Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆ ಮುಂದೆ ನಿಂಬೆಹಣ್ಣು ಹಾಗೂ ಹಸಿ ಮೆಣಸು ನೇತು ಹಾಕುವುದೇಕೆ? ವೈಜ್ಞಾನಿಕ ಕಾರಣದಿಂದ ನೋಡಿದರೂ ಪ್ರಯೋಜನವಿದೆ
ಗಾಡಿಗೆ, ಮನೆ ಮುಂದೆ, ಶಾಪ್ ಮುಂದೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿ ಪೋಣಿಸಿರುವ ಧಾರವನ್ನು ಕಟ್ಟಿರುವುದನ್ನು ನೋಡುತ್ತೇವೆ. ಭಾರತದಲ್ಲಿ ಈ ದೃಶ್ಯ ಎಲ್ಲಾ ಕಡೆ ಬರುವುದು.
ಯಾವುದೇ ಕೆಟ್ಟ ದೃಷ್ಟಿ ತಾಗದಿರಲಿ ಎಂದು ಈ ರೀತಿ ಕಟ್ಟಲಾಗುವುದು, ಕೆಲವರಿಗೆ ಇದು ನಂಬಿಕೆ, ಇನ್ನು ಕೆಲವರಿಗೆ ಮೂಢ ನಂಬಿಕೆಯಷ್ಟೇ.. ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣಗಳಿವೆ ಎಂಬುವುದು ಗೊತ್ತೇ? ಬನ್ನಿ ಇದರ ಬಗ್ಗೆ ನೋಡೋಣ:

ನಿಂಬೆಹಣ್ಣು, ಮೆಣಸಿನಕಾಯಿ ಮಾಲೆ ನೇತು ಹಾಕುವುದರ ಹಿಂದೆ ಇರುವ ಧಾರ್ಮಿಕ ಕಾರಣಗಳೇನು?
ಧಾರ್ಮಿಕ ನಂಬಿಕೆಗಳ ಪ್ರಕಾರ ಲಕ್ಷ್ಮಿಯ ಜೊತೆಗೆ ಅಲಕ್ಷ್ಮಿಯೂ ಇರುತ್ತಾಳೆ, ಆದರೆ ಎಲ್ಲಿ ಲಕ್ಷ್ಮಿ ಲಕ್ಷ್ಮಿಯನ್ನು ನಿರ್ಲಕ್ಷ್ಯ ಮಾಡುತ್ತಾಳೋ ಅಲಕ್ಷ್ಮಿ ಬಂದು ಕೂತು ಬಿಡುತ್ತಾಳೆ, ಇವಳು ದರಿದ್ರ ಲಕ್ಷ್ಮಿ, ಈ ದರಿದ್ರ ಲಕ್ಷ್ಮಿ ಬಂದರೆ ತುಂಬಾನೇ ಕಷ್ಟ ಪಡಬೇಕಾಗುತ್ತದೆ, ಈ ರೀತಿ ಮನೆ ಮುಂದೆ, ಅಂಗಡಿ ಮುಂದೆ ನಿಂಬೆಹಣ್ಣು, ಹಸಿ ಮೆಣಸಿನಕಾಯಿ ಅಲಕ ಲಕ್ಷ್ಮಿಯನ್ನು ಒಳ ಬರದಂತೆ ತಡೆಯುತ್ತದೆ, ಅಲ್ಲದೆ ಮನೆಗೆ ದೃಷ್ಟಿ ಬೀಳುವುದಿಲ್ಲ ಎಂದು ಹೇಳಲಾಗುವುದು.
ಲಕ್ಷ್ಮಿಯನ್ನು ಸಿಹಿ ವಸ್ತುಗಳನ್ನು ಇಷ್ಟಪಡುತ್ತಾಳೆ, ಹಾಗಾಗಿ ಲಕ್ಷ್ಮಿಗೆ ಸಿಹಿ ಪದಾರ್ಥಗಳನ್ನು ನೈವೇದ್ಯವಾಗಿ ಇಡಲಾಗುವುದು. ಅದೇ ದರಿದ್ರ ಲಕ್ಷ್ಮಿ ಹುಳಿ, ಖಾರದ ವಸ್ತುಗಳನ್ನು ಇಷ್ಟಪಡುತ್ತಾಳೆ, ಈ ರೀತಿ ಮನೆ ಮುಂದೆ ಕಟ್ಟಿದಾಗ ದರಿದ್ರ ಲಕ್ಷ್ಮಿ ಮನೆಯ ಹೊರಗಡೆ ಇರುತ್ತಾಳೆ, ಮನೆಯ ಒಳಗಡೆ ಬರುವುದಿಲ್ಲ. ಇದರಿಂದ ಲಕ್ಷ್ಮಿ ಕೃಪೆಯಿಂದ ಮನೆಯಲ್ಲಿ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ.
ಇದರ ಹಿಂದಿದೆ ವೈಜ್ಞಾನಿಕ ಕಾರಣ
ನಮ್ಮ ಹಿರಿಯರು ಮಾಡಿರುವ ಧಾರ್ಮಿಕ ಆಚರಣೆಗಳ ಹಿಂದೆ ವೈಜ್ಞಾನಿಕ ಕಾರಣಗಳಿರುತ್ತದೆ, ಆದರೆ ಆವಾಗ ಅದು ಜನರಿಗೆ ಅರ್ಥವಾಗಲಿ ಎಂದು ಯಾವುದೋ ಕತೆ ರೂಪದಲ್ಲಿ ಹೇಳಿರುತ್ತಾರೆ. ಆದರೆ ಅದರ ಹಿಂದೆ ಇರುವ ವೈಜ್ಞಾನಿಕ ಕಾರಣ ತಿಳಿಯದೆ ಮೂಢನಂಬಿಕೆ ಅಂತ ಅನುಮಾನದಿಂದ ನೋಡುತ್ತೇವೆ.
ಇದರ ಹಿಂದೆ ಇರುವ ವೈಜ್ಞಾನಿಕ ಕಾರಣಗಳೇನು ಎಂದು ನೋಡೋಣ ಬನ್ನಿ:
ಹಿಂದೆ ಜನರು ಕಾಡಿನ ಜೊತೆಗೆ ತುಂಬಾನೇ ಸಂಪರ್ಕ ಹೊಂದಿದ್ದರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಾಗ ಕಾಡಿನ ಮೂಲಕ ಹೋಗುತ್ತಿದ್ದರು. ತಮ್ಮ ರಕ್ಷಣೆಗೆ ಇದನ್ನು ಜೊತೆಗೆ ಕೊಂಡೊಯ್ಯುತ್ತಿದ್ದರು, ಬಾಯಾರಿಕೆಯಾದರೆ ನಿಂಬೆಹಣ್ಣು ನೀರಿಗೆ ಹಿಂಡಿ ಕುಡಿದರೆ ಬಾಯಾರಿಕೆ ಕಡಿಮೆ, ದೇಹಕ್ಕೆ ಚೈತನ್ಯ ಸಿಗುವುದು.
ಇನ್ನು ಹಸಿಮೆಣಸು ಬಗ್ಗೆ ಹೇಳುವುದಾದರೆ ಕಾಡಿನಲ್ಲಿ ಹಾವಿನ ಕಾಟ ಹೆಚ್ಚಿರುತ್ತದೆ, ಆವಾಗ ಹಾವು ಕಚ್ಚಿ ತುಂಬಾ ಜನರು ಸಾಯುತ್ತಿದ್ದರು. ತಮಗೆ ಕಚ್ಚಿದ ಹಾವು ವಿಷಕಾರಿಯೇ ಇಲ್ಲವೇ ಎಂದು ತಿಳಿಯಲು ಹಸಿಮೆಣಸು ಬಳಸುತ್ತಿದ್ದರಂತೆ. ಹಾವು ಕಚ್ಚಿದರೆ ಇವರು ಹಸಿ ಮೆಣಸು ಕಚ್ಚಿ ನೋಡುತ್ತಿದ್ದರು ಬಾಯಿಗೆ ಖಾರ ಬಂದರೆ ಕಚ್ಚಿರುವುದು ವಿಷಕಾರಿ ಅಲ್ಲ ಎಂದು ಖಾತರಿಯಾಗುತ್ತಿತ್ತು, ಅದೇ ವಿಷಕಾರಿ ಹಾವು ಕಚ್ಚಿದರೆ ನರಗಳೆಲ್ಲಾ ಮರಕಟ್ಟುವುದು, ಕಚ್ಚಿದಾಗ ಯಾವುದೇ ರುಚಿ ಗೊತ್ತಾಗುವುದಿಲ್ಲ ಆವಾಗ ಅದು ವಿಷಕಾರಿ ಎಂದು ತಿಳಿಯುವುದು.
ಹಾಗಾಗಿ ಹಿಂದಿನ ಕಾಲದಲ್ಲಿ ನಿಂಬೆಹಣ್ಣು, ಹಸಿ ಮೆಣಸು ಜೊತೆಗೆ ಕೊಂಡೊಯ್ಯುತ್ತಿದ್ದರು.
ಕೀಟಗಳು
ನಿಂಬೆಹಣ್ಣು, ಹಸಿ ಮೆಣಸು ಕೀಟಗಳನ್ನು ತಡೆಗಟ್ಟುತ್ತದೆ. ಇದು ಜೊತೆಗಿದ್ದರೆ ಇದರ ಘಾಟು ವಾಸನೆಗೆ ಕೀಟಗಳು ಕಚ್ಚುವುದಿಲ್ಲ ಎಂದು ಹೇಳಲಾಗುವುದು.
ಋಣಾತ್ಮಕ ಶಕ್ತಿಯನ್ನು ಹೊರ ಹಾಕುತ್ತದೆ.
ನಂಬಿಕೆಗಳ ಪ್ರಕಾರ ನಿಂಬೆಹಣ್ಣು ಮತ್ತು ಹಸಿ ಮೆಣಸನ್ನು ಮನೆ ಮುಂದುಗಡೆ ಹಾಕುವುದರಿಂದ ಕೆಟ್ಟ ದೃಷ್ಟಿ ಬೀಳುವುದಿಲ್ಲ ಎಂದು ಹೇಳಲಾಗುವುದು. ಅಲ್ಲದೆ ಋಣಾತ್ಮಕ ಮನೆಯೊಳಗಡೆ ಬರಲು ಬಿಡುವುದಿಲ್ಲ ಎಂದು ಹೇಳಲಾಗುವುದು, ಹಾಗಾಗಿ ಇದನ್ನು ಮನೆಮುಂದೆ ನೇತು ಹಾಕಲಾಗುವುದು.



Click it and Unblock the Notifications