Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೈಕಲ್ನ ಒಂದೇ ಚಕ್ರದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಹೊರಟ ಯುವಕ: ವಿಶ್ವ ದಾಖಲೆ ಮಾತ್ರವಲ್ಲ ಮತ್ತೊಂದು ಉದ್ದೇಶವಿದೆ
ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸೈಕಲ್ನಲ್ಲಿ ಅದೂ ಒಂದೇ ಚಕ್ರದಲ್ಲಿ ಚಲಿಸುತ್ತಾ ಆ ಯುವಕರ ತಂಡ ಗಮನ ಸೆಳೆಯುತ್ತಿದೆ, ಅವರು ಗುರಿ ಈ ರೀತಿ ವಿಭಿನ್ನವಾಗಿ ಕಾಶ್ಮೀರ ತಲುಪುವುದು ಮಾತ್ರವಲ್ಲ ಅದರ ಹಿಂದೆ ಒಂದು ಒಳ್ಳೆಯ ಉದ್ದೇಶ ಕೂಡ ಇದೆ. ಇವರು ಇನ್ನು 6 ತಿಂಗಳಿನಲ್ಲಿ ಹೀಗೆ ಸೈಕಲ್ ತುಳಿದು ಕಾಶ್ಮೀರ ತಲುಪಲಿದ್ದಾರೆ.

ಕೇರಳದ ಮೂವರ ಈ ಯುವಕರ ತಂಡದಲ್ಲಿ ಸವಿದ್ ಎಂಬುವರು ಒಂದೇ ಚಕ್ರದಲ್ಲಿ ಸೈಕಲ್ನಲ್ಲಿ ಹೋಗುವ ಮೂಲಕ ದಾರಿ ಹೋಕರ ಗಮನ ಸೆಳೆಯುತ್ತಿದ್ದಾರೆ. ಕೇರಳದ ಕಣ್ಣೂರಿನ ಸವಿದ್, ತಾಹೀರ್ ಹಾಗೂ ಪಾಲಕ್ಕಾಡ್ನ ಅಭಿಷೇಕ್ ಒಂದು ಒಳ್ಳೆಯ ಕಾರ್ಯಕ್ಕೆ ಸೈಕಲ್ ತುಳಿದು ದೇಶದ ಗಮನ ಸೆಳೆಯಲು ಬಯಸುತ್ತಿದ್ದಾರೆ, ಅವರ ಉದ್ದೇಶ ಡ್ರಗ್ಸ್ ಫ್ರೀ ಕೇರಳವಾಗಿದೆ.
ಸವಿದ್ ಸಾಹಸ ದಾಖಲೆಯನ್ನು ಮಾಡಲಿದೆ
ಇದುವರೆಗೆ ಯಾರೂ ಒಂದು ಚಕ್ರದಲ್ಲಿ ಸೈಕಲ್ ತುಳಿದು ಕನ್ಯಾ ಕುಮಾರಿಯಿಂದ ಕಾಶ್ಮೀರ ತಲುಪಿರಲಿಲ್ಲ, ಆದರೆ ಸಾಹಿದ್ ಆ ಸಾಹಸ ಮಾಡುವ ಮೂಲಕ ವಿಶ್ವ ದಾಖಲೆ ಮಾಡಲಿದ್ದಾರೆ. ಈಗಾಗಲೇ ಈ ಯುವಕರ ತಂಡ ಕನ್ಯಾಕುಮಾರಿಯಿಂದ ಹೊರಟು ಸುಮಾರು 2300 ಕಿ,ಮೀ ಸವಾರಿ ಮಾಡಿದ್ದಾರೆ. ಸವಿದ್ ವೃತ್ತಿಯಲ್ಲಿ ಸಾಫ್ಟ್ವೇರ್ ಆಗಿದ್ದು ಕಳೆದ ಒಂದು ವರ್ಷದಿಂದ ಒಂದು ಚಕ್ರದಲ್ಲಿ ಸವಿಸುವುದನ್ನು ಅಭ್ಯಾಸ ಮಾಡುತ್ತಿದ್ದರು, ಇದೀಗ ತುಂಬಾ ಆರಾಮವಾಗಿ ಚಲಿಸುತ್ತಿದ್ದಾರೆ,
ಡ್ರಗ್ಸ್ನ ದುಷ್ಪರಿಣಾಮದ ಬಗ್ಗೆ ಜಾಗೃತಿ
ಯುವಕರು ಡ್ರಗ್ಸ್ ಚಟಕ್ಕೆ ಬಲಿಯಾಗುವುದರಿಂದ ಉಂಟಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಕೇರಳವನ್ನು ಡ್ರಗ್ಸ್ ಫ್ರೀ ಕೇರಳ ಮಾಡುವ ಉದ್ದೇಶದಿಂದ ಇವರ ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಸೈಕಲ್ ಪ್ರಯಾಣ ಮಾಡುತ್ತಿದ್ದಾರೆ.
ಡ್ರಗ್ಸ್ ಚಟಕ್ಕೆ ಬಲಿಯಾಗಿ ಅನೇಕ ಯುವಕರ ಬಾಳು ನರಕವಾಗುತ್ತಿದೆ
ಡ್ರಗ್ಸ್ ಚಟಕ್ಕೆ ಬಿದ್ದರೆ ಆ ಯುವಕರ ಬದುಕೇ ನರಕವಾಗುವುದು, ಇದರಿಂದ ಎಷ್ಟೋ ಸಂಸಾರಗಳು ಹಾಳಾಗುತ್ತಿದೆ, ಡ್ರಗ್ಸ್ ಚಟಕ್ಕೆ ಬಲಿಯಾಗಿ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ ಇದರ ಬಗ್ಗೆ ಅರಿವು ಮೂಡಿಸಲು ಈ ಯುವಕರು ಸೈಕಲ್ ಯಾತ್ರೆ ಮಾಡುತ್ತಿದ್ದಾರೆ. ಇವರ ಉದ್ದೇಶ ಒಳ್ಳೆಯದಿದೆ, ಇವರ ಉದ್ದೇಶ ಯುವ ಜನಗಳಿಗೆ ತಲುಪುವಂತಾಗಲಿ, ಇವರ ನಡೆ ಬೇರೆ ಯುವಕರಿಗೆ ಸ್ಪೂರ್ತಿಯಾಗುವಲ್ಲಿ ಯಾವುದೇ ಸಂಶಯವಿಲ್ಲ.



Click it and Unblock the Notifications


