ವಯನಾಡ್‌ನಂತೆ ಹಿಮಾಚಲ ಪ್ರದೇಶದ ಒಂದು ಊರೇ ನಾಶ, ಅಲ್ಲಿ ಉಳಿದಿದ್ದು ಕಾಳಿಯ ದೇವಾಲು, ಮಹಿಳೆಯೊಬ್ಬರ ಮನೆ ಮಾತ್ರ

ಇಷ್ಟು ವರ್ಷಗಳಲ್ಲಿ ಯಾವುದೋ ಒಂದು ಕಡೆ ನೈಸರ್ಗಿಕ ವಿಕೋಪದ ಬಗ್ಗೆ ಕೇಳುತ್ತಿದ್ದೇವೆ, ಆದರೆ ಈ ಬಾರಿ ದೇಶದ ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ಯಾವುದಚೂ ಸುರಕ್ಷಿತವಲ್ಲ ಎಂದನಿಸಲಾರಂಭಿಸಿದೆ, ಪ್ರಕೃತಿ ತುಂಬಾನೇ ಮುನಿಸಿಕೊಂಡಿದ್ದಾಳೆ ಅವಳ ರೌದ್ರಾವತಾರಕ್ಕೆ ಮನುಷ್ಯ ತತ್ತರಿಸುತ್ತಿದ್ದಾನೆ. \

ಹೀಟ್‌ವೇವ್‌ನಿಂದ ಸಂಕಷ್ಟ ಅನುಭವಿಸಿದ ಜನತೆ ಮಳೆಗಾಗಿ ಪ್ರಾರ್ಥಿಸಿದ್ದರು, ಆದರೆ ಈ ಬಾರಿಯ ಮಳೆ ಸಾವಿನ ಮಳೆ, ಊರಿಗೆ ಊರೇ ನಾಶವಾಗುತ್ತಿದೆ. ಉತ್ತರಕನ್ನಡದ ಬರೆಕುಸಿತದಿಂದ ಚೇತರಿಸುವ ಮುನ್ನವೇ ವಯನಾಡ್‌ನಲ್ಲಿ ಮರಣ ಮೃದಂಗ ಭಾರಿಸಿದೆ.

Himachal flood

ಇಡೀ ದೇಶದ ಜನತೆ ವಯನಾಡ್‌ನ ಸ್ಥಿತಿ ಕಂಡು ಮರುಗುತ್ತಿದ್ದಾಗ ಹಿಮಾಚಲ ಪ್ರದೇಶದಲ್ಲಿ ಮೇಘ ಸ್ಪೋಟವಾಗಿ ಊರಿಗೇ ಊರೇ ಕೊಚ್ಚಿ ಹೋಗಿದೆ. ಇತರ ಕಡೆಗಳಲ್ಲಿ ಪ್ರವಾಹ, ಬರ ಕುಸಿತದ ಭೀತಿ ಆವರಿಸಿದೆ.

ಹಚ್ಚಹಸಿರಿನ ಪ್ರಕೃತಿಯಿಂದ ಕಂಗೊಳಿಸುತ್ತಿದ್ದ ಪ್ರದೇಶಗಳು ಸಂಪೂರ್ಣ ನಾಶವಾಗಿದೆ
ಹಿಮಾಚಲ ಪ್ರದೇಶದ ಶಿಮ್ಲಾ, ಕುಲು, ಮಂಡಿ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ, ಈ ಪ್ರವಾಹದಲ್ಲಿ ಸಿಲುಕಿ ಸಮೇಜ್‌ ಎಂಬ ಗ್ರಾಮವೇ ಕಣ್ಮರೆಯಾಗಿದೆ. ಅಪಾಯ ಸುಳಿವು ಸಿಕ್ಕು ಜನತೆ ಎಚ್ಚೆತ್ತುಕೊಳ್ಳುವ ಮುನ್ನವೇ ಆ ಗ್ರಾಮದ ಜನತೆಯನ್ನು ಕೊಚ್ಚಿಕೊಂಡು ಹೋಗಿದೆ ಪ್ರವಾಹ.

ಭೂಕುಸಿತ ಪ್ರವಾಹದ ಕಣ್ಮೀರ ಕತೆಗಳು ಮನಕಲುಕುತ್ತಿದೆ. ವಯನಾಡು ಮಾತ್ರವಲ್ಲ, ಹಿಮಾಚಲ ಪ್ರದೇಶದಲ್ಲೂ ಭೀಕರ ಪ್ರವಾಹ ಜನರ ಬದುಕನ್ನೇ ಕಸಿದುಕೊಂಡಿದೆ. ರಾತ್ರಿಯ ಪ್ರವಾಹ ಹಾಗೂ ಭೂಕುಸಿತದಲ್ಲಿ ಸಮೇಜ್ ಗ್ರಾಮ ಸಂಪೂರ್ಣ ಕೊಚ್ಚಿ ಹೋಗಿದೆ. ಆದರೆ ಒಂದು ಕಾಳಿ ಮಾತಾ ಹಾಗೂ ಒಂದು ಮನೆ ಮಾತ್ರ ಉಳಿದುಕೊಂಡಿದೆ.

ಆ ಗ್ರಾಮದಲ್ಲಿ ಈಗ ಉಳಿದಿರುವುದು, ಒಂದು ದೇವಾಲಯ, ಮಹಿಳೆಯ ಮನೆ ಮಾತ್ರ

ಈ ಪ್ರವಾಹದಲ್ಲಿ 50ಕ್ಕೂ ಅಧಿಕ ಸಾವು ಸಂಭವಿಸಿದರೆ 200ಕ್ಕೂ ಅಧಿಕ ಜನ
ನಾಪತ್ತೆಯಾಗಿದ್ದಾರೆ, ಉಳಿದವರಿಗೆ ಗಾಯಗಳಾಗಿವೆ, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ, ಆದರೆ ಆ ಊರಿನ ಮಹಿಳೆ ಅನಿತಾ ದೇವಿ ಮನೆಯವರು ಸುರಕ್ಷಿತವಾಗಿದ್ದಾರೆ, ಆ ಊರಿನ ಮನೆಗಳೆಲ್ಲಾ ನಾಶವಾಗಿದ್ದರು ಕಾಳಿ ದೇವಾಲಯಕ್ಕೆ ಏನು ಆಗಲಿಲ್ಲ.

ಈ ಘಟನೆ ಕುರಿತು ಅನಿತಾ ದೇವಿ ಹೀಗೆ ಹೇಳುತ್ತಾರೆ ' ನಾನು ಮತ್ತು ನನ್ನ ಕುಟುಂಬ ಮಲಗಿದ್ವಿ, ಜೋರಾಗಿ ಶಬ್ದ ಬಂತು, ಕೂಡಲೇ ಮನೆಯವರನ್ನೆಲ್ಲಾ ಎಬ್ಬಿಸಿ ಈಜಿಕೊಂಡು ಹೋಗಿ ಸಮೀಪದಲ್ಲಿದ್ದ ಕಾಳಿ ಮಾತೆಯ ದೇವಾಲಯ ಸೇರಿಕೊಂಡ್ವಿ, ಆ ದಿನ ಇಡೀ ರಾತ್ರಿ ಭಾರೀ ಮಳೆ ಸುರಿಯಿತು ಎಂದು ಹೇಳಿದ್ದಾರೆ. ನೋಡಿದರೆ ಇಡೀ ಗ್ರಾಮವೇ ಕೊಚ್ಚಿ ಹೋಗಿದೆ, ಸಮೇಜ್‌ ಗ್ರಾಮದಲ್ಲಿ ಈ ದೇವಾಲಯ ಮತ್ತು ನನ್ನ ಮನೆ ಮಾತ್ರ ಉಳಿದುಕೊಂಡಿದೆ ಎಂದು ಹೇಳಿದ್ದಾರೆ.

ಅಲ್ಲಿಯ ದೃಶ್ಯಗಳು ಕೂಡ ಭಯಾನಕವಾಗಿದೆ

ಡ್ಯಾಂ ತುಂಬಿಕೊಂಡಾಗ ನೋಡಲು ಖುಷಿಯಾಗುತ್ತದೆ, ಆದರೆ ಹಿಮಾಚಲ ಪ್ರದೇಶದ ಪಂಡೋಹ್ ಡ್ಯಾಂ ನೋಡಿ, ಅ ದೃಶ್ಯವೇ ಎಷ್ಟೊಂದು ಬಯಾನಕವಾಗಿದೆ.

ಮನೆ ಕಳೆದಕೊಂಡು ಅತಂತ್ರವಾದ ಜನರ ಬದುಕು

ಈ ಫೋಟೋ ನೋಡುವಾಗ ಮನಸ್ಸಿಗೆ ತುಂಬಾನೇ ನೋವಾಗುತ್ತೆ, ಮನೆ ಕಳೆದುಕೊಂಡು, ತಮ್ಮವರನ್ನೂ ಕಳೆದುಕೊಂಡು ಅತಂತ್ರವಾಗಿರುವ ಬದುಕು, ಮನುಷ್ಯ-ಮನುಷ್ಯನ ಕಷ್ಟಕ್ಕೆ ನೆರವಾಗೋಣ.

ಕುಲು ಹೈವೇ ನಾಶವಾಗಿದೆ

ಕುಲು ಎಂಥ ಸುಂದರ ತಾಣ ಅಲ್ಲಿಗೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಅಲ್ಲಿಯ ಹೈವೇ ಇದೀಗ ನಾಶವಾಗಿದೆ.

ಕಟ್ಟಡ ಉರುಳಿ ಬೀಳುತ್ತಿರುವ ದೃಶ್ಯ ಅಷ್ಟೊಂದು ದೊಡ್ಡ ಕಟ್ಟಡ ಉರುಳಿ ಬೀಳುತ್ತಿರುವ ದೃಶ್ಯ ಎಷ್ಟೊಂದು ಭಯಾನಕವಾಗಿದೆ ನೋಡಿ..... ಪ್ರಕೃತಿ ಮುಂದೆ ಮನುಷ್ಯರಿಗೆ ನಿಲ್ಲಲು ಸಾಧ್ಯವಾಗಲ್ಲ ಅದುವೇ ವಾಸ್ತವ...

English summary

Himachal Flood: All Houses Except One House And kali temple

Himachal flood: whole village destroyed except one house and Kali temple, read on...
Story first published: Sunday, August 4, 2024, 6:45 [IST]
X
Desktop Bottom Promotion