Latest Updates
-
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು!
ಒಂದು ಕ್ಷಣ ಮೈಮರೆತರೆ ಪ್ರಾಣವೇ ಹೋಗುತ್ತೆ: 17ನೇ ವರ್ಷಕ್ಕೆ ಚಿನ್ನ ಗೆದ್ದಾಕೆಯ ದುರಂತ ಅಂತ್ಯ...!
ಜಿಮ್ ಮಾಡುವಾಗ ಎಷ್ಟು ಜಾಗರುಕರಾಗಿದ್ದರು ಸಾಲದು ಎನ್ನುವುದನ್ನು ನಾವು ನೋಡುತ್ತಾ ಬಂದಿದ್ದೇವೆ. ಹಲವು ಪ್ರಕರಣಗಳಲ್ಲಿ ಜಿಮ್ ಮಾಡುವಾಗ ವ್ಯಾಯಾಮ ಮಾಡುವಾಗ ಪ್ರಾಣ ಕಳೆದುಕೊಳ್ಳುವ ಘಟನೆಗಳು ನಡೆಯುತ್ತಲೇ ಇರುತ್ತದೆ. ಅದರಲ್ಲೂ ಭಾರ ಎತ್ತುವ ಸಂದರ್ಭದಲ್ಲಿ ಹಲವು ಭಾರಿ ದೇಹದ ಮೇಲೆ ದೊಡ್ಡ ಪ್ರಮಾಣದ ಹಾನಿಯಾಗುವುದು ವರದಿಯಾಗುತ್ತಲೇ ಇರುತ್ತದೆ.
ಇಲ್ಲಿಯೂ ಕೂಡ ಚಿನ್ನದ ಪದಕ ವಿಜೇತೆ ಪವರ್ ಲಿಫ್ಟರ್ ಒಬ್ಬಾಕೆ ಭಾರ ಎತ್ತುವಾಗ ಒಂದು ಕ್ಷಣ ಮೈಮರೆತು ಯಡವಟ್ಟು ಮಾಡಿಕೊಂಡು ಈಗ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ 17 ವರ್ಷದ ಚಿನ್ನದ ಪದಕ ಗೆದ್ದಿದ್ದ ಪವರ್ಲಿಫ್ಟರ್ ಯಷ್ಟಿಕಾ ಆಚಾರ್ಯ ತರಬೇತಿ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಆಕೆ ತರಬೇತಿ ನಡೆಸುವಾಗ ಬರೋಬ್ಬರಿ 270 ಕೆ.ಜಿ ತೂಕವನ್ನು ಎತ್ತುವ ಸಂದರ್ಭದಲ್ಲಿ ಈ ಅಚಾತುರ್ಯ ನಡೆದಿದೆ. ಆಕೆಯ ಕುತ್ತಿಗೆಯ ಮೇಲೆ ಇಡೀ ಭಾರ ಬಿದ್ದ ಕಾರಣ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಹಾಗೆ ತರಬೇತಿ ನೀಡುತ್ತಿದ್ದ ಕೋಚ್ಗೂ ಕೂಡ ಗಾಯವಾಗಿದೆ.
ಆಗಿದ್ದೇನು?
ತರಬೇತಿಯಾಗಿ ಆಕೆ ತೂಕವನ್ನು ಎತ್ತುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆಕೆ 270 ಕೆ.ಜಿ ತೂಕದ ರಾಡ್ ಎತ್ತುವಾಗ ಆಕೆಗೆ ಕೋಚ್ ಸಹಾಯ ಮಾಡುತ್ತಿರುವುದು ವಿಡಿಯೋದಲ್ಲಿ ನೋಡಬಹುದು. ಆದರೆ ಆಕೆ ಒಮ್ಮೆ ಈ ಭಾರದ ರಾಡ್ ಅನ್ನು ತನ್ನ ತಲೆಯ ಮೇಲೆ ಎತ್ತಿ ಹಿಡಿಯುವ ಸಂದರ್ಭದಲ್ಲಿ ಆಯತಪ್ಪದ್ದಾಳೆ. ಇದರಿಂದ ಭಾರವಾದ ರಾಡ್ ಆಕೆಯ ಕುತ್ತಿಗೆ ಮೇಲೆ ಬಿದ್ದಿದೆ. ಆಕೆ ಕೂಡ ಕುಸಿದುಬಿದ್ದಿದ್ದಾಳೆ. ಕೋಚ್ಗೂ ಗಾಯವಾಗಿದೆ.
270 ಕೆ.ಜಿ ಕೂಕದ ರಾಡ್ ಕುತ್ತಿಗೆ ಮೇಲೆ ಬಿದ್ದ ಪರಿಣಾಮ ಆಕೆಯ ಕುತ್ತಿಗೆ ಮುರಿದಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಕುತ್ತಿಗೆ ಮುರಿದ ಕಾರಣದಿಂದಾಗಿ ಸ್ಪೈನಲ್ ಕಾರ್ಡ್ ಫೈಲ್ಯೂರ್ ಆಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಆಕೆ ಆಸ್ಪತ್ರೆ ಬರುವ ಮುನ್ನವೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ಯಷ್ಟಿಕಾ ಆಚಾರ್ಯ ವೇಯ್ಟ್ ಲಿಫ್ಟಿಂಗ್ನಲ್ಲಿ ಸಾಧನೆ ಮಾಡುವ ಕನಸು ಕಂಡಿದ್ದರು. ಹಾಗೆ ಜೂನಿಯರ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಗೋವಾದಲ್ಲಿ ನಡೆದ 33ನೇ ರಾಷ್ಟ್ರೀಯ ಬೆಂಚ್ ಪ್ರೆಸ್ ಚಾಂಪಿಯನ್ಶಿಪ್ನಲ್ಲಿ ಯಷ್ಟಿಕಾ ಚಿನ್ನ ಮತ್ತು ಕ್ಲಾಸಿಕ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಆದ್ರೆ ಈಗ ಅವರ ಕ್ರೀಡಾ ಸಾಧನೆಯ ಕನಸುಗಳು ಕಮರಿವೆ, ಆಕೆ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.
ಸಾವಿನಿಂದ ಪಾರಾಗಿದ್ದ ವ್ಯಕ್ತಿ
ಕಳೆದೊಂದು ವಾರದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವ ಜಿಮ್ ಮಾಡುವಾಗ ಆತನ ಕುತ್ತಿಗೆ ಮೇಲೆ ಭಾರ ಬೀಳುವ ವಿಡಿಯೋ ವೈರಲ್ ಆಗಿತ್ತು. ಆತ ಪ್ರಾಣಾಪಾಯದಿಂದ ಪಾರಾಗಿದ್ದ. ಆತ ಮಲಗಿ ಭಾರ ಎತ್ತಲು ಮುಂದಾದಾದ ಅದು ಸಾಧ್ಯವಾಗಲಿಲ್ಲ. ಆತ ವಾಪಾಸು ಇಡಲು ಕಷ್ಟಪಡುವಾಗ ಯುವತಿ ಆಕೆಯ ಸಹಾಯಕ್ಕೆ ಬಂದಿದ್ದಾಳೆ. ಆದ್ರೆ ಆಕೆ ಕೈಯಿಂದ ಈ ಭಾರ ಎತ್ತಲು ಸಾಧ್ಯವಾಗದೇ ಇದ್ದಾಗ ಆತನ ಕುತ್ತಿಗೆಯ ಮೇಲೆ ಬಿದ್ದಿದೆ. ಆದ್ರೆ ಆತ ಪ್ರಾಣಾಪಾಯದಿಂದ ಕೂದಲು ಎಳೆ ಅಂತರದಲ್ಲಿ ಪಾರಾಗಿದ್ದಾನೆ.



Click it and Unblock the Notifications