Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆರ್ಥಿಕ ಸಂಕಷ್ಟ ದೂರಾಗಲು 10 ದಿನ ಈ 4 ಮಂತ್ರಗಳನ್ನು ಪಠಿಸಿ
ಶ್ರೀ ಗಣೇಶನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ. ಗಣೇಶನನ್ನು ಸೆಪ್ಟೆಂಬರ್ 19ರಂದು ಪ್ರತಿಷ್ಠಾಪಿಸಲಾಗಿದೆ, ಸೆಪ್ಟೆಂಬರ್ 28ರಂದು ವಿಸರ್ಜನೆ ಮಾಡಲಾಗುವುದು. ಈ ಸಮಯದಲ್ಲಿ ನೀವು ಗಣೇಶನ ಭಕ್ತಿಯಿಂದ ಆರಾಧಿಸಿದರೆ ಗಣೇಶ ನಿಮ್ಮೆಲ್ಲಾ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಎಂದು ಹೇಳಲಾಗುವುದು. ಇನ್ನು ಆರ್ಥಿಕ ಸಂಕಟದಲ್ಲಿ ಇರುವವರು ಈ ಸಮಯದಲ್ಲಿ ಪ್ರತಿ ದಿನ ಗಣೇಶನ ಈ 4 ಮಂತ್ರಗಳನ್ನು 108 ಬಾರಿ ಪಠಿಸಿದರೆ ಗಣೇಶ ಕೃಪೆಯಿಂದ ನಿಮ್ಮೆಲ್ಲಾ ಕಷ್ಟಗಳು ದೂರಾಗಲಿದೆ.

ಗಣೇಶ ಮಂತ್ರವನ್ನು ಹೇಗೆ ಪಠಿಸಬೇಕು?
ನೀವು ಗಣೇಶ ಮಂತ್ರದ ಸಂಪೂರ್ಣ ಪ್ರಯೋಜನ ಪಡೆಯಲು ಕೆಲವೊಂದು ನಿಯಮಗಳನ್ನು ಅನುಸರಿಸಿದರೆ ಒಳ್ಳೆಯದು
* ನೀವು ಮಂತ್ರ ಪಠಣೆ ಮಾಡುವ ಮುನ್ನ ಸ್ನಾನ ಮಾಡಬೇಕು, ಮಡಿ ಬಟ್ಟೆ ಧರಿಸಬೇಕು. ಮನಸ್ಸು ಹಾಗೂ ದೇಹ ಶುದ್ಧವಾಗಿರಬೇಕು.
* ಮನಸ್ಸು ಸಂಪೂರ್ಣವಾಗಿ ಗಣೇಶನ ಮೇಲಿರಬೇಕು, ಶ್ರದ್ಧೆಯಿಂದ ಮಂತ್ರವನ್ನು ಪಠಣೆ ಮಾಡಬೇಕು.
* ಮಂತ್ರವನ್ನು ಪಠಣೆ ಮಾಡುವಾಗ ನಿಮ್ಮೆಲ್ಲಾ ಚಿಂತೆ ದೂರಾಗುವುದು, ಮಂತ್ರ ಹೇಳುವಾಗ ಮಧ್ಯದಲ್ಲಿ ಮಾತನಾಡಬೇಡಿ.
ಮಂತ್ರ 1
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ
ವಕ್ರತುಂಡ ಗಣೇಶ ಮಂತ್ರದ ಪ್ರಯೋಜನಗಳು
* ಇದು ನಿಮ್ಮೆಲ್ಲಾ ವಿಘ್ನಗಳನ್ನು ದೂರ ಮಾಡುತ್ತದೆ
* ಈ ಮಂತ್ರವನ್ನು ಪಠಣೆ ಮಾಡುವುದರಿಂದ ವೃತ್ತಿ ಜೀವನದಲ್ಲಿ ಉತ್ತಮ ಅವಕಾಶಗಳು ದೊರೆಯಲಿದೆ.
* ಈ ಮಂತ್ರ ಪಠಣೆ ಮಾಡುವುದರಿಂದ ಆತ್ಮವಿಶ್ವಾಸ ಹೆಚ್ಚಾಗುವುದು, ಮನಸ್ಸಿಗೆ ನೆಮ್ಮದಿ ಸಿಗುವುದು
ಮಂತ್ರ 2
ಓಂ ಏಕದಂತಾಯ ವಿಧ್ಮಹೆ
ವಕ್ರತುಂಡಾಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್
ಗಣೇಶ ಗಾಯತ್ರಿ ಮಂತ್ರದ ಪ್ರಯೋಜನಗಳು
* ಈ ಮಂತ್ರ ಪಠಣೆ ಮಾಡುವುದರಿಂದ ಮಾನಸಿಕ ಒತ್ತಡ ದೂರಾಗುವುದು
* ತುಂಬಾ ಸಮಯದಿಂದ ಕಾಡುತ್ತಿರುವ ಕಾಯಿಲೆಯಿಂದ ಮುಕ್ತಿ ಪಡೆಯಬಹುದು
* ಐಶ್ವರ್ಯ ಹೆಚ್ಚಾಗುವುದು, ಸೌಲಭ್ಯಗಳು ಹೆಚ್ಚಾಗುವುದು
ಮಂತ್ರ 3
ಗಜಾನನಂ ಭೂತ ಗಾಣಧಿ ಸೇವಿತಂ
ಕಪಿಥ ಜಂಬೋ ಫಲ ಸಾರ ಭಕ್ಷಿತಂ
ಉಮಾಸುತಂ ಶೋಕ ವಿನಾಶಕಾರಣಂ
ನಮಾಮಿ ವಿಘ್ನೇಶ ಪಾದ ಪಂಕಜಂ.
ಈ ಮಂತ್ರದ ಪ್ರಯೋಜನಗಳು
* ಈ ಮಂತ್ರ ಪಠಣೆ ಮಾಡುವುದರಿಂದ ಮನಸ್ಸಿಗೆ ಶಾಂತಿ ಸಿಗುವುದು
* ಈ ಮಂತ್ರ ಪಠಣೆ ಮಾಡುವುದರಿಂದ ಒತ್ತಡ ಕಡಿಮೆಯಾಗುವುದು, ಧೈರ್ಯ ಹೆಚ್ಚಾಗುವುದು.
* ಆರ್ಥಿಕ ಸಮಸ್ಯೆ ದೂರಾಗುವುದು
ಮಂತ್ರ 4
ಗಣೇಶ ಮೂಲ ಮಂತ್ರ
"ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ವರ ವರದ ಸರ್ವಜನ ಜನ್ಮಯಾ ವಶಮಾನಾಯೇ ಸ್ವಾಹಾ
ತತ್ಪುರುಷಾಯಾ ವಿದ್ಮಹೇ
ವಕ್ರತುಂಡಾಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್
ಓಂ ಶಾಂತಿಃ ಶಾಂತಿಃ ಶಾಂತಿಃ"
ಮೂಲ ಮಂತ್ರದ ಪ್ರಯೋಜನಗಳು
* ಇದು ತುಂಬಾ ಪರಿಣಾಮಕಾರಿಯಾದ ಮಂತ್ರವಾಗಿದೆ, ಇದನ್ನು ಪಠಣೆ ಮಾಡುವುದರಿಂದ ಮನಸ್ಸಿನಲ್ಲಿ ಧನಾತ್ಮಕ ಭಾವನೆಗಳು ಹೆಚ್ಚಾಗುವುದು.
* ಈ ಮಂತ್ರವನ್ನು ಸಂಪೂರ್ಣ ಭಕ್ತಿಯಿಂದ ಪಠಿಸಬೇಕು.
ಗಣೇಶ ಮಂತ್ರವನ್ನು ಹೇಗೆ ಪಠಿಸಬೇಕು?
* ಗಣೇಶ ಮಂತ್ರವನ್ನು ಗಣೇಶ ಮೂರ್ತಿ ಅಥವಾ ಫೋಟೋದ ಮುಂದೆ ಪಠಿಸಿ
* ಪೂರ್ವಕ್ಕೆ ಮುಖ ಮಾಡಿ ಕೂತು ಮಂತ್ರ ಪಠಣೆ ಮಾಡಿ
* ಮಂತ್ರವನ್ನು 108 ಬಾರಿ ಪಠಿಸಿ.



Click it and Unblock the Notifications