Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ರಂಜಾನ್ 2021:ಉಪವಾಸದ ಸಂದರ್ಭದಲ್ಲಿ ನಿರ್ಜಲೀಕರಣದಿಂದ ದೂರವಿರಲು ತಪ್ಪಿಸಬೇಕಾದ ಆಹಾರಗಳು
ಪ್ರಪಂಚದಾದ್ಯಂತ ಮುಸ್ಲಿಂ ಸಮುದಾಯದಲ್ಲಿ ವರ್ಷದ ಪವಿತ್ರ ತಿಂಗಳು ಎಂದು ಪರಿಗಣಿಸಲ್ಪಟ್ಟ ರಂಜಾನ್ ತಿಂಗಳು ಆರಂಭವಾಗಿದೆ. ಈ ವರ್ಷ ಈ ತಿಂಗಳು ಬೇಸಿಗೆಯಲ್ಲಿ ಬಂದಿರುವುದು ಎಲ್ಲರಿಗೂ ಗೊತ್ತೇ ಇದೆ. ರಂಜಾನ್ ಸಮಯದಲ್ಲಿ, ಮುಸ್ಲಿಮರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಇಡೀ ತಿಂಗಳು ಉಪವಾಸ ಮಾಡುತ್ತಾರೆ ಮತ್ತು ಸರ್ವಶಕ್ತನಾದ ಅಲ್ಲಾಹುವನ್ನು ಪ್ರಾರ್ಥಿಸುತ್ತಾರೆ ಮತ್ತು ಬಡವರಿಗೆ ಭಿಕ್ಷೆ ನೀಡುತ್ತಾರೆ.
ಬೇಸಿಗೆಯಲ್ಲಿ ಉಪವಾಸ ಮಾಡುವುದು ಕಷ್ಟದ ಕೆಲಸ. ತಾಪಮಾನದಿಂದಾಗಿ ನಿರ್ಜಲೀಕರಣ ಮತ್ತು ದಣಿವು ಆಗಬಹುದು. ಆದರೆ ಚಿಂತಿಸಬೇಡಿ, ಉತ್ತಮ ಉಪವಾಸದ ಅನುಭವಕ್ಕಾಗಿ ರಂಜಾನ್ ಸಮಯದಲ್ಲಿ ತಪ್ಪಿಸಬೇಕಾದ ಕೆಲವೊಂದು ಆಹಾರಗಳನ್ನು ಇಲ್ಲಿ ನೀಡಿದ್ದೇವೆ.
ರಂಜಾನ್ ತಿಂಗಳಲ್ಲಿ ನಿರ್ಜಲೀಕರಣದಿಂದ ದೂರವಿರಲು ತಪ್ಪಿಸಬೇಕಾದ ಆಹಾರಗಳು ಇಲ್ಲಿವೆ:

ಚಹಾ ಮತ್ತು ಕಾಫಿ:
ಜನರಲ್ಲಿ ಹೆಚ್ಚು ಜನಪ್ರಿಯವಾಗಿರುವ ಈ ಎರಡೂ ಪಾನೀಯಗಳು ಕೆಫೀನ್ ಅನ್ನು ಹೊಂದಿರುತ್ತವೆ, ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ನಿಮಗೆ ಚಹಾ ಮತ್ತು ಕಾಫಿಯನ್ನು ಸಂಪೂರ್ಣವಾಗಿ ಬಿಟ್ಟುಕೊಡಲು ಸಾಧ್ಯವಾಗದಿದ್ದರೆ ನೀವು ಸೇವಿಸುವ ಪ್ರಮಾಣವನ್ನು ಕಡಿಮೆ ಮಾಡಲು ಪ್ರಯತ್ನಿಸಿ.

ಉಪ್ಪುಯುಕ್ತ ಆಹಾರ ಪದಾರ್ಥಗಳು:
ಉಪ್ಪುಸಹಿತ ಆಹಾರ ಪದಾರ್ಥಗಳಾದ ಸಮೋಸಾ ಮತ್ತು ಪಕೋಡಗಳು ಇಫ್ತಾರ್ ನ ದೊಡ್ಡ ಭಾಗವಾಗಿದ್ದರೂ, ಅವು ಆರೋಗ್ಯಕರ ಆಹಾರ ಆಯ್ಕೆಯಾಗಿಲ್ಲ. ಉಪ್ಪು, ನೀರಿನ ನಷ್ಟವನ್ನು ಹೆಚ್ಚಿಸುವುದರಿಂದ ಈ ಆಹಾರವು ನಿಮಗೆ ಹೆಚ್ಚು ಬಾಯಾರಿಕೆಯನ್ನುಂಟು ಮಾಡುತ್ತದೆ. ಬದಲಿಗೆ ಕಲ್ಲಂಗಡಿ, ಸೌತೆಕಾಯಿ, ಟೊಮ್ಯಾಟೊ ಮುಂತಾದ ಹೆಚ್ಚಿನ ನೀರಿನ ಅಂಶವಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಆರಿಸಿಕೊಳ್ಳಿ.

ಅಧಿಕ-ಸಕ್ಕರೆಯುಳ್ಳ ಆಹಾರ:
ಜಲೇಬಿಯತಹ ಸಂಸ್ಕರಿಸಿದ ಸಕ್ಕರೆಯಲ್ಲಿನ ಆಹಾರವು ನಿಮ್ಮ ತೂಕವನ್ನು ಹೆಚ್ಚಿಸುತ್ತದೆ. ಸಕ್ಕರೆ ಆಹಾರವು ಶಕ್ತಿಯ ಮಟ್ಟದಲ್ಲಿ ತ್ವರಿತ ಏರಿಕೆಯನ್ನು ನೀಡುತ್ತದೆ ಮತ್ತು ನಂತರ ಹಠಾತ್ ಕರಗಿ ನಿಮಗೆ ಹಸಿವನ್ನುಂಟು ಮಾಡುತ್ತದೆ. ಓಟ್ಸ್, ರಾಗಿ, ಮೊಟ್ಟೆಗಳಂತಹ ಕಡಿಮೆ ಗ್ಲೈಸೆಮಿಕ್ ಆಹಾರಗಳನ್ನು (ಜೀರ್ಣವಾಗಲು ಸಮಯ ತೆಗೆದುಕೊಳ್ಳುವ ಆಹಾರಗಳು, ಆದ್ದರಿಂದ ನೀವು ದೀರ್ಘಕಾಲ ಪೂರ್ಣವಾಗಿರುತ್ತೀರಿ) ಆಯ್ಕೆಮಾಡಿ. ನೀವು ಸಿಹಿತಿಂಡಿಗಳನ್ನು ಇಷ್ಟಪಡುತ್ತಿದ್ದರೆ, ಖರ್ಜೂರ ಮತ್ತು ಹಣ್ಣುಗಳು ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ ಅವುಗಳನ್ನು ಸೇವಿಸಬಹುದು.

ಕೊನೆಯಲ್ಲಿ ಹೆಚ್ಚು ನೀರು ಕುಡಿಯುವುದನ್ನು ತಪ್ಪಿಸಿ:
ಅನೇಕ ಜನರು ತಮ್ಮ ಉಪವಾಸವನ್ನು ಹೆಚ್ಚು ನೀರು ಕುಡಿಯುವುದರ ಮೂಲಕ ಕೊನೆಗೊಳಿಸುತ್ತಾರೆ. ಇದು ಸರಿಯಲ್ಲ. ಹೆಚ್ಚು ನೀರು ಕುಡಿಯುವುದರಿಂದ ನಿಮ್ಮ ಜೀರ್ಣಕಾರಿ ರಸವನ್ನು ಹೊಟ್ಟೆಯಲ್ಲಿ ದುರ್ಬಲಗೊಳಿಸಬಹುದು ಮತ್ತು ಹೆಚ್ಚಿನ ನೀರಿನ ಸೇವನೆಯಿಂದಾಗಿ ನೀವು ಹೊಟ್ಟೆ ತುಂಬಿದ ಭಾವನೆ ಪಡೆಯುತ್ತೀರಿ. ಆಗ ನೀವು ಪೌಷ್ಠಿಕಾಂಶಯುಕ್ತ ಸಮೃದ್ಧ ಆಹಾರವನ್ನು ಸೇವಿಸಲು ಸಾಧ್ಯವಾಗದು. ಬದಲಿಗೆ ಸಣ್ಣ ಮಧ್ಯಂತರದಲ್ಲಿ ನೀರು ಕುಡಿಯಿರಿ.



Click it and Unblock the Notifications