Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ವಾಸ್ತುಪ್ರಕಾರ, ದೇವರ ವಿಗ್ರಹ, ಫೋಟೋಗಳನ್ನು ಯಾವ ದಿಕ್ಕಿನಲ್ಲಿಟ್ಟರೆ ಒಳಿತು?
ಇದು ಹಬ್ಬಗಳ ಪರ್ವ, ಸಾಲು ಸಾಲು ಹಬ್ಬಗಳು ಒಂದೊಂದಾಗಿ ಬರುತ್ತಿರುವ ಈ ಸಂದರ್ಭದಲ್ಲಿ, ಪೂಜೆ, ವ್ರತಗಳು ಸಾಕಷ್ಟಿರುತ್ತವೆ. ಈ ವೇಳೆ ದೇವರ ಕೃಪೆಗೆ ಪಾತ್ರರಾಗಲು ಯಾವ ದಿಕ್ಕಿನಲ್ಲಿ ದೇವರ ಮೂರ್ತಿಯನ್ನಿಡಬೇಕು ಎಂಬುದು ತಿಳಿದುಕೊಳ್ಳುವುದು ಮುಖ್ಯ. ಅಷ್ಟೇ ಅಲ್ಲ, ಹೊಸದಾಗಿ ಮನೆಪ್ರವೇಶ ಮಾಡಿರುವವರು ವಿವಿಧ ದೇವರ ಮೂರ್ತಿ, ಭಾವಚಿತ್ರಗಳನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಒಳಿತು ಎಂಬುದನ್ನು ಯೋಚಿಸುತ್ತಿರುತ್ತಾರೆ. ಆದ್ದರಿಂದ ನಾವಿಂದು ನಿಮಗಾಗಿ ಸಹಾಯ ಮಾಡಲು ಬಂದಿದ್ದೇವೆ.

ವಾಸ್ತುತಜ್ಞರ ಪ್ರಕಾರ ಪೂಜಾ ಕೋಣೆಗೆ ಯಾವುದು ಉತ್ತಮ ದಿಕ್ಕು ಅಥವಾ ನೀವು ಪೂಜಿಸುವ ದೇವರನ್ನು ಎಲ್ಲಿ ಇಡಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ:
ದೇವರಿಗೆ ವಾಸ್ತು ಎಷ್ಟು ಮುಖ್ಯ?:
ಮನೆ ಕಟ್ಟುವಾಗ, ಸ್ಥಳದ ಕೊರತೆಯಿಂದಾಗಿ, ಅನೇಕ ಜನರು ಪ್ರತ್ಯೇಕ ದೇವರ ಕೋಣೆಯನ್ನು ನಿರ್ಲಕ್ಷಿಸುತ್ತಾರೆ ಆದರೆ ಇದನ್ನು ಕಡೆಗಣಿಸಬಾರದು. ದೇವರಿಗಾಗಿ ಒಂದು ಪ್ರತ್ಯೇಕ ಜಾಗವನ್ನು ಮಾಡಬೇಕು. ಇದು ಧನಾತ್ಮಕ ಶಕ್ತಿಯನ್ನು ಮನೆಯಲ್ಲಿ ನೆಲೆಸಲು ಸಹಾಯ ಮಾಡುವುದು. ಆ ಶಕ್ತಿಯು ನಮ್ಮ ಪರಿಸರ, ಮನಸ್ಸು, ದೇಹ ಮತ್ತು ಆತ್ಮಕ್ಕೆ ಉಲ್ಲಾಸವನ್ನು ನೀಡುತ್ತದೆ ಜೊತೆಗೆ ನಮ್ಮ ಕೆಲಸದ ದಕ್ಷತೆಯು ಹೆಚ್ಚಾಗುತ್ತದೆ ಮತ್ತು ಆದ್ದರಿಂದ ಪ್ರಗತಿ, ಸಮೃದ್ಧಿ ಮತ್ತು ಶಾಂತಿ ನೆಲೆಸುವುದು. ಒಂದು ವೇಳೆ ಕೋಣೆ ಇಲ್ಲವಾದರೆ, ದೇವರ ಮೂರ್ತಿ ಅಥವಾ ಫೋಟೋವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ತುಂಬಾ ಮುಖ್ಯ. ಇಲ್ಲವಾದಲ್ಲಿ ಕೆಲವೊಮ್ಮೆ ಇದು ವಾಸ್ತು ದೋಷಗಳಿಗೆ ಕಾರಣವಾಗಬಹುದು.
ಸಮಸ್ಯೆಗಳಿಲ್ಲದೇ ಜೀವನವು ಪೂರ್ಣಗೊಳ್ಳುವುದಿಲ್ಲ, ಆದರೆ ದೇವರ ಪ್ರಾರ್ಥನೆಯಿಂದ ಈ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುವುದು ಎಂಬುದನ್ನು ಮರೆಯಬಾರದು. ದೇವರ ಪ್ರತಿಮೆಗಳು ಅಥವಾ ಫೋಟೋಗಳನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದು, ಪೂಜೆ ಮಾಡುವುದರಿಂದ ಸಕಲ ಸಮಸ್ಯೆಗಳು ನಿವಾರಣೆಯಾಗುವುದು. ಯಾವುದೇ ಕೆಲಸಕ್ಕೆ ಹೋಗುವ ಮೊದಲು, ಕೈಗಳನ್ನು ಮುಚ್ಚಿಕೊಂಡು ಸಾಷ್ಟಾಂಗ ನಮಸ್ಕಾರ ಮಾಡಿ. ಇದರಿಂದ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.
ಯಾವ ದೇವರಿಗೆ ಯಾವ ದಿಕ್ಕು ಸೂಕ್ತ?:
1. ವಿಘ್ನವಿನಾಶಕ ಗಣೇಶನ ಚಿತ್ರವನ್ನು ಉತ್ತರ ದಿಕ್ಕಿನಲ್ಲಿ ಇಡುವುದು ಒಳ್ಳೆಯದು, ಇದರಿಂದ ಜೀವನದಲ್ಲಿ ಬರುವ ಕಷ್ಟಗಳನ್ನು ಸಮರ್ಥವಾಗಿ ಎದುರಿಸಲು ಸಹಾಯವಾಗುವುದು.
2. ಈಶಾನ್ಯ ದಿಕ್ಕಿನಲ್ಲಿ ದುರ್ಗಾದೇವಿಯನ್ನು ಇಡಬೇಕು.
3. ಬುದ್ಧನ ಮೂರ್ತಿ ಅಥವಾ ಫೋಟೋವನ್ನು ಯಾವುದೇ ದಿಕ್ಕಿನಲ್ಲಾದರೂ ಇಡಬಹುದು. ಬುದ್ಧನಿಗೆ ಬುಧ ಗ್ರಹದ ಪ್ರಭಾವ ಹೆಚ್ಚಿದ್ದು, ಶಿಕ್ಷಣ ಮತ್ತು ವ್ಯಾಪಾರದಲ್ಲಿ ಪ್ರಗತಿಗೆ ಸಹಾಯ ಮಾಡುವುದು.
4. ಮನೆಯಲ್ಲಿ ಸಮೃದ್ಧಿ-ಸಂಪತ್ತು ನೆಲೆಸಲು, ಲಕ್ಷ್ಮಿಯ ಕೃಪಕಟಾಕ್ಷ ದೊರೆಯಲು ವಿಷ್ಣು ಲಕ್ಷ್ಮಿಯವರ ಫೋಟೋವನ್ನು ಈಶಾನ್ಯ ದಿಕ್ಕಿನ ಗೋಡೆಯ ಮೇಲೆ ಹಾಕಬಹುದು. ಇದರಿಂದ ಗುರುಗ್ರಹದ ಶಕ್ತಿ ಹೆಚ್ಚಾಗಿ ಸಂಪತ್ತು ಹೆಚ್ಚಾಗುವುದು.
5. ಸಾಯಿಬಾಬಾ ಫೋಟೋವನ್ನು ವಾಯುವ್ಯ ದಿಕ್ಕಿನಲ್ಲಿ ಹಾಕಬೇಕು. ಸಾಯಿಬಾಬಾ ಗುರು ಗ್ರಹದ ಶಕ್ತಿಯನ್ನು ಹೆಚ್ಚಿಸುವುದರಿಂದ ಹಣಕಾಸು ಮತ್ತು ಬುದ್ಧಿವಂತಿಕೆ ವೃದ್ಧಿಯಾಗುವುದು.
6. ಹನುಮನ ಫೋಟೋವನ್ನು ಆಗ್ನೇಯದಲ್ಲಿ ಹಾಕಬೇಕು. ಹೀಗೆ ಮಾಡುವುದರಿಂದ ಮಂಗಳನ ಪ್ರಾಬಲ್ಯವನ್ನು ಹೆಚ್ಚಾಗಿ, ಶಕ್ತಿ ಹಾಗೂ ಸಂತೋಷ ವೃದ್ಧಿಗೆ ಸಹಾಯವಾಗುವುದು.
7. ಜಗತ್ತು ಕಂಡ ಮೊದಲ ಪ್ರೇಮಿಗಳಾದ ರಾಧಾ ಕೃಷ್ಣರ ಫೋಟೋ ಈಶಾನ್ಯದಲ್ಲಿರಬೇಕು, ಇದು ಚಂದ್ರ ಮತ್ತು ಶುಕ್ರ ಶಕ್ತಿಯನ್ನು ಹೆಚ್ಚಿಸಿ, ಪ್ರೀತಿ ಮತ್ತು ಶಾಂತತೆಯನ್ನು ನೆಲೆಯೂರುವಂತೆ ಮಾಡುತ್ತದೆ.
8. ಶಿವ ಪಾರ್ವತಿಯ ಪ್ರತಿಮೆ ಅಥವಾ ಫೋಟೋವನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಇದು ಚಂದ್ರನ ಶಕ್ತಿಯನ್ನು ಆಹ್ವಾನಿಸಿ, ಹಣದ ಹರಿವನ್ನು ಹೆಚ್ಚಿಸುವುದು.



Click it and Unblock the Notifications



