Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಆರೋಗ್ಯಕರ ಜೀವನ, ದೀರ್ಘಾಯುಷ್ಯಕ್ಕೆ ಚಾಣಕ್ಯ ಹೇಳಿದ ಸೂತ್ರವಿದು..!
ಚಾಣಕ್ಯ ಸುಖ ಜೀವನದ ಸೂತ್ರಗಳನ್ನು ತನ್ನ ನೀತಿಗಳಲ್ಲಿ ತಿಳಿಸಿದ್ದಾರೆ. ಜೀವನ, ಸಂತೋಷ, ದುಃಖ, ಸಾವು, ಹುಟ್ಟು ಹೀಗೆ ನಾನಾ ವಿಚಾರಗಳ ಕುರಿತು ತನ್ನದೇ ನೀತಿ ಹೇಳಿದ್ದಾರೆ. ಚಾಣಕ್ಯ ನೀತಿಶಾಸ್ತ್ರದಲ್ಲಿ ಇಂತಹ ಹಲವು ನೀತಿಗಳಿವೆ, ಅದನ್ನು ಅಳವಡಿಸಿಕೊಂಡು ಯಶಸ್ಸನ್ನು ಪಡೆಯಬಹುದು. ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ನಿರ್ದಿಷ್ಟ ವಿಷಯಗಳನ್ನೂ ಅವರು ತಿಳಿಸಿದ್ದಾರೆ. ನಮಗೆ ತಿಳಿದಿರುವಂತೆ ಉತ್ತಮ ಆರೋಗ್ಯವು ಮನುಷ್ಯನ ದೊಡ್ಡ ಸಂಪತ್ತು. ಒಬ್ಬ ವ್ಯಕ್ತಿಯು ಆರೋಗ್ಯವಾಗಿದ್ದರೆ, ಅವನು ಜೀವನದಲ್ಲಿ ಎಲ್ಲಾ ಯಶಸ್ಸನ್ನು ಸಾಧಿಸಬಹುದು. ಆದ್ದರಿಂದ, ನಾವು ಯಾವಾಗಲೂ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ಇತ್ತೀಚಿನ ದಿನಗಳಲ್ಲಿ ವ್ಯಕ್ತಿಯ ದೇಹವು ರೋಗಗಳ ಮನೆಯಾಗಿದೆ. ಮಾನವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಆಚಾರ್ಯ ಚಾಣಕ್ಯರು ಹೇಳಿದ ಕೆಲವು ವಿಷಯಗಳನ್ನು ಮನಸಿನಲ್ಲಿಟ್ಟುಕೊಂಡರೆ ಖಂಡಿತಾ ಆರೋಗ್ಯಯುತ ಜೀವನ ನಡೆಸಬಹುದು. ಆರೋಗ್ಯದ ಬಗ್ಗೆ ಚಾಣಕ್ಯ ಏನು ಹೇಳಿದ್ದಾನೆಂದು ನೋಡೋಣ.

ಆಹಾರ ಮತ್ತು ನೀರು
ಆಹಾರ ಜೀರ್ಣವಾಗದಿದ್ದಾಗ ನೀರು ಕುಡಿಯುವುದು ಔಷಧವಿದ್ದಂತೆ. ಆಹಾರ ಜೀರ್ಣವಾದ ಅರ್ಧ ಗಂಟೆಯ ನಂತರ ನೀರು ಕುಡಿಯುವುದು ದೇಹಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಊಟದ ನಡುವೆ ಕಡಿಮೆ ನೀರು ಕುಡಿಯುವುದು ಅಮೃತದಂತೆ. ಏತನ್ಮಧ್ಯೆ, ತಿಂದ ತಕ್ಷಣ ನೀರು ಕುಡಿಯುವುದು ವಿಷವಿದ್ದಂತೆ ಎಂದಿದ್ದಾರೆ. ಆದ್ದರಿಂದ ನೀವು ಆಹಾರ ಸೇವಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ.
ಒಳ್ಳೆಯ ಆಹಾರಗಳು
ಒಣ ಆಹಾರಕ್ಕಿಂತ ಪುಡಿ ಮಾಡಿದ ಆಹಾರವು ಹೆಚ್ಚು ಪೌಷ್ಟಿಕವಾಗಿದೆ. ಪುಡಿ ಮಾಡಿದ ಧಾನ್ಯಗಳಿಗಿಂತ ಹಾಲು 10 ಪಟ್ಟು ಹೆಚ್ಚು ಪ್ರಯೋಜನಕಾರಿಯಾಗಿದೆ. ಏತನ್ಮಧ್ಯೆ, ಮಾಂಸವು ಹಾಲಿಗಿಂತ 10 ಪಟ್ಟು ಹೆಚ್ಚು ಪೌಷ್ಟಿಕವಾಗಿದೆ. ಮಾಂಸಕ್ಕಿಂತ ತುಪ್ಪ 10 ಪಟ್ಟು ಹೆಚ್ಚು ಪೌಷ್ಟಿಕವಾಗಿದೆ ಎಂದು ಚಾಣಕ್ಯ ಹೇಳುತ್ತಾರೆ. ಇವೆಲ್ಲವೂ ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ.
ಈ ದೇಹದ ಭಾಗವು ಅತ್ಯಂತ ಮುಖ್ಯವಾಗಿದೆ
ಎಲ್ಲಾ ಸಂತೋಷಗಳಲ್ಲಿ, ಆಹಾರವು ಶ್ರೇಷ್ಠವಾಗಿದೆ. ಆಹಾರ ಸೇವನೆ ಮನಸ್ಸಿಗೂ ನೆಮ್ಮದಿ ನೀಡಲಿದೆ. ದೇಹದಲ್ಲಿರುವ ಎಲ್ಲಾ ಇಂದ್ರಿಯಗಳಲ್ಲಿ ಕಣ್ಣುಗಳು ಪ್ರಮುಖವಾಗಿವೆ. ಎಲ್ಲಾ ಅಂಗಗಳಲ್ಲಿ ಮೆದುಳು ಅತ್ಯಂತ ಪ್ರಮುಖವಾದುದು ಎಂದು ಚಾಣಕ್ಯ ಹೇಳುತ್ತಾನೆ.
ದೇಹದ ಮಸಾಜ್
ಚಾಣಕ್ಯನ ಪ್ರಕಾರ, ಉತ್ತಮ ಆರೋಗ್ಯ ಮತ್ತು ಆರೋಗ್ಯಕರ ದೇಹಕ್ಕಾಗಿ ನೀವು ವಾರಕ್ಕೊಮ್ಮೆ ಪೂರ್ಣ ದೇಹದ ಮಸಾಜ್ ಮಾಡಬೇಕು. ಇದು ರಂಧ್ರಗಳನ್ನು ತೆರೆಯುತ್ತದೆ ಮತ್ತು ಒಳಗಿರುವ ಕೊಳಕು ಹೊರಬರುತ್ತದೆ. ಮಸಾಜ್ ಮಾಡಿದ ನಂತರ ನೀವು ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
ಧಾನ್ಯ ಬಳಕೆ
ಆರೋಗ್ಯವಾಗಿರಲು ಸಿರಿಧಾನ್ಯಗಳನ್ನು ಸೇವಿಸಬೇಕು. ಧಾನ್ಯಗಳನ್ನು ತಿನ್ನುವುದರಿಂದ ವ್ಯಕ್ತಿಯು ಶಕ್ತಿಯುತನಾಗಿರುತ್ತಾನೆ ಮತ್ತು ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ. ಜೀರ್ಣಾಂಗ ವ್ಯವಸ್ಥೆಯು ಬಲವಾಗಿರುವ ವ್ಯಕ್ತಿಯು ಆರೋಗ್ಯವಂತನಾಗಿರುತ್ತಾನೆ.
ಹಾಲು ಸೇವನೆ
ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಹಾಲು ಧಾನ್ಯಗಳಿಗಿಂತ ಹತ್ತು ಪಟ್ಟು ಪ್ರಬಲವಾಗಿದೆ. ನಿತ್ಯವೂ ಹಾಲನ್ನು ಸೇವಿಸುವುದರಿಂದ ವ್ಯಕ್ತಿಯು ಆರೋಗ್ಯವಂತನಾಗಿರುತ್ತಾನೆ. ಹಾಲಿನ ಸೇವನೆ ಮೂಳೆಗಳಿಗೆ ಒಳ್ಳೆಯದು.
ತುಪ್ಪ ಸೇವನೆ
ಹಾಲಿಗಿಂತ ತುಪ್ಪ ಹೆಚ್ಚು ಪ್ರಯೋಜನಕಾರಿ. ಪ್ರತಿದಿನ ತುಪ್ಪವನ್ನು ನಿಯಮಿತವಾಗಿ ಸೇವಿಸುವುದರಿಂದ ನೀವು ಆರೋಗ್ಯವಾಗಿರಬಹುದು. ರೋಗಗಳಿಂದ ದೂರವಿರಲು ಪ್ರತಿನಿತ್ಯ ತುಪ್ಪವನ್ನು ಸೇವಿಸಬೇಕು.



Click it and Unblock the Notifications
