Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮನೆ ಮುಂದೆ ನಿಂಬೆಹಣ್ಣು ಹಾಗೂ ಹಸಿ ಮೆಣಸು ನೇತು ಹಾಕುವುದೇಕೆ? ವೈಜ್ಞಾನಿಕ ಕಾರಣದಿಂದ ನೋಡಿದರೂ ಪ್ರಯೋಜನವಿದೆ
ಗಾಡಿಗೆ, ಮನೆ ಮುಂದೆ, ಶಾಪ್ ಮುಂದೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿ ಪೋಣಿಸಿರುವ ಧಾರವನ್ನು ಕಟ್ಟಿರುವುದನ್ನು ನೋಡುತ್ತೇವೆ. ಭಾರತದಲ್ಲಿ ಈ ದೃಶ್ಯ ಎಲ್ಲಾ ಕಡೆ ಬರುವುದು.
ಯಾವುದೇ ಕೆಟ್ಟ ದೃಷ್ಟಿ ತಾಗದಿರಲಿ ಎಂದು ಈ ರೀತಿ ಕಟ್ಟಲಾಗುವುದು, ಕೆಲವರಿಗೆ ಇದು ನಂಬಿಕೆ, ಇನ್ನು ಕೆಲವರಿಗೆ ಮೂಢ ನಂಬಿಕೆಯಷ್ಟೇ.. ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣಗಳಿವೆ ಎಂಬುವುದು ಗೊತ್ತೇ? ಬನ್ನಿ ಇದರ ಬಗ್ಗೆ ನೋಡೋಣ:

ನಿಂಬೆಹಣ್ಣು, ಮೆಣಸಿನಕಾಯಿ ಮಾಲೆ ನೇತು ಹಾಕುವುದರ ಹಿಂದೆ ಇರುವ ಧಾರ್ಮಿಕ ಕಾರಣಗಳೇನು?
ಧಾರ್ಮಿಕ ನಂಬಿಕೆಗಳ ಪ್ರಕಾರ ಲಕ್ಷ್ಮಿಯ ಜೊತೆಗೆ ಅಲಕ್ಷ್ಮಿಯೂ ಇರುತ್ತಾಳೆ, ಆದರೆ ಎಲ್ಲಿ ಲಕ್ಷ್ಮಿ ಲಕ್ಷ್ಮಿಯನ್ನು ನಿರ್ಲಕ್ಷ್ಯ ಮಾಡುತ್ತಾಳೋ ಅಲಕ್ಷ್ಮಿ ಬಂದು ಕೂತು ಬಿಡುತ್ತಾಳೆ, ಇವಳು ದರಿದ್ರ ಲಕ್ಷ್ಮಿ, ಈ ದರಿದ್ರ ಲಕ್ಷ್ಮಿ ಬಂದರೆ ತುಂಬಾನೇ ಕಷ್ಟ ಪಡಬೇಕಾಗುತ್ತದೆ, ಈ ರೀತಿ ಮನೆ ಮುಂದೆ, ಅಂಗಡಿ ಮುಂದೆ ನಿಂಬೆಹಣ್ಣು, ಹಸಿ ಮೆಣಸಿನಕಾಯಿ ಅಲಕ ಲಕ್ಷ್ಮಿಯನ್ನು ಒಳ ಬರದಂತೆ ತಡೆಯುತ್ತದೆ, ಅಲ್ಲದೆ ಮನೆಗೆ ದೃಷ್ಟಿ ಬೀಳುವುದಿಲ್ಲ ಎಂದು ಹೇಳಲಾಗುವುದು.
ಲಕ್ಷ್ಮಿಯನ್ನು ಸಿಹಿ ವಸ್ತುಗಳನ್ನು ಇಷ್ಟಪಡುತ್ತಾಳೆ, ಹಾಗಾಗಿ ಲಕ್ಷ್ಮಿಗೆ ಸಿಹಿ ಪದಾರ್ಥಗಳನ್ನು ನೈವೇದ್ಯವಾಗಿ ಇಡಲಾಗುವುದು. ಅದೇ ದರಿದ್ರ ಲಕ್ಷ್ಮಿ ಹುಳಿ, ಖಾರದ ವಸ್ತುಗಳನ್ನು ಇಷ್ಟಪಡುತ್ತಾಳೆ, ಈ ರೀತಿ ಮನೆ ಮುಂದೆ ಕಟ್ಟಿದಾಗ ದರಿದ್ರ ಲಕ್ಷ್ಮಿ ಮನೆಯ ಹೊರಗಡೆ ಇರುತ್ತಾಳೆ, ಮನೆಯ ಒಳಗಡೆ ಬರುವುದಿಲ್ಲ. ಇದರಿಂದ ಲಕ್ಷ್ಮಿ ಕೃಪೆಯಿಂದ ಮನೆಯಲ್ಲಿ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ.
ಇದರ ಹಿಂದಿದೆ ವೈಜ್ಞಾನಿಕ ಕಾರಣ
ನಮ್ಮ ಹಿರಿಯರು ಮಾಡಿರುವ ಧಾರ್ಮಿಕ ಆಚರಣೆಗಳ ಹಿಂದೆ ವೈಜ್ಞಾನಿಕ ಕಾರಣಗಳಿರುತ್ತದೆ, ಆದರೆ ಆವಾಗ ಅದು ಜನರಿಗೆ ಅರ್ಥವಾಗಲಿ ಎಂದು ಯಾವುದೋ ಕತೆ ರೂಪದಲ್ಲಿ ಹೇಳಿರುತ್ತಾರೆ. ಆದರೆ ಅದರ ಹಿಂದೆ ಇರುವ ವೈಜ್ಞಾನಿಕ ಕಾರಣ ತಿಳಿಯದೆ ಮೂಢನಂಬಿಕೆ ಅಂತ ಅನುಮಾನದಿಂದ ನೋಡುತ್ತೇವೆ.
ಇದರ ಹಿಂದೆ ಇರುವ ವೈಜ್ಞಾನಿಕ ಕಾರಣಗಳೇನು ಎಂದು ನೋಡೋಣ ಬನ್ನಿ:
ಹಿಂದೆ ಜನರು ಕಾಡಿನ ಜೊತೆಗೆ ತುಂಬಾನೇ ಸಂಪರ್ಕ ಹೊಂದಿದ್ದರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಾಗ ಕಾಡಿನ ಮೂಲಕ ಹೋಗುತ್ತಿದ್ದರು. ತಮ್ಮ ರಕ್ಷಣೆಗೆ ಇದನ್ನು ಜೊತೆಗೆ ಕೊಂಡೊಯ್ಯುತ್ತಿದ್ದರು, ಬಾಯಾರಿಕೆಯಾದರೆ ನಿಂಬೆಹಣ್ಣು ನೀರಿಗೆ ಹಿಂಡಿ ಕುಡಿದರೆ ಬಾಯಾರಿಕೆ ಕಡಿಮೆ, ದೇಹಕ್ಕೆ ಚೈತನ್ಯ ಸಿಗುವುದು.
ಇನ್ನು ಹಸಿಮೆಣಸು ಬಗ್ಗೆ ಹೇಳುವುದಾದರೆ ಕಾಡಿನಲ್ಲಿ ಹಾವಿನ ಕಾಟ ಹೆಚ್ಚಿರುತ್ತದೆ, ಆವಾಗ ಹಾವು ಕಚ್ಚಿ ತುಂಬಾ ಜನರು ಸಾಯುತ್ತಿದ್ದರು. ತಮಗೆ ಕಚ್ಚಿದ ಹಾವು ವಿಷಕಾರಿಯೇ ಇಲ್ಲವೇ ಎಂದು ತಿಳಿಯಲು ಹಸಿಮೆಣಸು ಬಳಸುತ್ತಿದ್ದರಂತೆ. ಹಾವು ಕಚ್ಚಿದರೆ ಇವರು ಹಸಿ ಮೆಣಸು ಕಚ್ಚಿ ನೋಡುತ್ತಿದ್ದರು ಬಾಯಿಗೆ ಖಾರ ಬಂದರೆ ಕಚ್ಚಿರುವುದು ವಿಷಕಾರಿ ಅಲ್ಲ ಎಂದು ಖಾತರಿಯಾಗುತ್ತಿತ್ತು, ಅದೇ ವಿಷಕಾರಿ ಹಾವು ಕಚ್ಚಿದರೆ ನರಗಳೆಲ್ಲಾ ಮರಕಟ್ಟುವುದು, ಕಚ್ಚಿದಾಗ ಯಾವುದೇ ರುಚಿ ಗೊತ್ತಾಗುವುದಿಲ್ಲ ಆವಾಗ ಅದು ವಿಷಕಾರಿ ಎಂದು ತಿಳಿಯುವುದು.
ಹಾಗಾಗಿ ಹಿಂದಿನ ಕಾಲದಲ್ಲಿ ನಿಂಬೆಹಣ್ಣು, ಹಸಿ ಮೆಣಸು ಜೊತೆಗೆ ಕೊಂಡೊಯ್ಯುತ್ತಿದ್ದರು.
ಕೀಟಗಳು
ನಿಂಬೆಹಣ್ಣು, ಹಸಿ ಮೆಣಸು ಕೀಟಗಳನ್ನು ತಡೆಗಟ್ಟುತ್ತದೆ. ಇದು ಜೊತೆಗಿದ್ದರೆ ಇದರ ಘಾಟು ವಾಸನೆಗೆ ಕೀಟಗಳು ಕಚ್ಚುವುದಿಲ್ಲ ಎಂದು ಹೇಳಲಾಗುವುದು.
ಋಣಾತ್ಮಕ ಶಕ್ತಿಯನ್ನು ಹೊರ ಹಾಕುತ್ತದೆ.
ನಂಬಿಕೆಗಳ ಪ್ರಕಾರ ನಿಂಬೆಹಣ್ಣು ಮತ್ತು ಹಸಿ ಮೆಣಸನ್ನು ಮನೆ ಮುಂದುಗಡೆ ಹಾಕುವುದರಿಂದ ಕೆಟ್ಟ ದೃಷ್ಟಿ ಬೀಳುವುದಿಲ್ಲ ಎಂದು ಹೇಳಲಾಗುವುದು. ಅಲ್ಲದೆ ಋಣಾತ್ಮಕ ಮನೆಯೊಳಗಡೆ ಬರಲು ಬಿಡುವುದಿಲ್ಲ ಎಂದು ಹೇಳಲಾಗುವುದು, ಹಾಗಾಗಿ ಇದನ್ನು ಮನೆಮುಂದೆ ನೇತು ಹಾಕಲಾಗುವುದು.



Click it and Unblock the Notifications
