Latest Updates
-
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಲಿನ ಬೇಗೆಯಲ್ಲಿ ಮದುವೆ ಸಂಭ್ರಮ: ಅತಿಥಿಗಳ ಆರೋಗ್ಯ ಕಾಪಾಡಲು ಪ್ಲಾನ್ ಬದಲಾಯಿಸುವುದು ಅನಿವಾರ್ಯವೇ? -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಗಾರ್ಡನ್ ಮತ್ತು ಮನೆಯನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಹೀಟ್ವೇವ್ ಎಚ್ಚರಿಕೆ: ಬಿಸಿಲ ಬೇಗೆಯಿಂದ ಬಚಾವಾಗಲು ಈ ಸರಳ ಆಹಾರ ಕ್ರಮಗಳನ್ನು ಮರೆಯದಿರಿ -
ದೆಹಲಿ ಬಿಸಿಲು: ಸುಡುವ ತಾಪಮಾನದಲ್ಲೂ ಸ್ಟೈಲಿಶ್ ಆಗಿ ಕಾಣಲು ವೈರಲ್ ಆಗ್ತಿವೆ ಈ ಸಿಂಪಲ್ ಹ್ಯಾಕ್ಸ್! -
ಮಳೆಗಾಲದ ಬೆಳಗಿನ ವರ್ಕೌಟ್: ನಿಮ್ಮ ಪ್ಲಾನ್ ಉಲ್ಟಾಪಲ್ಟಾ ಆಗದಿರಲಿ, ಈ ಮುನ್ನೆಚ್ಚರಿಕೆ ಮರೆಯದಿರಿ!
ಭರತ್ ಜೈನ್: ಈತ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ, ಈತ ಮುಂಬಯಿಯ ಕೋಟಿ ಬೆಲೆಯ ಫ್ಲ್ಯಾಟ್ನ ಒಡೆಯ ಕೂಡ ಹೌದು!
ಈ ಸ್ಟೋರಿ ಓದಿದ ಮೇಲೆ ಭಿಕ್ಷುಕರಿಗೆ ದುಡ್ಡು ಹಾಕುವಾಗ ಖಂಡಿತ ಒಂದು ಕ್ಷಣ ಯೋಚಿಸುತ್ತೀರಿ, ಯಾರಿಗೆ ಗೊತ್ತು ನಮ್ಮಿಂದ ಭಿಕ್ಷೆ ಬೇಡುತ್ತಿರುವ ಅವನು ನಮಗಿಂತಲೂ ಹತ್ತು ಪಟ್ಟು ಅಲ್ಲಲ್ಲ ನೂರು ಪಟ್ಟು ಶ್ರೀಮಂತನಿರಬಹುದು! ಹೌದು ಈ ಕೋಟ್ಯಾಧಿಪತಿ ಭಿಕ್ಷುಕನ ಬಗ್ಗೆ ತಿಳಿದ ಮೇಲೆ ನಿಮಗೆ ಖಂಡಿತ ಅನಿಸದಿರಲ್ಲ.
ಇದೀಗ ಈ ಭಿಕ್ಷುಕ ಸಕತ್ ಸುದ್ದಿಯಲ್ಲಿದ್ದಾನೆ, ಅವನು ಮಾಡಿರುವ ಆಸ್ತಿ ಕೇಳಿದರೆ ಒಂದು ಕ್ಷಣ ನಮ್ಮ ತಲೆ ಗಿರ್ .. ಅಂತ ಸುತ್ತುವುದು, ಈತ ಅಷ್ಟೊಂದು ಶ್ರೀಮಂತ, ಈತನ ಆದಾಯ ಮೂಲ ಭಿಕ್ಷಾಟನೆ!

ಈ ಭಿಕ್ಷುಕನ ಹೆಸರು ಭರತ್ ಜೈನ್, ವಿಶ್ವದ ಶ್ರೀಮಂತ ಭಿಕ್ಷುಕ ಈತ, ಇತ್ತೀಚೆಗೆ ಎಕಾನಿಮಿಕ್ ಟೈಮ್ಸ್ ಈತ ₹7.5 ಕೋಟಿಯ ಒಡೆಯ ಎಂದು ಹೇಳಿದೆ. ಈತ ಮುಂಬಯಿನಲ್ಲಿ 1.2 ಕೋಟಿ ಬೆಲೆ ಬಾಳುವ 2 BHK ಫ್ಲ್ಯಾಟ್ ಹೊಂದಿದ್ದಾಬೆ, ಅಷ್ಟು ಮಾತ್ರವಲ್ಲ ತಾಣೆಯಲ್ಲಿ ಎರಡು ಶಾಪ್ ಇದ್ದು ಅದರಿಂದ ತಿಂಗಳಿಗೆ ರುಪಾಯಿ 30, 000 ಬಾಡಿಗೆ ಬರುತ್ತದೆ.
ಇಷ್ಟೆಲ್ಲಾ ಆಸ್ತಿ ಹೊಂದಿದ್ದರೂ ಭಿಕ್ಷೆ ಬೇಡಿ ಜೀವನ
ಹೌದು ಈತ ಇಷ್ಟೆಲ್ಲಾ ಆಸ್ತಿ ಹೊಂದಿದ್ದರೂ ದಿನನಿತ್ಯ ಭಿಕ್ಷೆ ಬೇಡಿ ಜೀವನ ನಡೆಸುತ್ತಾನೆ. ಕನ್ನಡದಲ್ಲಿ ಸಾಧುಕೋಕಿಲಾ ಅವರ ಚಿತ್ರ ನೆನೆಪಿಗೆ ಬರಬಹುದು ಅಲ್ವಾ? ಈತನ ಸ್ಟೋರಿ ಥೇಟ್ ಹಾಗೆಯೇ ಇರಲಿದೆ. ಭಿಕ್ಷೆ ಬೇಡಿ ಹೈಫೈ ಲೈಫ್ ನಡೆಸುತ್ತಿದ್ದಾನೆ. ಮುಂಬಯಿನಲ್ಲಿ ಎರಡು ಬೆಡ್ರೂಂ ಫ್ಲ್ಯಾಟ್ ಓನರ್ ಎಂದರೆ ಸಾಮಾನ್ಯ ವಿಷಯವೇ?
ದಿನಕ್ಕೆ ರುಪಾಯಿ 2000ದಿಂದ 2500 ಗಳಿಕೆ
ಈತ ದಿನದಲ್ಲಿ 10-12 ಗಂಟೆ ಭಿಕ್ಷೆ ಬೇಡುತ್ತಾನೆ, ಹಾರ್ಡ್ ವರ್ಕರೇ ಬಿಡಿ, ಇದರಿಂದಾಗಿ ದಿನದಲ್ಲಿ ಸುಮಾರು 2000ದಿಮದ 2500 ರುಪಾಯಿ ಗಳಿಸುತ್ತಾನೆ. ಈತನು ಛತ್ರಪತಿ ಶಿವಾತಿ ಮಹಾರಾಜ ಟರ್ಮಿನಸ್ ರೈಲ್ವೆ ನಿಲ್ದಾಣ ಅಥವಾ ಅಜಾದ್ ಮೈದಾನದಲ್ಲಿ ಕಂಡು ಬರುತ್ತಾನೆ. ಕೆಲವರು ದಿನ ಪೂರ್ತಿ ಕಷ್ಟಪಟ್ಟು ದುಡಿದರೂ ರುಪಾಯಿ ಗಳಿಸುವುದು ಕಷ್ಟ, ಅಂಥದ್ದರಲ್ಲಿ ಈತ ಆರಾಮವಾಗಿ ಭಿಕ್ಷೆ ಬೇಡ ಸಾವಿರಾರು ರುಪಾಯಿ ಗಳಿಸುತತ್ತಾನೆ. ಈತನ ತಿಂಗಳ ಆದಾಯ 60 ಸಾವಿರದಿಂದ 65, 000 ರುಪಾಯಿ ಗಳಿಸುತ್ತಿದ್ದಾನೆ.
ಮಕ್ಕಳನ್ನು ಕಾನ್ವೆಂಟ್ ಶಾಲೆಯಲ್ಲಿ ಓದಿಸಿದ್ದಾನೆ
ಈತ ಮದುವೆಯಾಗಿದ್ದಾನೆ, ಈತನಿಗೆ ಎರಡು ಮಕ್ಕಳಿದ್ದಾರೆ, ಅವರೆಲ್ಲಾ ತುಂಬಾ ಲಕ್ಷುರಿಯಾಗಿ ಜೀವನ ಮಾಡುತ್ತಿದ್ದಾರೆ, ಈತನ ಮಕ್ಕಳಿಗೆ ಕಾನ್ವೆಂಟ್ನಲ್ಲಿ ಕಳುಹಿಸಿ ಓದಿಸಿದ್ದಾನೆ. ಈತನ ಮನೆಯವರು ಸ್ಟೇಷನರಿ ಅಂಗಡಿ ನಡೆಸುತ್ತಿದ್ದಾರೆ. ಅವರೆಲ್ಲಾ ಈತನ ಬಳಿ ಭಿಕ್ಷಾಟನೆ ಬೇಡ ಎಂದರೂ ಕೇಳುತ್ತಿರಲಿಲ್ಲ, ಇಷ್ಟೆಲ್ಲಾ ಆದಾಯ ಬರುತ್ತಿರುವಾಗ ಹೇಗೆ ತಾನೆ ಬಿಡಲು ಸಾಧ್ಯ ಅಲ್ಲವೇ?
ಬರೀ ಭರತ್ ಜೈನ್ ಅಷ್ಟೇ ಈ ಹಿಂದೆ ಕೂಡ ಭಿಕ್ಷುಕರು ಸತ್ತಾಗ ಅವರ ಬಳಿ ಲಕ್ಷಗಟ್ಟಲೆ ಹಣ ಪತ್ತೆಯಾಗಿದೆ, ಆದ್ದರಿಂದ ಸುಮ್ಮನೆ ಭಿಕ್ಷೆ ಬೇಡುವರಿಗೆ ಹಣ ಹಾಕುವ ಬದಲಿಗೆ ನಿಮಗೆ ಚೆನ್ನಾಗಿ ಗೊತ್ತಿರುವ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಿಂದ ಹೆಚ್ಚಿನ ಪುಣ್ಯ ಪಡೆಯಬಹುದು, ಏನಂತೀರಿ?



Click it and Unblock the Notifications