Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಈ ನಾಲ್ಕು ಸಂಗತಿಗಳು ಗರ್ಭದಲ್ಲಿರುವಾಗಲೇ ನಿರ್ಧಾರವಾಗುತ್ತೆ ಅಂತಾರೆ ಚಾಣಕ್ಯ..!
ಹುಟ್ಟಿದ ವ್ಯಕ್ತಿ ಈ ಭೂಮಿಯ ಮೇಲೆ ಎಷ್ಟು ದಿನ ಜೀವಂತವಾಗಿರ್ತಾನೆ ಅನ್ನೋದು ಗೊತ್ತಿಲ್ಲ. ಹುಟ್ಟು-ಸಾವು ಎಲ್ಲವೂ ನಮ್ಮ ಹಣೆಬರಹದಲ್ಲಿ ಬರೆದಿರುತ್ತದೆ. ಇವತ್ತು ಜೀವಂತವಾಗಿದ್ದ ವ್ಯಕ್ತಿ ನಾಳೆ ಇರ್ತಾನೆ ಅನೋ ಗ್ಯಾರಂಟಿ ಕೂಡ ಇರೋದಿಲ್ಲ. ಆದರೆ ನಿಮಗೊತ್ತಾ ಕೆಲವು ಸಂಗತಿಗಳು ನಾವು ತಾಯಿ ಗರ್ಭದಲ್ಲಿರುವಾಗಲೇ ನಿರ್ಧಾರವಾಗಿರುತ್ತಂತೆ. ಅದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲವಂತೆ.

ಅಷ್ಟಕ್ಕು ಚಾಣಕ್ಯನ ಪ್ರಕಾರ ನಾವು ತಾಯಿಯ ಗರ್ಭದಲ್ಲಿರುವಾಗಲೇ ನಿರ್ಧಾರವಾಗಿರುವ ಆ ನಾಲ್ಕು ಸಂಗತಿಗಳು ಯಾವುದು ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ.
1. ಕರ್ಮ
ಮಗುವೊಂದು ತಾಯಿಯ ಹೊಟ್ಟೆಯಲ್ಲಿರಬೇಕಾದರೆ ಆ ಮಗು ಹೊಟ್ಟೆಯಿಂದ ಹೊರಬಂದ ಮೇಲೆ ಸಂತೋಷವಾಗಿರುತ್ತಾ ಅಥವಾ ದುಃಖದಿಂದಿರುತ್ತಾ ಎಂದು ನಿರ್ಧಾರವಾಗಿರುತ್ತದೆ. ಚಾಣಕ್ಯನ ಪ್ರಕಾರ ಭೂಮಿಗೆ ಬಂದಮೇಲೆ ಇದನ್ನೇ ಅನುಭವಿಸಬೇಕು ಎಂದು ಆತನ ಹಣೆಯಲ್ಲಿ ಬರೆದಿರುತ್ತದೆ. ಪೂರ್ವ ಜನ್ಮದ ಕರ್ಮಗಳನ್ನು ಖಂಡಿತ ಈ ಜನ್ಮದಲ್ಲಿ ಆತ ಅನುಭವಿಸಲೇಬೇಕು.
2. ಸಾವು
ಚಾಣಕ್ಯನ ಪ್ರಕಾರ ಸಾವನ್ನು ಆ ಬ್ರಹ್ಮನಿಂದಲೂ ಬದಲಾಯಿಸಲು ಆಗುವುದಿಲ್ಲ. ನಾವು ಇದೇ ಸಮಯದಲ್ಲಿ ಸಾಯವೇಕು ಎಂದು ತಾಯಿಯ ಗರ್ಭದಲ್ಲಿರಬೇಕಾದರೆ ನಿರ್ಧಾರವಾಗಿರುತ್ತದೆ. ನೀವು ಎಷ್ಟೇ ಕೋಟ್ಯಾಧಿಪತಿಗಳು ಆಗಿರಬಹುದು ಅಥವಾ ನೀವು ಪ್ರಭಾವಿ ವ್ಯಕ್ತಿಯೇ ಆಗಿರಬಹುದು. ಆದರೂ ಕೂಡ ನಿಮ್ಮ ಸಾವನ್ನು ಯಾರಿಂದಲೂ ತಪ್ಪಿಸೋದಕ್ಕೆ ಸಾಧ್ಯವಿಲ್ಲ.
3. ಸಂಪತ್ತು ಮತ್ತು ವಿದ್ಯೆ
ಅನೇಕ ಜನರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಆಸೆ ಇರುತ್ತದೆ. ಇನ್ನೂ ಕೆಲವರಿಗೆ ಕೈ ತುಂಬಾ ದುಡ್ಡು ಮಾಡಬೇಕು, ಕೋಟ್ಯಾಧಿಪತಿಗಳಾಗಬೇಕು ಎಂಬ ಆಸೆ ಇರುತ್ತದೆ. ಕೆಲವರಿಗೆ ಇದು ಕೈಗೂಡಿದರೆ ಇನ್ನೂ ಕೆಲವರಿಂದ ಇದು ಸಾಧ್ಯವಾಗೋದಿಲ್ಲ. ಯಾಕಂದರೆ ನೀವು ಮುಂದೆ ಏನಾಗುತ್ತೀರಾ? ನಿಮ್ಮ ಭವಿಷ್ಯದಲ್ಲಿ ಏನಾಗಲಿದೆ ಅನ್ನೋದು ತಾಯಿಯ ಗರ್ಭದಲ್ಲಿರಬೇಕಾದರೆ ನಿರ್ಧಾರವಾಗಿರುತ್ತದೆ.
4. ವಯಸ್ಸು
ಮನುಷ್ಯ ಭವಿಷ್ಯದ ಕನಸನ್ನು ಕಾಣೋದು ಹೆಚ್ಚು. ನಾಳೆ ನನ್ನ ಜೀವನದಲ್ಲಿ ಹೀಗಾಗುತ್ತೆ, ಮುಂದಿನ ಹತ್ತು ವರ್ಷಗಳಲ್ಲಿ ನಾನು ಕೋಟ್ಯಾಧಿಪತಿಯಾಗುತ್ತೇನೆ. ಹೀಗೆ ಮನುಷ್ಯರು ಬಣ್ಣ ಬಣ್ಣದ ಕನಸುಗಳನ್ನು ಕಂಡಿರ್ತಾರೆ. ಚಾಣಕ್ಯನ ಪ್ರಕಾರ ಭವಿಷ್ಯದ ಬಗ್ಗೆ ಅತೀ ಹೆಚ್ಚು ಚಿಂತಿಸುವ ಅಗತ್ಯವಿಲ್ಲ ಅಂತಾರೆ. ಯಾಕಂದ್ರೆ ನೀವು ಇಷ್ಟೇ ವರ್ಷ ಬದುಕಿರಬೇಕು ಅಂತ ತಾಯಿಯ ಗರ್ಭದಲ್ಲೇ ನಿರ್ಧಾರವಾಗಿರುವಾಗ ಅದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ.
ಬದುಕಿನ ಬಂಡಿ ಇಷ್ಟೇ ದಿನ ನಡೆಯುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಆದ್ರೆ ಬದುಕಿರುವಷ್ಟು ದಿನ ಖುಷಿ-ಖುಷಿಯಿಂದ ಬಾಳಬೇಕು ಅಷ್ಟೇ.



Click it and Unblock the Notifications


