Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕನ್ನಡ ಭಾಷೆ ಉಳಿಸಲು, ಬೆಳೆಸಲು ಈ 4 ಚಿಕ್ಕ ಬದಲಾವಣೆ ಮಾಡಿದರೆ ಸಾಕು
ಕನ್ನಡಿಗರಿಗೆ ಈ ದಿನ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಜೊತೆ ಜೊತೆಗೆ ಬಂದಿರುವುದರಿಂದ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ. 1956ರಲ್ಲಿ ಅಲ್ಲಲ್ಲಿ ಚದುರಿದ್ದ ಕನ್ನಡ ಪ್ರಾಂತ್ಯಗಳೆನ್ನೆಲ್ಲಾ ಒಂದುಗೂಡಿಸಿ ಕರ್ನಾಟಕ ಎಂದು ನಾಮಕರಣ ಮಾಡಲಾಯ್ತು.
ಕನ್ನಡ ನೆಲ, ಕರ್ನಾಟಕದ ಸಂಸ್ಕೃತಿ, ಕನ್ನಡ ಭಾಷೆ ಎಲ್ಲವೂ ಸುಂದರ, ಅದೇ ಕರ್ನಾಟಕದಲ್ಲಿ ಕನ್ನಡ ಭಾಷೆಗಾಗಿ ಹೋರಾಟ ಮಾಡುವಂತಾಗಿದೆ. ಹಾಗಾದರೆ ಕನ್ನಡಿಗರೇ ನಾವು ಮಾಡುತ್ತಿರುವ ತಪ್ಪಾದರೂ ಏನು? ಇದರ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಆವಾಗ ಮಾತ್ರ ಕನ್ನಡ ಭಾಷೆಯ ಶ್ರೀಮಂತಿಕೆ ಉಳಿಸಿಕೊಂಡು ಹೋಗಲು ಸಾಧ್ಯವಾಗುದು.

ಕನ್ನಡಿಗರೇ ಕನ್ನಡ ಭಾಷೆ ಉಳಿವಿಗಾಗಿ ನಮ್ಮ ಭಾಷೆ ಮತ್ತಷ್ಟು ಬೆಳೆಯುವಂತಾಗಲು ನಮ್ಮಲ್ಲಿಯೇ ನಾವು ಈ ಬದಲಾವಣೆ ಮಾಡಿದರೆ ಸಾಕು ಬೆಂಗಳೂರಿನ ನಗರದಲ್ಲಿ ತುಂಬಾನೇ ಬದಲಾವಣೆ ಕಾಣಬಹುದು:
ಕನ್ನಡದಲ್ಲಿಯೇ ಮಾತನಾಡೋಣ: ನಾವು ಶಾಪಿಂಗ್, ರೆಸ್ಟೋಂಟ್ಗೆ ಹೋದಾಗ ಭೈಯ್ಯಾ ಕಿತನಾ? ಅಂತ ಕೇಳುವುದನ್ನು ಮೊದಲು ನಿಲ್ಲಿಸಬೇಕು, ನಾವು ಕನ್ನಡದಲ್ಲಿಯೇ ಕೇಳಬೇಕು, ಅವರ ಜೊತೆ ಶಾಪಿಂಗ್ ಚರ್ಚೆಗಳನ್ನು ಕನ್ನಡದಲ್ಲಿಯೇ ಮಾಡಬೇಕು, ಆವಾಗ ಅವರಿಗೆ ಕನ್ನಡ ಕಲಿಯಬೇಕಾದ ಅನಿವಾರ್ಯತೆ ಬರುತ್ತದೆ, ಏಕೆಂದೆ ಬ್ಯುಸ್ನೆಸ್ ಮಾಡಬೇಕಾಗಿರುವುದು ಅವರ ಅವಶ್ಯಕತೆ ತಾನೆ? ರೆಸ್ಟೋರೆಂಟ್ಗಳಿಗೆ ಹೋದಾಗಲೂ, ಈ ಪಿಜ್ಜಾ ಬರ್ಗರ್ ಸೆಂಟರ್ಗಳಿಗೆ ಹೋದಾಗಲೂ ಕನ್ನಡದಲ್ಲಿಯೇ ಕೇಳಿ, ಇಂಗ್ಲಿಷ್ ಮೆನು ಕೊಡುವಾಗ ಕನ್ನಡ ಮೆನುವಿದ್ದರೆ ಕೊಡಿ ಅಂತ ಕೇಳಿ, ಒಂದು ಹತ್ತು ಮಂದಿ ಕೇಳಲಾರಂಭಿಸಿದಾಗ ರೆಸ್ಟೋರೆಂಟ್ನವರು ಕೂಡ ಬದಲಾಗುತ್ತಾರೆ.
ಮನೆಯಲ್ಲಿ ಕನ್ನಡ ಮಾತನಾಡಿ
ಎಷ್ಟೋ ಪೋಷಕರು ತಮ್ಮ ಮಕ್ಕಳ ಜೊತೆ ಇಂಗ್ಲಿಷ್ನಲ್ಲಿ ಮಾತನಾಡುತ್ತಾರೆ, ಇಂಗ್ಲಿಷ್ನಲ್ಲಿ ಮಾತನಾಡುವುದು ತಪ್ಪಲ್ಲ, ಆದರೆ ಮಕ್ಕಳಿಗೆ ಕನ್ನಡವೇ ಗೊತ್ತಿಲ್ಲದಂತೆ ಮಾಡುವುದು ತಪ್ಪು, ಅವರ ಜೊತೆ ಮಾತನಾಡುವಾಗ ಕನ್ನಡದಲ್ಲಿ ಮಾತನಾಡಿ, ಮಕ್ಕಳು ಪ್ರೈಮರಿಯಲ್ಲಿ ಇರುವಾಗ ಪ್ರತಿದಿನ ಕನ್ನಡ ನ್ಯೂಸ್ ಪೇಪರ್ ಕೊಟ್ಟು ಒಂದು 5 ನಿಮಿಷ ಜೋರಾಗಿ ಓದಲು ಹೇಳಿ, ತಪ್ಪಿದ್ದಾಗ ಸಮಧಾನದಿಂದ ಸರಿಪಡಿಸಿ, ಹೀಗೆ ಮಾಡುವುದರಿಂದ ನಿಮ್ಮ ಮಕ್ಕಳು ಕನ್ನಡ ಭಾಷೆಯಲ್ಲಿ ಉತ್ತಮ ಹಿಡಿತ ಸಾಧಿಸುತ್ತಾರೆ. ಶಾಲೆಯಲ್ಲಿ ಕನ್ನಡವಿಲ್ಲದಿದ್ದರೂ ಕೂಡ ಕನ್ನಡ ಕಲಿಸಬಹುದು. ಪೋಷಕರು ಪ್ರಯತ್ನ ಹಾಕಬೇಕು.
ಈಗ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುವುದು ತಪ್ಪಲ್ಲ, ಅವರು ಇಂಗ್ಲಿಷ್ನೋ, ಹಿಂದಿನೋ ಕಲಿಯಲಿ, ಆದರೆ ಕನ್ನಡ ಅವರಿಗೆ ಅಷ್ಟೇ ಚೆನ್ನಾಗಿ ಬರುವಂತೆ ಮಾಡುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯವಾಗಿದೆ.
ಇತರ ಭಾಷೆಯವರ ಜೊತೆಗೆ ಕನ್ನಡದಲ್ಲಿಯೇ ಮಾತನಾಡಿಸೋಣ: ಇತರ ಭಾಷೆಯವರನ್ನು ದ್ವೇಷಿಸುವುದು ಬೇಡ, ಅವರ ಜೊತೆ ಮಾತನಾಡುವಾಗ ಕನ್ನಡ ಭಾಷೆಯಲ್ಲಿಯೇ ಮಾತನಾಡೋಣ, ನಮ್ಮ ಪಕ್ಕದ ಮನೆಯವರು ಬೇರೆ ಭಾಷೆಯವರು ಇದ್ದರೆ ದಿನಾ ಒಂದೆರಡು ಪದ ಕನ್ನಡದಲ್ಲಿ ಕೇಳಿದಾಗ ಅವರಿಗೂ ಕನ್ನಡ ಭಾಷೆ ಅರ್ಥವಾಗಲಾರಂಭಿಸುತ್ತದೆ.
ಕನ್ನಡ ಭಾಷೆಯಲ್ಲಿಓದಿದವರಿಗೆ ಕೀಳೆರಿಮೆ ಬೇಡ
ಎಷ್ಟೋ ಕನ್ನಡ ಮಾಧ್ಯಮ ಮಕ್ಕಳು ಓದಿನಲ್ಲಿ ತುಂಬಾ ಚುರುಕಾಗಿರುತ್ತಾರೆ, ಆದರೆ ಒಂದು ಕೆಲಸಕ್ಕೆ ಪ್ರಯತ್ನಿಸುವಾಗ ಅವರಲ್ಲಿ ಕೀಳೆರಿಮೆ ಉಂಟಾಗುವುದು. ಇಂಗ್ಲಿಷ್ ಬರಲ್ಲ ಎಂಬ ಕಾರಣಕ್ಕೆ ನಮ್ಮ ಕರ್ನಾಟಕದಲ್ಲಿ ಅನೇಕ ಉದ್ಯೋಗವಕಾಶ ಸಿಗುತ್ತಿಲ್ಲ, ಆ ರೀತಿ ಆಗಬಾರದು, ಕೆಲವೊಂದು ಕೆಲಸಗಳಲ್ಲಿ ಕೌಶಲ್ಯ ಮುಖ್ಯವಾಗಿರುತ್ತದೆ, ಭಾಷೆಯಲ್ಲ, ಆದರೆ ಅಲ್ಲಿಯ ಸಂದರ್ಶನದಲ್ಲಿ ಉತ್ತರ ಕೊಡಲು ಸಾಧ್ಯವಾಗದೆ ಉದ್ಯೋಗ ಪಡೆಯಲು ವಿಫಲರಾಗಿರುತ್ತಾರೆ, ಆ ರೀತಿ ಆಗುವುದನ್ನು ತಡೆಯಬೇಕಾಗಿದೆ. ಈಗ ಇಂಗ್ಲಿಷ್ ಪೇಪರ್ನಲ್ಲಿ ಕೆಲಸ ಮಾಡಬೇಕೆಂದರೆ ಇಂಗ್ಲಿಷ್ ಬೇಕು, ಅದೇ ಒಂದು ಟೆಕ್ನಿಕಲ್ ಕಂಪನಿಯ ಉದ್ಯೋಗಿಯಾಗಲು ಅಲ್ಲಿ ಭಾಷೆಗಿಂತ ಕೌಶಲ್ಯ ಬೇಕು, ಇಂಥ ಕಡೆ ಕೌಶಲ್ಯವಿದ್ದರೂ ಇಂಗ್ಲಿಷ್ ಬರಲ್ಲ ಎಂಬ ಕಾರಣಕ್ಕೆ ಎಷ್ಟೋ ಜನರಿಗೆ ಉದ್ಯೋಗ ಸಿಗುತ್ತಿಲ್ಲ, ಈ ರೀತಿ ಆಗುವುದು ತಡೆಗಟ್ಟಬೇಕಾಗಿದೆ.



Click it and Unblock the Notifications