Latest Updates
-
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ!
ಸೈಕಲ್ನ ಒಂದೇ ಚಕ್ರದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಹೊರಟ ಯುವಕ: ವಿಶ್ವ ದಾಖಲೆ ಮಾತ್ರವಲ್ಲ ಮತ್ತೊಂದು ಉದ್ದೇಶವಿದೆ
ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸೈಕಲ್ನಲ್ಲಿ ಅದೂ ಒಂದೇ ಚಕ್ರದಲ್ಲಿ ಚಲಿಸುತ್ತಾ ಆ ಯುವಕರ ತಂಡ ಗಮನ ಸೆಳೆಯುತ್ತಿದೆ, ಅವರು ಗುರಿ ಈ ರೀತಿ ವಿಭಿನ್ನವಾಗಿ ಕಾಶ್ಮೀರ ತಲುಪುವುದು ಮಾತ್ರವಲ್ಲ ಅದರ ಹಿಂದೆ ಒಂದು ಒಳ್ಳೆಯ ಉದ್ದೇಶ ಕೂಡ ಇದೆ. ಇವರು ಇನ್ನು 6 ತಿಂಗಳಿನಲ್ಲಿ ಹೀಗೆ ಸೈಕಲ್ ತುಳಿದು ಕಾಶ್ಮೀರ ತಲುಪಲಿದ್ದಾರೆ.

ಕೇರಳದ ಮೂವರ ಈ ಯುವಕರ ತಂಡದಲ್ಲಿ ಸವಿದ್ ಎಂಬುವರು ಒಂದೇ ಚಕ್ರದಲ್ಲಿ ಸೈಕಲ್ನಲ್ಲಿ ಹೋಗುವ ಮೂಲಕ ದಾರಿ ಹೋಕರ ಗಮನ ಸೆಳೆಯುತ್ತಿದ್ದಾರೆ. ಕೇರಳದ ಕಣ್ಣೂರಿನ ಸವಿದ್, ತಾಹೀರ್ ಹಾಗೂ ಪಾಲಕ್ಕಾಡ್ನ ಅಭಿಷೇಕ್ ಒಂದು ಒಳ್ಳೆಯ ಕಾರ್ಯಕ್ಕೆ ಸೈಕಲ್ ತುಳಿದು ದೇಶದ ಗಮನ ಸೆಳೆಯಲು ಬಯಸುತ್ತಿದ್ದಾರೆ, ಅವರ ಉದ್ದೇಶ ಡ್ರಗ್ಸ್ ಫ್ರೀ ಕೇರಳವಾಗಿದೆ.
ಸವಿದ್ ಸಾಹಸ ದಾಖಲೆಯನ್ನು ಮಾಡಲಿದೆ
ಇದುವರೆಗೆ ಯಾರೂ ಒಂದು ಚಕ್ರದಲ್ಲಿ ಸೈಕಲ್ ತುಳಿದು ಕನ್ಯಾ ಕುಮಾರಿಯಿಂದ ಕಾಶ್ಮೀರ ತಲುಪಿರಲಿಲ್ಲ, ಆದರೆ ಸಾಹಿದ್ ಆ ಸಾಹಸ ಮಾಡುವ ಮೂಲಕ ವಿಶ್ವ ದಾಖಲೆ ಮಾಡಲಿದ್ದಾರೆ. ಈಗಾಗಲೇ ಈ ಯುವಕರ ತಂಡ ಕನ್ಯಾಕುಮಾರಿಯಿಂದ ಹೊರಟು ಸುಮಾರು 2300 ಕಿ,ಮೀ ಸವಾರಿ ಮಾಡಿದ್ದಾರೆ. ಸವಿದ್ ವೃತ್ತಿಯಲ್ಲಿ ಸಾಫ್ಟ್ವೇರ್ ಆಗಿದ್ದು ಕಳೆದ ಒಂದು ವರ್ಷದಿಂದ ಒಂದು ಚಕ್ರದಲ್ಲಿ ಸವಿಸುವುದನ್ನು ಅಭ್ಯಾಸ ಮಾಡುತ್ತಿದ್ದರು, ಇದೀಗ ತುಂಬಾ ಆರಾಮವಾಗಿ ಚಲಿಸುತ್ತಿದ್ದಾರೆ,
ಡ್ರಗ್ಸ್ನ ದುಷ್ಪರಿಣಾಮದ ಬಗ್ಗೆ ಜಾಗೃತಿ
ಯುವಕರು ಡ್ರಗ್ಸ್ ಚಟಕ್ಕೆ ಬಲಿಯಾಗುವುದರಿಂದ ಉಂಟಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಕೇರಳವನ್ನು ಡ್ರಗ್ಸ್ ಫ್ರೀ ಕೇರಳ ಮಾಡುವ ಉದ್ದೇಶದಿಂದ ಇವರ ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಸೈಕಲ್ ಪ್ರಯಾಣ ಮಾಡುತ್ತಿದ್ದಾರೆ.
ಡ್ರಗ್ಸ್ ಚಟಕ್ಕೆ ಬಲಿಯಾಗಿ ಅನೇಕ ಯುವಕರ ಬಾಳು ನರಕವಾಗುತ್ತಿದೆ
ಡ್ರಗ್ಸ್ ಚಟಕ್ಕೆ ಬಿದ್ದರೆ ಆ ಯುವಕರ ಬದುಕೇ ನರಕವಾಗುವುದು, ಇದರಿಂದ ಎಷ್ಟೋ ಸಂಸಾರಗಳು ಹಾಳಾಗುತ್ತಿದೆ, ಡ್ರಗ್ಸ್ ಚಟಕ್ಕೆ ಬಲಿಯಾಗಿ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ ಇದರ ಬಗ್ಗೆ ಅರಿವು ಮೂಡಿಸಲು ಈ ಯುವಕರು ಸೈಕಲ್ ಯಾತ್ರೆ ಮಾಡುತ್ತಿದ್ದಾರೆ. ಇವರ ಉದ್ದೇಶ ಒಳ್ಳೆಯದಿದೆ, ಇವರ ಉದ್ದೇಶ ಯುವ ಜನಗಳಿಗೆ ತಲುಪುವಂತಾಗಲಿ, ಇವರ ನಡೆ ಬೇರೆ ಯುವಕರಿಗೆ ಸ್ಪೂರ್ತಿಯಾಗುವಲ್ಲಿ ಯಾವುದೇ ಸಂಶಯವಿಲ್ಲ.



Click it and Unblock the Notifications