Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಕಾರವಾರ ಜನತೆಗೆ ಪ್ರಾಣಭಯದ ಆತಂಕ ಮೂಡಿಸಿದ ರಣಹದ್ದು: ಅಷ್ಟಕ್ಕೂ ಆಗಿದ್ದೇನು?
ಅದೊಂದು ಹದ್ದು ಹಾರಿ ಬಂದು ಮನೆಗೆ ಮೇಲೆ ಕೂತಾಗ ಆ ಮನೆಯವರು ಗಮನಿಸುತ್ತಾರೆ, ಅದರ ಕಾಲಲ್ಲಿ ಟ್ಯಾಗ್, ಬೆನ್ನಲ್ಲಿ ಟ್ರಾನ್ಸ್ ಮೀಟರ್, ಮನೆ ಮಂದಿಗೆಲ್ಲಾ ಟೆನ್ಷನ್ ಶುರುವಾಯ್ತು, ಇದೇನಾದರೂ ಗೂಢಾಚಾರಿಕೆಯ ಹದ್ದಾಗಿರಬಹುದೇ?
ಇದೆಲ್ಲಾದರೂ ಬಾಂಬ್ ಮುಂತಾದ ಅಪಾಯಕಾರಿ ಸ್ಪೋಟಕ ಹೊತ್ತು ತಂದರೆ, ಅಯ್ಯೋ ಇದನ್ನು ಯಾರು ಹಾರಿಸಿ ಬಿಟ್ಟಿದ್ದಾರೆ ಎಂದು ಆತಂಕ ಪಡೆಯುವಷ್ಟರಲ್ಲಿ ಆ ಹದ್ದು ಅಲ್ಲಿಂದ ಹಾರಿ ಮತ್ತೊಂದು ಮನೆ ಮೇಲೆ ಕೂರುತ್ತೆ, ಆ ಮನೆಯವರಿಗೂ ಟೆನ್ಷನ್ ಶುರುವಾಯ್ತು, ಕ್ಷಣಾರ್ಧದಲ್ಲಿ ಆ ಸುದ್ದಿ ಆ ಊರಿಗೆಲ್ಲಾ ಹಬ್ಬಿತು, ಊರಿನಲ್ಲಿ ಹದ್ದು ಹಾರಾಡುತ್ತಿದ್ದರೆ ಎಲ್ಲರ ಮುಖದಲ್ಲಿಯೂ ಟೆನ್ಷನ್, ಈ ಗೂಢಾಚಾರಿಕೆಯ ಹದ್ದು ಇಲ್ಲಿಗ್ಯಾಕೆ ಬಂತು, ಅಯ್ಯೋ ನಮ್ಮ ಮನೆ ಮೇಲೆ ಬಿದ್ದರೆ ಗತಿಯೇನು ಎಂಬ ಆತಂಕ ಮನೆ ಮಾಡಿತು, ಇಂಥದ್ದೊಂದು ವಿಲಕ್ಷಣ ಘಟನೆಗೆ ಸಾಕ್ಷಿಯಾಗಿದ್ದು ಕಾರವಾರ.

ಟ್ರಾನ್ಸ್ಮೀಟರ್, ಟ್ಯಾಗ್ ಅಳವಡಿಸಿರುವ ಹದ್ದು
ಕಾರವಾರದ ಜನರಿಗೆ ಹದ್ದು ಹೊಸತಲ್ಲ, ಆದರೆ ಟ್ರಾನ್ಸ್ಮೀಟರ್, ಟ್ಯಾಗ್ ಅಳವಡಿಸಿರುವ ನೋಡಿದರೆ ಗೂಢಚಾರಿಕೆಯ ಹದ್ದಿನಂತೆ ಅನಿಸುವ ಇಂಥ ಹದ್ದು ಅವರು ಈ ಹಿಂದೆ ಎಲ್ಲಿಯೂ ನೋಡಿರಲಿಲ್ಲ, ಅಲ್ಲದೆ ಬಾಂಬ್ ಸ್ಪೋಟ ಮುಂತಾದ ವಿಷಯಗಳು ಕೇಳಿ ಬರುತ್ತಿರುತ್ತದೆ, ಯಾವುದೋ ದುಷ್ಕರ್ಮಿಗಳ ಕಣ್ಣು ನಮ್ಮ ಕಾರಾವಾರದ ಮೇಲೆ ಬಿತ್ತಾ? ಇಲ್ಲಿಗೆ ಇದು ವಿನಾಶ ಉಂಟು ಮಾಡಲು ಬಂತೇ ಎಂದು ಅಲ್ಲಿದ್ದವರಿಗೆ ಆತಂಕ. ಹದ್ದು ಎಲ್ಲಾದರೂ ಟೈಂ ಬಾಂಬ್ ರೀತಿ ಏನಾದರು ತಂದು ಹಾಕಿದರೆ?
ಪೊಲೀಸರೂ ಬಂದರು
ವಿಷಯವನ್ನು ಪೊಲೀಸರಿಗೂ ತಿಳಿಸಲಾಯ್ತು, ಇದನ್ನು ನಮ್ಮ ಶತ್ರು ದೇಶದವರೇ ಬಿಟ್ಟಿರಬಹುದು ಎಂದು ಜನರು ಮಾತನಾಡಿಸಲಾರಂಭಿಸಿದರು. ಪೊಲೀಸರು ಜೊತೆಗೆ ಅರಣ್ಯ ಇಲಾಖೆಯೂ ಕೈ ಜೋಡಿಸಿತು, ಆವಾಗ ತಿಳಿದು ಬಂದಿದ್ದು ಈ ಹದ್ದನ್ನು ಶತ್ರು ದೇಶದವರು ಬಿಟ್ಟಿದ್ದಲ್ಲ, ಬಾಂಬೆಯ ರಿಸರ್ಚ್ ಸೆಂಟರ್ ಈ ರಣಹದ್ದಿಗೆ ಜಿಪಿಎಸ್ ಕಟ್ಟಿ ಹಾರಲು ಬಿಟ್ಟಿತ್ತು, ಹದ್ದುಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ಉದ್ದೇಶದಿಂದ ಈ ರೀತಿ ಮಾಡಲಾಗಿತ್ತು, ಈ ವಿಷಯ ತಿಳಿಯುತ್ತಿದ್ದಂತೆ ಜನ ನಿಟ್ಟುಸಿರು ಬಿಟ್ಟರು.
ಈಗ ಯಾವ ಚಿಕ್ಕ ವಿಷಯವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ಅಲ್ವೇ?
ಗ್ರಾಹಕನ ಸೋಗಿನಲ್ಲಿ ಬಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿರುವ ಘಟನೆ ನಡೆದು ತುಂಬಾ ದಿನಗಳಾಗಿಲ್ಲ, ಅಂಥದ್ದರಲ್ಲಿ ಹದ್ದು ಜಿಪಿಎಸ್ ಕಟ್ಟಿ ಬಂದು ಒಂದೇ ಪ್ರದೇಶದಲ್ಲಿ ಹಾರಾಡುತ್ತಿದ್ದರೆ ಆತಂಕ ಪಡದೆ ಇರಲು ಸಾಧ್ಯನಾ? ಸಂಶಾಯಸ್ಪದವಾಗಿ ಏನೇ ಕಂಡು ಬಂದರೂ ತಕ್ಷಣ ಪೊಲೀಸ್ ಇಲಾಖೆಗೆ ತಲುಪಿಸುವುದು ನಮ್ಮ ಕರ್ತವ್ಯ.
ಎರಡು ವರ್ಷದ ಹಿಂದೆ ಕೊಡಗಿನಲ್ಲಿಯೂ ಜನ ಭಯ ಬಿದ್ದು ನಂತರ ನಿರಾಳವಾದ ಕತೆಯಿದೆ
ಬೆಳಗ್ಗೆ ಒಂದು ಲಾರಿ ಹೋಗುತ್ತೆ, ಅದು ಹೋದ ದಾರಿಯಲ್ಲಿ ಏನೋ ಕೆಂಪು ದ್ರವ ಸ್ವಲ್ಪ ಬೀಳುತ್ತಾ ಹೋಗುತ್ತದೆ, ಸ್ವಲ್ಪ ಹೊತ್ತಿನಲ್ಲಿ ಜನರಿಗೆ ಕೆಮ್ಮು, ಮೆಣಸಿನ ಪುಡಿ ಒಲೆಗೆ ಹಾಕಿದಾಗ ಬರುವಂಥ ಘಾಟು, ಎಲ್ಲರೂ ಕೆಮ್ಮಲಾರಂಭಿಸುತ್ತಾರೆ, ಆ ದಾರಿಯಲ್ಲಿ ಹೋದ ಬಸ್ನಲ್ಲಿದ್ದ ಪ್ರಯಾಣಿಕರು, ಇತರ ಗಾಡಿಗಳಲ್ಲಿ ಇದ್ದ ಪ್ರಯಾಣಿಕರು, ರಸ್ತೆ ಬದಿಯಲ್ಲಿ ನಿಂತಿದ್ದವರು ಎಲ್ಲರೂ ಕೆಮ್ಮಲಾರಂಭಿಸುತ್ತಾರೆ. ಜನರಿಗೆ ಅದೇನಾದರೂ ವಿಷಕಾರಿ ಅನಿಲವಾಗಿರಬಹುದೇ ಎಂಬ ಆತಂಕ, ಕೂಡಲೇ ಪೊಲೀಸರಿಗೆ ವಿಷಯ ತಿಳಿಸಲಾಗಿ ಆ ಗಾಡಿಯನ್ನು ಕುಟ್ಟ ಬಳಿ ನಿಲ್ಲಿಸಿ ಪರಿಶೀಲಿಸಿದಾಗ ಅದು ಕೆಂಪು ಮೆಣಸಿನ ಪೇಸ್ಟ್ ತುಂಬಾ ಹೋಗುತ್ತಿದ್ದ ಲಾರಿ ಆಗುತ್ತು, ಮೆಣಸಿನ ದ್ರವ ರಸ್ತೆ ಮೇಲೆ ಬಿದ್ದು ಜನರು ಕೆಮ್ಮಿ-ಕೆಮ್ಮು ಸುಸ್ತಾಗುವಂಥ ಘಾಟು ಉಂಟು ಮಾಡಿತ್ತು, ಜನ ಕಷ್ಟಪಟ್ಟರೂ ಅಬ್ಬಾ ನಾವು ಉಸಿರಾಡಿದ್ದು ವಿಷ ಅನಿಲ ಅಲ್ಲಲ್ಲ ಎಂದು ಸಮಧಾನ ಪಟ್ಟರು.



Click it and Unblock the Notifications