Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಸುರಿಯುತ್ತಿರುವ ಹಿಮದಲ್ಲಿ ಯೋಗಿಯ ಧ್ಯಾನ: ಈ ವೈರಲ್ ವೀಡಿಯೋ ಹಿಂದಿನ ಸತ್ಯಾಂಶವೇನು?
ಹಿಮ ಪರ್ವತದಲ್ಲಿ ಕುಳಿತು ಧ್ಯಾನ ಮಾಡುತ್ತಿರುವ ಯೋಗಿಯ ವೀಡಿಯೋ ವೈರಲ್ ಆಗಿತ್ತು. ಈ ವೀಡಿಯೋ ನೋಡಿದವರು ಇದೊಂದು ನಿಜ ವೀಡಿಯೋ ಎಂದು ನಂಬಲು ಜನರು ಸಿದ್ಧವಿರಲಿಲ್ಲ.
ಅದೊಂದು ಸೀನ್ ಸೆಟಪ್ ಆಗಿರಬಹುದು ಅಥವಾ AI ಚಿತ್ರಿಸಿದ ಚಿತ್ರವಿರಬಹುದು ಎಂದು ಹೇಳಿದ್ದರು. ಏಕೆಂದರೆ ಆ ವೀಡಿಯೋ ನೋಡಿ ಅದನ್ನು ನಂಬುವುದು ಯಾರಿಗಾದರೂ ಕಷ್ಟವಾಗುವುದು, ನಾವು ಸ್ನೋ ವರ್ಲ್ಡ್ಗೆ ಹೋದಾಗ ಅಲ್ಲಿ ಒಂದಿಷ್ಟು ಸಮಯ ಕಳೆದ ಮೇಲೆ ನಮಗೆ ಅಲ್ಲಿ ನಿಲ್ಲುವುದು ಕಷ್ಟವಾಗುವುದು, ಅಂಥದ್ದರಲ್ಲಿ ಹಿಮ ಪವರ್ತದಲ್ಲಿ ಕುಳಿತು ಧ್ಯಾನ ಮಾಡುವುದು ಎಂದರೆ ಅದನ್ನು ನಂಬಲು ಯಾರಿಗಾದರೂ ಕಷ್ಟವಾಗುತ್ತೆ, ಆದರೆ ಇದೀಗ ಈ ವೀಡಿಯೋದ ಹಿಂದಿನ ಸತ್ಯಾಂಶ ಬಯಲಾಗಿದೆ.

ಸಾಮಾಜಿಕ ತಾಣದಲ್ಲಿ ವೈರಲ್ ಆದ ವೀಡಿಯೋ ಫೇಕ್ ಅಲ್ಲ
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ವೀಕ್ಷಕರು ಈ ವೀಡಿಯೋದ ಸತ್ಯಾಂಶ ತಿಳಿಯಲು ಬಯಸಿದ್ದರು. ಆದರೆ ಹಿಮಾಚಲ ಪ್ರದೇಶದ ಕುಲ್ಲುವಿನ ಕೌಲುನ್ತಕ್ ಪೀಠ ಧಾರ್ಮಿಕ ಸಂಸಥೆ ಈ ವೀಡಿಯೋ ಫೇಕ್ ಅಲ್ಲ ನಿಜ ಎಂಬ ಸತ್ಯಾಂಶ ಬಹಿರಂತ ಪಡಿಸಿದೆ. ಆ ಯೋಗಿಯನ್ನು ಸತ್ಯೇಂದ್ರ ನಾಥ್ ಎಂದು ಗುರುತಿಸಲಾಗಿದೆ.
ಕೌಲಾನ್ತಕ್ ಪೀಠ ಸತ್ಯೇಂದ್ರ ನಾಥ್ ತುಂಬಾ ವರ್ಷದಿಂದ ನಮ್ಮ ಸಂಸ್ಥೆಯಲ್ಲಿ ಇದ್ದಾರೆ ಎಂಬುವುದಾಗಿ ಹೇಳಿದೆ. ಈ ವೀಡಿಯೋವನ್ನು ಸತ್ಯೇಂದ್ರನಾಥ್ ಅವರ ಶಿಷ್ಯ ರಾಹುಲ್ ತೆಗೆದಿದ್ದು, ರಾಹುಲ್ ಗುರುವಿನ ಜೊತೆಗೆ ಆ ಸ್ಥಳಕ್ಕೆ ಹೋದಾಗ ತಮ್ಮ ಗುರು ಹಿಮದಲ್ಲಿ ಧ್ಯಾನ ಮಾಡುವುದನ್ನು ನೋಡಿ ತೆಗೆದ ವೀಡಿಯೋ ಆಗಿದೆ.
ಫೆಬ್ರವರಿಯ ಮೊದಲ ವಾರದಲ್ಲಿ ಸತ್ಯೇಂದ್ರನಾಥ್ ಹಾಗೂ ಅವರು ಶಿಷ್ಯರಾದ ರಾಹುಲ್ ಹಾಗೂ ಸವರ್ಣಿನಾಥ್ ಕುಲ್ಲುವಿನ ಸೆರಾಜ್ ಕಣಿವೆಗೆ ಹೋಗಿದ್ದರು, ಇವರ ಈ ಪ್ರಯಾಣದಲ್ಲಿ ಒಂದು ತುಂಬಾನೇ ಹಿಮ ಬೀಳುತ್ತಿರುತ್ತದೆ, ಆವಾಗ ತಮ್ಮ ಗುರುವಿಗೆ ಈ ಬಗ್ಗೆ ಹೇಳಲು ಹೋದಾಗ ಸತ್ಯೇಂದ್ರನಾಥ್ ಹಿಮದಲ್ಲಿಯೇ ಕೂತು ಧ್ಯಾನ ಮಾಡುತ್ತಿರುವುದು ಕಣ್ಣಿಗೆ ಬೀಳುತ್ತದೆ. ಆವಾಗ ಅವರು ತಮ್ಮ ಗುರುಗಳ ವೀಡಿಯೋ ತೆಗೆದಿದ್ದು ಅದು ವೈರಲ್ ಆಗಿದೆ.
ಸವರ್ಣಿನಾಥ್ ಪ್ರಕಾರ ಅವರ ಗುರು ಹಿಮಲ್ಲಿ ಅಗ್ನಿ ಯೋಗ ಮಾಡುತ್ತಿದ್ದರು, ಅವರು ಹಿಮದಲ್ಲಿ ಕುಳಿತು ಈ ಅಗ್ನಿ ಯೋಗ ಮಾಡುವ ಅಭ್ಯಾಸವನ್ನು ಕಳೆದ 22 ವರ್ಷಗಳಿಂದ ರೂಢಿಸಿಕೊಂಡಿದ್ದರು. ಇದೀಗ ಆ ಧಾರ್ಮಿಕ ಪೀಠ ಸತ್ಯೇಂದ್ರ ನಾಥ್ ಅವರು ಮಾಡಿದಂಥ ಅಂಥ ಹಲವು ಸಾಹಸಿ ವೀಡಿಯೋಗಳನ್ನು ಕೂಡ ಬಿಡುಗಡೆ ಮಾಡಿದೆ. ಈ ಧಾರ್ಮಿಕ ಪೀಠದ ಸಾಮಾಜಿಕ ತಾಣ ಹಿಮಾಲಯದ ಸಿದ್ಧ ಯೋಗಿ ಎಂಬ ಕ್ಯಾಪ್ಷನ್ ನೀಡಿ ಈ ವೀಡಿಯೋ ಶೇರ್ ಮಾಡಿದ್ದಾರೆ.
ಹಲವು ಯೋಗಿಗಳ ಸಾಧನೆಯ ವೀಡಿಯೋಗಳಿವೆ
ನೀವು ಈ kaulantakpeethhimalaya ಸಾಮಾಜಿಕ ತಾಣಕ್ಕೆ ಹೋದರೆ ಹಲವು ಯೋಗಿಗಳ ಸಾಧನೆಯ ವೀಡಿಯೋವನ್ನು ಕಾಣಬಹುದು, ಮರದ ಪೊಟರೆಯಲ್ಲಿ ಧ್ಯಾನ ಮಾಡುತ್ತಿರುವುದು, ದಟ್ಟ ಅರಣ್ಯದ ನಡುವೆ ಮರದ ಮೇಲೆ, ಝರಿಯಲ್ಲಿ ಕುಳಿತು ಧ್ಯಾನ ಮಾಡುವುದು ಹೀಗೆ ಹಲವು ವೀಡಿಯೋಗಳನ್ನು ಕಾಣಬಹುದು.
ಈ ರೀತಿ ಸಾಧನೆ ಮಾಡುತ್ತಿರುವ ಹಲವ ಯೋಗಿಗಳಿದ್ದಾರೆ
ಪುರಾಣದಲ್ಲಿ ಒಂಟಿ ಕಾಲಿನಲ್ಲಿ ತಪ್ಪಸ್ಸು ಮಾಡಿದ ಸಾಧುಗಳ ಬಗ್ಗೆ ಕೇಳಿದ್ದೇವೆ, ಆದರೆ ಈ ಆಧುನಿಕ ಯುಗದಲ್ಲಿಯೂ ಅಂಥ ಯೋಗಿಗಳು ಇದ್ದಾರೆ. ಹಿಮಾಲಯ ಬೆಟ್ಟದಲ್ಲಿ ಇಂಥವರನ್ನು ಕಾಣಬಹುದು. ತಮ್ಮ ಇಡೀ ಜೀವನವನ್ನು ಮೋಕ್ಷ ಸಾಧನೆಗೆ ಮೀಸಲಿಟ್ಟ ಇಂಥ ಸಾಧುಗಳನ್ನು ನೋಡುವಾಗ ಆಧ್ಯಾತ್ಮದ ಸೆಳೆದ ಮತ್ತಷ್ಟು ಹೆಚ್ಚಾಗುವುದು ಅಲ್ವಾ?



Click it and Unblock the Notifications











