Latest Updates
-
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್!
ಪಿತೃಕರ್ಮಕ್ಕೆ ಪ್ರಸಿದ್ಧಿಯಾಗಿರುವ ಆಷಾಢ ಅಮಾವಾಸ್ಯೆ, ಈ ವರ್ಷ ಯಾವಾಗ ಬರಲಿದೆ ಗೊತ್ತಾ?
ಜುಲೈ ತಿಂಗಳೆಂದರೆ ಅದು ಆಷಾಢ ತಿಂಗಳು. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳು ನಿಷಿದ್ಧ. ಧಾರ್ಮಿಕ ದೃಷ್ಟಿಕೋನದಿಂದ ಆಷಾಢ ತಿಂಗಳಲ್ಲಿ ಬರುವ ಅಮಾವಾಸ್ಯೆಯು ಬಹಳ ಮಹತ್ವದ್ದಾಗಿದೆ. ಈ ವರ್ಷ ಆಷಾಢ ಅಮಾವಾಸ್ಯೆ ಜುಲೈ 9 ಶುಕ್ರವಾರ ಬರುತ್ತಿದೆ. ಪಿತೃ ದೋಷ ನಿವಾರಣೆಗಾಗಿ ಹೆಸರುವಾಸಿಯಾಗಿರುವ ಈ ಅಮಾವಾಸ್ಯೆಯ ಮುಹೂರ್ತ, ಪೂಜಾವಿಧಾನ ಹಾಗೂ ಮಹತ್ವವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಆಷಾಢ ಅಮಾವಾಸ್ಯೆಯ ದಿನಾಂಕ, ಮುಹೂರ್ತ, ಪೂಜಾವಿಧಾನ ಹಾಗೂ ಮಹತ್ವವನ್ನು ಈ ಕೆಳಗೆ ನೀಡಲಾಗಿದೆ:
ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತಿ ತಿಂಗಳ ಕೃಷ್ಣ ಪಕ್ಷದ ಕೊನೆಯ ದಿನಾಂಕವನ್ನು ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಆಷಾಧ ಮಾಸದ ಅಮಾವಾಸ್ಯೆಯನ್ನು ಹಲಹರಿ ಅಮಾವಾಸ್ಯ ಕರಾವಳಿ ಪ್ರದೇಶಗಳಲ್ಲಿ ಆಟಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಈ ದಿನದಂದು ನೇಗಿಲು ಒಳಗೊಂಡಂತೆ ಇತರ ಕೃಷಿ ಉಪಕರಣಗಳನ್ನು ಪೂಜಿಸಲಾಗುತ್ತದೆ. ನೇಗಿಲನ್ನು ಪೂಜಿಸುವ ಮೂಲಕ ಸಮೃದ್ಧ ಬೆಳೆ ಸಿಗಲೆಂದು ರೈತರು ದೇವರಲ್ಲಿ ಪ್ರಾರ್ಥಿಸುತ್ತಾರೆ. ಇದರೊಂದಿಗೆ ಅಮಾವಾಸ್ಯೆಯ ದಿನವು ಪೂರ್ವಜರಿಗೆ ಶ್ರಾದ್ಧ ಮಾಡಲು ಬಹಳ ಶುಭ ದಿನವಾಗಿದೆ.

ಆಷಾಢ ಅಮಾವಾಸ್ಯೆ ಮುಹೂರ್ತ:
ಅಮಾವಾಸ್ಯೆ ತಿಥಿ ಜುಲೈ 9 ರಂದು ಬೆಳಿಗ್ಗೆ 05:16 ರಿಂದ ಪ್ರಾರಂಭವಾಗಲಿದ್ದು, ಜುಲೈ 10 ರಂದು ಬೆಳಿಗ್ಗೆ 06:46 ಕ್ಕೆ ಕೊನೆಗೊಳ್ಳಲಿದೆ.

ಅಮಾವಾಸ್ಯೆ ಪೂಜಾ ವಿಧಾನ:
ಅಮಾವಾಸ್ಯೆಯ ದಿನದಂದು ಮುಂಜಾನೆ ಬೇಗ ಎದ್ದೇಳಿ.
ಈ ದಿನ, ಬ್ರಾಹ್ಮಿ ಮುಹೂರ್ತ ಸಮಯದಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡಿ.
ಸೂರ್ಯೋದಯವಾಗುವಾಗ ಸೂರ್ಯದೇವನಿಗೆ ನೀರನ್ನು ಅರ್ಪಿಸಿ.
ಈ ದಿನ ನಿಮ್ಮ ಪೂರ್ವಜರ ಆತ್ಮ ಶಾಂತಿಗಾಗಿ ಪೂಜೆಗಳನ್ನು ಮಾಡಿ.
ಪೂರ್ವಜರ ಆತ್ಮಗಳ ಶಾಂತಿಗಾಗಿ ಉಪವಾಸವಿರಿ.
ಅಗತ್ಯವಿರುವವರಿಗೆ ದಾನ ಮಾಡಿ.
ಬ್ರಾಹ್ಮಣರಿಗೆ ಆಹಾರವನ್ನು ನೀಡಿ.

ಆಷಾಢ ಅಮಾವಾಸ್ಯೆಯ ಮಹತ್ವ:
ಧರ್ಮಗ್ರಂಥಗಳಲ್ಲಿ ಈ ದಿನ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಈ ದಿನ ಅನೇಕ ಶುಭ ಆಚರಣೆಗಳನ್ನು ನಡೆಸಲಾಗುತ್ತದೆ. ಅನೇಕರು ತಮ್ಮ ಪೂರ್ವಜರನ್ನು ಮೆಚ್ಚಿಸಲು ಅಮಾವಾಸ್ಯೆ ತಿಥಿಯಲ್ಲಿ ಶ್ರಾದ್ಧವನ್ನು ಮಾಡುತ್ತಾರೆ. ಈ ದಿನ, ಪಿತ್ರ ತರ್ಪಣ, ನದಿ ಸ್ನಾನ ಮತ್ತು ದಾನ ಇತ್ಯಾದಿಗಳನ್ನು ಮಾಡುವುದು ಹೆಚ್ಚು ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಇದು ಮಾತ್ರವಲ್ಲ, ಈ ದಿನಾಂಕವನ್ನು ಪಿತೃ ದೋಷ ತೊಡೆದುಹಾಕಲು ಸಹಾಯಕವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ದಿನಾಂಕವನ್ನು ಪಿತೃ ಕರ್ಮಕ್ಕೆ ಬಹಳ ಶುಭವೆಂದು ಪರಿಗಣಿಸಲಾಗಿದೆ.



Click it and Unblock the Notifications