Latest Updates
-
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ!
10ನೇ ಕ್ಲಾಸ್ ಓದು, ಬರಿಗೈಯಲ್ಲಿ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಯೇ ಈ ಗೋಲ್ಡ್ ಸುರೇಶ್
ಬಿಗ್ಬಾಸ್ ಕನ್ನಡ 11 ಸೀಸನ್ ಗ್ರ್ಯಾಂಡ್ ಆಗಿ ಓಪನ್ ಆಗಿದೆ. ಈ ಬಾರಿ ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮದೇ ಕಾರಣಗಳಿಂದ ಗಮನ ಸೆಳೆದಿದ್ದಾರೆ, ಈ ಸ್ಪರ್ಧಿಗಳನ್ನು ನೋಡುವಾಗ ಈ ಬಾರಿಯ ಸ್ಪರ್ಧಾಳುಗಳು ಕಠಿಣ ಪೈಪೋಟಿ ನೀಡಬಹುದು ಎಂದು ಭರವಸೆ ಮೂಡಿಸಿದ್ದಾರೆ.
ಒಬ್ಬೊಬ್ಬರಲ್ಲಿ ಒಂದೊಂದು ವಿಶೇಷತೆಗಳಿಂದ ವಿಭಿನ್ನವಾಗಿ ಗಮನವಾಗಿ ಗಮನ ಸೆಳೆದಿದ್ದಾರೆ, ಅವರಲ್ಲಿ ನೆನ್ನೆ ಗೋಲ್ಡ್ ಸುರೇಶ್ ಎಂಬುವವರು ಮೈಮೇಲೆ ರಾಶಿ ಚಿನ್ನ ಹಾಕಿ ಎಂಟ್ರಿ ಕೊಡುವ ಮೂಲಕ ಗಮನ ಸೆಳೆದಿದ್ದಾರೆ.

ಚಿನ್ನದ ಅಂಗಡಿಯೆ ನಡೆದಾಡುವಂತೆ ಬಂದಿರುವ ಗೋಲ್ಡ್ ಸುರೇಶ್
ನೆನ್ನೆ ಅಷ್ಟೊಂದು ಗೋಲ್ಡ್ ಹಾಕಿ ಬಂದಿರುವ ವ್ಯಕ್ತಿಯನ್ನು ನೋಡಿದವರು ಅಬ್ಬಾ! ಅಂತ ಅಚ್ಚರಿಕೊಂಡಿದ್ದರು, ಗೋಲ್ಡ್ ಸುರೇಶ್ ಎಂಟ್ರಿ ಕೊಡ್ತಾ ಇದ್ದಂತೆ ವರ್ತೂರ್ ಸಂತೋಷ್ರಂತೆಯೇ ಅಲ್ಲಲ್ಲ ಅವರಿಗಿಂತ ಹೆಚ್ಚು ಚಿನ್ನವನ್ನು ಹಾಕಿಕೊಂಡ ವ್ಯಕ್ತಿಯನ್ನು ನೋಡಿ ಬೆಂಗಳೂರಿನಲ್ಲಿ ಇಷ್ಟೊಂದು ಚಿನ್ನ ಹಾಕಿ ನಡೆದಾಡಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿತ್ತು, ಕಿಚ್ಚ ಸುದೀಪ್ ಅವರು ಈ ಬಗ್ಗೆ ಕೇಳಿದಾಗ ನನಗೆ ಬಾಡಿಗಾರ್ಡ್ ಇದ್ದಾರೆ ಎಂದು ಹೇಳಿದ್ದರು.
ಗೋಲ್ಡ್ ಸುರೇಶ್ಗೆ ಇರುವ ಬಾಡಿಗಾರ್ಡ್ಸ್ ನೋಡಿ ಅಬ್ಬಾ ಇಷ್ಟೊಂದು ವ್ಯಕ್ತಿಗಳನ್ನು ಬಾಡಿಗಾರ್ಡ್ ಆಗಿ ಇಟ್ಟುಕೊಂಡು ನಡೆಯಬೇಕೆಂದರೆ ಎಷ್ಟು ಶ್ರೀಮಂತನಿರಬಹುದು ಎಂದನಿಸಬಹುದು. ಸುರೇಶ್ ಈಗ ಕೋಟ್ಯಾಧಿಪತಿ ಹೌದು, ಆದರೆ ಒಂದು ಕಾಲದಲ್ಲಿ ಬರಿಗೈಯಲ್ಲಿ ಬಂದಿದ್ದ ವ್ಯಕ್ತಿ ಈಗ ಈ ಮಟ್ಟಕ್ಕೆ ಬೆಳೆದಿದ್ದಾರೆ.
ಒಂದು ಚಿಕ್ಕ ಕೆಲಸ ಸಿಕ್ಕಿದರೆ ಸಾಕೆಂದು ಬೆಂಗಳೂರಿಗೆ ಬಂದ ವ್ಯಕ್ತಿ ಇಂದು ಈ ಮಟ್ಟಿಗೆ ಬೆಳೆದಿದ್ದಾರೆ:
ಸುರೇಶ್ ಅವರು ಬೆಂಗಳೂರಿಗೆ ಬಂದಾಗ ಇತ್ತ ಕೈಯಲ್ಲಿ ದುಡ್ಡಿಲ್ಲ, ಒಂದೊಳ್ಳೆಯ ವಿದ್ಯಾಭ್ಯಾಸವೂ ಇಲ್ಲ, ಬೆಂಗಳೂರಿನಲ್ಲಿ ಏನಾದರೂ ಕೆಲಸ ಸಿಕ್ಕಿದರೆ ಸಾಕೆಂದು ಬೆಂಗಳೂರಿಗೆ ಬಂದಿದ್ದ ವ್ಯಕ್ತಿ. ಈಗ ತನ್ನದೇ ಕಂಪನಿ ಕಟ್ಟಿ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿದ್ದಾರೆ.
ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ಚಿಕ್ಕ ಕೆಲಸಕ್ಕೆ ಸೇರಿದ್ದರು
ಇವರು ಮೊದಲು ಕನ್ಸ್ಟ್ರಕ್ಷನ್ ಸೂಪರ್ವೈಸರ್ ಆಗಿ ಬೆಳೆದರು , ನಂತರ ಇಟ್ಟ ಪ್ರತಿ ಹೆಜ್ಜೆಯಲ್ಲಿಯೂ ಲಕ್ಷ್ಮಿ ಅವರಿಗೆ ಒಲಿಯಲಾರಂಭಿಸಿತು. ಈಗ ಇವರು Bharata led ಎಂಬ ಸಂಸ್ಥೆಯನ್ನು ಕಟ್ಟಿ ಅದನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ತನ್ನ ಸಂಪತ್ತು ಬಂಗಾರದ ಮೂಲಕ ಪ್ರದರ್ಶನ ಮಾಡುವ ಕ್ರೇಝಿ ಇದೆ
ಎಷ್ಟೋ ಉದ್ಯಮಿಗಳು, ಶ್ರೀಮಂತರು ಇದ್ದಾರೆ, ಅದರೆ ಇವರು ಮಾತ್ರ ತಮ್ಮ ಸಂಪತ್ತನ್ನು ಚಿನ್ನದ ಶೋಕಿ ಮೂಲಕ ಪ್ರದರ್ಶನ ಮಾಡಿ ಗಮನ ಸೆಳೆಯುತ್ತಿರುವ ವ್ಯಕ್ತಿ.
ಇನ್ಸ್ಟಾದಲ್ಲಿ 19 ಸಾವಿರ ಫಾಲೋವರ್ಸ್ ಹೊಂದಿದ್ದಾರೆ
ಗೋಲ್ಡ್ ಸುರೇಶ್ ಎಂಬ ವ್ಯಕ್ತಿ ಇನ್ಸ್ಟಾದಲ್ಲಿ ಸಕ್ರೀಯರಾಗಿದ್ದಾರೆ, ಆದರೆ ಚಿನ್ನದ ರಾಶಿ ಹೇರಿಕೊಂಡು ಗಮನ ಸೆಳೆಯುತ್ತಿದ್ದಾರೆ, ಇವರ ಬಗ್ಗೆ ಸ್ಪೂರ್ತಿದಾಯಕ ವಿಷಯಗಳೇನು ಎಂಬುವುದು ಅಷ್ಟಾಗಿ ಜನರಿಗೆ ಪರಿಚಯವಿಲ್ಲ. ಈಗ ಬಿಗ್ಬಾಸ್ ಎಂಬ ವೇದಿಕೆ ಸಿಕ್ಕಿದೆ, ಖಂಡಿತ ಇವರ ಫಾಲೋವರ್ಸ್ ಹೆಚ್ಚಾಗಬಹುದು, ಚಿನ್ನದ ಸ್ಟೈಲ್ ಹೊರತು ಪಡಿಸಿ ಯಾವುದೇ ಕಾಂಟ್ರವರ್ಸಿ ಕೇಳಿ ಬಂದಿಲ್ಲ.
ಅಷ್ಟೊಂದು ಚಿನ್ನ ಹಾಕಿ ಮನೆಯೊಳಗೆ ಬಂದಿದ್ದಾರೆ
ಬಿಗ್ಬಾಸ್ ಮನೆಯೊಳಗೆ ಬೆಲೆ ಬಾಳುವ ಆಭರಣಗಳನ್ನು ತಗೊಂಡು ಬರಲು ಅವಕಾಶವಿಲ್ಲ, ಕಳೆದ ಬಾರಿ ವರ್ತೂರ್ ಸಂತೋಷ್ ಪ್ರಕರಣ ಬಳಿಕ ಬಿಗ್ಬಾಸ್ ಟೀಂ ಮತ್ತಷ್ಟು ಎಚ್ಚೆತ್ತುಕೊಂಡಿದೆ. ಬಹುಶಃ ಇಂದಿನಿಂದ ಸುರೇಶ್ ಗೋಲ್ಡ್ ಎಲ್ಲಾ ಬಿಚ್ಚಿಟ್ಟು ಬರಿ ಸುರೇಶ್ ಆಗಿ ಸ್ಪರ್ಧಾ ಕಣಕ್ಕೆ ಇಳಿಯಬೇಕಾಗಿದೆ.
ತನ್ನದೇ ಶ್ರಮದಿಂದ ಸೆಲೆಬ್ರಿಟಿಯಾಗಿ ಬದಲಾಗಿರುವ ಗೋಲ



Click it and Unblock the Notifications