Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯ ಯಜಮಾನ ಅನ್ನಿಸಿಕೊಳ್ಳಬೇಕಾದರೆ ಈ ಗುಣ ಇರಬೇಕು ಅಂತಾರೆ ಚಾಣಕ್ಯ
ಒಂದು ಮನೆ ಅಂದಮೇಲೆ ಅಲ್ಲಿ ಯಜಮಾನ ಇರಲೇಬೇಕು. ಯಜಮಾನ ಆದಮೇಲೆ ಆತ ಮನೆಯ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಬೇಕು. ಮನೆಯವರ ಬೇಕು-ಬೇಡಗಳನ್ನು ಅಥೈಸಿಕೊಳ್ಳಬೇಕು. ಅಷ್ಟಕ್ಕೆ ಮಾತ್ರ ಅವನು ಯಜಮಾನ ಅನ್ನಿಸಿಕೊಳ್ಳೋದಿಲ್ಲ.
ಕೆಲವೊಂದು ಮನೆಗಳಲ್ಲಿ ನಾವು ಗಮನಿಸಿರಬಹುದು ಹೆಸರಿಗೆ ಮಾತ್ರ ಆತ ಯಜಮಾನ ಆಗಿರುತ್ತಾನೆ. ಅಧಿಕಾರ ಬೇರೆಯವರ ಕೈಯಲ್ಲಿ ಇರುತ್ತದೆ. ಇನ್ನೂ ಕೆಲವು ಮನೆಯಲ್ಲಿ ಯಜಮಾನನ ಆಡಳಿತ ಹಿಟ್ಲರ್ನ ಆಡಳಿತದ ರೀತಿಯಲ್ಲಿ ಇರುತ್ತದೆ.

ಚಾಣಕ್ಯನ ಪ್ರಕಾರ ಯಜಮಾನನಲ್ಲಿ ಕೆಲವೊಂದು ಗುಣಗಳು ಇರಬೇಕು. ಈ ಗುಣಗಳು ಇದ್ದಾಗ ಮಾತ್ರ ಆತ ಸಮರ್ಥ ಯಜಮಾನ ಅನ್ನಿಸಿಕೊಳ್ಳುತ್ತಾನೆ. ಅಷ್ಟಕ್ಕು ಚಾಣಕ್ಯನ ಪ್ರಕಾರ ಯಜಮಾನನಿಗೆ ಯಾವೆಲ್ಲಾ ಗುಣಗಳು ಇರಬೇಕು ಅನ್ನೋದನ್ನ ನೋಡೋಣ.
1. ಅನವಶ್ಯಕವಾಗಿ ಖರ್ಚು ಮಾಡಬಾರದು
ಮನೆಯಲ್ಲಿ ಮಕ್ಕಳು ಜೀವನ ಪಾಠಗಳನ್ನು ಕಲಿಯುವುದೇ ಮನೆಯ ಹಿರಿಯರನ್ನು ನೋಡಿಕೊಂಡು. ಇಂತಹ ಪರಿಸ್ಥಿತಿಯಲ್ಲಿ ಮನೆಯ ಯಜಮಾನನಾದವನು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಇನ್ನೂ ಹಣದ ವಿಚಾರದಲ್ಲಿ ಕೂಡ ಹಾಗೇ ಯಜಮಾನನಾದವನು ಅಳೆದು-ತೂಗಿ ಖರ್ಚು ಮಾಡಬೇಕು. ಅದನ್ನು ಬಿಟ್ಟು ತಾನೇ ಕುಡಿಯುವುದು, ಮೋಜು-ಮಸ್ತಿ ಮಾಡುವುದು ಇಂತಹ ದುಸ್ಚಟಗಳನ್ನು ಮೈಗೂಡಿಸಿಕೊಳ್ಳಬಾರದು. ಮಕ್ಕಳಿಗೂ ಕೂಡ ಹಣದ ಮಹತ್ವದ ಬಗ್ಗೆ ತಿಳಿ ಹೇಳಬೇಕು. ಎಷ್ಟು ಖರ್ಚು ಮಾಡಬೇಕು? ಹೇಗೆ ಖರ್ಚು ಮಾಡಬೇಕು ಅನ್ನೋದನ್ನು ಅರ್ಥೈಸಿ.
2. ಕುಟುಂಬ ಸದಸ್ಯರ ಜೊತೆಗೆ ಸಮಯ ಕಳೆಯಬೇಕು
ಚಾಣಕ್ಯನ ಪ್ರಕಾರ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಕೂಡ ಆತ ಕುಟುಂಬ ಸದಸ್ಯರಿಗಾಗಿ ಸಮಯವನ್ನು ಮೀಸಲಿಡಲೇಬೇಕು. ಸಮಯ ಸಿಕ್ಕಾಗಲೆಲ್ಲಾ ಮನೆಯವರನ್ನೆಲ್ಲಾ ಒಟ್ಟಾಗಿಸಿ ಅವರ ಜೊತೆಗೆ ಸುಂದರ ಕ್ಷಣಗಳನ್ನು ಕಳೆಯಬೇಕು. ಆಗ ಅವರ ಕಷ್ಟ-ಸುಖ ,ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಹುದು. ಮನೆಯವರೊಂದಿಗೆ ಬರೆತು ಮಾತನಾಡಿದಾಗ ಮಾತ್ರ ಮನೆಯಲ್ಲಿ ಏನಾಗ್ತಿದೆ ಅನ್ನೋದು ಗೊತ್ತಾಗೋದು.
3. ಸಹೋದರರ ಜೊತೆಗೆ ಸಂಬಂಧ ಚೆನ್ನಾಗಿರಲಿ
ಚಾಣಕ್ಯನ ಪ್ರಕಾರ ಮನೆಯಲ್ಲಿ ಸಂತೋಷ, ಶಾಂತಿ, ನೆಮ್ಮದಿ ನೆಲೆಸಿರಬೇಕೆಂದರೆ ಯಜಮಾನನಾದವನು ತನ್ನ ಸಹೋದರ ಹಾಗೂ ಸಹೋದರಿ ಜೊತೆಗೆ ಉತ್ತಮ ಬಾಂಧವ್ಯದಿಂದಿರಬೇಕು. ಸಹೋದರರು ಕಚ್ಚಾಡೋದು ಮನೆಗೆ ಖಂಡಿತ ಶೋಭೆ ತರೋದಿಲ್ಲ. ಆದಷ್ಟು ಮನೆಯವರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಮನೆ ನಡೆಸಬೇಕು.
ಬಡವರರಾಗಲಿ ಶ್ರೀಮಂತರಾಗಲಿ ಮನೆಯಲ್ಲಿ ಯಜಮಾನನ ಪಾತ್ರ ತುಂಬಾನೇ ಮುಖ್ಯವಾಗುತ್ತದೆ. ಮನೆಯನ್ನು ಯಾರು ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಾರೋ ಅಂತಹ ಕುಟುಂಬದಲ್ಲಿ ಸಂತೋಷದಿಂದಿರುತ್ತದೆ.



Click it and Unblock the Notifications














