Latest Updates
-
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ!
shravan maas 2021: ಪ್ರತಿರಾಶಿಯವರು ಸಂಪತ್ತು ವೃದ್ಧಿಗಾಗಿ ಶಿವನನ್ನು ಆರಾಧಿಸಬೇಕಾದ ಕ್ರಮವಿದು
ಇದೇ ಬರುವ ಆಗಸ್ಟ್ 9ರಿಂದ ಶ್ರಾವಣ ತಿಂಗಳು ಆರಂಭವಾಗಲಿದೆ. ಶಿವನ ಆರಾಧನೆಗೆ ಹೆಸರುವಾಸಿಯಾಗಿರುವ ಈ ತಿಂಗಳು ಸೆಪ್ಟೆಂಬರ್ ವರೆಗೂ ಮುಂದುವರೆಯುವುದು. ಈ ದಿನಗಳಲ್ಲಿ ಶಿವನನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ಆರಾಧಿಸಿದರೆ, ಸಕಲ ಪಾಪಗಳ ನಾಶವಾಗಿ, ಇಷ್ಟಾರ್ಥಗಳೆಲ್ಲವೂ ಫಲಿಸುತ್ತವೆ ಎಂಬ ನಂಬಿಕೆಯಿದೆ.
ಬಡವನನ್ನು ಶ್ರೀಮಂತನನ್ನಾಗಿಸುವ ಈ ಶ್ರಾವಣ ತಿಂಗಳ ಸೋಮವಾರದಂದು ಶಿವನನ್ನು ಪೂಜಿಸಬೇಕು. ನಿಮಗೂ ಸಂಪತ್ತು ಹೆಚ್ಚಾಗಬೇಕಾದರೆ, ನಿಮ್ಮ ರಾಶಿಚಕ್ರದ ಪ್ರಕಾರ, ಶ್ರಾವಣಸೋಮವಾರದಂದು ಶಿವನನ್ನು ಮೆಚ್ಚಿಸಲು ಯಾವ ಕ್ರಮಗಳನ್ನು ಮಾಡಬೇಕು ಎಂಬುದನ್ನು ತಿಳಿಸಿಕೊಡಲಿದ್ದೇವೆ.
ಸಂಪತ್ತು ವೃದ್ಧಿಗಾಗಿ ಶ್ರಾವಣ ಸೋಮವಾರದಂದು ಶಿವನ ಆರಾಧನೆಗೆ ಪ್ರತಿರಾಶಿಚಕ್ರ ಮಾಡಬೇಕಾಗಿರುವ ಕ್ರಮಗಳನ್ನು ಈ ಕೆಳಗೆ ನೀಡಲಾಗಿದೆ:

ಮೇಷ
ಈ ರಾಶಿಯವರು, ಸೋಮವಾರ ಬೆಲ್ಲವನ್ನು ನೀರಿನಲ್ಲಿ ಬೆರೆಸಿ ಶಿವನಿಗೆ ಅಭಿಷೇಕ ಮಾಡಬೇಕು ಅಥವಾ ಕುಂಕುಮವನ್ನು ನೀರಿನಲ್ಲಿ ಬೆರೆಸಿ ಕೂಡ ಅಭಿಷೇಕಿಸಬಹುದು. ಜೊತೆಗೆ ಶಿವ ಪಂಚಾಕ್ಷರಿ ಮಂತ್ರವನ್ನು ಪಠಿಸಿ. ಇದನ್ನು ಮಾಡುವುದರಿಂದ ನಿಮ್ಮ ಅದೃಷ್ಟ ಶೀಘ್ರದಲ್ಲೇ ಬದಲಾಗುತ್ತದೆ.

ವೃಷಭ :
ಈ ರಾಶೀಯವರು ಪ್ರತಿ ಸೋಮವಾರ ಮೊಸರಿನಿಂದ ಶಿವನಿಗೆ ಅಭಿಷೇಕ ಮಾಡಿಬೇಕು, ಇದು ನೀವು ಎದುರಿಸುತ್ತಿರುವ ಹಣದ ಸಮಸ್ಯೆಯನ್ನು ಪರಿಹರಿಸುತ್ತದೆ. ಅಲ್ಲದೆ, ನೀವು ಶಿವನನ್ನು ಸ್ತುತಿಸುತ್ತಾ, ಬಿಲ್ವಪತ್ರೆಯನ್ನು ಅರ್ಪಿಸಿದರೆ, ಇನ್ನಷ್ಟು ಬೇಗನೆ ಫಲಿತಾಂಶಗಳನ್ನು ಪಡೆಯುತ್ತೀರಿ.

ಮಿಥುನ:
ಮಿಥುನ ರಾಶಿಯವರು ಪ್ರತಿ ಸೋಮವಾರ ಶಿವನನ್ನು ಕಬ್ಬಿನ ರಸದಿಂದ ಪವಿತ್ರಗೊಳಿಸಿದರೆ, ಶೀಘ್ರದಲ್ಲೇ ನಿಮ್ಮೆಲ್ಲಾ ಆಸೆಗಳು ಈಡೇರಿಕೆಯಾಗುವುದು. ಶಿವನಿಗೆ ಉಮ್ಮತ್ತಿ ಹೂವನ್ನು ಅರ್ಪಿಸಿ. ನೀವು ಶ್ರೀಮಂತರಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ಕರ್ಕ:
ಈ ರಾಶಿಚಕ್ರದ ಭಕ್ತರು ಪ್ರತಿ ಶ್ರಾವಣ ಸೋಮವಾರ, ಶಿವನಿಗೆ ಸಕ್ಕರೆ ಬೆರೆಸಿದ ಹಾಲನ್ನು ಅರ್ಪಿಸಬೇಕು. ಜೊತೆಗೆ ಶಿವನಿಗೆ ಪ್ರಿಯವಾದ ಹೂವುಗಳನ್ನು ಸಹ ನೀಡಿ. ಈ ವಿಧಾನಗಳಿಂದ ಕೆಲವೇ ದಿನಗಳಲ್ಲಿ ನಿಮಗೆ ಅದೃಷ್ಠ ಬರಲಿದೆ.

ಸಿಂಹ:
ಈ ರಾಶಿಚಕ್ರದ ವ್ಯಕ್ತಿಯು ಶಿವನನ್ನು ಶ್ರೀಗಂಧದ ನೀರಿನಿಂದ ಅಭಿಷೇಕಿಸಬೇಕು ಮತ್ತು ಶಿವನ ಅಮೃತವಾಣಿಯನ್ನು ಕೇಳಬೇಕು. ಇದು ನಿಮ್ಮ ಪ್ರತಿಯೊಂದು ಆಸೆಯನ್ನು ಪೂರೈಸುತ್ತದೆ ಮತ್ತು ಶೀಘ್ರದಲ್ಲೇ ನಿಮಗೆ ಬೇಕಾದ ಎಲ್ಲವನ್ನೂ ನೀವು ಪಡೆಯುತ್ತೀರಿ.

ಕನ್ಯಾ:
ಕನ್ಯಾರಾಶಿ ಜನರು ಶಿವನನ್ನು ಬಾಂಗ್ ಬೆರೆಸಿದ ನೀರಿನಿಂದ ಅಭಿಷೇಕಿಸಬೇಕು, ಅವರಿಗೆ ಯಾವುದೇ ಕಾಯಿಲೆ ಇದ್ದರೆ ಅದು ಕಡಿಮೆಯಾಗುತ್ತದೆ, ಜೊತೆಗೆ ನಿರೀಕ್ಷಿತ ವಿತ್ತೀಯ ಪ್ರಯೋಜನಗಳೂ ಸಹ ಸಿಗುತ್ತದೆ.

ತುಲಾ:
ಈ ರಾಶಿಚಕ್ರದವರು ಸೋಮವಾರ ಹಸುವಿನ ತುಪ್ಪ ಮತ್ತು ಸುಗಂಧಪೂರಿತ ಎಣ್ಣೆಯಿಂದ ಶಿವ ಅಭಿಷೇಕ ಮಾಡಬೇಕು. ಅಲ್ಲದೆ, ಕೇಸರಿ ಮಿಶ್ರಿತ ಸಿಹಿತಿಂಡಿಗಳನ್ನು ಅರ್ಪಿಸಬೇಕು. ಇದು ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

ವೃಶ್ಚಿಕ:
ಈ ರಾಶಿಯವರು ಪ್ರತಿ ಶ್ರಾವಣ ಸೋಮವಾರದಂದು ಶಿವನಿಗೆ ಜೇನುತುಪ್ಪ ಬೆರೆಸಿದ ನೀರಿನಿಂದ ಅಭಿಷೇಕ ಮಾಡಬೇಕು, ಜೇನುತುಪ್ಪ ಲಭ್ಯವಿಲ್ಲದಿದ್ದರೆ ಸಕ್ಕರೆಯನ್ನು ಸಹ ಬಳಸಬಹುದು.

ಧನು:
ಈ ರಾಶಿಚಕ್ರದ ಜನರು ಕೇಸರಿಯನ್ನು ಹಾಲಿನಲ್ಲಿ ಬೆರೆಸಿ ಶಿವನಿಗೆ ಅಭಿಷೇಕ ಮಾಡಬೇಕು. ಅಲ್ಲದೆ, ಶಿವ ಪಂಚಾಕ್ಷರಿಯನ್ನು ಪಠಿಸುವುದರಿಂದ ಕೂಡ ಸಾಕಷ್ಟು ಅನುಕೂಲಗಳು ಸಂಭವಿಸುತ್ತವೆ. ಖಂಡಿತವಾಗಿಯೂ ಅವರಿಗೆ ಹಣ ಗಳಿಸುವಂತೆ ಮಾಡುತ್ತದೆ.

ಮಕರ:
ಶಿವನನ್ನು ಈ ರಾಶಿಚಕ್ರ ಚಿಹ್ನೆಯ ಜನರು ಎಳ್ಳೆಣ್ಣೆಯಿಂದ ಅಭಿಷೇಕಿಸಿದರೆ, ಅವರು ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತಾರೆ. ಜೊತೆಗೆ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿ. ಶೀಘ್ರದಲ್ಲೇ ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಲಾಗುವುದು.

ಕುಂಭ:
ಈ ರಾಶಿಚಕ್ರದ ಜನರು ಪ್ರತಿ ಸೋಮವಾರ ಶಿವನನ್ನು ತೆಂಗಿನ ನೀರು ಅಥವಾ ಸಾಸಿವೆ ಎಣ್ಣೆಯಿಂದ ಅಭಿಷೇಕಿಸಬೇಕು. ಇದು ಅವರಿಗೆ ಹಣ ಗಳಿಸುವಲ್ಲಿ ಪ್ರಯೋಜನವನ್ನು ನೀಡುತ್ತದೆ, ಅಷ್ಟೇ ಅಲ್ಲ, ನಿಮ್ಮೆಲ್ಲಾ ಆಸೆ ಈಡೇರುತ್ತದೆ.

ಮೀನ:
ಈ ರಾಶಿಚಕ್ರದ ಜನರು ಶಿವನನ್ನು ಕೇಸರಿಯನ್ನು ನೀರಿನಲ್ಲಿ ಬೆರೆಸಿ ಅಭಿಷೇಕ ಮಾಡಬೇಕು. ಈ ಪರಿಹಾರದಿಂದ, ಅವರು ಶಿವನ ಪೂರ್ಣ ಆಶೀರ್ವಾದವನ್ನೂ ಪಡೆಯುತ್ತಾರೆ.



Click it and Unblock the Notifications