Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅ.24ರಿಂದ ನವೆಂಬರ್ 3ರವರೆಗೆ 24 ಗಂಟೆಯೂ ಇರಲಿದೆ ಹಾಸನಾಂಬೆಯ ದರ್ಶನ: ಪ್ರತಿವರ್ಷ ಈ ದೇವಾಲಯದಲ್ಲಿ ನಡೆಯುತ್ತೆ ಈ 2 ಪವಾಡ
ಹಾಸನದ ಹಾಸನಾಂಬೆ ದೇವಿಯ ದರ್ಶನಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಅಕ್ಟೋಬರ್ 24ಕ್ಕೆ ದೇವಾಲಯದ ಬಾಗಿಲು ತೆರೆಯಲಾಗುವುದು ನವೆಂಬರ್ 4ರವೆರೆಗ ದೇವಿಯ ದರ್ಶನ ಪ0ಡೆಯಲು ಅವಕಾಶವಿದೆ. ವರ್ಷದಲ್ಲಿ ಒಂದು ಬಾರಿ ಮಾತ್ರ ದೇವಾಲಯದ ಬಾಗಿಲು ತೆರೆಯಲಾಗುವುದು, ಆವಾಗ ದೇವಿಯ ದರ್ಶನವನ್ನು ಭಕ್ತರು ಕಣ್ತುಂಬಿಕೊಳ್ಳಬಹುದು. ದೇವಿಯ ದರ್ಶನ ಪಡೆಯಲು ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ.

9 ದಿನಗಳು ಹಾಸನಾಂಬೆ ದೇವಿ ಕ್ಷೇತ್ರದಲ್ಲಿ ತುಂಬಿ ತುಳುಕಲಿದ್ದಾರೆ ಭಕ್ತರು
ಅಶ್ವೀಜ ಮಾಸದ ಮೊದಲ ದಿನ ಎಲ್ಲಾ ಧಾರ್ಮಿಕ ಶಾಸ್ತ್ರಗಳನ್ನು ಪಾಲಿಸಿ ದೇವಾಲಯದ ಬಾಗಿಲು ತೆರೆಯಲಾಗುವುದು, ಹೀಗಾಗಲೇ ದೇವಾಲಯವು ಹೂವಿನಿಂದ ಅಲಂಕೃತಗೊಂಡು ಕಂಗೊಳಿಸುತ್ತಿದೆ. ಈ ವರ್ಷ 24 ಗಂಟೆಯೂ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಅಲ್ಲದೆ ಈ ವರ್ಷ ಮಳೆಯ ಆರ್ಭಟ ಅಧಿಕವಿರುವುದರಿಂದ ಭಕ್ತರು ಮಳೆಯಿಂದ ರಕ್ಷಣೆ ಪಡೆಯಲು ಜರ್ಮನ್ ಟೆಂಟ್ ಕೂಡ ನಿರ್ಮಾಣವಾಗಿರುವುದರಿಂದ ಭಕ್ತರು ಮಳೆಯ ಆತಂಕವಿಲ್ಲದೆ ಹಾಸನಾಂಬೆ ದೇವಿಯ ದರ್ಶನ ಪಡೆಯಬಹುದು.
ವರ್ಷಕ್ಕೊಮ್ಮೆ ಮಾತ್ರ ಈ ದೇವಾಲಯದ ಬಾಗಿಲು ತೆರೆಯಲಾಗುವುದು
ವರ್ಷದ ಇನ್ಯಾವುದೇ ಸಂದರ್ಭದಲ್ಲಿ ಈ ದೇವಾಲಯದ ಬಾಗಿಲು ತೆರೆಯುವುದಿಲ್ಲ, ವರ್ಷಕ್ಕೊಮ್ಮೆ ಒಂಭತ್ತು ದಿನಗಳು ದೇವಿಯ ದರ್ಶನ ಪಡೆಯುಬಹುದು. ಈ ದಿನ ಹಾಸನಾಂಬೆಯ ಬಾಗಿಲು ತೆರೆಯದಾಗ ದೇವಿಗೆ ವಿಶೇಷ ಅಲಂಕಾರವಿರಲ್ಲ. ಎರಡನೇ ದಿನ ಜಿಲ್ಲಾ ಖಜಾನೆಯಲ್ಲಿ ಇಟ್ಟ ವಸ್ತ್ರ- ಆಭರಣಗಳನ್ನು ತಂದು ಶಾಸ್ತ್ರ ಪ್ರಕಾರ ಪೂಜೆ ಸಲ್ಲಿಸಿ ನಂತರ ದೇವಿಗೆ ನೈವೇದ್ಯ ಅರ್ಪಿಸಲಾಗುವುದು. ಅಲಂಕೃತಗೊಂಡ ದೇವಿಯನ್ನು ಕಣ್ತುಂಬಿಕೊಂಡರೆ ಸಾಕು ಅದುವೇ ನಮ್ಮ ಬದುಕಿನ ಮಹಾಭಾಗ್ಯ ಎಂಬುವುದು ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತರ ಅನಿಸಿಕೆಯಾಗಿದೆ.
ಈ ದೇವಾಲಯದ ಪವಾಡವನ್ನು ವೈಜ್ಞಾನಿಕ ವಿವರಿಸಲು ಯಾರಿಗೂ ಸಾಧ್ಯವಾಗಿಲ್ಲ, ಅದುವೇ ಇಲ್ಲಿಯ ದೇವಿಯ ಶಕ್ತಿ
ಏನೇ ಪವಾಡವಾದರೂ ಅದಕ್ಕೆ ಒಂದು ಕಾರಣ ಹೇಳಿ ಧಾರ್ಮಿಕ ನಂಬಿಕೆಗಳಿಗೆ ನೋವು ಕೊಡುವವರೂ ಇರ್ತಾರೆ, ಅಯ್ಯಪ್ಪಸ್ವಾಮಿಯ ಮಕರವಿಳಕ್ಕು ಅದು ನಕ್ಷತ್ರವಲ್ಲ ಬದಲಿಗೆ ಗುಡ್ಡದಲ್ಲಿ ಬುಡಕಟ್ಟು ಜನಾಂಗದವರು ಬೆಂಕಿ ಹಾಕುವುದು ಎಂದು ಕೆಲವರು ಬಲವಾಗಿ ವಾದಿಸುತ್ತಾರೆ, ಆದರೆ ಅಯ್ಯಪ್ಪ ಭಕ್ತರು ಮಾತ್ರ ಆ ಮಕರವಿಳಕ್ಕು ನಮ್ಮ ಅಯ್ಯಪ್ಪಸ್ವಾಮಿಯೇ ಎಂಬುವುದನ್ನು ಬಲವಾಗಿ ನಂಬುತ್ತಾರೆ.
ಹಾಸನಾಂಬೆಯ ಪವಾಡವೆಂದರೆ ಇಲ್ಲಿ ಬಾಗಿಲು ಮುಚ್ಚಿವಾಗ ಇಲ್ಲಿರುವ ದೀಪಕ್ಕೆ ಎಣ್ಣೆ , ಬತ್ತಿ ಹಾಕಿ ದೀಪ ಬೆಳಗುತ್ತಾರೆ, ಆ ದೀಪ ಒಂದು ವರ್ಷದ ಬಳಿಕ ತೆಗೆದು ನೋಡಿದರೂ ಹಾಗೆಯೇ ಉರಿಯುತ್ತಿರುತ್ತದೆ, ಹೀಗಾಗಿ ಹಾಸನಾಂಬೆಯ ಪವಾಡ ಶಕ್ತಿ ಬಗ್ಗೆ ಜನರಿಗೆ ಅಷ್ಟೊಂದು ನಂಬಿಕೆ.
ಅದು ಮಾತ್ರವಲ್ಲ ಇಲ್ಲಿರುವ ಕಲ್ಲು ಕೂಡ ಚಲಿಸುತ್ತದೆ
ಹಾಸಾನಾಂಬೆಯ ಮಹಾಭಕ್ತಿಯೆನ್ನು ಆಕೆಯ ಅತ್ತೆ ಸೊಸೆಗೆ ಹರಿತವಾದ ವಸ್ತುವಿನಿಂದ ಗಾಯಗೊಳಿಸುತ್ತಾಳೆ, ಇದರಿಂದ ರಕ್ತ ಸುರಿಯುತ್ತಾ ಆ ಭಕ್ತೆ ಹಾಸಾಂಬೆ ಬಳಿ ಬರುತ್ತಾಳೆ, ಹಾಸಾನಾಂಬೆ ಅವಳನ್ನು ಕಲ್ಲಾಗಿ ಪರಿವರ್ತಿಸಿ ತನ್ನ ಭಕ್ತೆಯನ್ನು ತನ್ನ ಬಳಿ ಇರಿಸಿಕೊಳ್ಳುತ್ತಾಳೆ. ಈ ಕಲ್ಲು ಪ್ರತಿ ವರ್ಷ ಒಂದು ಇಂಚಿಗಿಂತ ಕಡಿಮೆ ಅಳತೆಯಲ್ಲಿ ಮುಂದದೆಕ್ಕೆ ಚಲಿಸುತ್ತದೆ, ಯಾವಾಗ ಈ ಕಲ್ಲು ದೇವಿಯ ಪಾದಗಳನ್ನು ಮುಟ್ಟುವುದೋ ಆವಾಗ ಈಗ ನಡೆಯುತ್ತಿರುವ ಕಲಿಯುಗ ಅಂತ್ಯಗೊಳ್ಳಲಿದೆ ಎಂದು ಹೇಳಲಾಗುವುದು. ಇದು ಈ ದೇವಾಲಯದ ಪ್ರಮುಖ ಪವಾಡವಾಗಿದೆ.
ಈ ದಿನ ಬಾಳೆಗಿಡ ಕಡಿದು ದೃಷ್ಟಿ ನಿವಾಳಿಸಿದ ಬಳಿಕವಷ್ಟೇ ಬಾಗಿಲು ತೆಗೆಯಲಾಗುವುದು
ಹಾಸನಾಂಬೆ ಎಂಬ ದೇವಿ ಶಕ್ತಿಯ ಈ ಕ್ಷೇತ್ರದ ಬಾಗಿಲು ವರ್ಷದವರೆಗೆ ಮುಚ್ಚಿರುತ್ತದೆ, ಇದರ ಬಾಗಿಲು ಹಾಗೇ ತೆಗೆಯುವಂತಿಲ್ಲ, ಏಕೆಂದರೆ ದೇವಿಯ ಪ್ರಖರ ದೃಷ್ಟಿ ತಡೆಯುವಂಥ ಶಕ್ತಿ ಮನುಷ್ಯರಿಗಿಲ್ಲ, ಹೀಗಾಗಿ ಮೊದಲಿಗೆ ಬಾಳೆಗಿಡ ಕಡಿದು ದೃಷ್ಟಿ ತೆಗೆದ ಬಳಿಕವಷ್ಟೇ ದೇವಾಲಯದ ಬಾಗಿಲು ತೆರೆಯಲಾಗುವುದು.
ಏಕೆ ಹಾಸನಾಂಬೆಗೆ ವರ್ಷಕ್ಕೊಮ್ಮೆ ಮಾತ್ರ ಪೂಜೆ ಸಲ್ಲಿಸಲಾಗುವುದು
ಹಾಸನಾಂಬೆ ದೇವಿಯನ್ನು ವರ್ಷಕ್ಕೊಮ್ಮೆ ಮಾತ್ರ ಏಕೆ ಪೂಜಿಸುತ್ತಾರೆ ಎಂಬುವುದರ ಹಿಂದೆ ಸಪ್ತ ಮಾತೃಶ್ರೀಯರ ಕತೆಯಿದೆ. ಬ್ರಾಹ್ಮಿ, ಮಹೆಶ್ವರಿ, ಕೌಮಾರಿ, ವೈಷ್ಣವಿ, ವರಾಹಿ, ಇಂದ್ರಾಣಿ ಮತ್ತು ಚಾಮುಂಡಿ ವಿಹರಿಸುತ್ತಾ ದಕ್ಷಿಣ ಭಾರತಕ್ಕೆ ಬರುತ್ತಾರೆ, ಇಲ್ಲಿಯ ಪ್ರಕೃತಿ ಸೌಂದರ್ಯ ನೋಡಿ ಇಲ್ಲಿಯೇ ನೆಲೆಸಲು ಬಯಸುತ್ತಾರೆ. ಇವರ ಜೊತೆ ಇವರ ಸಹೋದರ ಸಿದ್ದೇಶ್ವರ ಕೂಡ ಇರುತ್ತಾನೆ, ಅವನು ಭಕ್ತರು ನೀಡಿದ ಎಲ್ಲಾ ಪ್ರಸಾದ ಸ್ವೀಕರಿಸುತ್ತಿದ್ದ, ಇದರಿಂದ ಕೋಪಗೊಂಡ ಮಾತೃಕೆಯರ ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುತ್ತೇವೆ ಎಂದು ಹೇಳಿರುವುದಾಗಿ ಪೌರಾಣಿಕ ಕತೆಯಿದೆ.



Click it and Unblock the Notifications