Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ನೀಲಿ ಶಂಖ ಪುಷ್ಪದಲ್ಲಿ ವಿಶೇಷ 'ನೀಲಿ ಬಿರಿಯಾನಿ'..! ನೋಡಿದ್ರೆ ದಂಗಾಗ್ತಿರ.!
ಇತ್ತೀಚಿನ ದಿನಗಳಲ್ಲಿ ನಾವು ಚಿತ್ರ ವಿಚಿತ್ರ ರೀತಿಯ ಫುಡ್ಗಳನ್ನು ನೋಡಿದ್ದೇವೆ. ಅದ್ರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುವ ಭರದಲ್ಲಿ ಜನ ಯಾವ ರೀತಿಯ ಫುಡ್ ಬೇಕಾದರು ತಿನ್ನುವ ಒಂದಿಷ್ಟು ಅಸಹ್ಯಕರ ವಿಡಿಯೋಗಳು ಸಹ ಹರಿದಾಡುತ್ತವೆ. ಅವು ಎಷ್ಟು ವಿಚಿತ್ರವಾಗಿರುತ್ತೆ ಅಂದ್ರೆ ನೀವು ಊಹಿಸಲು ಸಹ ಸಾಧ್ಯವಿಲ್ಲ.
ಈ ರೀತಿ ವಿಚಿತ್ರ ಆಹಾರದಲ್ಲಿ ಈಗ ಅವತಾರ್ ಬಿರಿಯಾನಿಯೊಂದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಹೌದು ಅವತಾರ್ ಎಂದರೆ ಇಂಗ್ಲಿಷ್ನ ಅವತಾರ್ ಸಿನಿಮಾದ ರೀತಿ ನೀಲಿ ಬಣ್ಣದ ಬಿರಿಯಾನಿ ಇದಾಗಿದೆ. ಬಿರಿಯಾನಿ ಅಂದರೆ ಅದು ಕೇಸರಿ ಬಣ್ಣದಲ್ಲಿರುವುದೇ ಹಚ್ಚು ಆದರೆ ಇಲ್ಲಿ ಕಡು ನೀಲಿ ಬಣ್ಣದಲ್ಲಿ ಕಂಡುಬಂದಿರುವುದು ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ.

ವೈರಲ್ ವೀಡಿಯೊದಲ್ಲಿ ಪ್ರದರ್ಶಿಸಲಾದ ಬಿರಿಯಾನಿ ನೀಲಿ ಬಣ್ಣದ ಹೂವು ತುಪ್ಪ-ಇನ್ಫ್ಯೂಸ್ಡ್ ರೈಸ್ ಕಾಣಬಹುದು. ಆದರೆ ಈ ರೀತಿಯ ಖಾದ್ಯ ಇದೇ ಮೊದಲು ನೋಡುತ್ತಿರುವ ಮಂದಿ ಶಾಕ್ ಆಗಿದ್ದಾರೆ, ಅಲ್ಲದೆ ಇದನ್ನು ಸೇವಿಸುವ ಧೈರ್ಯ ಯಾರಿಗೆ ಇದೆ ಎಂದು ಪ್ರಶ್ನಿಸುತ್ತಿದ್ದಾರೆ.
ಏನಿದು ಈ ಅವತಾರ್ ಬಿರಿಯಾನಿ?
ನೀಲಿ ಬಣ್ಣದ ಆಹಾರ ಪದಾರ್ಥಗಳು ತಮ್ಮ ವಿಶಿಷ್ಟವಾದ ವರ್ಣಗಳಿಂದ ಗಮನ ಸೆಳೆಯುತ್ತವೆ, ಅವುಗಳ ವಿಶಿಷ್ಟ ನೋಟದಿಂದ ನಮ್ಮನ್ನು ಆಕರ್ಷಿಸುತ್ತವೆ. ಇತ್ತೀಚೆಗೆ, ನೀಲಿ ಬಣ್ಣದ ತುಪ್ಪದ ರೈಸ್ ಪಾಕವಿಧಾನ ಸಿಕ್ಕಾಪಟ್ಟೆ ವೈರಲ್ ಆಗಿದೆ. @thecookingamma ಅವರು Instagram ಹಂಚಿಕೊಂಡಿರುವ ವಿಡಿಯೋದಲ್ಲಿ ನೀಲಿ ಬಣ್ಣದ ಹೂವು ಬಳಸಿ ಮಾಡಲಾಗಿದೆ.
ಇದನ್ನು ನೀಲಿ ಶಂಖ ಎನ್ನಲಾಗುತ್ತದೆ. ಎಲ್ಲರ ಮನೆಯಲ್ಲೂ ಈ ಪುಷ್ಪ ಸಾಮಾನ್ಯವಾಗಿ ಕಂಡುಬರುತ್ತದೆ. ಈ ಹೂವು ಶಿವನಿಗೆ ಅತ್ಯಂತ ಇಷ್ಟದ ಹೂವು ಎನ್ನಲಾಗುತ್ತದೆ. ಈ ಹೂವಿನ ಬಣ್ಣದಿಂದ ಈ ವೆಜ್ ಬಿರಿಯಾನಿ ಮಾಡಲಾಗಿದೆ.
ವಿಡಿಯೋದಲ್ಲಿ ಏನಿದೆ.?
ಮೊದಲು ಒಂದು ಮಡಕೆಯಲ್ಲಿ ನೀರು ಇಟ್ಟು ಅದು ಕುದಿಯುತ್ತಿರುವಾಗ ಅದಕ್ಕೆ ನೀಲಿ ಶಂಖ ಪುಷ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಲಾಗುತ್ತದೆ. ಈ ಹೂವುಗಳು ನೀರಿನಲ್ಲಿ ಕುದಿಯುವಾಗ ನೀಲಿ ಬಣ್ಣ ಬಿಡುತ್ತವೆ, ಬಳಿಕ ಹೂವುಗಳನ್ನು ಕುದಿಯುವ ನೀರಿನಿಂದ ತೆಗೆದು ಹೊರಗಿಟ್ಟು ಅದೇ ನೀರಿಗೆ ಬಿರಿಯಾನಿ ಅಕ್ಕಿ ಹಾಕಲಾಗುತ್ತದೆ.
ಈ ಅಕ್ಕಿಯಲ್ಲಿ ಅನ್ನ ಮಾಡಿದಾಗ ಅದು ನೀಲಿಯಾಗುತ್ತದೆ. ಈ ಬಣ್ಣದ ಅನ್ನ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ವಿಡಿಯೋ 13 ಮಿಲಿಯನ್ಗೂ ಅಧಿಕ ವೀಕ್ಷಣೆ ಕಂಡಿದೆ. ಆದರೆ ಕೆಲವರು ಈ ವಿಡಿಯೋ ನೋಡಿ ಎಚ್ಚರಿಕೆಯ ಜೊತೆ ಈ ಖಾದ್ಯ ಮಾಡುವುದು ಉತ್ತಮ ಎಂಬ ಮಾತು ಕೇಳಿಬಂದಿದೆ. ಏಕೆಂದರೆ ಈ ಪುಷ್ಪದಿಂದ ಹೊರಬರುವ ಬಣ್ಣ ಕುದಿಯುವ ನೀರಿನಲ್ಲಿ ಬೆರೆತಾಗ ಅದು ಆರೋಗ್ಯಕ್ಕೆ ಉತ್ತಮವೇ ಅಥವಾ ಅನಾರೋಗ್ಯ ಕಾಡಬಹುದು ಎಂಬ ಕುರಿತು ಯಾವ ಪುರಾವೆಗಳಿಲ್ಲ. ಹೀಗಾಗಿ ಈ ರೀತಿ ಹೊಸ ಹೊಸ ಪ್ರಯೋಗ ಅದರಲ್ಲೂ ಆಹಾರದ ವಿಚಾರಲ್ಲಿ ಮಾಡುವುದು ಸ್ವಲ್ಪ ಅಪಾಯಕಾರಿ ಎಂಬ ಅಭಿಪ್ರಾಯವೂ ಕೇಳಿಬಂದಿದೆ.
ಸುದ್ದಿಯಾಗಿತ್ತು ಇರುವೆಯ ಕಾಕ್ಟೈಲ್
ಮುಂಬೈ ಮೂಲದ ಕಂಟೆಂಡ್ ಕ್ರಿಯೇಟರ್ ನಿತಿನ್ ತಿವಾರಿ ಈಗ ಇರುವೆಯ ಕಾಕ್ಟೈಲ್ ಸೇವಿಸಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಆಕ್ರೋಶವೂ ಕೇಳಿಬಂದಿದೆ. ಮುಂಬೈನ ಬಾಂದ್ರಾದ ಹಿಲ್ ರೋಡ್ನಲ್ಲಿರುವ ಸೀಫಾ ರೆಸ್ಟೋರೆಂಟ್ನಲ್ಲಿ ಈ ರೀತಿ ಕಪ್ಪು ಇರುವೆಯ ಕಾಕ್ಟೈಲ್ ನೀಡುತ್ತಾರೆ ಎಂದು ಹೇಳಲಾಗಿತ್ತು.
ವೀಡಿಯೊದಲ್ಲಿ, ವ್ಲಾಗರ್ ಕಾಕ್ಟೈಲ್ ಸೇವಿಸಿ ರುಚಿಕರ ಎಂದು ವಿವರಿಸುವುದಲ್ಲದೆ, ಮೆನು ಕಾರ್ಡ್ನಲ್ಲಿ ಸ್ನೀಕ್ ಪೀಕ್ ಅನ್ನು ಒದಗಿಸುತ್ತದೆ, ಪಾನೀಯದ ಹೆಸರು 'ದಿ ಆಂಟ್ಜ್' ಎಂಬುದಾಗಿ ಬರೆಯಲಾಗಿದೆ. ಇದರಲ್ಲಿ ಮೆಜ್ಕಲ್, ಟಕಿಲಾ ಬ್ಲಾಂಕೊ, ದ್ರಾಕ್ಷಿಹಣ್ಣು, ವೆಟಿವರ್, ಸಲೈನ್ ಮತ್ತು, ವಿಶೇಷವಾಗಿ, ಕಪ್ಪು ಇರುವೆಗಳನ್ನು ಹಾಕಲಾಗಿತ್ತು, ಇದೊಂದು ವಿಶೇಷ ಮತ್ತು ವಿಲಕ್ಷಣ ಡ್ರಿಂಕ್ ಎಂದು ನೆಟ್ಟಿಗರು ಕಿಡಿ ಕಾರಿದ್ದರು.



Click it and Unblock the Notifications