Latest Updates
-
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ!
ಸೈಕಲ್ನ ಒಂದೇ ಚಕ್ರದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಹೊರಟ ಯುವಕ: ವಿಶ್ವ ದಾಖಲೆ ಮಾತ್ರವಲ್ಲ ಮತ್ತೊಂದು ಉದ್ದೇಶವಿದೆ
ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸೈಕಲ್ನಲ್ಲಿ ಅದೂ ಒಂದೇ ಚಕ್ರದಲ್ಲಿ ಚಲಿಸುತ್ತಾ ಆ ಯುವಕರ ತಂಡ ಗಮನ ಸೆಳೆಯುತ್ತಿದೆ, ಅವರು ಗುರಿ ಈ ರೀತಿ ವಿಭಿನ್ನವಾಗಿ ಕಾಶ್ಮೀರ ತಲುಪುವುದು ಮಾತ್ರವಲ್ಲ ಅದರ ಹಿಂದೆ ಒಂದು ಒಳ್ಳೆಯ ಉದ್ದೇಶ ಕೂಡ ಇದೆ. ಇವರು ಇನ್ನು 6 ತಿಂಗಳಿನಲ್ಲಿ ಹೀಗೆ ಸೈಕಲ್ ತುಳಿದು ಕಾಶ್ಮೀರ ತಲುಪಲಿದ್ದಾರೆ.

ಕೇರಳದ ಮೂವರ ಈ ಯುವಕರ ತಂಡದಲ್ಲಿ ಸವಿದ್ ಎಂಬುವರು ಒಂದೇ ಚಕ್ರದಲ್ಲಿ ಸೈಕಲ್ನಲ್ಲಿ ಹೋಗುವ ಮೂಲಕ ದಾರಿ ಹೋಕರ ಗಮನ ಸೆಳೆಯುತ್ತಿದ್ದಾರೆ. ಕೇರಳದ ಕಣ್ಣೂರಿನ ಸವಿದ್, ತಾಹೀರ್ ಹಾಗೂ ಪಾಲಕ್ಕಾಡ್ನ ಅಭಿಷೇಕ್ ಒಂದು ಒಳ್ಳೆಯ ಕಾರ್ಯಕ್ಕೆ ಸೈಕಲ್ ತುಳಿದು ದೇಶದ ಗಮನ ಸೆಳೆಯಲು ಬಯಸುತ್ತಿದ್ದಾರೆ, ಅವರ ಉದ್ದೇಶ ಡ್ರಗ್ಸ್ ಫ್ರೀ ಕೇರಳವಾಗಿದೆ.
ಸವಿದ್ ಸಾಹಸ ದಾಖಲೆಯನ್ನು ಮಾಡಲಿದೆ
ಇದುವರೆಗೆ ಯಾರೂ ಒಂದು ಚಕ್ರದಲ್ಲಿ ಸೈಕಲ್ ತುಳಿದು ಕನ್ಯಾ ಕುಮಾರಿಯಿಂದ ಕಾಶ್ಮೀರ ತಲುಪಿರಲಿಲ್ಲ, ಆದರೆ ಸಾಹಿದ್ ಆ ಸಾಹಸ ಮಾಡುವ ಮೂಲಕ ವಿಶ್ವ ದಾಖಲೆ ಮಾಡಲಿದ್ದಾರೆ. ಈಗಾಗಲೇ ಈ ಯುವಕರ ತಂಡ ಕನ್ಯಾಕುಮಾರಿಯಿಂದ ಹೊರಟು ಸುಮಾರು 2300 ಕಿ,ಮೀ ಸವಾರಿ ಮಾಡಿದ್ದಾರೆ. ಸವಿದ್ ವೃತ್ತಿಯಲ್ಲಿ ಸಾಫ್ಟ್ವೇರ್ ಆಗಿದ್ದು ಕಳೆದ ಒಂದು ವರ್ಷದಿಂದ ಒಂದು ಚಕ್ರದಲ್ಲಿ ಸವಿಸುವುದನ್ನು ಅಭ್ಯಾಸ ಮಾಡುತ್ತಿದ್ದರು, ಇದೀಗ ತುಂಬಾ ಆರಾಮವಾಗಿ ಚಲಿಸುತ್ತಿದ್ದಾರೆ,
ಡ್ರಗ್ಸ್ನ ದುಷ್ಪರಿಣಾಮದ ಬಗ್ಗೆ ಜಾಗೃತಿ
ಯುವಕರು ಡ್ರಗ್ಸ್ ಚಟಕ್ಕೆ ಬಲಿಯಾಗುವುದರಿಂದ ಉಂಟಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಕೇರಳವನ್ನು ಡ್ರಗ್ಸ್ ಫ್ರೀ ಕೇರಳ ಮಾಡುವ ಉದ್ದೇಶದಿಂದ ಇವರ ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಸೈಕಲ್ ಪ್ರಯಾಣ ಮಾಡುತ್ತಿದ್ದಾರೆ.
ಡ್ರಗ್ಸ್ ಚಟಕ್ಕೆ ಬಲಿಯಾಗಿ ಅನೇಕ ಯುವಕರ ಬಾಳು ನರಕವಾಗುತ್ತಿದೆ
ಡ್ರಗ್ಸ್ ಚಟಕ್ಕೆ ಬಿದ್ದರೆ ಆ ಯುವಕರ ಬದುಕೇ ನರಕವಾಗುವುದು, ಇದರಿಂದ ಎಷ್ಟೋ ಸಂಸಾರಗಳು ಹಾಳಾಗುತ್ತಿದೆ, ಡ್ರಗ್ಸ್ ಚಟಕ್ಕೆ ಬಲಿಯಾಗಿ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ ಇದರ ಬಗ್ಗೆ ಅರಿವು ಮೂಡಿಸಲು ಈ ಯುವಕರು ಸೈಕಲ್ ಯಾತ್ರೆ ಮಾಡುತ್ತಿದ್ದಾರೆ. ಇವರ ಉದ್ದೇಶ ಒಳ್ಳೆಯದಿದೆ, ಇವರ ಉದ್ದೇಶ ಯುವ ಜನಗಳಿಗೆ ತಲುಪುವಂತಾಗಲಿ, ಇವರ ನಡೆ ಬೇರೆ ಯುವಕರಿಗೆ ಸ್ಪೂರ್ತಿಯಾಗುವಲ್ಲಿ ಯಾವುದೇ ಸಂಶಯವಿಲ್ಲ.



Click it and Unblock the Notifications