Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಮನೆಯ ಯಜಮಾನ ಅನ್ನಿಸಿಕೊಳ್ಳಬೇಕಾದರೆ ಈ ಗುಣ ಇರಬೇಕು ಅಂತಾರೆ ಚಾಣಕ್ಯ
ಒಂದು ಮನೆ ಅಂದಮೇಲೆ ಅಲ್ಲಿ ಯಜಮಾನ ಇರಲೇಬೇಕು. ಯಜಮಾನ ಆದಮೇಲೆ ಆತ ಮನೆಯ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಬೇಕು. ಮನೆಯವರ ಬೇಕು-ಬೇಡಗಳನ್ನು ಅಥೈಸಿಕೊಳ್ಳಬೇಕು. ಅಷ್ಟಕ್ಕೆ ಮಾತ್ರ ಅವನು ಯಜಮಾನ ಅನ್ನಿಸಿಕೊಳ್ಳೋದಿಲ್ಲ.
ಕೆಲವೊಂದು ಮನೆಗಳಲ್ಲಿ ನಾವು ಗಮನಿಸಿರಬಹುದು ಹೆಸರಿಗೆ ಮಾತ್ರ ಆತ ಯಜಮಾನ ಆಗಿರುತ್ತಾನೆ. ಅಧಿಕಾರ ಬೇರೆಯವರ ಕೈಯಲ್ಲಿ ಇರುತ್ತದೆ. ಇನ್ನೂ ಕೆಲವು ಮನೆಯಲ್ಲಿ ಯಜಮಾನನ ಆಡಳಿತ ಹಿಟ್ಲರ್ನ ಆಡಳಿತದ ರೀತಿಯಲ್ಲಿ ಇರುತ್ತದೆ.

ಚಾಣಕ್ಯನ ಪ್ರಕಾರ ಯಜಮಾನನಲ್ಲಿ ಕೆಲವೊಂದು ಗುಣಗಳು ಇರಬೇಕು. ಈ ಗುಣಗಳು ಇದ್ದಾಗ ಮಾತ್ರ ಆತ ಸಮರ್ಥ ಯಜಮಾನ ಅನ್ನಿಸಿಕೊಳ್ಳುತ್ತಾನೆ. ಅಷ್ಟಕ್ಕು ಚಾಣಕ್ಯನ ಪ್ರಕಾರ ಯಜಮಾನನಿಗೆ ಯಾವೆಲ್ಲಾ ಗುಣಗಳು ಇರಬೇಕು ಅನ್ನೋದನ್ನ ನೋಡೋಣ.
1. ಅನವಶ್ಯಕವಾಗಿ ಖರ್ಚು ಮಾಡಬಾರದು
ಮನೆಯಲ್ಲಿ ಮಕ್ಕಳು ಜೀವನ ಪಾಠಗಳನ್ನು ಕಲಿಯುವುದೇ ಮನೆಯ ಹಿರಿಯರನ್ನು ನೋಡಿಕೊಂಡು. ಇಂತಹ ಪರಿಸ್ಥಿತಿಯಲ್ಲಿ ಮನೆಯ ಯಜಮಾನನಾದವನು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಇನ್ನೂ ಹಣದ ವಿಚಾರದಲ್ಲಿ ಕೂಡ ಹಾಗೇ ಯಜಮಾನನಾದವನು ಅಳೆದು-ತೂಗಿ ಖರ್ಚು ಮಾಡಬೇಕು. ಅದನ್ನು ಬಿಟ್ಟು ತಾನೇ ಕುಡಿಯುವುದು, ಮೋಜು-ಮಸ್ತಿ ಮಾಡುವುದು ಇಂತಹ ದುಸ್ಚಟಗಳನ್ನು ಮೈಗೂಡಿಸಿಕೊಳ್ಳಬಾರದು. ಮಕ್ಕಳಿಗೂ ಕೂಡ ಹಣದ ಮಹತ್ವದ ಬಗ್ಗೆ ತಿಳಿ ಹೇಳಬೇಕು. ಎಷ್ಟು ಖರ್ಚು ಮಾಡಬೇಕು? ಹೇಗೆ ಖರ್ಚು ಮಾಡಬೇಕು ಅನ್ನೋದನ್ನು ಅರ್ಥೈಸಿ.
2. ಕುಟುಂಬ ಸದಸ್ಯರ ಜೊತೆಗೆ ಸಮಯ ಕಳೆಯಬೇಕು
ಚಾಣಕ್ಯನ ಪ್ರಕಾರ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಕೂಡ ಆತ ಕುಟುಂಬ ಸದಸ್ಯರಿಗಾಗಿ ಸಮಯವನ್ನು ಮೀಸಲಿಡಲೇಬೇಕು. ಸಮಯ ಸಿಕ್ಕಾಗಲೆಲ್ಲಾ ಮನೆಯವರನ್ನೆಲ್ಲಾ ಒಟ್ಟಾಗಿಸಿ ಅವರ ಜೊತೆಗೆ ಸುಂದರ ಕ್ಷಣಗಳನ್ನು ಕಳೆಯಬೇಕು. ಆಗ ಅವರ ಕಷ್ಟ-ಸುಖ ,ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಹುದು. ಮನೆಯವರೊಂದಿಗೆ ಬರೆತು ಮಾತನಾಡಿದಾಗ ಮಾತ್ರ ಮನೆಯಲ್ಲಿ ಏನಾಗ್ತಿದೆ ಅನ್ನೋದು ಗೊತ್ತಾಗೋದು.
3. ಸಹೋದರರ ಜೊತೆಗೆ ಸಂಬಂಧ ಚೆನ್ನಾಗಿರಲಿ
ಚಾಣಕ್ಯನ ಪ್ರಕಾರ ಮನೆಯಲ್ಲಿ ಸಂತೋಷ, ಶಾಂತಿ, ನೆಮ್ಮದಿ ನೆಲೆಸಿರಬೇಕೆಂದರೆ ಯಜಮಾನನಾದವನು ತನ್ನ ಸಹೋದರ ಹಾಗೂ ಸಹೋದರಿ ಜೊತೆಗೆ ಉತ್ತಮ ಬಾಂಧವ್ಯದಿಂದಿರಬೇಕು. ಸಹೋದರರು ಕಚ್ಚಾಡೋದು ಮನೆಗೆ ಖಂಡಿತ ಶೋಭೆ ತರೋದಿಲ್ಲ. ಆದಷ್ಟು ಮನೆಯವರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಮನೆ ನಡೆಸಬೇಕು.
ಬಡವರರಾಗಲಿ ಶ್ರೀಮಂತರಾಗಲಿ ಮನೆಯಲ್ಲಿ ಯಜಮಾನನ ಪಾತ್ರ ತುಂಬಾನೇ ಮುಖ್ಯವಾಗುತ್ತದೆ. ಮನೆಯನ್ನು ಯಾರು ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಾರೋ ಅಂತಹ ಕುಟುಂಬದಲ್ಲಿ ಸಂತೋಷದಿಂದಿರುತ್ತದೆ.



Click it and Unblock the Notifications


