Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಚಾಣಕ್ಯ ನೀತಿ : ಈ ರಹಸ್ಯಗಳು ಯಾವುದೇ ಕಾರಣಕ್ಕೂ ಗಂಡನ ಬಳಿ ಹೇಳಲೇಬೇಡಿ !
ಗಂಡ-ಹೆಂಡತಿ ಸಂಬಂಧದಲ್ಲಿ ಯಾವುದೇ ರೀತಿಯ ಮುಚ್ಚುಮರೆ ಇರೋದಿಲ್ಲ. ಇವರಿಬ್ಬರ ಸಂಬಂಧ ತೆರೆದ ಪುಸ್ತಕದಂತಿರುತ್ತದೆ. ಹಾಗಂತ ನೀವು ಎಲ್ಲಾ ಸಂದರ್ಬದಲ್ಲಿ ಎಲ್ಲಾ ವಿಚಾರಗಳು ಪತಿಯ ಬಳಿ ಶೇರ್ ಮಾಡೋದಕ್ಕೆ ಹೋಗಬಾರದು. ಕೆಲವೊಂದು ರಹಸ್ಯಗಳನ್ನು ನಿಮ್ಮೊಳಗೆ ಬಚ್ಚಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಮುಂದೊಂದು ದಿನ ಅದು ನಿಮ್ಮ ಸಂಸಾರಕ್ಕೆ ಆಪತ್ತು ತಂದೊಡ್ಡಬಹುದು.

ಆದ್ರೆ ಚಾಣಕ್ಯನ ಪ್ರಕಾರ ನೀವು ನಿಮ್ಮ ಪತಿಯಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳಲೇ ಬಾರದು ಅಂತಾರೆ. ಒಂದು ವೇಳೆ ಆ ವಿಚಾರಗಳನ್ನು ನಿಮ್ಮ ಗಂಡನ ಬಳಿ ಹೇಳಿದರೆ ದಾಂಪತ್ಯ ಮುರಿದು ಬೀಳುವ ಸಾಧ್ಯತೆ ಇದ್ಯಂತೆ. ಅಷ್ಟಕ್ಕು ಚಾಣಕ್ಯನ ಮಾತಿನಂತೆ ಗಂಡನ ಬಳಿ ಪತ್ನಿ ಮುಚ್ಚಿಡಲೇಬೇಕಾದ ಆ ವಿಚಾರಗಳು ಯಾವುದು ಅನ್ನೋದನ್ನ ಹೇಳ್ತೀವಿ.

1. ಗಂಡನಿಗೆ ತಿಳಿಯಾದ ಹಾಗೆ ಉಳಿತಾಯ ಮಾಡಿ
ಮಡದಿಯನ್ನು ಮನೆಯ ಲಕ್ಷ್ಮೀ ಅಂತ ಕರೆಯಲಾಗುತ್ತದೆ. ಆಕೆ ಮನೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವ ಹೋಮ್ ಮಿನಿಸ್ಟರ್. ಪತ್ನಿ ಕೆಲವೊಂದು ಬಾರಿ ಪತಿಗೆ ತಿಳಿಯದ ಹಾಗೇ ಜೇಬಿನಿಂದ ಹಣ ತೆಗೆಯುತ್ತಾಳೆ. ಇನ್ನೂ ಕೆಲವೊಮ್ಮೆ ಮನೆಯ ಖರ್ಚು-ವೆಚ್ಚಕ್ಕೆ ಕೊಟ್ಟ ದುಡ್ಡಿನಲ್ಲಿ ಉಳಿಕೆ ಮಾಡಿ ಸೀಕ್ರೇಟ್ ಸೇವಿಂಗ್ ಮಾಡ್ತಾಳೆ. ಚಾಣಕ್ಯನ ಪ್ರಕಾರ ಇಂತಹ ಉಳಿತಾಯ ಒಳ್ಳೆಯದು. ಯಾಕಂದ್ರೆ ಅದು ನಮ್ಮ ಆಪತ್ಕಾಲದಲ್ಲಿ ಖಂಡಿತ ಉಪಯೋಗಕ್ಕೆ ಬರುತ್ತದೆ. ಆದರೆ ಈ ವಿಚಾರವನ್ನು ನಿಮ್ಮ ಗಂಡನಿಗೆ ತಿಳಿಯದ ಹಾಗೇ ಮುಚ್ಚಿಡಿ ಅಂತಾರೆ ಚಾಣಕ್ಯ.

2. ಕೆಲವೊಂದು ಭಾವನೆಗಳನ್ನು ಮುಚ್ಚಿಡಿ
ಗಂಡ-ಹೆಂಡತಿ ಎಂದರೆ ಅಲ್ಲಿ ಯಾವುದೇ ರೀತಿಯ ಮುಚ್ಚು ಮರೆ ಅನ್ನೋದು ಇರೋದಿಲ್ಲ. ಹೆಂಡತಿ ಎಲ್ಲಾ ವಿಷಯಗಳನ್ನು ಗಂಡನ ಬಳಿ, ಗಂಡ ಎಲ್ಲಾ ವಿಷಯಗಳನ್ನು ಹೆಂಡತಿಯ ಬಳಿ ಹಂಚಿಕೊಳ್ಳುತ್ತಾರೆ. ಆದರೆ ಹೆಂಡತಿಯಾದವಳು ನಿಮ್ಮ ಕೆಲ ಭಾವನೆಗಳನ್ನು ಗಂಡನ ಬಳಿ ಹಂಚಿಕೊಳ್ಳಬೇಡಿ ಅಂತಾರೆ ಚಾಣಕ್ಯ. ಇದರಿಂದ ನಿಮ್ಮ ಸಂಸಾರಕ್ಕೆ ಸಮಸ್ಯೆ ಎದುರಾಗಬಹುದು. ಕೆಲವೊಂದು ಬಾರಿ ನೀವು ಅನ್ಯ ಪುರುಷನ ವಿಚಾರಕ್ಕೆ ನೊಂದುಕೊಂಡಿರುತ್ತೀರಾ ಅಂದುಕೊಳ್ಳಿ ಈ ವೇಳೆ ಅಂತಹ ವಿಚಾರಗಳನ್ನು ಪತಿ ಬಳಿ ಹಂಚಿಕೊಳ್ಳುವುದು ಒಳ್ಳೆಯದಲ್ಲ.

3. ಕೆಲವೊಂದು ರೋಗಗಳ ಬಗ್ಗೆ ಮುಚ್ಚಿಡಿ
ನಿಮಗೆ ಮೊದಲೇ ನಿಮಗೆ ಆರೋಗ್ಯ ಸಮಸ್ಯೆಗಳಿದ್ದರೆ ಗಂಡ ಅದರಿಂದ ನೊಂದು ಕೊಂಡಿರುತ್ತಾರೆ ಹಾಗೂ ಇದರಿಂದಾಗಿ ಗಂಭೀರ ಆರ್ಥಿಕ ಸಮಸ್ಯೆಗಳನ್ನು ನಿಮ್ಮ ಪತಿ ಎದುರಿಸಿರುತ್ತಾರೆ. ಇಂತಹ ಸಮಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಆತನ ಬಳಿ ಪದೇ ಪದೇ ಹೇಳುವುದರಿಂದ ಆತನಿಗೆ ಕಿರಿ ಕಿರಿ ಉಂಟಾಗಬಹುದು. ಆದ್ದರಿಂದ ಸಣ್ಣ-ಪುಟ್ಟ ಸಮಸ್ಯೆಗಳಿಗೆ ನೀವೇ ಪರಿಹಾರ ಕಂಡುಕೊಳ್ಳಿ.

4. ನಿಮ್ಮ ಸೀಕ್ರೇಟ್ ಕ್ರಷ್ ಬಗ್ಗೆ ಹೇಳಲೇಬೇಡಿ
ಮಹಿಳೆಯರಿಗೆ ಯಾರಾದರೂ ಒಬ್ಬ ವ್ಯಕ್ತಿಯ ಮೇಲೆ ಕ್ರಷ್ ಇದ್ದೇ ಇರುತ್ತದೆ. ಮದುವೆಯಾದ ಮೇಲೂ ನಿಮಗೆ ಯಾರ ಮೇಲಾದರೂ ಕ್ರಷ್ ಆದರೆ ಖಂಡಿತ ನಿಮ್ಮ ಪತಿಯ ಬಳಿ ಹೇಳಲೇಬೇಡಿ. ಯಾಕಂದ್ರೆ ಇದರಿಂದ ಪತಿ ನಿಮ್ಮ ಮೇಲೆ ಕೋಪಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಮುಂದುವರೆದು ನಿಮ್ಮ ಕುಟುಂಬಕ್ಕೂ ಸಮಸ್ಯೆ ಎದುರಾಗಬಹುದು. ಹೀಗಾಗಿ ಇಂತಹ ವಿಚಾರಗಳನ್ನು ಮುಚ್ಚಿಡಿ ಅಂತಾರೆ ಚಾಣಕ್ಯ.

5. ಕೆಲವೊಂದು ಬಾರಿ ಗಂಡನ ಮಾತುಗಳಿಗೆ ಸಮ್ಮತಿ ಸೂಚಿಸಿ
ಯಾವುದೇ ಒಂದು ವಿಚಾರದ ಬಗ್ಗೆ ನಿರ್ಧರಿಸಬೇಕಾದರೆ ಅಲ್ಲಿ ಗಂಡ ಹಾಗೂ ಹೆಂಡತಿಯ ಸಮ್ಮತಿ ಮುಖ್ಯವಾಗಿರುತ್ತದೆ. ಕೆಲವೊಂದು ಬಾರಿ ಗಂಡನ ನಿರ್ಧಾರಗಳು ಹೆಂಡತಿಗೆ ಹಾಗೂ ಹೆಂಡತಿಯ ನಿರ್ಧಾರಗಳು ಗಂಡನಿಗೆ ಇಷ್ಟವಾಗುವುದಿಲ್ಲ. ಹಾಗಂತ ಎಲ್ಲಾ ಬಾರಿಯು ಪತಿಯೊಂದಿಗೆ ವಾದಿಸೋದು ಒಳ್ಖೆಯದಲ್ಲ ಅಂತಾರೆ ಚಾಣಕ್ಯ. ಕೆಲವೊಂದು ಬಾರಿ ಆತನ ಮಾತುಗಳಿಗೂ ಸಮ್ಮತಿ ಸೂಚಿಸಿ. ನಮಗೆ ಆ ವಿಚಾರದ ಬಗ್ಗೆ ಅಸಮಾಧಾನ ಇದ್ದರೂ ಹೇಳಿಕೊಳ್ಳಬೇಡಿ. ನಿಮ್ಮಲ್ಲಿ ಹೊಂದಿಕೊಳ್ಳುವ ಗುಣವಿದ್ದಾಗ ಮಾತ್ರ ಸಂಸಾರದ ಬಂಡಿ ಮುಂದೆ ಸಾಗೋದಕ್ಕೆ ಸಾಧ್ಯ.
ಕಷ್ಟ-ಸುಖವನ್ನು ಸರಿಯಾಗಿ ತೂಗಿಸಿಕೊಂಡು ಹೋಗುವುದೇ ಸಂಸಾರ. ಪತ್ನಿಯಾದವಳಿಗೆ ಮಾತ್ರ ಈ ಶಕ್ತಿ ಇರುವುದು. ಎಲ್ಲಿ, ಹೇಗೆ, ಏನು ಮಾತನಾಡಬೇಕು ಅನ್ನೋದು ಪತ್ನಿಗೆ ಗೊತ್ತಿದ್ದರಷ್ಟೇ ಬದುಕು ಚೆನ್ನಾಗಿ ನಡೆಯೋದಕ್ಕೆ ಸಾಧ್ಯ.



Click it and Unblock the Notifications
