಕುವುದು ಕೂಡ ತಿಳಿದಿಲ್ಲವಂತೆ. ಹೀಗಾಗಿ ಆತನನ್ನು ನೂರಾರು ಮಂದಿ ಈವರೆಗೆ ಮಾತನಾಡಿಸಿದ್ದಾರೆ. ಆದ್ರೆ ಯಾರು ಕೂಡ ಆತನನ್ನು ಅಲ್ಲಿಂದ ಹೊರತರುವ ಸಾಹಸಕ್ಕೆ ಮುಂದಾಗಿಲ್ಲ. ಹಾಗೆ ಆತ ಇತರರಿಂದ ಯಾವುದೇ ವಸ್ತುಗಳನ್ನು ಪಡೆಯುವುದಿಲ್ಲ. ತನ್ನ ಸಂತೋಷದ ಜೀವನಕ್ಕೆ ಇವು ಅಡ್ಡಿ ಪಡಿಸುವ ವಸ್ತುಗಳು ಎಂದು ಆತ ನಂಬಿಕೊಂಡಿದ್ದಾನೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಗುಹೆಯಲ್ಲಿ ವಾಸವಿರುವ ಕೊನೆಯ ವ್ಯಕ್ತಿಯ ವಿಡಿಯೋ ವೈರಲ್ ಆಗುತ್ತಿದೆ. ಕೆಲವರು ಆತನ ಜೀವನವೇ ಬೆಸ್ಟ್ ಎನ್ನುತ್ತಿದ್ದಾರೆ. ಯಾವುದೇ ಜಂಜಾಟವಿಲ್ಲ, ಹೋರಾಟವೂ ಇಲ್ಲ, ಆತನಿಗೆ ಪ್ರಕೃತಿಯೇ ಎಲ್ಲ. ಇದು ಎಲ್ಲರೂ ಪಡೆಯಬೇಕಾದ ಆಸ್ತಿ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.



Click it and Unblock the Notifications











