Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ನಿಮ್ಮ ಮನೆಯ ಮುಖ್ಯ ಬಾಗಿಲು ಈ ತರ ವಾಸ್ತು ಪ್ರಕಾರ ಇರಲಿ
ಮುಖ್ಯ ಬಾಗಿಲಿಗೆ ಉತ್ತಮ ದಿಕ್ಕನ್ನು ನೋಡುವುದಕ್ಕಿಂತ ಮೊದಲು ನೋಡಬೇಕಾದ ಮುಖ್ಯವಾದ ಕಾರ್ಯವೆಂದರೆ ಮನೆಯಲ್ಲಿರುವ ಇತರ ಬಾಗಿಲುಗಳಿಗಿಂತ ಮುಖ್ಯ ಬಾಗಿಲು ದೊಡ್ಡದಾಗಿರಬೇಕು ಮತ್ತು ಸುಂದರವಾಗಿರಬೇಕು ಎಂಬುದು. ಇದು ಗಾತ್ರದಲ್ಲಿ ವ್ಯತ್ಯಾಸವಿರಬೇಕು ಮತ್ತು ಇತರ ಬಾಗಿಲುಗಳಿಂದ ವಿಭಿನ್ನವಾಗಿರಬೇಕು.

ಮನೆಯ ಮುಖ್ಯ ಬಾಗಿಲು ಮನೆ ಎಂದರೆ ಅದು ಎಲ್ಲವೂ ಪ್ರವೇಶಿಸುವ ಜಾಗ. ದೇವಿ ಲಕ್ಷ್ಮಿ ಮತ್ತು ಉತ್ತಮ ವಾಸ್ತು ಶಕ್ತಿ ಮನೆಗೆ ಪ್ರವೇಶಿಸಿದಾಗ ಅದು ಸುಂದರವಾದ ಬಾಗಿಲುಗಳನ್ನು ಇಷ್ಟಪಡುತ್ತದೆ. ಯಾಕಂದರೆ ಮನುಷ್ಯರಾದ ನಾವುಗಳು ಸಹ ಮೊದಲು ಇಷ್ಟ ಪಡುವುದು ಮುಖವನ್ನೇ ತಾನೇ? ಅದೇ ರೀತಿ ಈ ಶಕ್ತಿಗಳು ಕೂಡ. ಹಾಗಾಗಿ ಈ ಬಾಗಿಲು ವಾಸ್ತು ಪ್ರಕಾರ ಹೇಗಿರಬೇಕು? ಯಾವ ದಿಕ್ಕಿನಲ್ಲಿದ್ದರೆ ಉತ್ತಮ? ಇಂತಹ ಹಲವಾರು ಪ್ರಶ್ನೆಗಳಿಗೆ ನಾವು ಈ ಲೇಖನದ ಮೂಲಕ ಉತ್ತರ ನೋಡಿದ್ದೇವೆ.

ಬಾಗಿಲನ್ನು ಚಿಹ್ನೆಯೊಂದಿಗೆ ಸುಂದರಗೊಳಿಸಿ:
ಮುಖ್ಯ ಬಾಗಿಲ ಮೇಲೆ ತೆಂಗಿನಕಾಯಿಯ ಕಲಶ ಚಿಹ್ನೆ, ಮನೆಯ ಕಡೆಗೆ ತೋರಿಸುವ ಲಕ್ಷ್ಮಿಯ ಚರಣ (ಅಡಿ), ಸ್ವಸ್ತಿಕ್ ಚಿಹ್ನೆ, ರಿದ್ಧಿ-ಸಿದ್ದಿ, ಶುಭ ಲಾಭಗಳನ್ನು ಸೂಚಿಸುವ ಚಿಹ್ನೆಗಳಿಂದ ಕೂಡಿರುವಂತೆ ನೋಡಿಕೊಳ್ಳಿ. ರಿದ್ದಿ, ಸಿಧಿ ಗಣೇಶನ ಇಬ್ಬರು ಹೆಂಡತಿಯರು ಮತ್ತು ಶುಭ ಲಾಭಗಳು ಆತನ ಇಬ್ಬರು ಮಕ್ಕಳು ಎಂಬ ನಂಬಿಕೆಯಿದೆ. ತೋರಣ ಮತ್ತು ಭಂಡಾರ ಮುಖ್ಯ ಬಾಗಿಲಿಗೆ ಉತ್ತಮ ಆಭರಣವಾಗಿದ್ದು, ಇದು ಅದೃಷ್ಟವನ್ನು ಆಹ್ವಾನಿಸುತ್ತದೆ ಮತ್ತು ಕೆಟ್ಟ ಶಕ್ತಿಗಳನ್ನು ನಿವಾರಿಸುತ್ತದೆ.

ಬಾಗಿಲ ಹೊರಗೆ ದೀಪ ಬೆಳಗಿಸಿ:
ಬಾಗಿಲಿನ ಹೊರಗೆ ದೀಪವನ್ನು ಬೆಳಗಿಸುವುದು ಉತ್ತಮ ಅಭ್ಯಾಸ. ಇದನ್ನು ಸೂರ್ಯಾಸ್ತದ ಸಮಯದಲ್ಲಿ ಮಾಡಬೇಕು. ಈ ಅಭ್ಯಾಸವು ಮನೆಗೆ ಬರುವ ಋಣಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ . ಇದು ದುಷ್ಟ ಶಕ್ತಿಗಳ ವಿರುದ್ಧ ಭದ್ರತೆಯಾಗಿ ಕಾರ್ಯನಿರ್ವಹಿಸುತ್ತದೆ.

ಬಾಗಿಲನ್ನು ಎಡ ಕಡೆಗೆ ಒಳಗೆ ತೆಗೆಯಿರಿ:
ಮುಖ್ಯ ಬಾಗಿಲನ್ನು ಎಡ ಕಡೆಗೆ ಒಳಗೆ ತೆರೆಯಬೇಕು. ಈ ತೆರೆಯುವಿಕೆಯು ಉತ್ತಮ ಶಕ್ತಿಯನ್ನು ಬಹಳ ಮುಕ್ತವಾಗಿ ಬರಲು ಅನುವು ಮಾಡಿಕೊಡುತ್ತದೆ. ಬಲಕ್ಕೆ ಅಥವಾ ಹೊರಗಡೆ ತೆರೆಯುವ ಬಾಗಿಲುಗಳನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಇನ್ನೊಂದು ವಿಷಯವೆಂದರೆ ನೀವು ಮುಖ್ಯ ಬಾಗಿಲು ತೆರೆದಾಗ ಅದರ ಎದುರು ಬೇರೆ ಬಾಗಿಲು ಇಲ್ಲ ಎಂದು ಖಚಿತಪಡಿಸಿಕೊಳ್ಳಿ ಈ ನಿಯಮವು ಬಾಗಿಲಿನ ಒಳಗೆ ಮತ್ತು ಹೊರಗೆ ಅನ್ವಯಿಸುತ್ತದೆ.

ಮುಖ್ಯ ಬಾಗಿಲ ಅಳತೆ ಹೀಗಿರಲಿ:
ಮುಖ್ಯ ಬಾಗಿಲಿನ ಗಾತ್ರಕ್ಕೆ ಅದರದ್ದೇ ಆದ ಅಳತೆಯಿದೆ. ಇದಕ್ಕೆ ತಕ್ಕಂತಹ ಬಾಗಿಲುಗಳನ್ನು ಮಾಡಿದರೆ ಉತ್ತಮ. ಉದ್ದ-ಅಗಲದ ಅನುಪಾತವು 1: 2 ರಲ್ಲಿರಬೇಕು. ಕೆಲವು ಸ್ಥಳಗಳು ಮೇಲ್ಛಾವಣಿಗಳ ಎತ್ತರದಿಂದಾಗಿ ತುಂಬಾ ಕಡಿಮೆಯಾಗಿರುತ್ತದೆ. ಇನ್ನು ಕೆಲವೆಡೆ ಸ್ಥಳದ ಕೊರತೆಯಿಂದಾಗಿ ಬಾಗಿಲಿನ ಅಗಲವು ತುಂಬಾ ಕಡಿಮೆಯಾಗಿರುತ್ತದೆ. ಇದು ಕೆಲವೊಮ್ಮೆ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.

ಮುಖ್ಯ ಬಾಗಿಲಿನ ಹೊರಗೆ:
ಈಗ ನಾವು ಬಾಗಿಲಿನ ಹೊರಗೆ ದೊಡ್ಡ ಮರ, ಕಂಬ, ದೊಡ್ಡ ಗೋಡೆ ಅಥವಾ ಬಾಗಿಲಿನ ಮುಂದೆ ಕಟ್ಟಡ ಕೂಡ ಉತ್ತಮವಾಗಿಲ್ಲ. ತೀಕ್ಷ್ಣವಾದ ದೀಪಗಳನ್ನು ನೀಡುವುದು ದೋಷಗಳನ್ನು ಸರಿಪಡಿಸುವ ಪರಿಹಾರಗಳಲ್ಲಿ ಒಂದಾಗಿದೆ. ಇನ್ನು ಬಾಗಿಲು ಮಾಡುವ ಶಬ್ದವು ಕಿರಿಕಿರಿಯುಂಟುಮಾಡುವ ಮತ್ತು ಕೇಳಲು ಕೆಟ್ಟದಾಗಿದಾಗಿದೆಯೇ ಎಂದು ಪರಿಶೀಲಿಸಿ. ಈ ಶಬ್ದಗಳು ಉತ್ತಮ ಶಕ್ತಿ ಪ್ರವೇಶೀಸುವುದನ್ನು ನಿಲ್ಲಿಸುತ್ತವೆ.



Click it and Unblock the Notifications