Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ನಿಮ್ಮ ಮನೆಯ ಮುಖ್ಯ ಬಾಗಿಲು ಈ ತರ ವಾಸ್ತು ಪ್ರಕಾರ ಇರಲಿ
ಮುಖ್ಯ ಬಾಗಿಲಿಗೆ ಉತ್ತಮ ದಿಕ್ಕನ್ನು ನೋಡುವುದಕ್ಕಿಂತ ಮೊದಲು ನೋಡಬೇಕಾದ ಮುಖ್ಯವಾದ ಕಾರ್ಯವೆಂದರೆ ಮನೆಯಲ್ಲಿರುವ ಇತರ ಬಾಗಿಲುಗಳಿಗಿಂತ ಮುಖ್ಯ ಬಾಗಿಲು ದೊಡ್ಡದಾಗಿರಬೇಕು ಮತ್ತು ಸುಂದರವಾಗಿರಬೇಕು ಎಂಬುದು. ಇದು ಗಾತ್ರದಲ್ಲಿ ವ್ಯತ್ಯಾಸವಿರಬೇಕು ಮತ್ತು ಇತರ ಬಾಗಿಲುಗಳಿಂದ ವಿಭಿನ್ನವಾಗಿರಬೇಕು.

ಮನೆಯ ಮುಖ್ಯ ಬಾಗಿಲು ಮನೆ ಎಂದರೆ ಅದು ಎಲ್ಲವೂ ಪ್ರವೇಶಿಸುವ ಜಾಗ. ದೇವಿ ಲಕ್ಷ್ಮಿ ಮತ್ತು ಉತ್ತಮ ವಾಸ್ತು ಶಕ್ತಿ ಮನೆಗೆ ಪ್ರವೇಶಿಸಿದಾಗ ಅದು ಸುಂದರವಾದ ಬಾಗಿಲುಗಳನ್ನು ಇಷ್ಟಪಡುತ್ತದೆ. ಯಾಕಂದರೆ ಮನುಷ್ಯರಾದ ನಾವುಗಳು ಸಹ ಮೊದಲು ಇಷ್ಟ ಪಡುವುದು ಮುಖವನ್ನೇ ತಾನೇ? ಅದೇ ರೀತಿ ಈ ಶಕ್ತಿಗಳು ಕೂಡ. ಹಾಗಾಗಿ ಈ ಬಾಗಿಲು ವಾಸ್ತು ಪ್ರಕಾರ ಹೇಗಿರಬೇಕು? ಯಾವ ದಿಕ್ಕಿನಲ್ಲಿದ್ದರೆ ಉತ್ತಮ? ಇಂತಹ ಹಲವಾರು ಪ್ರಶ್ನೆಗಳಿಗೆ ನಾವು ಈ ಲೇಖನದ ಮೂಲಕ ಉತ್ತರ ನೋಡಿದ್ದೇವೆ.

ಬಾಗಿಲನ್ನು ಚಿಹ್ನೆಯೊಂದಿಗೆ ಸುಂದರಗೊಳಿಸಿ:
ಮುಖ್ಯ ಬಾಗಿಲ ಮೇಲೆ ತೆಂಗಿನಕಾಯಿಯ ಕಲಶ ಚಿಹ್ನೆ, ಮನೆಯ ಕಡೆಗೆ ತೋರಿಸುವ ಲಕ್ಷ್ಮಿಯ ಚರಣ (ಅಡಿ), ಸ್ವಸ್ತಿಕ್ ಚಿಹ್ನೆ, ರಿದ್ಧಿ-ಸಿದ್ದಿ, ಶುಭ ಲಾಭಗಳನ್ನು ಸೂಚಿಸುವ ಚಿಹ್ನೆಗಳಿಂದ ಕೂಡಿರುವಂತೆ ನೋಡಿಕೊಳ್ಳಿ. ರಿದ್ದಿ, ಸಿಧಿ ಗಣೇಶನ ಇಬ್ಬರು ಹೆಂಡತಿಯರು ಮತ್ತು ಶುಭ ಲಾಭಗಳು ಆತನ ಇಬ್ಬರು ಮಕ್ಕಳು ಎಂಬ ನಂಬಿಕೆಯಿದೆ. ತೋರಣ ಮತ್ತು ಭಂಡಾರ ಮುಖ್ಯ ಬಾಗಿಲಿಗೆ ಉತ್ತಮ ಆಭರಣವಾಗಿದ್ದು, ಇದು ಅದೃಷ್ಟವನ್ನು ಆಹ್ವಾನಿಸುತ್ತದೆ ಮತ್ತು ಕೆಟ್ಟ ಶಕ್ತಿಗಳನ್ನು ನಿವಾರಿಸುತ್ತದೆ.

ಬಾಗಿಲ ಹೊರಗೆ ದೀಪ ಬೆಳಗಿಸಿ:
ಬಾಗಿಲಿನ ಹೊರಗೆ ದೀಪವನ್ನು ಬೆಳಗಿಸುವುದು ಉತ್ತಮ ಅಭ್ಯಾಸ. ಇದನ್ನು ಸೂರ್ಯಾಸ್ತದ ಸಮಯದಲ್ಲಿ ಮಾಡಬೇಕು. ಈ ಅಭ್ಯಾಸವು ಮನೆಗೆ ಬರುವ ಋಣಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ . ಇದು ದುಷ್ಟ ಶಕ್ತಿಗಳ ವಿರುದ್ಧ ಭದ್ರತೆಯಾಗಿ ಕಾರ್ಯನಿರ್ವಹಿಸುತ್ತದೆ.

ಬಾಗಿಲನ್ನು ಎಡ ಕಡೆಗೆ ಒಳಗೆ ತೆಗೆಯಿರಿ:
ಮುಖ್ಯ ಬಾಗಿಲನ್ನು ಎಡ ಕಡೆಗೆ ಒಳಗೆ ತೆರೆಯಬೇಕು. ಈ ತೆರೆಯುವಿಕೆಯು ಉತ್ತಮ ಶಕ್ತಿಯನ್ನು ಬಹಳ ಮುಕ್ತವಾಗಿ ಬರಲು ಅನುವು ಮಾಡಿಕೊಡುತ್ತದೆ. ಬಲಕ್ಕೆ ಅಥವಾ ಹೊರಗಡೆ ತೆರೆಯುವ ಬಾಗಿಲುಗಳನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಇನ್ನೊಂದು ವಿಷಯವೆಂದರೆ ನೀವು ಮುಖ್ಯ ಬಾಗಿಲು ತೆರೆದಾಗ ಅದರ ಎದುರು ಬೇರೆ ಬಾಗಿಲು ಇಲ್ಲ ಎಂದು ಖಚಿತಪಡಿಸಿಕೊಳ್ಳಿ ಈ ನಿಯಮವು ಬಾಗಿಲಿನ ಒಳಗೆ ಮತ್ತು ಹೊರಗೆ ಅನ್ವಯಿಸುತ್ತದೆ.

ಮುಖ್ಯ ಬಾಗಿಲ ಅಳತೆ ಹೀಗಿರಲಿ:
ಮುಖ್ಯ ಬಾಗಿಲಿನ ಗಾತ್ರಕ್ಕೆ ಅದರದ್ದೇ ಆದ ಅಳತೆಯಿದೆ. ಇದಕ್ಕೆ ತಕ್ಕಂತಹ ಬಾಗಿಲುಗಳನ್ನು ಮಾಡಿದರೆ ಉತ್ತಮ. ಉದ್ದ-ಅಗಲದ ಅನುಪಾತವು 1: 2 ರಲ್ಲಿರಬೇಕು. ಕೆಲವು ಸ್ಥಳಗಳು ಮೇಲ್ಛಾವಣಿಗಳ ಎತ್ತರದಿಂದಾಗಿ ತುಂಬಾ ಕಡಿಮೆಯಾಗಿರುತ್ತದೆ. ಇನ್ನು ಕೆಲವೆಡೆ ಸ್ಥಳದ ಕೊರತೆಯಿಂದಾಗಿ ಬಾಗಿಲಿನ ಅಗಲವು ತುಂಬಾ ಕಡಿಮೆಯಾಗಿರುತ್ತದೆ. ಇದು ಕೆಲವೊಮ್ಮೆ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.

ಮುಖ್ಯ ಬಾಗಿಲಿನ ಹೊರಗೆ:
ಈಗ ನಾವು ಬಾಗಿಲಿನ ಹೊರಗೆ ದೊಡ್ಡ ಮರ, ಕಂಬ, ದೊಡ್ಡ ಗೋಡೆ ಅಥವಾ ಬಾಗಿಲಿನ ಮುಂದೆ ಕಟ್ಟಡ ಕೂಡ ಉತ್ತಮವಾಗಿಲ್ಲ. ತೀಕ್ಷ್ಣವಾದ ದೀಪಗಳನ್ನು ನೀಡುವುದು ದೋಷಗಳನ್ನು ಸರಿಪಡಿಸುವ ಪರಿಹಾರಗಳಲ್ಲಿ ಒಂದಾಗಿದೆ. ಇನ್ನು ಬಾಗಿಲು ಮಾಡುವ ಶಬ್ದವು ಕಿರಿಕಿರಿಯುಂಟುಮಾಡುವ ಮತ್ತು ಕೇಳಲು ಕೆಟ್ಟದಾಗಿದಾಗಿದೆಯೇ ಎಂದು ಪರಿಶೀಲಿಸಿ. ಈ ಶಬ್ದಗಳು ಉತ್ತಮ ಶಕ್ತಿ ಪ್ರವೇಶೀಸುವುದನ್ನು ನಿಲ್ಲಿಸುತ್ತವೆ.



Click it and Unblock the Notifications











