Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ಬೆಂಗಳೂರಿನ ಮಹಿಳೆಗೆ ತಣ್ಣನೆಯ ದೋಸೆ ನೀಡಿದ ಹೋಟೆಲ್ಗೆ ಬಿತ್ತು 7 ಸಾವಿರ ದಂಡ
ಮಸಾಲೆ ದೋಸೆ ಆರ್ಡರ್ ಮಾಡಿದ ಮಹಿಳೆಗೆ ತಣ್ಣಗಿರುವ ದೋಸೆ ನೀಡಲಾಗಿದೆ. ಪ್ರಶ್ನಿಸಿದರೆ ಹೊಟೆಲ್ ಸಿಬ್ಬಂದಿಗಳು ಗದರಿಸಿದ್ದಾರೆ. ಆದರೆ ಮಹಿಳೆ ಕಳೆದೆರಡು ವರ್ಷದಿಂದ ಹೋರಾಟ ಮಾಡಿ ಇದೀಗ ಹೊಟೆಲ್ಗೆ ಗ್ರಾಹಕರ ಕಮಿಷನ್ ನ್ಯಾಯಾಲಯ 7,000 ರೂಪಾಯಿ ದಂಡ ವಿಧಿಸಿದೆ.
ಗ್ರಾಹಕರಿಗೆ ತಣ್ಣನೆಯ ದೋಸೆ ನೀಡಿ ಹೋಟೆಲ್ 7000 ರುಪಾಯಿ ದಂಡ ಹಾಕಿಸಿಕೊಂಡಿರುವ ಘಟನೆ ನಮ್ಮ ಬೆಂಗಳೂರಿನಲ್ಲಿ ನಡೆದಿದೆ. ಹೋಟೆಲ್ನಲ್ಲಿ ನಾವು ಕೇಳಿದ ಫುಡ್ ಬದಲಿಗೆ ಬೇರೆ ತಂದು ಕೊಡುವುದು ಅಥವಾ ತಂದು ಕೊಟ್ಟು ಆಹಾರದಲ್ಲಿ ಹುಳ, ಮತ್ತಿತ್ತರ ವಸ್ತುಗಳು ಬಿದ್ದು ಸುದ್ದಿಯಾಗಿರುವ ಅನೇಕ ಘಟನೆಗಳನ್ನು ನೋಡಿದ್ದೇವೆ, ಆದರೆ ಈ ಘಟನೆ ಮಾತ್ರ ಅಪರೂಪವಾಗಿದೆ, ಬಿಸಿ ದೋಸೆ ಸವಿಯಲು ಕಾಯುತ್ತಿದ್ದ ಮಹಿಳೆಗೆ ತಣ್ಣನೆಯ ದೋಸೆ ದಂಡ ಪಾವತಿಸಬೇಕಾದ ಗತಿ ಬಂದಿದೆ.

ಆಕೆ ಕುಟುಂಬದ ಜೊತೆಗೆ ದೋಸೆ ಸವಿಯಲು ಹೋಟೆಲ್ಗೆ ಬಂದು ಇಷ್ಟದ ದೋಸೆ ಆರ್ಡರ್ ಕೊಡ್ತಾಳೆ, ದೋಸೆ ಆರ್ಡರ್ ಮಾಡಿಆಗ ಹೋಟೆಲ್ನವರು ಆಗಷ್ಟೇ ಮಾಡಿ ದೋಸೆ ಕೊಡುತ್ತಾರೆ. ದೋಸೆಯನ್ನು ನಮ್ಮಿಂದ ಆರ್ಡರ್ ಪಡೆದ ಬಳಿಕವಷ್ಟೇ ಮಾಡುವುದು ಮೊದಲೇ ಮಾಡಿಡಲ್ಲ, ಹಾಗಾಗಿ ನಾವು ಬಿಸಿ ದೋಸೆ ಕೊಡಿ ಎಂದು ಪ್ರತ್ಯೇಕವಾಗಿ ಕೇಳಬೇಕಾಗಿಲ್ಲ, ಕೇಳದೆಯೇ ಬಿಸಿ ಬಿಸಿ ದೋಸೆ ನಮಗೆ ಸಿಗುತ್ತದೆ, ಈಕೆ ಕೂಡ ಅಷ್ಟೇ ಬಿಸಿ ದೋಸೆಗಾಗಿ ಕಾಯುತ್ತಿದ್ದಾಗ ಹೋಟೆಲ್ನವರು ನೀಡಿದ್ದು ಮೊದಲೇ ರೆಡಿಮಾಡಿಟ್ಟ ತಣ್ಣನೆಯ ದೋಸೆಯನ್ನು.
ಇದು ಬೇಡ ಬಿಸಿ ಕೊಡಿ ಎಂದಾಗ ನಕಾರ ಮಾಡಿದ ಹೋಟೆಲ್ ಸಿಬ್ಬಂದಿ
ಆಕೆಗೆ ದೋಸೆ ನೋಡಿ ಶಾಕ್ ಆಗುತ್ತೆ, ಇವರೇನು ಈ ರೀತಿ ತಂದು ಕೊಡ್ತಾ ಇದ್ದಾರಲ್ಲ ಎಂದು ಇದು ಬೇಡ ಬೇರೆ ಬಿಸಿ ದೋಸೆ ತನ್ನಿ ಎಂದಾಗ ಸಾಮಾನ್ಯವಾಗಿ ಹೋಟೆಲ್ನವರು ತಪ್ಪಾಯ್ತು ಅಂತ ಆರ್ಡರ್ ಬದಲಾಯಿಸುತ್ತಾರೆ, ಆದರೆ ಇವರು ಮಾತ್ರ ಬೇರೆ ದೋಸೆ ಹಾಕಿ ಕೊಡಲು ರೆಡಿ ಇರಲಿಲ್ಲ, ಈಕೆ ಮತ್ತೊಮ್ಮೆ ಅವರ ಬಳಿ ಕೇಳಿದಾಗ ತಮ್ಮ ಬಳಿ ತಪ್ಪು ಇಟ್ಟುಕೊಂಡು ಈಕೆಯನ್ನು ಗದರಿದ್ದಾರೆ. ಇದರ ವೀಡಿಯೋ ಕೂಡ ಇತ್ತು.
ಅವರು ಬೇರೆ ದೋಸೆ ಕೊಡದೆ ಸತಾಯಿಸಿದಾಗ ಈಕೆಗೆ ಕೋಪ ಬಂದಿದೆ, ಅದರಲ್ಲಿ ಬಿಪಿ, ಶುಗರ್ ಏರುಪೇರಾಗಿ ಆಸ್ಪತ್ರೆ ಸೇರಬೇಕಾಯ್ತು, ನಂತರ ಗ್ರಾಹಕರ ಹಿತ ರಕ್ಷಣಾ ವೇದಿಕೆಗೆ ದೂರು ಕೊಡುತ್ತಾರೆ, ಅಷ್ಟು ಮಾತ್ರವಲ್ಲ ನಿರಂತರ ಎರಡು ವರ್ಷ ಹೋರಾಟ ಮಾಡುತ್ತಾರೆ, ಕೊನೆಗೂ ಗ್ರಾಹಕರಿಗೆ ಮೋಸ ಮಾಡಿದ ಹೋಟೆಲ್ಗೆ ತಕ್ಕ ಬುದ್ಧಿ ಕಲಿಸಿದ್ದಾರೆ, ಗ್ರಾಹಕರ ಕಮಿಷನ್ ಆ ಹೋಟೆಲ್ಗೆ 7 ಸಾವಿರ ರುಪಾಯಿ ದಂಡ ವಿಧಿಸಿದೆ. ಸುಮ್ಮನೆ ಒಂದು ದೋಸೆ ಹಾಕಿದರೆ ಈ ರಂಪಾಟವೇ ಇರಲಿಲ್ಲ, ಈಗ ದಂಡ ಕಟ್ಟಬೇಕಾಗಿದೆ.
ಈಕೆಯ ಹೆಸರು ತಹರಾ ಅಂತ ಬೆಂಗಳೂರಿನ ಕೋರಮಂಗಲದ ನಿವಾಸಿ, ಇವರು ಬೆಂಗಲೂರಿನಿಂದ ಹಾಸನಕ್ಕೆ ಹೋಗುವ ಮಾರ್ಗದಲ್ಲಿ ಬೆಂಗಳೂರಿನ ಹೊರವಲಯದ ಉಡುಪಿ ಗಾರ್ಡನ್ಗೆ ದೋಸೆ ತಿನ್ನಲು ಹೋಗಿದ್ದಾರೆ, ಆವಾಗ ಈ ಘಟನೆ ನಡೆದಿದೆ. ಹೋಟೆಲ್ನವರ ತಪ್ಪಿದೆ ಎಂದು ಸಿಸಿಟಿವಿಯಿಂದ ಗೊತ್ತಾಯ್ತು, ನಂತರ ಗ್ರಾಹಕರ ಕಮಿಷನ್ 5,000 ರೂಪಾಯಿ ದಂಡ ಹಾಗೂ 2,000 ರೂಪಾಯಿ ವ್ಯಾಜ್ಯಕ್ಕಾಗಿ ಖರ್ಚು ಮಾಡಿದ ವೆಚ್ಚ ಒಟ್ಟು 7,000 ರೂಪಾಯಿ ದಂಡ ಪಾವತಿಸುವಂತೆ ಉಡುಪಿ ಗಾರ್ಡನ್ ಹೊಟೆಲ್ಗೆ ಆದೇಶ ನೀಡಿದೆ, ಮಾಡಿದುಣ್ಣೋ ಮಹರಾಯ ಅಷ್ಟೇ...



Click it and Unblock the Notifications