Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಇನ್ಯಾರವ.. ಇವನ್ಯಾರವ, ಇವನೇ ಕಣವ್ವ ಚಿರತೆ ಹಿಡಿದು ಬೈಕ್ನಲ್ಲಿ ಕೊಂಡೊಯ್ಯದ್ದ ಹಾಸನದ ಗಂಡುಗಲಿ
ಇನ್ಯಾರವ.. ಇವನ್ಯಾರವ ಇವನು ಕಣವ್ವ ಚಿರತೆಯ ಹಿಡಿದ ಗಂಡುಗಲಿ ಎಂದು ಹಾಸದ ಯುವಕ ಮುತ್ತುವನ್ನು ನೋಡಿ ಹಾಡಬಹುದು, ಇವರು ಮಾಡಿರುವ ಸಾಹಸ ನಿಜಕ್ಕೂ ನಂಬಲು ಸಾಧ್ಯವಿಲ್ಲ, ಅದರಲ್ಲೂ ಚಿರತೆ ಕಾಲುಗಳನ್ನು ಕಟ್ಟಿ ತನ್ನ ಬೈಕ್ನಲ್ಲಿ ತೆಗೆದುಕೊಂಡ ವೀಡಿಯೋವಂತೂ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವೀಡಿಯೋ ನೋಡಿ ಇದೇನೂ ಹೀಗೂ ಚಿರತೆಯನ್ನು ಸೆರೆಹಿಡಿಯಬಹುದಾ? ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಚಿರತೆ ಎಂಬ ಬಲಿಷ್ಠ ಪ್ರಾಣಿ ದಾಳಿ ಮಾಡಿದರೆ ಅದರಿಮದ ಪಾರಾಗುವುದು ಕಷ್ಟ, ಪಾರಾದರೆ ಅದುವೇ ದೊಡ್ಡ ವಿಷಯ, ಆದರೆ ಅದರ ಕಾಲುಗಳನ್ನು ಕಟ್ಟಿ ಅದನ್ನು ತನ್ನ ಬೈಕ್ನ ಹಿಂಬದಿಗೆ ಕಟ್ಟಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿ ಬಂದಿದ್ದಾರೆ ಹಾಸನದ ಈ ಯುವಕ. ಇವರ ಸಾಹಸದ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ, ಇವರು ಮಾತ್ರ ಬಹಳ ಪ್ರಾಮಾಣಿಕವಾಗಿ ನಾನು ನನ್ನ ಪ್ರಾಣ ಉಳಿಸುವ ಭಯದಿಂದ ಚಿರತೆಯನ್ನು ಕಟ್ಟಿ ಹಾಕುವ ಸಾಹಸ ಮಾಡಿದೆ ಎಂದು ಹೇಳಿದ್ದಾರೆ.

ಹೌದು ಒಂದು ಮಾತಿದೆ ಬೆಕ್ಕನ್ನು ಒಂದು ಕೋಣೆಯೊಳಗೆ ಹಾಕಿ ಹೊಡೆದರೆ ತನ್ನ ಪ್ರಾಣ ರಕ್ಷಣೆಗೆ ಅದು ತಿರುಗಿ ಬೀಳುತ್ತೆ ಅಂತ, ಹಾಗಾಯ್ತು ಮುತ್ತು ಅವರ ಕತೆ, ಇವರು ಬೆಳಗ್ಗೆ ಯಾರೋ ಚಿರತೆಯಿದೆ ಎಂದು ಹೇಳುವುದು ಕೇಳಿ ಕೆಟ್ಟ ಕುತೂಹಲದಿಂದ ನೋಡೋಕೆ ಹೋಗಿದ್ದಾರೆ, ತಮ್ಮ ಹೊಲದ ಕಡೆಗೆ ಹೋದಾಗ ಮರದ ಮೇಲಿದ್ದ ಚಿರತೆ ಅವರ ಮೇಲೆ ದಾಳಿ ಮಾಡುತ್ತೆ, ಇವರಿಗೆ ಏನು ಮಾಡಬೇಕೆಂದು ಒಂದು ಕ್ಷಣ ತೋಚುವುದಿಲ್ಲ, ಹಾಗಂತ ಧೈರ್ಯಗೆಟ್ಟರೆ ಸಾವು ನಿಶ್ಚಿತ, ಸಾವು ಬದುಕಿನ ಹೋರಾಟದಲ್ಲಿ ಸಾವನ್ನೇ ಗೆಲ್ಲುವ ಮನಸ್ಸು ಮಾಡಿದ್ದಾರೆ. ತಮ್ಮ ಪ್ರಾಣವನ್ನು ರಕ್ಷಣೆ ಮಾಡಲು ಚಿರತೆಯ ಕುತ್ತಿಗೆಗೆ ಕೈ ಹಾಕಿದ್ದಾರೆ, ಅದರ ಕಾಲುಗಳನ್ನು ಗಟ್ಟಿಯಾಗಿ ಹಿಡಿದು ನಂತರ ಅಲ್ಲಿದ್ದ ಹಗ್ಗದಿಂದ ಕಟ್ಟಿ, ತಮ್ಮ ಬೈಕ್ನ ಹಿಂಬದಿಗೆ ಕಟ್ಟಿ ಕೊಂಡೊಯ್ಯುದ್ದು ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಚಿರತೆಯನ್ನು ಬೋನ್ ಇಟ್ಟು ಅರವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನು ಹಿಡಿಯುವುದನ್ನು ನೋಡಿದ್ದೇವೆ, ಆದರೆ ಈ ಪ್ರಕರಣ ಮಾತ್ರ ಸ್ವಲ್ಪ ಭಿನ್ನವಾಗಿದೆ, ವೀಕ್ಷಕರಿಗಂತೂ ಈ ವೀಡಿಯೋ ನೋಡುವುದೇ ಮಜವಾಗಿದೆ. ಹಾಗಾಗಿ ಈ ವೀಡಿಯೋ ತುಂಬಾನೇ ವೈರಲ್ ಆಗಿದೆ. ಆತ ತನ್ನ ಪ್ರಾಣ ಕಾಪಾಡಿದ ಚಿರತೆಯ ಪ್ರಾಣಕ್ಕೂ ಏನೂ ತೊಮದರೆ ಮಾಡಿಲ್ಲ, ಹೀಗಾಗಿ ಈತನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.



Click it and Unblock the Notifications











