Latest Updates
-
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ!
ಈ ವಾರ ಗುರು ಪೂರ್ಣಿಮಾ ಸೇರಿ 4 ಪ್ರಮುಖ ವ್ರತಗಳಿವೆ, ಧಾರ್ಮಿಕ ದೃಷ್ಟಿಯಿಂದ ತುಂಬಾನೇ ಮಹತ್ವದ್ದಾಗಿವೆ
ಈ ವಾರ ಯಾವೆಲ್ಲಾ ಪ್ರಮುಖ ವ್ರತಗಳಿವೆ, ಈ ವ್ರತಗಳ ವೈಶಿಷ್ಠ್ಯತೆಯೇನು ಎಂದು ನೋಡೋಣ ಬನ್ನಿ:
ಜುಲೈ 2: ಕೋಕಿಲ ವ್ರತ
ಕೋಕಿಲ ವ್ರತವನ್ನು ಆಷಾಢಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಆಚರಿಸುತ್ತೇವೆ. ಈ ದಿನ ಉಪವಾಸವಿದ್ದು ಆದಿಶಕ್ತಿಯ ಆರಾಧನೆ ಮಾಡಲಾಗುವುದು. ಈ ವ್ರತವನ್ನು ಅವಾಹಿತ ಮಹಿಳೆಯರು ಮಾಡಿದರೆ ಮದುವೆಗೆ ಇರುವ ಅಡೆತಡೆ ದೂರಾಗುವುದು. ವಿವಾಹಿತರು ಪಾಲಿಸುವುದರಿಂದ ವೈವಾಹಿಕ ಜೀವನದಲ್ಲಿರುವ ಸಮಸ್ಯೆ ದೂರಾಗುವುದು.

ಜುಲೈ 3: ಗುರು ಪೂರ್ಣಿಮಾ, ವ್ಯಾಸ ಪೂಜೆ, ಆಷಾಢ ಪೂರ್ಣಿಮಾ ವ್ರತ
ವ್ಯಾಸರ ನೆನಪಿಗಾಗಿ ಈ ದಿವವನ್ನು ಆಚರಿಸಲಾಗುತ್ತದೆ. ನಾಲ್ಕು ವೇದಗಳನ್ನು, 18 ಪುರಾಣಗಳನ್ನು ಮಹಾಭಾರತ ಮತ್ತು ಶ್ರೀಮದ್ಭಾಗವತವನ್ನು ರಚಿಸಿದವರು ವೇದವ್ಯಾಸರು. ಬೌದ್ಧರಿಗೂ ಗುರು ಪೂರ್ಣಿಮೆ ಮಹತ್ವದ ದಿನವಾಗಿದೆ. ಸಾಂಪ್ರದಾಯಿಕವಾಗಿ ಬೌದ್ಧರು ಬುದ್ಧನಿಗೆ ಗೌರವ ಅರ್ಪಿಸುವ ದಿನವನ್ನಾಗಿ ಗುರುಪೂರ್ಣಿಮೆಯನ್ನು ಆಚರಿಸುತ್ತಾರೆ. ಸಾರನಾಥದಲ್ಲಿ ಬುದ್ಧನು ಪ್ರಥಮ ಉಪದೇಶವನ್ನು ಮಾಡಿದರೆಂದು ಪ್ರತೀತಿ ಇದೆ. ಈ ದಿನ ಗುರುವಿನ ಪಾದ ಮುಟ್ಟಿ ಆಶೀರ್ವಾದ ಪಡೆದರೆ ಒಳ್ಳೆಯದು. ನಮ್ಮ ಬದುಕಿನಲ್ಲಿ ಸನ್ಮಾರ್ಗದಲ್ಲಿ ನಡೆಯಲು ಗುರುವಿನ ಸ್ಥಾನ ತುಂಬಾನೇ ಮುಖ್ಯ.
ಜುಲೈ 4: ಉತ್ತರ ಭಾರತದ ಕಡೆ ಶ್ರಾವಣ ಪ್ರಾರಂಭ : ಉತ್ತರ ಭಾರತದ ಪಂಚಾಂಗದ ಪ್ರಕಾರ ಜುಲೈ ಹಾಗೂ ಆಗಸ್ಟ್ ತಿಂಗಳು ಶ್ರಾವಣ ಮಾಸವಾಗಿದೆ.
ಜುಲೈ 6: ಗಜಾನನ ಸಂಕಷ್ಠಿ ಚತುರ್ದಶಿ: ಈ ದಿನ ವಿಘ್ನ ನಿವಾರಕನಾದ ವಿನಾಯಕನ ಪೂಜೆ ಮಾಡಲಾಗುವುದು. ಉಪವಾಸವಿದ್ದು ಗಣೇಶನ ಆರಾಧನೆ ಮಾಡುವುದರಿಂದ ಜೀವನದಲ್ಲಿ ಎಲ್ಲಾ ಒಳಿತಾಗಲಿದೆ. ಈ ದಿನ ಗಣೇಶನಿಗೆ ಗರಿಕೆಯನ್ನು ಅರ್ಪಿಸಿ ಆರಾಧನೆ ಮಾಡಿ.
ಜುಲೈ 7: ಆಷಾಢ ಶುಕ್ರವಾರ: ಆಷಾಢ ಮಾಸದ ಶುಕ್ರವಾರ ಲಕ್ಷ್ಮಿಯನ್ನು ಪೂಜಿಸುತ್ತಾರೆ. ಈ ದಿನ ಲಕ್ಷ್ಮಿ ಪೂಜೆ ಮಾಡುವುದರಿಂದ ಸಂಪತ್ತು ವೃದ್ಧಿಸಲಿದೆ. ತುಂಬಾ ಜನರು ಶ್ರಾವಣ ಶುಕ್ರವಾರದಂದು ಲಕ್ಷ್ಮಿ ವ್ರತ ಪ್ರಾರಂಭಿಸಿ ವರಲಕ್ಷ್ಮಿ ಪೂಜೆಯಂದು ಮುಕ್ತಾಯ ಮಾಡುತ್ತಾರೆ.



Click it and Unblock the Notifications