Latest Updates
-
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್
ಒಂದು ಸಣ್ಣ ಗಂಟೆ ಬದಲಾಯಿಸುವುದು ನಿಮ್ಮ ಅದೃಷ್ಟ!
ನಾವು ಪ್ರತಿದಿನ ಪೂಜೆಗೆ ಬಳಸುವ ವಸ್ತುಗಳಲ್ಲಿ ಗಂಟೆಯೂ ಒಂದು. ಇದರ ಶಬ್ದದಿಂದ ನಾವು ನೇರವಾಗಿ ದೇವರೊಂದಿಗೆ ಸಂಪರ್ಕ ಸಾಧಿಸಬಹುದು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಇದನ್ನು ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಬಾರಿಸುವುದರಿಂದ, ನಮ್ಮಲ್ಲಿ ಧನಾತ್ಮಕ ಶಕ್ತಿ ವೃದ್ಧಿಯಾಗುವುದು. ಇದರ ಜೊತೆಗೆ ನಮ್ಮ ಅದೃಷ್ಟವೂ ಬದಲಾಗುವುದಂತೆ. ಹಾಗಾದರೆ, ಗಂಟೆಯನ್ನು ಯಾವಾಗ, ಹೇಗೆ ಬಾರಿಸಬೇಕು? ಅದರ ಮಹತ್ವವೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಗಂಟೆ ಬಾರಿಸುವುದರಿಂದ ಅದೃಷ್ಟ ಹೇಗೆ ಒಲಿಯುವುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:
1. ಗಂಟೆಯು ಸೃಷ್ಟಿಯ ಆರಂಭದ ಸಂಕೇತವಾಗಿದೆ. ಏಕೆಂದರೆ ಸೃಷ್ಟಿ ಪ್ರಾರಂಭವಾದಾಗ ಗಂಟೆಯ ಶಬ್ದ ಪ್ರತಿಧ್ವನಿಸಿತ್ತಂತೆ.. ಆದ್ದರಿಂದ ಇದನ್ನು ಪ್ರತಿದಿನ ಬಡಿಯುವ ಮೂಲಕ, ನೀವು ನೇರವಾಗಿ ದೇವರೊಂದಿಗೆ ಸಂಪರ್ಕ ಸಾಧಿಸಬಹುದು.
2. ಗಂಟೆಯಿಂದ ಹೊರಹೊಮ್ಮುವ ಧ್ವನಿಯು ತುಂಬಾ ಧನಾತ್ಮಕವಾಗಿರುತ್ತದೆ. ಇದನ್ನು ಕೇಳಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಇದು ದುಃಖ ಮತ್ತು ನೋವುಗಳನ್ನು ತೊಡೆದುಹಾಕುತ್ತದೆ.
3. ಗ್ರಂಥಗಳಲ್ಲಿ ಗರುಣ ಘಂಟೆಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಅವು ಚಿಕ್ಕ ಗಾತ್ರದವು. ಇದನ್ನು ಪ್ರತಿದಿನ ಮನೆಗಳಲ್ಲಿ ಆಡಿಸಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಂತಸ ಮೂಡುತ್ತದೆ. ಇದರೊಂದಿಗೆ, ಕುಟುಂಬ ಸದಸ್ಯರ ಸಮನ್ವಯವು ಉತ್ತಮವಾಗಿರುತ್ತದೆ.
4. ಅದೇ ಸಮಯದಲ್ಲಿ, ದೇವಾಲಯದಲ್ಲಿ ಗಂಟೆ ಬಾರಿಸುವುದು ಸಮಯದ ಸಂಕೇತವಾಗಿದೆ. ಏಕೆಂದರೆ ಇದು ಗಾತ್ರದಲ್ಲಿ ದೊಡ್ಡದಾಗಿದ್ದು, ಅದರ ಶಬ್ದವು ಹಲವಾರು ಕಿಲೋಮೀಟರ್ಗಳಷ್ಟು ದೂರಕ್ಕೆ ಹೋಗುತ್ತದೆ. ಅದನ್ನು ಬಡಿಯುವುದರಿಂದ ಹೊರಹೊಮ್ಮುವ ಶಬ್ದವು ಸಾವಿನ ಭಯವನ್ನು ಹೋಗಲಾಡಿಸುತ್ತದೆ. ಪ್ರತಿದಿನ ದೇವಸ್ಥಾನದ ಗಂಟೆಗಳನ್ನು ಬಾರಿಸುವುದರಿಂದ ಮನುಷ್ಯ ಮಾನಸಿಕವಾಗಿ ಸದೃಢನಾಗುತ್ತಾನೆ. ಇದರೊಂದಿಗೆ ಶತ್ರು ವ್ಯಕ್ತಿಯ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಿಲ್ಲ.
5. ಹಿಂದೂ ಧರ್ಮದಲ್ಲಿ, ಗಂಟೆಯನ್ನು ಅತ್ಯಂತ ಪವಿತ್ರವಾದ ವಿಷಯವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಇದನ್ನು ಪ್ರತಿದಿನ ಸ್ನಾನದ ನಂತರವೇ ಬಾರಿಸಬೇಕು. ಬೆಳಿಗ್ಗೆ 5 ರಿಂದ 7 ರ ನಡುವೆ ಗಂಟೆ ಬಾರಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಮನೆಗೆ ದೇವಿ ಲಕ್ಷ್ಮಿಯ ಆಗಮನವನ್ನು ಸೂಚಿಸುತ್ತದೆ.
6. ಪ್ರಗತಿಯನ್ನು ಬಯಸುವವರು, ಪ್ರತಿದಿನ ಪೂಜೆಯ ನಂತರ ಆರತಿಯ ಸಮಯದಲ್ಲಿ ಗಂಟೆಯನ್ನು ಬಾರಿಸಬೇಕು. ಇದು ಅದೃಷ್ಟದ ಮುಚ್ಚಿದ ಬಾಗಿಲುಗಳನ್ನು ತೆರೆಯುತ್ತದೆ.
7. ನಿಮ್ಮ ಕೆಲಸ ಆಗದಿದ್ದರೆ ಮಂಗಳವಾರ ಅಥವಾ ಶನಿವಾರ ಯಾವುದೇ ದೇವಸ್ಥಾನಕ್ಕೆ ಹಿತ್ತಾಳೆಯ ಗಂಟೆಯನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ತೊಂದರೆಗಳು ದೂರವಾಗುತ್ತವೆ.
8. ಗಂಟೆಗಳನ್ನು ಬಾರಿಸುವುದರಿಂದ ವೈಜ್ಞಾನಿಕ ಪ್ರಯೋಜನಗಳೂ ಇವೆ. ಗಂಟೆ ಬಾರಿಸುವುದರಿಂದ ಬಲವಾದ ಕಂಪನ ಉಂಟಾಗುತ್ತದೆ. ಅದರ ಧ್ವನಿ ಮತ್ತು ಕಂಪನವು ದೇಹವನ್ನು ಸೋಕಿದಾಗ, ದೇಹವು ವಿಶ್ರಾಂತಿ ಪಡೆಯುತ್ತದೆ.
9. ಪ್ರತಿನಿತ್ಯ ಗಂಟೆಯ ಸದ್ದು ಕೇಳುವುದರಿಂದ ಕಿವಿ ರೋಗವೂ ವಾಸಿಯಾಗುತ್ತದೆ. ಏಕೆಂದರೆ ಅದರ ಧ್ವನಿಯು ಬ್ಲಾಕ್ ಆದ ಕಿವಿಯನ್ನು ತೆರೆಯುತ್ತದೆ.
10. ಗಂಟೆಯನ್ನು ಬಾರಿಸುವುದರಿಂದ ನಕಾರಾತ್ಮಕ ಶಕ್ತಿಗಳೂ ದೂರವಾಗುತ್ತವೆ. ಏಕೆಂದರೆ ಅದರ ದೊಡ್ಡ ಶಬ್ದವು ದೆವ್ವ ಮತ್ತು ಆತ್ಮಗಳು ಸೇರಿದಂತೆ ದುಷ್ಟ ಶಕ್ತಿಗಳು ಹತ್ತಿರ ಬರದಂತೆ ತಡೆಯುತ್ತದೆ.



Click it and Unblock the Notifications


