Latest Updates
-
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ
ಉತ್ತರ ಕನ್ನಡದಲ್ಲಿ ಹೋಳಿ ಸಮಯದಲ್ಲಿ ಕಣ್ಮನ ಸೆಳೆಯುವ ಸುಗ್ಗಿ ಕುಣಿತ: ಸುಗ್ಗಿ ವೇಷ ಹಾಕಿದವರು 7 ದಿನ ಪಾಲಿಸಲೇಬೇಕು ಈ ಕಠಿಣ ನಿಯಮ
ಇನ್ನೇನು ಹೋಳಿ ಹಬ್ಬಕ್ಕೆ ಎರಡೇ ದಿನ ಬಾಕಿ. ಆದರೆ ಉತ್ತರ ಕನ್ನಡದ ಕರಾವಳಿಯ ಜನರಿಗೆ ಈ ಹಬ್ಬದ ಸಂಭ್ರಮ ಆರಂಭವಾಗಿ ಆಗಲೇ ನಾಲ್ಕೈದು ದಿನ ಕಳೆದಿವೆ. ಯಾಕೆ ಅಂತೀರಾ?
ಉತ್ತರ ಕನ್ನಡದಲ್ಲಿ ಹೋಳಿಗೂ ಮೊದಲು ಅಂದರೆ ಏಳು ದಿನದ ಮೊದಲು ಹೋಳಿಯ ಹಬ್ಬದ ಪ್ರಯುಕ್ತವಾಗಿ ಸುಗ್ಗಿ ಕುಣಿತ ಎನ್ನುವ ಸಾಂಪ್ರದಾಯಿಕ ಜಾನಪದ ನೃತ್ಯ ಆರಂಭವಾಗುತ್ತದೆ. ಸುಗ್ಗಿ ವೇಷದಾರಿಗಳ ದಂಡೆ ಮನೆ ಮನೆಗೆ ಬಂದು ತಮ್ಮದೇ ಆದ ಜಾನಪದ ಹಾಡಿಗೆ ಹೆಜ್ಜೆ ಹಾಕಿ ಮನೆಯವರನ್ನ ರಂಜಿಸುತ್ತಾರೆ ಆ ಅದ್ಭುತ ದೃಶ್ಯವನ್ನು ನೋಡುವುದೇ ಚಂದ.

ಹೋಳಿ ಹುಣ್ಣಿಮೆಯನ್ನು ರಾಜ್ಯದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಉತ್ತರ ಕನ್ನಡದ ಕೆಲವು ಸಮುದಾಯಗಳು ಸುಗ್ಗಿ ಕುಣಿತ ನಡೆಸುತ್ತವೆ. ಉತ್ತರ ಕನ್ನಡದಲ್ಲಿ ಹೋಳಿಯ ಸಂದರ್ಭದಲ್ಲಿ ಬೇರೆ ಬೇರೆ ಸಮುದಾಯದವರು ಬೇರೆ ಬೇರೆ ರೀತಿಯಾದಂತಹ ಉಡುಗೆ ತೊಟ್ಟು ತಮ್ಮದೇ ಆದ ರೀತಿಯಲ್ಲಿ ಹೆಜ್ಜೆ ಹಾಕುತ್ತ ಸುಗ್ಗಿ ಕುಣಿತ ಮಾಡುತ್ತಾರೆ. ಈ ಸುಗ್ಗಿ ಕುಣಿತ ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ. ಸುಗ್ಗಿ ವೇಷ ಧರಿಸಿದವರು ಬಣ್ಣ ಬಣ್ಣದ ಗರಿಗಳ ತುರಾಯಿಯನ್ನು ತಲೆಗೆ ಕಟ್ಟಿಕೊಂಡು, ಕಾಲಿಗೆ ಗೆಜ್ಜೆ ಹಾಕಿಕೊಂಡು ಕೈಯಲ್ಲಿ ಕೋಲನ್ನು ಹಿಡಿದು ಕೋಲಾಟ ಮಾಡುತ್ತಾ ಮನೆ ಮುಂದೆ ಬಂದು ಜಾನಪದ ಹಾಡಿಗೆ ಸಾಂಪ್ರದಾಯಿಕ ಬದ್ಧವಾಗಿ ಕುಣಿಯುತ್ತಾರೆ. ಊರ ದೇವರ ಮುಂದೆ ಶುರುವಾದ ಈ ಕುಣಿತ ಸತತ ಏಳು ದಿನಗಳ ಕಾಲ ಆ ಊರಿನಲ್ಲಿ, ಆ ಊರಿಂದಚೆಗೆ ಪ್ರತಿಯೊಬ್ಬರ ಮನೆ ಮನೆಗೆ ಹೋಗಿ ಸುಗ್ಗಿಯ ಸೊಗಗನ್ನು ನೀಡಿ ಮತ್ತೆ ತಾವು ಎಲ್ಲಿ ಸುಗ್ಗಿ ವೇಷ ಕಟ್ಟಿದ್ದವೋ ಅಲ್ಲಿಯೇ ಬಂದು ಕುಣಿತವನ್ನು ಮುಕ್ತಾಯಗೊಳಿಸುತ್ತಾರೆ.
ಸುಗ್ಗಿ ಕುಣಿತ ಆಡುವವರು ಯಾರು
ಉತ್ತರ ಕನ್ನಡ ಭಾಗದಲ್ಲಿ ಹಾಲಕ್ಕಿ ಗೌಡರು, ಪಡ್ತಿ, ಮುಕ್ರಿ ಸಮುದಾಯದವರು, ಗುನಗಾ, ಕೊಮಾರಪಂತ, ಗೌಡ, ಹಳ್ಳೆರ, ಮೊದಲಾದ ಸಮುದಾಯಗಳು ಸುಖಿ ಕುಣಿತವನ್ನು ಆಡುವ ರೂಢಿಯನ್ನು ಇವತ್ತಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈ ಹಾಡಿಗೆ ಸುಮಾರು 60ಕ್ಕೂ ಹೆಚ್ಚು ಪಾಡ್ಡನಗಳು ರೂಢಿಯಲ್ಲಿವೆ. ಕೈಯಲ್ಲಿ ಕೋಲು ಹಿಡಿದು, ತಲೆಮೇಲೆ ಅಷ್ಟು ದೊಡ್ಡ ತುರಾಯಿ ಇದ್ದರೂ ಸ್ವಲ್ಪ ಆಯಾಸವಾಗದಂತೆ ಮನೆಯ ಮುಂದೆ ಈ ತಂಡ ಕುಣಿಯುತ್ತದೆ. ಜೊತೆಗೆ ಜಾಗಟೆ, ಪಾಂಡಿ, ಕಂಸಾಳೆ, ತಾಳ ಮೊದಲಾದ ಸದ್ದುಗಳು ಕುಣಿತದ ಶಕ್ತಿಯನ್ನು ಹೆಚ್ಚಿಸುತ್ತವೆ.
ಇನ್ನು ಉತ್ತರ ಕನ್ನಡ ಭಾಗದಲ್ಲಿ ಈ ಒಂದು ಕುಣಿತಕ್ಕೆ ವಿಶೇಷ ಗೌರವ ಇದೆ. ಯಾರ ಮನೆಗೆ ಈ ಕುಣಿತ ಹೋಗುತ್ತದೆಯೋ ಅವರ ಮನೆಯಲ್ಲಿ ಕುಣಿತದ ತಂಡದ ಮುಖ್ಯಸ್ಥನ ಕೈಯಲ್ಲಿ ಅಕ್ಕಿ, ತೆಂಗಿನಕಾಯಿ ಹಣ. ವೀಳ್ಯದೆಲೆ, ಅಡಿಕೆ ಮೊದಲಾದವುಗಳನ್ನು ನೀಡಿ ಗೌರವಿಸಲಾಗುತ್ತದೆ. ಇನ್ನು ಕುಣಿತಕ್ಕೆ ಬಂದವರು ಆ ಮನೆಯಲ್ಲಿ ವರ್ಷ ಪೂರ್ತಿ ಸುಗ್ಗಿ ಹಿಗ್ಗು ತುಂಬಿರಲಿ ಎಂದು ಪ್ರಾರ್ಥಿಸುತ್ತಾರೆ.
ಸುಗ್ಗಿಯ ನಿಯಮಾವಳಿಗಳು:
ಸುಗ್ಗಿ ಕುಣಿಯುವವರು ವೇಷತೊಟ್ಟ ನಂತರ ಹಿಂದಿರುಗಿ ಏಳು ದಿನಗಳ ಕಾಲ ಮನೆಗೆ ಹೋಗುವಂತಿಲ್ಲ ಅವರಿಗೆ ಮೀಸಲಾದ ಸ್ಥಳದಲ್ಲಿಯೇ ಉಳಿದುಕೊಳ್ಳುತ್ತಾರೆ. ಬಿಸಿಲಿರಲಿ, ಎಷ್ಟೇ ದೂರ ನಡೆದು ಹೋಗುವ ಪರಿಸ್ಥಿತಿ ಇರಲಿ ಕಾಲಿಗೆ ಚಪ್ಪಲಿಯನ್ನು ಮಾತ್ರ ಧರಿಸುವುದಿಲ್ಲ. ಇನ್ನು ಸುಗ್ಗಿ ಕುಣಿತ ಮಾಡುವಾಗ ಯಾವುದೇ ಮನೆಯಲ್ಲಿ ಊಟ, ತಿಂಡಿ, ನೀರು ಇವುಗಳನ್ನ ಸೇವಿಸಿ ತಮ್ಮ ಕುಣಿತವನ್ನು ಮುಂದುವರಿಸುತ್ತಾರೆ. ಸುಗ್ಗಿ ಕುಣಿತವನ್ನು ಮಾಡುವವರು ಮಧ್ಯಪಾನ ಸೇವನೆ, ಮಾಂಸಾಹಾರ ಸೇವನೆಯನ್ನು ಆ ಏಳು ದಿನಗಳ ಕಾಲ ಮಾಡುವುದಿಲ್ಲ ದೇವರ ಹೆಸರಿನಲ್ಲಿ ಮಾಡುವುದರಿಂದ ದೇವರಿಗೆ ಅದನ್ನು ಅರ್ಪಿಸುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಬದ್ಧವಾಗಿ ಹಾಗೂ ತಮ್ಮದೇ ಅದ ರೀತಿಯಲ್ಲಿ ಶಿಷ್ಟಾಚಾರಗಳನ್ನು ಕೂಡ ಅಳವಡಿಸಿಕೊಂಡಿರುತ್ತಾರೆ.
ಸುಗ್ಗಿಯ ಏಳು ದಿನಗಳು ಮುಗಿದ ನಂತರ ಹೋಳಿ ಹುಣ್ಣಿಮೆಯ ದಿನ ತಾವು ಎಲ್ಲಿ ಸುಗ್ಗಿ ವೇಷವನ್ನು ಕಟ್ಟಿ ನೃತ್ಯ ಆರಂಭಿಸಿದ್ದರೋ ಅದೇ ಸ್ಥಳಕ್ಕೆ ತೆರಳಿ ತಾವು ನಂಬಿರುವ ಕರಿ ದೇವರಿಗೆ ಪೂಜೆ ಸಲ್ಲಿಸಿ ತುರಾಯಿಯನ್ನು ದೇವರ ಪಾದಾರವಿಂದಕ್ಕೆ ಅರ್ಪಿಸುತ್ತಾರೆ. ಅಲ್ಲಿಗೆ ಆ ವರ್ಷದ ಸುಗ್ಗಿ ಕುಣಿತ ಕೊನೆಗೊಳ್ಳುತ್ತದೆ.
ನಶಿಸುತ್ತಿರುವ ಸಂಪ್ರದಾಯ:
ಕರಾವಳಿ ಭಾಗದಲ್ಲಿ ಬಳಕೆಯಲ್ಲಿ ಇರುವ ಈ ಸುಗ್ಗಿ ಕುಣಿತ ತಲೆತಲಾಂತರಗಳಿಂದ ನಡೆದುಕೊಂಡು ಬಂದ ಒಂದು ಜಾನಪದ ಕಲೆ. ಆದರೆ ಇತ್ತೀಚಿಗೆ ಸುಗ್ಗಿ ಕುಣಿತ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಇಷ್ಟು ವರ್ಷ ಸುಗ್ಗಿ ಕುಣಿದುಕೊಂಡು ಬರುತ್ತಿದ್ದವರಿಗೆ ವಯಸ್ಸಾಗಿದೆ. ಇನ್ನು ಅವರ ಮಕ್ಕಳು ಸುಗ್ಗಿ ಕುಣಿತ ಮುಂದುವರಿಸಲು ಇಷ್ಟಪಡುತ್ತಿಲ್ಲ ಅಥವಾ ಬೇರೆ ಊರಿಗೆ ಕೆಲಸಕ್ಕಾಗಿಯೂ ಹೋಗಿರುತ್ತಾರೆ. ಹಾಗಾಗಿ ಸುಗ್ಗಿ ಕುಣಿತ ಮಾಡಲು ತಂಡ ರಚಿಸಿಕೊಳ್ಳಲು ಬೇಕಾದಷ್ಟು ಜನರೇ ಈಗ ಸಿಗುತ್ತಿಲ್ಲ ಎನ್ನುವುದು ಆಯಾ ಸಮುದಾಯಗಳ ಅಳಲು. ಅದು ಅಲ್ಲದೆ ಸುಗ್ಗಿ ಕುಣಿತಕ್ಕೆ ಬಳಸಲಾಗುವ ತುರಾಯಿ, ಬಟ್ಟೆ, ಗೆಜ್ಜೆ ಮೊದಲಾದವುಗಳ ಬೆಲೆಯು ಹೆಚ್ಚಾಗಿದೆ. ಅದನ್ನು ಕೊಂಡುಕೊಳ್ಳುವ ಶಕ್ತಿ ಕೆಲವು ಸಮುದಾಯದವರಲ್ಲಿ ಇರುವುದಿಲ್ಲ. ಕೆಲವು ಕಡೆ ಸುಗ್ಗಿ ಕುಣಿತದ ಸಂದರ್ಭದಲ್ಲಿ ಕೊಡುವ ದೇಣಿಗೆ ಕೂಡ ಬಹಳ ಕಡಿಮೆ. ಹೀಗಾಗಿ ಅವರ ನಿತ್ಯದ ಖರ್ಚನ್ನು ಪೂರೈಸಲಾಗದ ಪರಿಸ್ಥಿತಿ ಇದೆ. ಈ ಎಲ್ಲಾ ಕಾರಣಗಳಿಂದಾಗಿ ಸುಗ್ಗಿ ಕುಣಿತ ಎನ್ನುವ ಅತ್ಯದ್ಭುತ ಜಾನಪದ ಕಲೆ ಹಾಗೂ ಸಂಪ್ರದಾಯ ಅಳಿವಿನ ಅಂಚಿನಲ್ಲಿದೆ.



Click it and Unblock the Notifications












