Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ಚಾಣಕ್ಯನ ಪ್ರಕಾರ ಈ ಸೂತ್ರಗಳನ್ನು ಪಾಲಿಸಿದ್ರೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳಲು ಸಾಧ್ಯವೇ ಇಲ್ಲ!
ಮದುವೆ ಅನ್ನೋದು ಒಂದು ಪವಿತ್ರವಾದ ಬಂಧ. ಇದನ್ನು ಪ್ರೀತಿ ಹಾಗೂ ನಂಬಿಕೆಯ ಮೇಲೆ ಕಟ್ಟಲಾಗಿದೆ. ಕೆಲವೊಂದು ಸಲ ಈ ಗಟ್ಟಿಯಾದ ಬಂಧವು ಕೂಡ ಕೆಲವೊಂದು ಸಲ ಸಡಿಲವಾಗಿ ಬಿಡುತ್ತೆ. ಸಂಬಂಧದಲ್ಲಿ ಒಂದು ಸಲ ನಂಬಿಕೆಯನ್ನು ಕಳೆದುಕೊಂಡರೆ ಅದನ್ನು ಮತ್ತೆ ಮರಳಿ ಪಡೆಯೋದು ತುಂಬಾನೇ ಕಷ್ಟ. ಹೀಗಾಗಿ ಮದುವೆ ಎಂಬ ಮೂರು ಗಂಟಿನ ನಂಟನ್ನು ಕಡೆವರೆಗೂ ಉಳಿಸಿಕೊಳ್ಳಬೇಕಾದರೆ ಚಾಣಕ್ಯನ ಈ ತತ್ವಗಳನ್ನು ಪಾಲನೆ ಮಾಡಲೇಬೇಕು.
ಚಾಣಕ್ಯ ಒಬ್ಬ ಪ್ರಮುಖ ತತ್ವಜ್ಞಾನಿ, ವಿದ್ವಾಂಸ ಹಾಗೂ ರಾಜಕೀಯ ಶಾಸ್ತ್ರಜ್ಞ ಅನ್ನೋ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇವರು ಹಾಕಿ ಕೊಟ್ಟ ಹಾದಿಯಲ್ಲಿ ನಡೆದವರೂ ಎಂದಿಗೂ ಸೋಲನ್ನ ಕಂಡೇ ಇಲ್ಲ. ಅದೇ ರೀತಿ ದಾಂಪತ್ಯ ಜೀವನ ಯಾವುದೇ ಅಡೆತಡೆಗಳಿಲ್ಲದೇ ಚೆನ್ನಾಗಿ ಸಾಗಬೇಕೆಂದರೆ ಚಾಣಕ್ಯನ ಈ ಸೂತ್ರಗಳನ್ನು ಪಾಲನೆ ಮಾಡೋದನ್ನು ಮರೀಬೇಡಿ. ಹಾಗಾದ್ರೆ ದಾಂಪತ್ಯ ಜೀವನಕ್ಕಾಗಿ ಚಾಣಕ್ಯ ಹೇಳಿಕೊಟ್ಟಿರುವ ಆ ತತ್ವಗಳ ಬಗ್ಗೆ ತಿಳಿಯೋಣ.

1. ಪ್ರೀತಿ ಎಂದಿಗೂ ಸೋಲೋದಿಲ್ಲ
ಪ್ರೀತಿಯು ಸಂಬಂಧದ ಅಡಿಪಾಯ ಇದ್ದ ಹಾಗೆ. ಚಾಣಕ್ಯನ ಪ್ರಕಾರ ಗಂಡ-ಹೆಂಡತಿ ಈ ಅಡಿಪಾಯವನ್ನು ಕೆಡವಲು ಬಿಡಬಾರದು. ಅವರಿಬ್ಬರು ಒಬ್ಬರನ್ನೊಬ್ಬರು ತುಂಬಾನೇ ಪ್ರೀತಿ ಮಾಡಬೇಕು ಹಾಗೂ ಆ ಪ್ರೀತಿಯನ್ನು ಎಂದಿಗೂ ಸಾಯೋದಕ್ಕೆ ಬಿಡಬಾರದು. ಯಾವುದೇ ಸಂದರ್ಭದಲ್ಲಿ ಒಬ್ಬರನ್ನೊಬ್ಬರು ಬಿಟ್ಟು ಕೊಡಬಾರದು. ಸಂಕಷ್ಟದ ಸಮಯದಲ್ಲಿ ಒಬ್ಬರಿಗೆ ಮತ್ತೊಬ್ಬರು ಹೆಗಲಾಗಿ ನಿಲ್ಲಬೇಕು. ಖುಷಿಯಾಗಿ ಇರೋದು ಮಾತ್ರ ಪ್ರೀತಿಯಲ್ಲ. ಸಂಗಾತಿಯ ಸಂಕಷ್ಟಕ್ಕೆ ಸ್ಪಂದಿಸೋದೇ ನಿಜವಾದ ಪ್ರೀತಿ. ಹೀಗಿದ್ದಾಗ ಮಾತ್ರ ಸಂಬಂಧ ಮತ್ತಷ್ಟು ಗಟ್ಟಿಯಾಗಲು ಸಾಧ್ಯ.
2. ಒಬ್ಬರಿಗೊಬ್ಬರು ಗೌರವ ಕೊಡಬೇಕು
ದಂಪತಿಗಳ ಮಧ್ಯೆ ಗೌರವ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಚಾಣಕ್ಯನ ಪ್ರಕಾರ ಗಂಡನಷ್ಟೇ ಹೆಂಡತಿಯು ಕೂಡ ಗೌರವ ಪಡೆದುಕೊಳ್ಳೋದಿಕ್ಕೆ ಅರ್ಹಳು. ಕೆಲವೊಂದು ಮನೆಗಳಲ್ಲಿ ಹೇಗಾಗುತ್ತೆ ಎಂದರೆ ಪತ್ನಿಯು ಪತಿಗೆ ಗೌರವ ನೀಡುತ್ತಾಳೆ. ಆದರೆ ಪತಿಯಾದವನು ಹೆಂಡತಿಯನ್ನು ಕೀಳಾಗಿ ನಡೆಸಿಕೊಳ್ಳುತ್ತಾನೆ. ಇದು ಸರಿಯಾದ ಪದ್ಧತಿಯಲ್ಲ. ಹೆಂಡತಿಯ ಗೌರವಕ್ಕೆ ಧಕ್ಕೆ ಬಾರದ ಹಾಗೇ ನೋಡಿಕೊಳ್ಳೋದು ಪತಿಯಾದವನ ಕರ್ತವ್ಯ.
ಗೌರವ ಎಂದರೆ ಒಬ್ಬರನ್ನೊಬ್ಬರು ಪೂಜ್ಯ ಭಾವದಲ್ಲಿ ಕಾಣಬೇಕು. ಕೆಟ್ಟ ಮಾತುಗಳಿಂದ ನಿಂದಿಸೋದಾಗಲಿ, ಹೊಡೆಯೋದು, ಬಡಿಯೋದನ್ನು ಮಾಡಲೇಬಾರದು. ಗಂಡ-ಹೆಂಡತಿಯೆಂದ ಮೇಲೆ ಆ ಸಂಬಂಧದಲ್ಲಿ ಜಗಳ, ಮನಸ್ಥಾಪ, ಬಿರುಕು ಉಂಟಾಗೋದು ಸಾಮಾನ್ಯ. ಹಾಗಂತ ಅದನ್ನೇ ದೊಡ್ಡದು ಮಾಡುತ್ತಾ, ಒಬ್ಬರಿಗೊಬ್ಬರು ಅಗೌರವ ತೋರಲೇಬಾರದು. ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎನ್ನುವ ಹಾಗೆ ಅದನ್ನು ಸರಿಪಡಿಸಿಕೊಂಡು ಜೀವನ ಸಾಗಿಸಬೇಕು.
3. ದಾಂಪತ್ಯದಲ್ಲಿ ಸಂವಹನ ನಿರಂತರವಾಗಿರಬೇಕು
ಉತ್ತಮವಾದ ಸಂವಹನವು ದಾಂಪತ್ಯದಲ್ಲಿ ಸಂತೋಷಕ್ಕೆ ಕಾರಣವಾಗುತ್ತದೆ. ಆದರೆ ದಂಪತಿಗಳ ಮಧ್ಯೆ ಕೊಂಚ ಜಗಳ ಉಂಟಾದಾಗ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡೋದಕ್ಕೆ ಇಷ್ಟ ಪಡೋದಿಲ್ಲ. ದಾಂಪತ್ಯದಲ್ಲಿ ಎಂತಹದ್ದೇ ಸಮಸ್ಯೆ ಎದುರಾದರೂ ಕೂಡ ಅದನ್ನು ನಿಭಾಯಿಸಿಕೊಂಡು ಹೋಗಬೇಕೇ ಹೊರತು ಮಾತು ಬಿಡುವುದು ಅದಕ್ಕೆ ಪರಿಹಾರವಲ್ಲ.
ಮಾತು ಮನೆಕೆಡಿಸಿತು ಅಂತಾರಲ್ಲ, ಅದೇ ರೀತಿ ಮಾತನಾಡದೇ ಇದ್ದರೂ ಕೂಡ ಮನೆ ಕೆಡುತ್ತದೆ. ಸಣ್ಣ ಜಗಳಕ್ಕೆ ಮಾತು ಬಿಟ್ಟರೆ ಏನು ಪ್ರಯೋಜನ? ಇದರಿಂದ ನಿಮ್ಮ ಇಬ್ಬರ ನಡುವಿನ ಅಂತರ ಹೆಚ್ಚಾಗುತ್ತೆ, ಸಂಬಂಧ ಹಾಳಾಗುತ್ತೆ. ದಾಂಪತ್ಯದಲ್ಲಿ ಒಂದು ಸಾರಿ ಬಿರುಕು ಕಂಡು ಬಂದರೆ ಆ ಬಿರುಕನ್ನು ಸರಿ ಪಡಿಸೋದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಗಂಡನಾಗಲಿ/ಹೆಂಡತಿಯಾಗಲಿ ಬಿರುಕಿಗೆ ಅವಕಾಶ ಕೊಡಲೇಬಾರದು.
ಚಾಣಕ್ಯನ ಪ್ರಕಾರ ಪ್ರೀತಿ, ಗೌರವ ಮತ್ತುಸಂವಹನ ದಾಂಪತ್ಯವನ್ನು ಮತ್ತಷ್ಟು ಗಟ್ಟಿ ಮಾಡುತ್ತೆ ಎಂದು ನಂಬಿದ್ದರು. ಸುಂದರವಾದ ದಾಂಪತ್ಯಕ್ಕೆ ಚಾಣಕ್ಯನ ಸೂತ್ರಗಳನ್ನು ಪಾಲಿಸೋದು ತುಂಬಾನೇ ಮುಖ್ಯ.



Click it and Unblock the Notifications
