Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆರೋಗ್ಯಕರ ಜೀವನ, ದೀರ್ಘಾಯುಷ್ಯಕ್ಕೆ ಚಾಣಕ್ಯ ಹೇಳಿದ ಸೂತ್ರವಿದು..!
ಚಾಣಕ್ಯ ಸುಖ ಜೀವನದ ಸೂತ್ರಗಳನ್ನು ತನ್ನ ನೀತಿಗಳಲ್ಲಿ ತಿಳಿಸಿದ್ದಾರೆ. ಜೀವನ, ಸಂತೋಷ, ದುಃಖ, ಸಾವು, ಹುಟ್ಟು ಹೀಗೆ ನಾನಾ ವಿಚಾರಗಳ ಕುರಿತು ತನ್ನದೇ ನೀತಿ ಹೇಳಿದ್ದಾರೆ. ಚಾಣಕ್ಯ ನೀತಿಶಾಸ್ತ್ರದಲ್ಲಿ ಇಂತಹ ಹಲವು ನೀತಿಗಳಿವೆ, ಅದನ್ನು ಅಳವಡಿಸಿಕೊಂಡು ಯಶಸ್ಸನ್ನು ಪಡೆಯಬಹುದು. ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ನಿರ್ದಿಷ್ಟ ವಿಷಯಗಳನ್ನೂ ಅವರು ತಿಳಿಸಿದ್ದಾರೆ. ನಮಗೆ ತಿಳಿದಿರುವಂತೆ ಉತ್ತಮ ಆರೋಗ್ಯವು ಮನುಷ್ಯನ ದೊಡ್ಡ ಸಂಪತ್ತು. ಒಬ್ಬ ವ್ಯಕ್ತಿಯು ಆರೋಗ್ಯವಾಗಿದ್ದರೆ, ಅವನು ಜೀವನದಲ್ಲಿ ಎಲ್ಲಾ ಯಶಸ್ಸನ್ನು ಸಾಧಿಸಬಹುದು. ಆದ್ದರಿಂದ, ನಾವು ಯಾವಾಗಲೂ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ಇತ್ತೀಚಿನ ದಿನಗಳಲ್ಲಿ ವ್ಯಕ್ತಿಯ ದೇಹವು ರೋಗಗಳ ಮನೆಯಾಗಿದೆ. ಮಾನವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಆಚಾರ್ಯ ಚಾಣಕ್ಯರು ಹೇಳಿದ ಕೆಲವು ವಿಷಯಗಳನ್ನು ಮನಸಿನಲ್ಲಿಟ್ಟುಕೊಂಡರೆ ಖಂಡಿತಾ ಆರೋಗ್ಯಯುತ ಜೀವನ ನಡೆಸಬಹುದು. ಆರೋಗ್ಯದ ಬಗ್ಗೆ ಚಾಣಕ್ಯ ಏನು ಹೇಳಿದ್ದಾನೆಂದು ನೋಡೋಣ.

ಆಹಾರ ಮತ್ತು ನೀರು
ಆಹಾರ ಜೀರ್ಣವಾಗದಿದ್ದಾಗ ನೀರು ಕುಡಿಯುವುದು ಔಷಧವಿದ್ದಂತೆ. ಆಹಾರ ಜೀರ್ಣವಾದ ಅರ್ಧ ಗಂಟೆಯ ನಂತರ ನೀರು ಕುಡಿಯುವುದು ದೇಹಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಊಟದ ನಡುವೆ ಕಡಿಮೆ ನೀರು ಕುಡಿಯುವುದು ಅಮೃತದಂತೆ. ಏತನ್ಮಧ್ಯೆ, ತಿಂದ ತಕ್ಷಣ ನೀರು ಕುಡಿಯುವುದು ವಿಷವಿದ್ದಂತೆ ಎಂದಿದ್ದಾರೆ. ಆದ್ದರಿಂದ ನೀವು ಆಹಾರ ಸೇವಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ.
ಒಳ್ಳೆಯ ಆಹಾರಗಳು
ಒಣ ಆಹಾರಕ್ಕಿಂತ ಪುಡಿ ಮಾಡಿದ ಆಹಾರವು ಹೆಚ್ಚು ಪೌಷ್ಟಿಕವಾಗಿದೆ. ಪುಡಿ ಮಾಡಿದ ಧಾನ್ಯಗಳಿಗಿಂತ ಹಾಲು 10 ಪಟ್ಟು ಹೆಚ್ಚು ಪ್ರಯೋಜನಕಾರಿಯಾಗಿದೆ. ಏತನ್ಮಧ್ಯೆ, ಮಾಂಸವು ಹಾಲಿಗಿಂತ 10 ಪಟ್ಟು ಹೆಚ್ಚು ಪೌಷ್ಟಿಕವಾಗಿದೆ. ಮಾಂಸಕ್ಕಿಂತ ತುಪ್ಪ 10 ಪಟ್ಟು ಹೆಚ್ಚು ಪೌಷ್ಟಿಕವಾಗಿದೆ ಎಂದು ಚಾಣಕ್ಯ ಹೇಳುತ್ತಾರೆ. ಇವೆಲ್ಲವೂ ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ.
ಈ ದೇಹದ ಭಾಗವು ಅತ್ಯಂತ ಮುಖ್ಯವಾಗಿದೆ
ಎಲ್ಲಾ ಸಂತೋಷಗಳಲ್ಲಿ, ಆಹಾರವು ಶ್ರೇಷ್ಠವಾಗಿದೆ. ಆಹಾರ ಸೇವನೆ ಮನಸ್ಸಿಗೂ ನೆಮ್ಮದಿ ನೀಡಲಿದೆ. ದೇಹದಲ್ಲಿರುವ ಎಲ್ಲಾ ಇಂದ್ರಿಯಗಳಲ್ಲಿ ಕಣ್ಣುಗಳು ಪ್ರಮುಖವಾಗಿವೆ. ಎಲ್ಲಾ ಅಂಗಗಳಲ್ಲಿ ಮೆದುಳು ಅತ್ಯಂತ ಪ್ರಮುಖವಾದುದು ಎಂದು ಚಾಣಕ್ಯ ಹೇಳುತ್ತಾನೆ.
ದೇಹದ ಮಸಾಜ್
ಚಾಣಕ್ಯನ ಪ್ರಕಾರ, ಉತ್ತಮ ಆರೋಗ್ಯ ಮತ್ತು ಆರೋಗ್ಯಕರ ದೇಹಕ್ಕಾಗಿ ನೀವು ವಾರಕ್ಕೊಮ್ಮೆ ಪೂರ್ಣ ದೇಹದ ಮಸಾಜ್ ಮಾಡಬೇಕು. ಇದು ರಂಧ್ರಗಳನ್ನು ತೆರೆಯುತ್ತದೆ ಮತ್ತು ಒಳಗಿರುವ ಕೊಳಕು ಹೊರಬರುತ್ತದೆ. ಮಸಾಜ್ ಮಾಡಿದ ನಂತರ ನೀವು ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
ಧಾನ್ಯ ಬಳಕೆ
ಆರೋಗ್ಯವಾಗಿರಲು ಸಿರಿಧಾನ್ಯಗಳನ್ನು ಸೇವಿಸಬೇಕು. ಧಾನ್ಯಗಳನ್ನು ತಿನ್ನುವುದರಿಂದ ವ್ಯಕ್ತಿಯು ಶಕ್ತಿಯುತನಾಗಿರುತ್ತಾನೆ ಮತ್ತು ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ. ಜೀರ್ಣಾಂಗ ವ್ಯವಸ್ಥೆಯು ಬಲವಾಗಿರುವ ವ್ಯಕ್ತಿಯು ಆರೋಗ್ಯವಂತನಾಗಿರುತ್ತಾನೆ.
ಹಾಲು ಸೇವನೆ
ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಹಾಲು ಧಾನ್ಯಗಳಿಗಿಂತ ಹತ್ತು ಪಟ್ಟು ಪ್ರಬಲವಾಗಿದೆ. ನಿತ್ಯವೂ ಹಾಲನ್ನು ಸೇವಿಸುವುದರಿಂದ ವ್ಯಕ್ತಿಯು ಆರೋಗ್ಯವಂತನಾಗಿರುತ್ತಾನೆ. ಹಾಲಿನ ಸೇವನೆ ಮೂಳೆಗಳಿಗೆ ಒಳ್ಳೆಯದು.
ತುಪ್ಪ ಸೇವನೆ
ಹಾಲಿಗಿಂತ ತುಪ್ಪ ಹೆಚ್ಚು ಪ್ರಯೋಜನಕಾರಿ. ಪ್ರತಿದಿನ ತುಪ್ಪವನ್ನು ನಿಯಮಿತವಾಗಿ ಸೇವಿಸುವುದರಿಂದ ನೀವು ಆರೋಗ್ಯವಾಗಿರಬಹುದು. ರೋಗಗಳಿಂದ ದೂರವಿರಲು ಪ್ರತಿನಿತ್ಯ ತುಪ್ಪವನ್ನು ಸೇವಿಸಬೇಕು.



Click it and Unblock the Notifications
