Latest Updates
-
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು!
Hanuman Jayanti puja vidhi :ಪೂಜಾವಿಧಾನ ಹಾಗೂ ಹನುಮನನ್ನು ಒಲಿಸಿಕೊಳ್ಳುವ ಮಾರ್ಗಗಳು ಇಲ್ಲಿದೆ
ಇದೇ ಬರುವ 27ರಂದು ಹನುಮಾನ್ ಜಯಂತಿ. ಅಂದರೆ ರಾಮಭಕ್ತ ಹನುಮ ಹುಟ್ಟಿದ ದಿನ. ಈ ದಿನ ಹನುಂತನನ್ನ ಪೂಜಿಸಿದರ ತಮ್ಮ ಕಷ್ಟಗಳೆಲ್ಲಾ ದೂರವಾಗುತ್ತವೆ ಎಂಬ ನಂಬಿಕೆ. ಹಾಗಾದರೆ ಈ ದಿನ ಭಗವಾನ್ ಹನುಮಂತನನ್ನು ಪೂಜಿಸುವುದು ಹೇಗೆ? ಪೂಜಾ ವಿಧಾನ ಯಾವದು? ಹನುಮನನ್ನು ಒಲಿಸಿಕೊಳ್ಳಲು ನಾವು ಮಾಡಬೇಕಾಗಿರುವುದು ಏನು ಎಂಬುದನ್ನು ಈ ಲೇಖನದಲ್ಲಿ ನೀಡಲಾಗಿದೆ.

ಹನುಮಾನ್ ಜಯಂತಿಯ ಪೂಜಾ ವಿಧಾನವನ್ನು ಈ ಕೆಳಗೆ ನೀಡಲಾಗಿದೆ:
ಚೈತ್ರಮಾಸದಲ್ಲಿ ಹನುಮನನ್ನು ಪೂಜಿಸಲು ಹಲವಾರು ಮಾರ್ಗಗಳಿವೆ. ಈ ದಿನದಂದು ಜನರು ದೇವಾಲಯಗಳಿಗೆ ಭೇಟಿ ನೀಡಿ ಧಾರ್ಮಿಕ ಅರ್ಪಣೆಗಳೊಂದಿಗೆ ಪೂಜಿಸುತ್ತಾರೆ. ದೇವಾಲಯದ ಅರ್ಚಕರಿ ಭಕ್ತರಿಗೆ ಹೂವು, ತಿಂಡಿ, ತೆಂಗಿನಕಾಯಿ ಮೊದಲಾದವುಗಳಗಳನ್ನು ಪ್ರಸಾದದ ರೂಪದಲ್ಲಿ ನೀಡುತ್ತಾರೆ.

ಹನುಮಾನ್ ಜಯಂತಿ ಪೂಜಾ ವಿಧಾನ:
- ಈ ದಿನದಂದು ಬೆಳಿಗ್ಗೆ ಬೇಗ ಏಳಬೇಕು.
- ಸ್ನಾನ ಮಾಡಿದ ನಂತರ ಹನುಮಾನ್ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಬಹುದು ಅಥವಾ ನೆಯಲ್ಲಿಯೂ ಪೂಜೆ ಮಾಡಬಹುದು.
- ಪೂಜೆಗೆ ನಿಂತಿರುವ ಹನುಮ ವಿಗ್ರಹ ಒಳಿತೆಂಬ ನಂಬಿಕೆಯಿದೆ.
- ಭಗವಂತನಿಗೆ ಕೆಂಪು ಸಿಂಧೂರವನ್ನು ಅರ್ಪಿಸಿ.
- ಈ ದಿನ ಹನುಮಾನ್ ಚಾಲಿಸಾ ಪಠಿಸಿ
- ಹನುಮನಿಗೆ ಹೂವುಗಳು, ಸಿಹಿತಿಂಡಿಗಳನ್ನು ಅರ್ಪಿಸಿ.
- ಹನುಮನನ್ನು ಸಂತೋಷಪಡಿಸಲು, ಮಲ್ಲಿಗೆ ಎಣ್ಣೆಯನ್ನು ಬಳಸಿ.
- ಪೂಜೆ ಮಾಡುವಾಗ ಹೆಚ್ಚು ಹೆಚ್ಚು ಕೆಂಪು ವಸ್ತುಗಳನ್ನು ಬಳಸಿ.
- ಹನುಮಾನ್ ಜಯಂತಿ ಉಪವಾಸ ಆಚರಿಸುವವರು ಕೆಲವು ನಿಯಮಗಳನ್ನು ಪಾಲಿಸಬೇಕು. ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದ ನಂತರ, ಭಗವಾನ್ ಶ್ರೀ ರಾಮ್, ತಾಯಿ ಸೀತಾ ಮತ್ತು ಶ್ರೀ ಹನುಮಾನ್ ಅವರನ್ನು ಸ್ಮರಿಸಿ, ಉಪವಾಸದ ನಿರ್ಣಯವನ್ನು ತೆಗೆದುಕೊಳ್ಳಿ.

ಹನುಮನನ್ನು ಒಲಿಸಿಕೊಳ್ಳುವ ವಿಧಾನ ಇಲ್ಲಿದೆ:
- ಓಂ ಹನುಮಂತೆ ನಮಃ ಜಪಿಸುವುದರಿಂದ, ದೈವಿಕ ಮತ್ತು ದೈಹಿಕ ತೊಂದರೆಗಳಿಂದ ಮುಕ್ತಿ ಪಡೆಯುತ್ತಾರೆ.
-ಪೂಜೆಯಲ್ಲಿ ಪರಿಮಳಯುಕ್ತ ಎಣ್ಣೆ ಮತ್ತು ಸಿಂಧೂರ ಹನುಮನಿಗೆ ಪ್ರಿಯವಾದುದರಿಂದ ಅವುಗಳನ್ನು ಅರ್ಪಿಸುವುದರಿಂದ ಉತ್ತಮ ಲಾಭವಿದೆ.
- ರಾಮಚರಿತ ಮಾನಸ, ಹನುಮಾನ್ ಚಾಲೀಸಾ, ಹನುಮಾನ್ ಬಹುಕ್ ಇತ್ಯಾದಿಗಳನ್ನು ಓದಿ.
-ದೇವಾಲಯಕ್ಕೆ ಭೇಟಿ ನೀಡಿ, ತೆಂಗಿನಕಾಯಿ ಹಿಡಿದು ೭ ಪ್ರದಕ್ಷಿಣೆ ಹಾಕಿದ ಬಳಿಕ ತೆಂಗಿನಕಾಯಿ ಒಡೆದು ದೇವರಿಗೆ ಅರ್ಪಿಸಿ.
-ಸೂರ್ಯಾಸ್ತದ ನಂತರ, ಹನುಮಾನ್ ಮುಂದೆ ಸಾಸಿವೆ ಎಣ್ಣೆ ದೀಪವನ್ನು ಬೆಳಗಿಸಿ. ದೀಪವು ಜೇಡಿಮಣ್ಣಿನಿಂದ ಕೂಡಿದ್ದರೆ, ಅದು ಹೆಚ್ಚು ಶುಭವಾಗಿರುತ್ತದೆ. ದೀಪವನ್ನು ಬೆಳಗಿಸಿದ ನಂತರ, ಹನುಮಾನ್ ಚಾಲಿಸಾ ಪಠಿಸಿ.



Click it and Unblock the Notifications