Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಆಗಸ್ಟ್ 31ಕ್ಕೆ ಶನಿ ತ್ರಯೋದಶಿ: ಶನಿ ಸಾಡೇಸಾತಿ, ಶನಿ ಧೈಯ್ಯ ಇರುವವರಿಗೆ ದೋಷ ಪರಿಹಾರಕ್ಕೆ ಶ್ರೇಷ್ಠ ದಿನ
ಈ ವರ್ಷ ಎರಡು ಬಾರಿ ಶನಿ ತ್ರಯೋದಶಿ ಬಂದಿದೆ, ಏಪ್ರಿಲ್ನಲ್ಲಿ ಸಂಭವಿಸಿತ್ತು, ಇದೀಗ ನಾಳೆ ಅಂದರೆ ಆಗಸ್ಟ್ 31ರಂದು ಶನಿ ತ್ರಯೋದಶಿ ಉಂಟಾಗಿದೆ. ಪ್ರದೋಷ ವ್ರತ ಶನಿವಾರದಂದು ಬಂದರೆ ಶನಿ ತ್ರಯೋದಶಿಯೆಂದು ಹೇಳಲಾಗುವುದು. ಯಾರೆಲ್ಲಾ ಶನಿಯ ಕಾಟದಿಂದ ತುಂಬಾನೇ ಕಷ್ಟ ಅನುಭವಿಸುತ್ತಿದ್ದಾರೋ ಆ ಕಷ್ಟ ನಿವಾರಣೆಗೆ ಅತ್ಯಂತ ಪವರ್ಫುಲ್ ದಿನ ಎಂದು ಕರೆಯಲಾಗುವುದು.

ಶನಿದೋಷದಲ್ಲಿ ಶನಿ ಸಾಡೇಸಾತಿ, ಅಷ್ಟಮ ಶನಿ, ಅರ್ಧಾಷ್ಟಮ ಶನಿ, ಶನಿ ಧೈಯ್ಯ, ಪಂಚಮಿ ಶನಿ ಈ ಬಗೆಯ ಶನಿದೋಷ ಇರುವವರು ಈ ದಿನವನ್ನು ಮಿಸ್ ಮಾಡಲೇಬಾರದು. ಶನಿ ತ್ರಯೋದಶಿಯಂದು ಶನಿಗೆ ಸಂಬಂಧಿಸಿದ ಪರಿಹಾರ ಮಾಡಿದರೆ ಶನಿಯ ಕಷ್ಟಗಳಿಂದ ಪರಿಹಾರ ಪಡೆಯಲು ಈ ದಿನಕ್ಕಿಂತ ಶುಭದಿನ ಮತ್ತೊಂದಿಲ್ಲ.
ಶನಿ ದೋಷವಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ:
ಶನಿ ದೋಷಕ್ಕೆ ಒಳಗಾದವರು ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಾರೆ,ಆರ್ಥಿಕವಾಗಿ ಹಲವು ಸಮಸ್ಯೆಗಳು ಕಂಡು ಬರುವುದು, ಕುಟುಂಬದಲ್ಲಿ ಹಲವು ಸಮಸ್ಯೆಗಳು ಕಂಡು ಬರುವುದು, ಸಾಮಾಜಿಕವಾಗಿ ಹೆಸರಿಗೆ ಕೆಲ ಧಕ್ಕೆ ಉಂಟಾಗುತ್ತದೆ, ಸುಮ್ಮನೆ ಕೆಲ ಅಪವಾದಗಳನ್ನು ಕೇಳಬೇಕಾಗುತ್ತದೆ ಹೀಗೆ ಶನಿ ದೋಷದಿಂದ ವ್ಯಕ್ತಿಯು ಅನುಭವಿಸುವ ಕಷ್ಟ ಒಂದಲ್ಲಾ ಎರಡಲ್ಲ ಹಲವು ಬಗೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಈ ದಿನ ಶನಿಯ ಮೂಲ ಮಂತ್ರವನ್ನು ಪಠಿಸಿ ಶನಿಗೆ ಸಂಬಂಧಿಸಿದ ಪರಿಹಾರವನ್ನು ಮಾಡಬೇಕು.
ॐ ಪ್ರಾಂ ಪ್ರಿಯಂ ಪ್ರೌಂ ಸಃ ಶನೈಶ್ಚರಾಯ ನಮಃ
ಈ ದಿನ ಉಪವಾಸವಿರಬೇಕು
ಈ ದಿನ ಶನಿಗೆ ಪೂಜೆ ಮಾಡಬೇಕು.
ಈ ದಿನ ಕಪ್ಪು ಬಟ್ಟೆಯನ್ನು ಧರಿಸಬೇಕು
ಶನಿ ಮಂತ್ರಗಳನ್ನು ಪಠಿಸಬೇಕು.
ಈ ದಿನ ಮಾಡುವ ದಾನ ಧರ್ಮಕ್ಕೆ ತುಂಬಾನೇ ಮಹತ್ವವಿದೆ:
ಈ ದಿನ ಬಡವರಿಗೆ ದಾನ ಮಾಡಬೇಕು
ನಿರ್ಗತಿಕರಿಗೆ ಕಪ್ಪು ಬಟ್ಟೆಗಳನ್ನು ದಾನ ಮಾಡಿ.
ಆಹಾರ ವಸ್ತುಗಳನ್ನು ದಾನ ಮಾಡಿ.
ಶನಿ ದೇವನಿಗೆ ಎಳ್ಳೆಣ್ಣೆಯನ್ನು ದೇವಾಲಯಕ್ಕೆ ದಾನ ಮಾಡಿ
ಈ ದಿನ 10ಗ್ರಾಂ ಎಳ್ಳೆಣ್ಣೆ, ಇದ್ದಿಲು, ಕಪ್ಪು ರಿಬ್ಬನ್, 8 ಕಬ್ಬಿಣದ ಮೊಳೆ ಇವುಗಳನ್ನು ಶನಿ ದೇವನಿಗೆ ಅರ್ಪಿಸಿ.
ಈ ದಿನ ಎಣ್ಣೆ, ಚರ್ಮದ ವಸ್ತುಗಳು (ಬ್ಯಾಗ್, ಚಪ್ಪಲಿ), ಕೊಡೆ ಈ ಬಗೆಯ ವಸ್ತುಗಳನ್ನು ಖರೀದಿಸಬಾರದು.
ಈ ದಿನ ಅಕ್ಕಿ, ಉಪ್ಪು ಅರ್ಪಿಸಿ.
ಈಗ ಯಾವೆಲ್ಲಾ ರಾಶಿಗಳಲ್ಲಿ ಶನಿ ಸಾಡೇಸಾತಿ ನಡೆಯುತ್ತಿದೆ?
ಇದೀಗ ಮಕರ, ಕುಂಭ, ಮೀನ ರಾಶಿಯವರಿಗೆ ಶನಿಯು ಸಾಡೇಸಾತಿ ನಡೆಯುತ್ತಿದೆ. ಮಕರ ರಾಶಿಯವರಿಗೆ ಶನಿಯ ಸಾಡೇಸಾತಿ ಕೊನೆಯ ಹಂತ ನಡೆಯುತ್ತಿದೆ. ಕುಂಭ ರಾಶಿಯಲ್ಲಿ ಸಾಡೇ ಸತಿಯ ಎರಡನೇ ಹಂತ ನಡೆಯುತ್ತಿದೆ, ಮೀನ ರಾಶಿಯವರಿಗೆ ಸಾಡೇ ಸತಿಯ ಮೊದಲ ಹಂತ ನಡೆಯುತ್ತಿದೆ. ಮೀನ ರಾಶಿಯವರಿಗೆ ಈ ಹಂತ ಘಟ್ಟ ಕಠಿಣವಾಗಿರುತ್ತದೆ, ಮೂರನೇಯ ಹಂತದಲ್ಲಿ ಇರುವಾಗ ಶನಿಯ ಪ್ರಭಾವ ಕಡಿಮೆಯಾಗಿರುತ್ತದೆ.
ಇನ್ನು ಕರ್ಕ ಮತ್ತು ವೃಶ್ಚಿಕ ರಾಶಿಗಳಲ್ಲಿ ಶನಿ ಧೈಯ್ಯ ನಡೆಯುತ್ತಿದೆ.
ಶನಿ ಗಾಯತ್ರಿ ಮಂತ್ರ
'ಓಂ ಶನೈಶ್ಚರಾಯ ವಿದ್ಮಯೇ ಸೂರ್ಯಪುತ್ರಾಯ ದಹಿಮಹಿ ತನ್ನೊ ಮಂಡಾ ಪ್ರಚೋದಾಯತ್'



Click it and Unblock the Notifications