Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಐನ್ಸ್ಟೈನ್ ಮೆದುಳು ಕದ್ದು 240 ಪೀಸ್ ಮಾಡಿದ್ದ ವೈದ್ಯ..! ಆಮೇಲೆ ಆಗಿದ್ದೇನು ಗೊತ್ತಾ?
ನಮಗೆ ವಿಶ್ವದ ಅತ್ಯಂತ ಬುದ್ಧಿವಂತ ವ್ಯಕ್ತಿ ಯಾರು ಅಂತ ಕೇಳಿದ್ರೆ ನೆನೆಪಾಗೋದೇ ಆಲ್ಬರ್ಟ್ ಐನ್ಸ್ಟೈನ್. ಅವರಲ್ಲಿ 160ರ ಆಸುಪಾಸಿನ IQ ಇತ್ತು. ಇದರಿಂದ ಅವರು ಅತ್ಯಂತ ಬುದ್ದಿವಂತ ವ್ಯಕ್ತಿ ಎನಿಸಿಕೊಂಡಿದ್ದರು. ಅಲ್ಲದೆ ಹತ್ತಾರು ಸಿದ್ದಾಂತಗಳು, ಅನ್ವೇಷಣೆಗಳು ಅವರನ್ನು ಉತ್ತುಂಗಕ್ಕೆ ಏರಿಸಿದ್ದವು.
ಐನ್ಸ್ಟೈನ್ ಒಟ್ಟಾರೆ ತಮ್ಮ ಜೀವಿತಾವಧಿಯಲ್ಲಿ ಐನ್ಸ್ಟೈನ್ 300ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಮತ್ತು ಇತರ 150 ಕ್ಕೂ ಹೆಚ್ಚು ಪ್ರಬಂಧಗಳನ್ನು ಬರೆದಿದ್ದಾರೆ. ಭಾರತದ ಸತ್ಯೇಂದ್ರನಾಥ್ ಬೋಸ್ ಜೊತೆಗೂಡಿ ನೀಡಿದ 'ಬೋಸ್-ಐನ್ಸ್ಟೈನ್ ಸ್ಟಾಟಿಸ್ಟಿಕ್ಸ್' ಸೇರಿದಂತೆ 'ಐನ್ಸ್ಟೈನ್ ರೆಫ್ರಿಜರೇಟರ್', 'ಐನ್ಸ್ಟೈನ್-ಕಾರ್ಟನ್ ಸಿದ್ಧಾಂತ', 'ಐನ್ಸ್ಟೈನ್-ಇನ್ಫೆಲ್ಡ್-ಹಾಫ್ಮನ್ ಇಕ್ವೇಷನ್ಸ್', 'ಐನ್ಸ್ಟೈನ್-ಪೊಡೊಲೊಸ್ಕಿ-ರೋಸೆನ್ ಪ್ಯಾರಾಡಾಕ್ಸ್' ಇವುಗಳಲ್ಲಿ ಪ್ರಮುಖವಾದವು.

ಆದರೆ ಅವರ ಮೆದುಳು ಹಾಗೂ ಬುದ್ಧಿವಂತಿಕೆ ಕುರಿತು ಹತ್ತು ಹಲವು ವಾದಗಳಿವೆ ಹಲವು ಕಥೆಗಳಿವೆ. ಅವರು 1879ರಲ್ಲಿ ಜರ್ಮನಿಯ ಉಲ್ಮ್ ನಗರದಲ್ಲಿ ಜನಿಸಿದರು. 1955ರಲ್ಲಿ ಕೊನೆಯುಸಿರೆಳೆದರು. ಅಂದಿನಿಂದ ಇಂದಿನವರೆಗೂ ಅವರ ಮೆದುಳು ಹಾಗೂ ಅದರ ಕಾರ್ಯಕ್ಷಮತೆ ಬಗ್ಗೆ ಹಲವು ವಾದಗಳಿವೆ. ಅವರ ಮೆದುಳನ್ನು ಬೇರೆಯವರಿಗೆ ಜೋಡಿಸಲು ಯತ್ನಿಸಲಾಗಿದೆ. ಅವರ ಮೆದುಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಹೀಗೆ ಹತ್ತಾರು ಕಥೆಗಳಿವೆ.
ಆದರೆ ಈ ಕಥೆಗಳ ಜೊತೆ ಇನ್ನೊಂದು ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಅದೇನೆಂದರೆ ಐನ್ಸ್ಟೈನ್ ಮರಣದ ಬಳಿಕ ಅವರ ಮೆದುಳನ್ನು 4 ದಶಕಗಳ ಕಾಲ ವೈದ್ಯರೊಬ್ಬರು ತೆಗೆದುಕೊಂಡು ಹೋಗಿದ್ದರಂತೆ. ಯಾರ ಅನುಮತಿಯನ್ನು ಪಡೆಯದೇ ವೈದ್ಯರು ಆ ಮೆದುಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರಂತೆ.
ಏನಿದು ಐನ್ಸ್ಟೈನ್ ಮೆದುಳು ಕದ್ದ ಕಥೆ
ಐನ್ಸ್ಟೈನ್ ಏಪ್ರಿಲ್ 18, 1955 ರಂದು ತಮ್ಮ 76ನೇ ವಯಸ್ಸಿನಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ನಿಧನರಾದರು. ಡಾ. ಥಾಮಸ್ ಸ್ಟೋಲ್ಟ್ಜ್ ಹಾರ್ವೆ ಎಂಬಾತ ಐನ್ಸ್ಟೈನ್ ನಿಧನರಾದ ದಿನ ಪ್ರಿನ್ಸ್ಟನ್ ಆಸ್ಪತ್ರೆಯಲ್ಲಿ ಮುಖ್ಯ ರೋಗಶಾಸ್ತ್ರಜ್ಞರಾಗಿದ್ದರು.
ಹಾರ್ವೆಗೆ ಒಂದು ಅಸಾಮಾನ್ಯ ಕಲ್ಪನೆ ಇತ್ತು. ಐನ್ಸ್ಟೈನ್ನ ಮೆದುಳನ್ನು ತೆಗೆದುಕೊಳ್ಳುವ ಮೂಲಕ ತಾನು ಸಹ ಬುದ್ಧವಂತನಾಗಬಹುದು. ವೈದ್ಯಕೀಯ ಲೋಕದಲ್ಲಿ ಇನ್ನಿಲ್ಲದ ಅನ್ವೇಷಣೆಗಳ ಮಾಡಬಹುದು. ಇದರಿಂದ ಇಡೀ ವೈದ್ಯಕೀಯ ಲೋಕ ನನ್ನನ್ನು ಸತ್ತ ಮೇಲೂ ನೆನಪಿಟ್ಟುಕೊಳ್ಳಲಿದೆ ಎಂಬುದು ಆತನ ನಂಬಿಕೆಯಾಗಿತ್ತು.
1955ರಲ್ಲಿ ಐನ್ಸ್ಟೈನ್ನ ಶವಪರೀಕ್ಷೆಯ ಸಮಯದಲ್ಲಿ, ಹಾರ್ವೆ ಐನ್ಸ್ಟೈನ್ ಕುಟುಂಬವನ್ನು ಮೊದಲು ಕೇಳದೆ ವೈಜ್ಞಾನಿಕ ಅಧ್ಯಯನಕ್ಕಾಗಿ ಮೆದುಳಿನ ಭಾಗಗಳನ್ನು ಇಟ್ಟುಕೊಂಡನು. ಅವರು ಆಲ್ಬರ್ಟ್ನ ಹಿರಿಯ ಮಗ ಹ್ಯಾನ್ಸ್ ಐನ್ಸ್ಟೈನ್ನಿಂದ ಮಾತ್ರ ಅನುಮತಿ ಪಡೆದಿದ್ದ ಎಂದು ತಿಳಿದುಬಂದಿದೆ.
ಮೆದುಳನ್ನು ಕತ್ತರಿಸಿ, ಚಿತ್ರಗಳನ್ನು ತೆಗೆದುಕೊಂಡು ಅದನ್ನು ಸಂರಕ್ಷಿಸಿದ
ಹಾರ್ವೆ ಆ ಮೆದುಳನ್ನು ತನ್ನ ಮನೆಯಲ್ಲಿದ್ದ ಪ್ರಯೋಗಾಲಯಕ್ಕೆ ತೆಗೆದುಕೊಂಡು ಬಂದಿದ್ದ. ಅಲ್ಲಿಯೇ ಅದರ ಚಿತ್ರಗಳ ತೆಗೆದುಕೊಂಡು ಬರೋಬ್ಬರಿ 240 ತುಂಡುಗಳಾಗಿ ಕತ್ತರಿಸಿದ್ದ. ಬಳಿಕ ಆ ಮೆದುಳನ್ನು ಇಟ್ಟುಕೊಂಡು ಅದರ ಮೇಲೆ ಪರೀಕ್ಷೆಗಳ ನಡೆಸಲು ಆತ ಮುಂದಾಗಿದ್ದ. ಹಗಲು ರಾತ್ರಿ ಮೆದುಳಿನ ನ್ಯೂರಾನ್ ಪ್ರತಿಕ್ರಿಯೆಗಳು, ವಿದ್ಯುತ್ಕಾಂತೀಯ ಚಲನೆ, ನರಕೋಶಗಳು ಹೀಗೆ ಎಲ್ಲಾ ವಿಚಾರಗಳ ಒಂದೊಂದಾಗಿಯೇ ಅಧ್ಯಯನ ಮಾಡಿದ್ದ.
ಬಳಿಕ ಈ ಎಲ್ಲಾ ಅಧ್ಯಯನಗಳ ಒಟ್ಟುಗೂಡಿಸಿ ತನ್ನದೇ ಒಂದು ಸಿದ್ಧಾಂತ ರಚಿಸಿದ ಆದರೆ ಈ ಸಿದ್ಧಾಂತವನ್ನು ತಜ್ಞರು ಅಲ್ಲಗೆಳೆದರು. ಇದು ಅರ್ಥಹೀನ ಅಧ್ಯಯನ ಎಂದು ಕರೆದರು, ಅಲ್ಲದೆ ವೈದ್ಯ ಹಾರ್ವೆ ವಿರುದ್ಧ ಭಾರೀ ಟೀಕೆಗಳು ಕೇಳಿಬಂದವು. ಅಲ್ಲದೆ ಐನ್ಸ್ಟೈನ್ ಮೆದುಳು ವಾಪಾಸು ಮಾಡುವಂತೆ ಅವರ ಮೇಲೆ ಒತ್ತಡ ಹೇರಲಾಗಿತ್ತು. ಹೀಗಾಗಿ 2008ರಲ್ಲಿ ಅವರು ಐನ್ಸ್ಟೈನ್ ಕುಟುಂಬಕ್ಕೆ ಮೆದುಳನ್ನು ವಾಪಾಸು ನೀಡಿದರು.



Click it and Unblock the Notifications


