Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಒಂದು ಸಣ್ಣ ಗಂಟೆ ಬದಲಾಯಿಸುವುದು ನಿಮ್ಮ ಅದೃಷ್ಟ!
ನಾವು ಪ್ರತಿದಿನ ಪೂಜೆಗೆ ಬಳಸುವ ವಸ್ತುಗಳಲ್ಲಿ ಗಂಟೆಯೂ ಒಂದು. ಇದರ ಶಬ್ದದಿಂದ ನಾವು ನೇರವಾಗಿ ದೇವರೊಂದಿಗೆ ಸಂಪರ್ಕ ಸಾಧಿಸಬಹುದು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಇದನ್ನು ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಬಾರಿಸುವುದರಿಂದ, ನಮ್ಮಲ್ಲಿ ಧನಾತ್ಮಕ ಶಕ್ತಿ ವೃದ್ಧಿಯಾಗುವುದು. ಇದರ ಜೊತೆಗೆ ನಮ್ಮ ಅದೃಷ್ಟವೂ ಬದಲಾಗುವುದಂತೆ. ಹಾಗಾದರೆ, ಗಂಟೆಯನ್ನು ಯಾವಾಗ, ಹೇಗೆ ಬಾರಿಸಬೇಕು? ಅದರ ಮಹತ್ವವೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಗಂಟೆ ಬಾರಿಸುವುದರಿಂದ ಅದೃಷ್ಟ ಹೇಗೆ ಒಲಿಯುವುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:
1. ಗಂಟೆಯು ಸೃಷ್ಟಿಯ ಆರಂಭದ ಸಂಕೇತವಾಗಿದೆ. ಏಕೆಂದರೆ ಸೃಷ್ಟಿ ಪ್ರಾರಂಭವಾದಾಗ ಗಂಟೆಯ ಶಬ್ದ ಪ್ರತಿಧ್ವನಿಸಿತ್ತಂತೆ.. ಆದ್ದರಿಂದ ಇದನ್ನು ಪ್ರತಿದಿನ ಬಡಿಯುವ ಮೂಲಕ, ನೀವು ನೇರವಾಗಿ ದೇವರೊಂದಿಗೆ ಸಂಪರ್ಕ ಸಾಧಿಸಬಹುದು.
2. ಗಂಟೆಯಿಂದ ಹೊರಹೊಮ್ಮುವ ಧ್ವನಿಯು ತುಂಬಾ ಧನಾತ್ಮಕವಾಗಿರುತ್ತದೆ. ಇದನ್ನು ಕೇಳಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಇದು ದುಃಖ ಮತ್ತು ನೋವುಗಳನ್ನು ತೊಡೆದುಹಾಕುತ್ತದೆ.
3. ಗ್ರಂಥಗಳಲ್ಲಿ ಗರುಣ ಘಂಟೆಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಅವು ಚಿಕ್ಕ ಗಾತ್ರದವು. ಇದನ್ನು ಪ್ರತಿದಿನ ಮನೆಗಳಲ್ಲಿ ಆಡಿಸಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಂತಸ ಮೂಡುತ್ತದೆ. ಇದರೊಂದಿಗೆ, ಕುಟುಂಬ ಸದಸ್ಯರ ಸಮನ್ವಯವು ಉತ್ತಮವಾಗಿರುತ್ತದೆ.
4. ಅದೇ ಸಮಯದಲ್ಲಿ, ದೇವಾಲಯದಲ್ಲಿ ಗಂಟೆ ಬಾರಿಸುವುದು ಸಮಯದ ಸಂಕೇತವಾಗಿದೆ. ಏಕೆಂದರೆ ಇದು ಗಾತ್ರದಲ್ಲಿ ದೊಡ್ಡದಾಗಿದ್ದು, ಅದರ ಶಬ್ದವು ಹಲವಾರು ಕಿಲೋಮೀಟರ್ಗಳಷ್ಟು ದೂರಕ್ಕೆ ಹೋಗುತ್ತದೆ. ಅದನ್ನು ಬಡಿಯುವುದರಿಂದ ಹೊರಹೊಮ್ಮುವ ಶಬ್ದವು ಸಾವಿನ ಭಯವನ್ನು ಹೋಗಲಾಡಿಸುತ್ತದೆ. ಪ್ರತಿದಿನ ದೇವಸ್ಥಾನದ ಗಂಟೆಗಳನ್ನು ಬಾರಿಸುವುದರಿಂದ ಮನುಷ್ಯ ಮಾನಸಿಕವಾಗಿ ಸದೃಢನಾಗುತ್ತಾನೆ. ಇದರೊಂದಿಗೆ ಶತ್ರು ವ್ಯಕ್ತಿಯ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಿಲ್ಲ.
5. ಹಿಂದೂ ಧರ್ಮದಲ್ಲಿ, ಗಂಟೆಯನ್ನು ಅತ್ಯಂತ ಪವಿತ್ರವಾದ ವಿಷಯವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಇದನ್ನು ಪ್ರತಿದಿನ ಸ್ನಾನದ ನಂತರವೇ ಬಾರಿಸಬೇಕು. ಬೆಳಿಗ್ಗೆ 5 ರಿಂದ 7 ರ ನಡುವೆ ಗಂಟೆ ಬಾರಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಮನೆಗೆ ದೇವಿ ಲಕ್ಷ್ಮಿಯ ಆಗಮನವನ್ನು ಸೂಚಿಸುತ್ತದೆ.
6. ಪ್ರಗತಿಯನ್ನು ಬಯಸುವವರು, ಪ್ರತಿದಿನ ಪೂಜೆಯ ನಂತರ ಆರತಿಯ ಸಮಯದಲ್ಲಿ ಗಂಟೆಯನ್ನು ಬಾರಿಸಬೇಕು. ಇದು ಅದೃಷ್ಟದ ಮುಚ್ಚಿದ ಬಾಗಿಲುಗಳನ್ನು ತೆರೆಯುತ್ತದೆ.
7. ನಿಮ್ಮ ಕೆಲಸ ಆಗದಿದ್ದರೆ ಮಂಗಳವಾರ ಅಥವಾ ಶನಿವಾರ ಯಾವುದೇ ದೇವಸ್ಥಾನಕ್ಕೆ ಹಿತ್ತಾಳೆಯ ಗಂಟೆಯನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ತೊಂದರೆಗಳು ದೂರವಾಗುತ್ತವೆ.
8. ಗಂಟೆಗಳನ್ನು ಬಾರಿಸುವುದರಿಂದ ವೈಜ್ಞಾನಿಕ ಪ್ರಯೋಜನಗಳೂ ಇವೆ. ಗಂಟೆ ಬಾರಿಸುವುದರಿಂದ ಬಲವಾದ ಕಂಪನ ಉಂಟಾಗುತ್ತದೆ. ಅದರ ಧ್ವನಿ ಮತ್ತು ಕಂಪನವು ದೇಹವನ್ನು ಸೋಕಿದಾಗ, ದೇಹವು ವಿಶ್ರಾಂತಿ ಪಡೆಯುತ್ತದೆ.
9. ಪ್ರತಿನಿತ್ಯ ಗಂಟೆಯ ಸದ್ದು ಕೇಳುವುದರಿಂದ ಕಿವಿ ರೋಗವೂ ವಾಸಿಯಾಗುತ್ತದೆ. ಏಕೆಂದರೆ ಅದರ ಧ್ವನಿಯು ಬ್ಲಾಕ್ ಆದ ಕಿವಿಯನ್ನು ತೆರೆಯುತ್ತದೆ.
10. ಗಂಟೆಯನ್ನು ಬಾರಿಸುವುದರಿಂದ ನಕಾರಾತ್ಮಕ ಶಕ್ತಿಗಳೂ ದೂರವಾಗುತ್ತವೆ. ಏಕೆಂದರೆ ಅದರ ದೊಡ್ಡ ಶಬ್ದವು ದೆವ್ವ ಮತ್ತು ಆತ್ಮಗಳು ಸೇರಿದಂತೆ ದುಷ್ಟ ಶಕ್ತಿಗಳು ಹತ್ತಿರ ಬರದಂತೆ ತಡೆಯುತ್ತದೆ.



Click it and Unblock the Notifications


