Latest Updates
-
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ!
ಬೆಳಗ್ಗೆ ಎದ್ದ ಕೂಡಲೇ ಈ ರೀತಿ ದೇವರ ಫೋಟೋ ನೋಡಬೇಡಿ..! ಅಶುಭ ಖಚಿತ..
ಬೆಳಗ್ಗೆ ಎದ್ದ ಕೂಡಲೇ ಈದಿನ ಉತ್ತಮವಾಗಿರಲಿ ಎಂದು ನಾವೆಲ್ಲ ಭಯಸುತ್ತೇವೆ. ಇದಕ್ಕೆ ಉತ್ತಮ ಆರಂಭವನ್ನು ಪಡೆಯುವುದು ಸಹ ಅಷ್ಟೇ ಅವಶ್ಯಕ. ಆದರೆ ಕೆಲವೊಮ್ಮೆ ನಾವು ತಿಳಿದೋ ತಿಳಿಯದೆಯೋ ಮಾಡುವ ಕೆಲಸಗಳಿಂದ ನಮ್ಮ ದಿನವನ್ನು ಹಾಳುಮಾಡುವುದಲ್ಲದೆ ದೀರ್ಘಾವಧಿಯಲ್ಲಿ ನಮಗೆ ಬಹಳಷ್ಟು ಹಾನಿಯನ್ನುಂಟುಮಾಡುತ್ತದೆ.
ಆದ್ದರಿಂದ, ಒಬ್ಬರು ಬೆಳಗ್ಗೆ ಎದ್ದಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ ಮತ್ತು ಅನಗತ್ಯ ಹಾನಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಆ ಕೆಲಸಗಳನ್ನು ಮಾಡಬೇಡಿ. ಹಾಗಾದರೆ ದಿನ ಚೆನ್ನಾಗಿರಬೇಕಾದರೆ ಬೆಳಗ್ಗೆ ಎದ್ದ ಕೂಡಲೆ ಯಾವ ಕೆಲಸ ಮಾಡಬಾರದು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ದೇವರ ಒಡೆದ ಫೋಟೋ ನೋಡಬೇಡಿ
ಬೆಳಗ್ಗೆ ಎದ್ದ ಕೂಡಲೇ ದೇವರ ಫೋಟೋ ನೋಡುವುದು ನಡೆದುಕೊಂಡು ಬಂದಿರುವ ಅಭ್ಯಾಸವಾಗಿದೆ. ಆದರೆ ಒಡೆದಿರುವ ದೇವ-ದೇವತೆಗಳ ಫೋಟೋಗಳು ಅಥವಾ ವಿಗ್ರಹಗಳನ್ನು ತಪ್ಪಾಗಿಯೂ ನೋಡಬೇಡಿ. ಇದು ವಾಸ್ತುಶಾಸ್ತ್ರದ ಪ್ರಕಾರ ಬಹಳ ದೊಡ್ಡ ತಪ್ಪಾಗುತ್ತದೆ. ಅಂತಹ ಯಾವುದೇ ವಿಗ್ರಹವನ್ನು ಒಡೆದು ಹಾಕಿದರೆ, ಅದನ್ನು ಒಂದು ಬಟ್ಟೆಯಲ್ಲಿ ಸುತ್ತಿ ಪೂಜಾ ಸ್ಥಳದಿಂದ ದೂರದಲ್ಲಿ ಸುರಕ್ಷಿತವಾಗಿ ಇಡಬೇಕು. ಮುಂಜಾನೆ ಎದ್ದ ನಂತರ ಆ ಛಿದ್ರಗೊಂಡ ಮೂರ್ತಿಯನ್ನು ತಪ್ಪಾಗಿಯೂ ನೋಡದಂತೆ ನೋಡಿಕೊಳ್ಳಬೇಕು. ಒಡೆದ ಫೋಟೋ ನೋಡುವುದರಿಂದ ಮನೆಯಲ್ಲಿ ಹಣದ ಸಮಸ್ಯೆ ಎದುರಾಗುತ್ತದೆ ಎಂಬುದು ಶಾಸ್ತ್ರ ಹೇಳುತ್ತದೆ.
ಬೆಳಗ್ಗೆ ಎದ್ದಾಗ ಕನ್ನಡಿ ನೋಡಬೇಡಿ
ಜ್ಯೋತಿಷಿಗಳ ಪ್ರಕಾರ, ಬೆಳಗ್ಗೆ ಎದ್ದ ಕೂಡಲೇ ಕನ್ನಡಿಯಲ್ಲಿ ತಮ್ಮ ಬಿಂಬ ನೋಡಬಾರದು. ಹೀಗೆ ಮಾಡುವುದರಿಂದ ಮನಸ್ಸಿನಲ್ಲಿ ಅಹಂಕಾರ ಬೆಳೆಯುತ್ತಿರುವುದರ ಸಂಕೇತವಂತೆ. ಈ ರೀತಿ ನಿತ್ಯವೂ ಮಾಡುವುದರಿಂದ ಆಲಸ್ಯ ಹಾಗೂ ನಿಮ್ಮಲ್ಲಿರುವ ಅಹಂ ಹೆಚ್ಚಾಗುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
ಅಡುಗೆಮನೆಯಲ್ಲಿ ಹಳೆಯ ಪಾತ್ರೆಗಳು
ವಾಸ್ತು ಶಾಸ್ತ್ರದ ಪ್ರಕಾರ ರಾತ್ರಿ ಮಲಗುವ ಮುನ್ನ ಪಾತ್ರೆಗಳನ್ನು ಶುಚಿಯಾಗಿ ತೊಳೆದಿಟ್ಟು ಮಲಗಬೇಕು. ಇಲ್ಲದಿದ್ದರೆ ನೀವು ಬೆಳಗ್ಗೆ ಎದ್ದ ಕೂಡಲೇ ಹಳೆಯ ಬಳಸಿದ ಪಾತ್ರ ಕಣ್ಣಿಗೆ ಬೀಳುತ್ತದೆ. ಇದು ಅಶುಭ ಸಂಕೇತವಾಗಲಿದೆ. ಇದರಿಂದ ಲಕ್ಷ್ಮಿ ದೇವಿ ಅತೃಪ್ತಳಾಗುತ್ತಾಳೆ ಎಂದು ಹೇಳಲಾಗುತ್ತದೆ. ಬೆಳಗ್ಗೆ ಎದ್ದಾಗ, ಒಬ್ಬ ವ್ಯಕ್ತಿಯ ಮೊದಲ ನೋಟವು ಬಳಸಿದ ಪಾತ್ರೆಗಳ ಮೇಲೆ ಬಿದ್ದಾಗ, ಆ ವ್ಯಕ್ತಿಯ ಇಡೀ ದಿನವು ಹಾಳಾಗುತ್ತದೆ. ಬಳಸಿದ ಪಾತ್ರೆಗಳನ್ನು ಅಡುಗೆ ಮನೆಯಲ್ಲಿ ಇಡುವುದರಿಂದ ಪತಿ-ಪತ್ನಿಯರ ಸಂಬಂಧದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿ ಮನೆಯ ವಾತಾವರಣ ಹದಗೆಡುತ್ತದೆ ಎನ್ನಲಾಗಿದೆ.
ನಿಮ್ಮ ನೆರಳನ್ನು ನೋಡುವುದನ್ನು ತಪ್ಪಿಸಿ
ವಾಸ್ತು ನಿಯಮಗಳ ಪ್ರಕಾರ, ಬೆಳಗ್ಗೆ ಎದ್ದ ಕೂಡಲೇ ನಿಮ್ಮ ನೆರಳನ್ನು ನೋಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಒಬ್ಬರ ಜೀವನದಲ್ಲಿ ಕತ್ತಲೆಯ ಸಂಕೇತ ಅಥವಾ ಹತ್ತಿರದ ಆತ್ಮೀಯ ಅಥವಾ ಸಾವಿನ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ನೀವು ಸಹ ಈ ತಪ್ಪು ಮಾಡಿದರೆ, ತಕ್ಷಣ ಈ ಅಭ್ಯಾಸವನ್ನು ಬಿಟ್ಟುಬಿಡಿ. ಈ ಅಭ್ಯಾಸವನ್ನು ನೀವು ಮುಂದುವರಿಸಿದರೆ, ನಿಮ್ಮ ಜೀವನದಲ್ಲಿ ನೀವು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಹಾಳಾದ ಅಥವಾ ನಿಂತ ಗಡಿಯಾರ
ಧಾರ್ಮಿಕ ವಿದ್ವಾಂಸರ ಪ್ರಕಾರ ಬೆಳಿಗ್ಗೆ ಎದ್ದ ನಂತರ ಹಾಳಾಗಿರುವ ಗಡಿಯಾರವನ್ನು ನೋಡುವುದು ಅಥವಾ ವೀಕ್ಷಿಸುವುದು, ಕೆಟ್ಟ ಸಂಕೇತವಾಗುತ್ತದೆ. ಇದರರ್ಥ ನಿಮ್ಮ ಜೀವನದಲ್ಲಿ ದೊಡ್ಡ ಬಿಕ್ಕಟ್ಟು ಬರಲಿದೆ ಎಂದು ನಂಬಲಾಗಿದೆ. ಇದನ್ನು ತಪ್ಪಿಸಲು, ಗಡಿಯಾರವು ಹಾನಿಗೊಳಗಾದ ತಕ್ಷಣ, ಅದನ್ನು ತಕ್ಷಣವೇ ಸರಿಪಡಿಸಬೇಕು. ಇಲ್ಲದಿದ್ದರೆ, ಗಡಿಯಾರವನ್ನು ಬೇರೆ ಎಲ್ಲಾದರೂ ಸ್ಥಳಾಂತರಿಸುವುದು ಉತ್ತಮ.
ಬೆಳಗ್ಗೆ ಎದ್ದಾಗ ಏನು ಮಾಡಬೇಕು..
ಅಂಗೈ ನೋಡಿದರೆ ಉತ್ತಮ
ಬೆಳಗ್ಗೆ ಎದ್ದ ತಕ್ಷಣ ಕಣ್ಣು ಬಿಡುವ ಮೊದಲು ಅಂಗೈ ಎರಡನ್ನು ಉಜ್ಜಿಕೊಂಡು ನಂತರ ಕಣ್ಣು ತೆರೆದು ಮೊದಲಿಗೆ ನಮ್ಮ ಅಂಗೈಯನ್ನು ನೋಡಬೇಕು. ಹಾಗೂ ಆ ಕ್ಷಣವೇ ದೇವರನ್ನು ಭಕ್ತಿಯಿಂದ ಬೇಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ.
ಶುಭಕರ ಫೋಟೋವನ್ನು ನೋಡಿ
ಬೆಳಗ್ಗೆ ಎದ್ದ ತಕ್ಷಣ ನಮ್ಮ ಕಣ್ಣನ್ನು ನಿಧಾನವಾಗಿ ತೆರೆದು ಮೊದಲು ಶುಭಕರ ಫೋಟೋವನ್ನು ನೋಡಬೇಕು. ಸಾಮಾನ್ಯವಾಗಿ ಜನ ತಾವು ನಂಬುವ ದೇವರ ಫೋಟೋವನ್ನು ಕೋಣೆಯಲ್ಲಿ ಹಾಕಿಕೊಂಡಿರುತ್ತಾರೆ. ಮತ್ತು ಎದ್ದ ತಕ್ಷಣ ಅದನ್ನು ನೋಡುತ್ತಾರೆ. ಇದರಿಂದ ನಮ್ಮ ಅಂದಿನ ದಿನ ಚೆನ್ನಾಗಿರುತ್ತಂತೆ.



Click it and Unblock the Notifications