Latest Updates
-
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ!
ಆಗಸ್ಟ್ 31ಕ್ಕೆ ಶನಿ ತ್ರಯೋದಶಿ: ಶನಿ ಸಾಡೇಸಾತಿ, ಶನಿ ಧೈಯ್ಯ ಇರುವವರಿಗೆ ದೋಷ ಪರಿಹಾರಕ್ಕೆ ಶ್ರೇಷ್ಠ ದಿನ
ಈ ವರ್ಷ ಎರಡು ಬಾರಿ ಶನಿ ತ್ರಯೋದಶಿ ಬಂದಿದೆ, ಏಪ್ರಿಲ್ನಲ್ಲಿ ಸಂಭವಿಸಿತ್ತು, ಇದೀಗ ನಾಳೆ ಅಂದರೆ ಆಗಸ್ಟ್ 31ರಂದು ಶನಿ ತ್ರಯೋದಶಿ ಉಂಟಾಗಿದೆ. ಪ್ರದೋಷ ವ್ರತ ಶನಿವಾರದಂದು ಬಂದರೆ ಶನಿ ತ್ರಯೋದಶಿಯೆಂದು ಹೇಳಲಾಗುವುದು. ಯಾರೆಲ್ಲಾ ಶನಿಯ ಕಾಟದಿಂದ ತುಂಬಾನೇ ಕಷ್ಟ ಅನುಭವಿಸುತ್ತಿದ್ದಾರೋ ಆ ಕಷ್ಟ ನಿವಾರಣೆಗೆ ಅತ್ಯಂತ ಪವರ್ಫುಲ್ ದಿನ ಎಂದು ಕರೆಯಲಾಗುವುದು.

ಶನಿದೋಷದಲ್ಲಿ ಶನಿ ಸಾಡೇಸಾತಿ, ಅಷ್ಟಮ ಶನಿ, ಅರ್ಧಾಷ್ಟಮ ಶನಿ, ಶನಿ ಧೈಯ್ಯ, ಪಂಚಮಿ ಶನಿ ಈ ಬಗೆಯ ಶನಿದೋಷ ಇರುವವರು ಈ ದಿನವನ್ನು ಮಿಸ್ ಮಾಡಲೇಬಾರದು. ಶನಿ ತ್ರಯೋದಶಿಯಂದು ಶನಿಗೆ ಸಂಬಂಧಿಸಿದ ಪರಿಹಾರ ಮಾಡಿದರೆ ಶನಿಯ ಕಷ್ಟಗಳಿಂದ ಪರಿಹಾರ ಪಡೆಯಲು ಈ ದಿನಕ್ಕಿಂತ ಶುಭದಿನ ಮತ್ತೊಂದಿಲ್ಲ.
ಶನಿ ದೋಷವಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ:
ಶನಿ ದೋಷಕ್ಕೆ ಒಳಗಾದವರು ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಾರೆ,ಆರ್ಥಿಕವಾಗಿ ಹಲವು ಸಮಸ್ಯೆಗಳು ಕಂಡು ಬರುವುದು, ಕುಟುಂಬದಲ್ಲಿ ಹಲವು ಸಮಸ್ಯೆಗಳು ಕಂಡು ಬರುವುದು, ಸಾಮಾಜಿಕವಾಗಿ ಹೆಸರಿಗೆ ಕೆಲ ಧಕ್ಕೆ ಉಂಟಾಗುತ್ತದೆ, ಸುಮ್ಮನೆ ಕೆಲ ಅಪವಾದಗಳನ್ನು ಕೇಳಬೇಕಾಗುತ್ತದೆ ಹೀಗೆ ಶನಿ ದೋಷದಿಂದ ವ್ಯಕ್ತಿಯು ಅನುಭವಿಸುವ ಕಷ್ಟ ಒಂದಲ್ಲಾ ಎರಡಲ್ಲ ಹಲವು ಬಗೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಈ ದಿನ ಶನಿಯ ಮೂಲ ಮಂತ್ರವನ್ನು ಪಠಿಸಿ ಶನಿಗೆ ಸಂಬಂಧಿಸಿದ ಪರಿಹಾರವನ್ನು ಮಾಡಬೇಕು.
ॐ ಪ್ರಾಂ ಪ್ರಿಯಂ ಪ್ರೌಂ ಸಃ ಶನೈಶ್ಚರಾಯ ನಮಃ
ಈ ದಿನ ಉಪವಾಸವಿರಬೇಕು
ಈ ದಿನ ಶನಿಗೆ ಪೂಜೆ ಮಾಡಬೇಕು.
ಈ ದಿನ ಕಪ್ಪು ಬಟ್ಟೆಯನ್ನು ಧರಿಸಬೇಕು
ಶನಿ ಮಂತ್ರಗಳನ್ನು ಪಠಿಸಬೇಕು.
ಈ ದಿನ ಮಾಡುವ ದಾನ ಧರ್ಮಕ್ಕೆ ತುಂಬಾನೇ ಮಹತ್ವವಿದೆ:
ಈ ದಿನ ಬಡವರಿಗೆ ದಾನ ಮಾಡಬೇಕು
ನಿರ್ಗತಿಕರಿಗೆ ಕಪ್ಪು ಬಟ್ಟೆಗಳನ್ನು ದಾನ ಮಾಡಿ.
ಆಹಾರ ವಸ್ತುಗಳನ್ನು ದಾನ ಮಾಡಿ.
ಶನಿ ದೇವನಿಗೆ ಎಳ್ಳೆಣ್ಣೆಯನ್ನು ದೇವಾಲಯಕ್ಕೆ ದಾನ ಮಾಡಿ
ಈ ದಿನ 10ಗ್ರಾಂ ಎಳ್ಳೆಣ್ಣೆ, ಇದ್ದಿಲು, ಕಪ್ಪು ರಿಬ್ಬನ್, 8 ಕಬ್ಬಿಣದ ಮೊಳೆ ಇವುಗಳನ್ನು ಶನಿ ದೇವನಿಗೆ ಅರ್ಪಿಸಿ.
ಈ ದಿನ ಎಣ್ಣೆ, ಚರ್ಮದ ವಸ್ತುಗಳು (ಬ್ಯಾಗ್, ಚಪ್ಪಲಿ), ಕೊಡೆ ಈ ಬಗೆಯ ವಸ್ತುಗಳನ್ನು ಖರೀದಿಸಬಾರದು.
ಈ ದಿನ ಅಕ್ಕಿ, ಉಪ್ಪು ಅರ್ಪಿಸಿ.
ಈಗ ಯಾವೆಲ್ಲಾ ರಾಶಿಗಳಲ್ಲಿ ಶನಿ ಸಾಡೇಸಾತಿ ನಡೆಯುತ್ತಿದೆ?
ಇದೀಗ ಮಕರ, ಕುಂಭ, ಮೀನ ರಾಶಿಯವರಿಗೆ ಶನಿಯು ಸಾಡೇಸಾತಿ ನಡೆಯುತ್ತಿದೆ. ಮಕರ ರಾಶಿಯವರಿಗೆ ಶನಿಯ ಸಾಡೇಸಾತಿ ಕೊನೆಯ ಹಂತ ನಡೆಯುತ್ತಿದೆ. ಕುಂಭ ರಾಶಿಯಲ್ಲಿ ಸಾಡೇ ಸತಿಯ ಎರಡನೇ ಹಂತ ನಡೆಯುತ್ತಿದೆ, ಮೀನ ರಾಶಿಯವರಿಗೆ ಸಾಡೇ ಸತಿಯ ಮೊದಲ ಹಂತ ನಡೆಯುತ್ತಿದೆ. ಮೀನ ರಾಶಿಯವರಿಗೆ ಈ ಹಂತ ಘಟ್ಟ ಕಠಿಣವಾಗಿರುತ್ತದೆ, ಮೂರನೇಯ ಹಂತದಲ್ಲಿ ಇರುವಾಗ ಶನಿಯ ಪ್ರಭಾವ ಕಡಿಮೆಯಾಗಿರುತ್ತದೆ.
ಇನ್ನು ಕರ್ಕ ಮತ್ತು ವೃಶ್ಚಿಕ ರಾಶಿಗಳಲ್ಲಿ ಶನಿ ಧೈಯ್ಯ ನಡೆಯುತ್ತಿದೆ.
ಶನಿ ಗಾಯತ್ರಿ ಮಂತ್ರ
'ಓಂ ಶನೈಶ್ಚರಾಯ ವಿದ್ಮಯೇ ಸೂರ್ಯಪುತ್ರಾಯ ದಹಿಮಹಿ ತನ್ನೊ ಮಂಡಾ ಪ್ರಚೋದಾಯತ್'



Click it and Unblock the Notifications