Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ಒಂದು ಸಣ್ಣ ಗಂಟೆ ಬದಲಾಯಿಸುವುದು ನಿಮ್ಮ ಅದೃಷ್ಟ!
ನಾವು ಪ್ರತಿದಿನ ಪೂಜೆಗೆ ಬಳಸುವ ವಸ್ತುಗಳಲ್ಲಿ ಗಂಟೆಯೂ ಒಂದು. ಇದರ ಶಬ್ದದಿಂದ ನಾವು ನೇರವಾಗಿ ದೇವರೊಂದಿಗೆ ಸಂಪರ್ಕ ಸಾಧಿಸಬಹುದು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಇದನ್ನು ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಬಾರಿಸುವುದರಿಂದ, ನಮ್ಮಲ್ಲಿ ಧನಾತ್ಮಕ ಶಕ್ತಿ ವೃದ್ಧಿಯಾಗುವುದು. ಇದರ ಜೊತೆಗೆ ನಮ್ಮ ಅದೃಷ್ಟವೂ ಬದಲಾಗುವುದಂತೆ. ಹಾಗಾದರೆ, ಗಂಟೆಯನ್ನು ಯಾವಾಗ, ಹೇಗೆ ಬಾರಿಸಬೇಕು? ಅದರ ಮಹತ್ವವೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಗಂಟೆ ಬಾರಿಸುವುದರಿಂದ ಅದೃಷ್ಟ ಹೇಗೆ ಒಲಿಯುವುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:
1. ಗಂಟೆಯು ಸೃಷ್ಟಿಯ ಆರಂಭದ ಸಂಕೇತವಾಗಿದೆ. ಏಕೆಂದರೆ ಸೃಷ್ಟಿ ಪ್ರಾರಂಭವಾದಾಗ ಗಂಟೆಯ ಶಬ್ದ ಪ್ರತಿಧ್ವನಿಸಿತ್ತಂತೆ.. ಆದ್ದರಿಂದ ಇದನ್ನು ಪ್ರತಿದಿನ ಬಡಿಯುವ ಮೂಲಕ, ನೀವು ನೇರವಾಗಿ ದೇವರೊಂದಿಗೆ ಸಂಪರ್ಕ ಸಾಧಿಸಬಹುದು.
2. ಗಂಟೆಯಿಂದ ಹೊರಹೊಮ್ಮುವ ಧ್ವನಿಯು ತುಂಬಾ ಧನಾತ್ಮಕವಾಗಿರುತ್ತದೆ. ಇದನ್ನು ಕೇಳಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಇದು ದುಃಖ ಮತ್ತು ನೋವುಗಳನ್ನು ತೊಡೆದುಹಾಕುತ್ತದೆ.
3. ಗ್ರಂಥಗಳಲ್ಲಿ ಗರುಣ ಘಂಟೆಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಅವು ಚಿಕ್ಕ ಗಾತ್ರದವು. ಇದನ್ನು ಪ್ರತಿದಿನ ಮನೆಗಳಲ್ಲಿ ಆಡಿಸಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಂತಸ ಮೂಡುತ್ತದೆ. ಇದರೊಂದಿಗೆ, ಕುಟುಂಬ ಸದಸ್ಯರ ಸಮನ್ವಯವು ಉತ್ತಮವಾಗಿರುತ್ತದೆ.
4. ಅದೇ ಸಮಯದಲ್ಲಿ, ದೇವಾಲಯದಲ್ಲಿ ಗಂಟೆ ಬಾರಿಸುವುದು ಸಮಯದ ಸಂಕೇತವಾಗಿದೆ. ಏಕೆಂದರೆ ಇದು ಗಾತ್ರದಲ್ಲಿ ದೊಡ್ಡದಾಗಿದ್ದು, ಅದರ ಶಬ್ದವು ಹಲವಾರು ಕಿಲೋಮೀಟರ್ಗಳಷ್ಟು ದೂರಕ್ಕೆ ಹೋಗುತ್ತದೆ. ಅದನ್ನು ಬಡಿಯುವುದರಿಂದ ಹೊರಹೊಮ್ಮುವ ಶಬ್ದವು ಸಾವಿನ ಭಯವನ್ನು ಹೋಗಲಾಡಿಸುತ್ತದೆ. ಪ್ರತಿದಿನ ದೇವಸ್ಥಾನದ ಗಂಟೆಗಳನ್ನು ಬಾರಿಸುವುದರಿಂದ ಮನುಷ್ಯ ಮಾನಸಿಕವಾಗಿ ಸದೃಢನಾಗುತ್ತಾನೆ. ಇದರೊಂದಿಗೆ ಶತ್ರು ವ್ಯಕ್ತಿಯ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಿಲ್ಲ.
5. ಹಿಂದೂ ಧರ್ಮದಲ್ಲಿ, ಗಂಟೆಯನ್ನು ಅತ್ಯಂತ ಪವಿತ್ರವಾದ ವಿಷಯವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಇದನ್ನು ಪ್ರತಿದಿನ ಸ್ನಾನದ ನಂತರವೇ ಬಾರಿಸಬೇಕು. ಬೆಳಿಗ್ಗೆ 5 ರಿಂದ 7 ರ ನಡುವೆ ಗಂಟೆ ಬಾರಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಮನೆಗೆ ದೇವಿ ಲಕ್ಷ್ಮಿಯ ಆಗಮನವನ್ನು ಸೂಚಿಸುತ್ತದೆ.
6. ಪ್ರಗತಿಯನ್ನು ಬಯಸುವವರು, ಪ್ರತಿದಿನ ಪೂಜೆಯ ನಂತರ ಆರತಿಯ ಸಮಯದಲ್ಲಿ ಗಂಟೆಯನ್ನು ಬಾರಿಸಬೇಕು. ಇದು ಅದೃಷ್ಟದ ಮುಚ್ಚಿದ ಬಾಗಿಲುಗಳನ್ನು ತೆರೆಯುತ್ತದೆ.
7. ನಿಮ್ಮ ಕೆಲಸ ಆಗದಿದ್ದರೆ ಮಂಗಳವಾರ ಅಥವಾ ಶನಿವಾರ ಯಾವುದೇ ದೇವಸ್ಥಾನಕ್ಕೆ ಹಿತ್ತಾಳೆಯ ಗಂಟೆಯನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ತೊಂದರೆಗಳು ದೂರವಾಗುತ್ತವೆ.
8. ಗಂಟೆಗಳನ್ನು ಬಾರಿಸುವುದರಿಂದ ವೈಜ್ಞಾನಿಕ ಪ್ರಯೋಜನಗಳೂ ಇವೆ. ಗಂಟೆ ಬಾರಿಸುವುದರಿಂದ ಬಲವಾದ ಕಂಪನ ಉಂಟಾಗುತ್ತದೆ. ಅದರ ಧ್ವನಿ ಮತ್ತು ಕಂಪನವು ದೇಹವನ್ನು ಸೋಕಿದಾಗ, ದೇಹವು ವಿಶ್ರಾಂತಿ ಪಡೆಯುತ್ತದೆ.
9. ಪ್ರತಿನಿತ್ಯ ಗಂಟೆಯ ಸದ್ದು ಕೇಳುವುದರಿಂದ ಕಿವಿ ರೋಗವೂ ವಾಸಿಯಾಗುತ್ತದೆ. ಏಕೆಂದರೆ ಅದರ ಧ್ವನಿಯು ಬ್ಲಾಕ್ ಆದ ಕಿವಿಯನ್ನು ತೆರೆಯುತ್ತದೆ.
10. ಗಂಟೆಯನ್ನು ಬಾರಿಸುವುದರಿಂದ ನಕಾರಾತ್ಮಕ ಶಕ್ತಿಗಳೂ ದೂರವಾಗುತ್ತವೆ. ಏಕೆಂದರೆ ಅದರ ದೊಡ್ಡ ಶಬ್ದವು ದೆವ್ವ ಮತ್ತು ಆತ್ಮಗಳು ಸೇರಿದಂತೆ ದುಷ್ಟ ಶಕ್ತಿಗಳು ಹತ್ತಿರ ಬರದಂತೆ ತಡೆಯುತ್ತದೆ.



Click it and Unblock the Notifications














