Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇನ್ಯಾರವ.. ಇವನ್ಯಾರವ, ಇವನೇ ಕಣವ್ವ ಚಿರತೆ ಹಿಡಿದು ಬೈಕ್ನಲ್ಲಿ ಕೊಂಡೊಯ್ಯದ್ದ ಹಾಸನದ ಗಂಡುಗಲಿ
ಇನ್ಯಾರವ.. ಇವನ್ಯಾರವ ಇವನು ಕಣವ್ವ ಚಿರತೆಯ ಹಿಡಿದ ಗಂಡುಗಲಿ ಎಂದು ಹಾಸದ ಯುವಕ ಮುತ್ತುವನ್ನು ನೋಡಿ ಹಾಡಬಹುದು, ಇವರು ಮಾಡಿರುವ ಸಾಹಸ ನಿಜಕ್ಕೂ ನಂಬಲು ಸಾಧ್ಯವಿಲ್ಲ, ಅದರಲ್ಲೂ ಚಿರತೆ ಕಾಲುಗಳನ್ನು ಕಟ್ಟಿ ತನ್ನ ಬೈಕ್ನಲ್ಲಿ ತೆಗೆದುಕೊಂಡ ವೀಡಿಯೋವಂತೂ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವೀಡಿಯೋ ನೋಡಿ ಇದೇನೂ ಹೀಗೂ ಚಿರತೆಯನ್ನು ಸೆರೆಹಿಡಿಯಬಹುದಾ? ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಚಿರತೆ ಎಂಬ ಬಲಿಷ್ಠ ಪ್ರಾಣಿ ದಾಳಿ ಮಾಡಿದರೆ ಅದರಿಮದ ಪಾರಾಗುವುದು ಕಷ್ಟ, ಪಾರಾದರೆ ಅದುವೇ ದೊಡ್ಡ ವಿಷಯ, ಆದರೆ ಅದರ ಕಾಲುಗಳನ್ನು ಕಟ್ಟಿ ಅದನ್ನು ತನ್ನ ಬೈಕ್ನ ಹಿಂಬದಿಗೆ ಕಟ್ಟಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿ ಬಂದಿದ್ದಾರೆ ಹಾಸನದ ಈ ಯುವಕ. ಇವರ ಸಾಹಸದ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ, ಇವರು ಮಾತ್ರ ಬಹಳ ಪ್ರಾಮಾಣಿಕವಾಗಿ ನಾನು ನನ್ನ ಪ್ರಾಣ ಉಳಿಸುವ ಭಯದಿಂದ ಚಿರತೆಯನ್ನು ಕಟ್ಟಿ ಹಾಕುವ ಸಾಹಸ ಮಾಡಿದೆ ಎಂದು ಹೇಳಿದ್ದಾರೆ.

ಹೌದು ಒಂದು ಮಾತಿದೆ ಬೆಕ್ಕನ್ನು ಒಂದು ಕೋಣೆಯೊಳಗೆ ಹಾಕಿ ಹೊಡೆದರೆ ತನ್ನ ಪ್ರಾಣ ರಕ್ಷಣೆಗೆ ಅದು ತಿರುಗಿ ಬೀಳುತ್ತೆ ಅಂತ, ಹಾಗಾಯ್ತು ಮುತ್ತು ಅವರ ಕತೆ, ಇವರು ಬೆಳಗ್ಗೆ ಯಾರೋ ಚಿರತೆಯಿದೆ ಎಂದು ಹೇಳುವುದು ಕೇಳಿ ಕೆಟ್ಟ ಕುತೂಹಲದಿಂದ ನೋಡೋಕೆ ಹೋಗಿದ್ದಾರೆ, ತಮ್ಮ ಹೊಲದ ಕಡೆಗೆ ಹೋದಾಗ ಮರದ ಮೇಲಿದ್ದ ಚಿರತೆ ಅವರ ಮೇಲೆ ದಾಳಿ ಮಾಡುತ್ತೆ, ಇವರಿಗೆ ಏನು ಮಾಡಬೇಕೆಂದು ಒಂದು ಕ್ಷಣ ತೋಚುವುದಿಲ್ಲ, ಹಾಗಂತ ಧೈರ್ಯಗೆಟ್ಟರೆ ಸಾವು ನಿಶ್ಚಿತ, ಸಾವು ಬದುಕಿನ ಹೋರಾಟದಲ್ಲಿ ಸಾವನ್ನೇ ಗೆಲ್ಲುವ ಮನಸ್ಸು ಮಾಡಿದ್ದಾರೆ. ತಮ್ಮ ಪ್ರಾಣವನ್ನು ರಕ್ಷಣೆ ಮಾಡಲು ಚಿರತೆಯ ಕುತ್ತಿಗೆಗೆ ಕೈ ಹಾಕಿದ್ದಾರೆ, ಅದರ ಕಾಲುಗಳನ್ನು ಗಟ್ಟಿಯಾಗಿ ಹಿಡಿದು ನಂತರ ಅಲ್ಲಿದ್ದ ಹಗ್ಗದಿಂದ ಕಟ್ಟಿ, ತಮ್ಮ ಬೈಕ್ನ ಹಿಂಬದಿಗೆ ಕಟ್ಟಿ ಕೊಂಡೊಯ್ಯುದ್ದು ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಚಿರತೆಯನ್ನು ಬೋನ್ ಇಟ್ಟು ಅರವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನು ಹಿಡಿಯುವುದನ್ನು ನೋಡಿದ್ದೇವೆ, ಆದರೆ ಈ ಪ್ರಕರಣ ಮಾತ್ರ ಸ್ವಲ್ಪ ಭಿನ್ನವಾಗಿದೆ, ವೀಕ್ಷಕರಿಗಂತೂ ಈ ವೀಡಿಯೋ ನೋಡುವುದೇ ಮಜವಾಗಿದೆ. ಹಾಗಾಗಿ ಈ ವೀಡಿಯೋ ತುಂಬಾನೇ ವೈರಲ್ ಆಗಿದೆ. ಆತ ತನ್ನ ಪ್ರಾಣ ಕಾಪಾಡಿದ ಚಿರತೆಯ ಪ್ರಾಣಕ್ಕೂ ಏನೂ ತೊಮದರೆ ಮಾಡಿಲ್ಲ, ಹೀಗಾಗಿ ಈತನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.



Click it and Unblock the Notifications