Latest Updates
-
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ!
ಅಕ್ಷಯ ತೃತೀಯ 2023: ಕಾಕತಾಳೀಯವೆಂಬಂತೆ ಈ ವರ್ಷ 6 ಶುಭ ಯೋಗ ಏರ್ಪಟ್ಟಿದೆ
ಅಕ್ಷಯ ತೃತೀಯವನ್ನು ಅತ್ಯಂತ ಶುಭ ದಿನವೆಂದು ಆಚರಿಸಲಾಗುವುದು. ಈ ದಿನ ಹೂಡಿಕೆಗೆ, ಚಿನ್ನ ಖರೀದಿಗೆ, ಶುಭ ಕಾರ್ಯಗಳಿಗೆ ಅತ್ಯಂಥ ಶುಭ ದಿನವೆಂದು ಪರಿಗಣಿಸಲಾಗುವುದು. ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುವುದು. ಈ ವರ್ಷ ಅಕ್ಷಯ ತೃತೀಯವನ್ನು ಏಪ್ರಿಲ್ 22ರಂದು ಆಚರಿಸಲಾಗುವುದು. ಅಕ್ಷಯ ತೃತೀಯ ಮುಹೂರ್ತವು ಏಪ್ರಿಲ್ 22 ರಂದು ಬೆಳಗ್ಗೆ 7.49 ಕ್ಕೆ ಪ್ರಾರಂಭವಾಗಿ ಏಪ್ರಿಲ್ 23 ರಂದು ಬೆಳಿಗ್ಗೆ 7.47 ಕ್ಕೆ ಕೊನೆಗೊಳ್ಳುತ್ತದೆ.

ಈ ದಿನ ನಾವು ಚಿನ್ನವನ್ನು ಖರೀದಿಸುವುದರಿಂದ ನಮ್ಮಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂಬುವುದು ನಂಬಿಕೆ. ಚಿನ್ನವನ್ನು ಲಕ್ಷ್ಮಿಯ ಆಭರಣ ಎಂದು ಪರಿಗಣಿಸಲಾಗುವುದು, ಈ ದಿನವನ್ನು ಚಿನ್ನವನ್ನು ಮನೆಗೆ ತಂದರೆ ಲಕ್ಷ್ಮಿ ಮನೆನೆ ಬರುವುದು ಎಂಬ ನಂಬಿಕೆ. ಈ ಕಾರಣಕ್ಕೆ ಅಕ್ಷಯ ತೃತೀಯದ ದಿನದಂದು ಜನರು ಚಿನ್ನವನ್ನು ಖರೀದಿ ಮಾಡುತ್ತಾರೆ. ಈ ರೀತಿ ಖರೀದಿಸುವುದರಿಂದ ವ್ಯಕ್ತಿಯ ಮನೆಯಲ್ಲಿ ಹಣ ಮತ್ತು ಧಾನ್ಯಗಳ ಕೊರತೆ ಎಂದಿಗೂ ಇರುವುದಿಲ್ಲ. ಈ ಕಾರಣಕ್ಕೆ ಈ ದಿನಕ್ಕೆ ತುಂಬಾನೇ ಮಹತ್ವ ನೀಡಲಾಗಿದೆ.
ಅಕ್ಷಯ ತೃತೀಯ ದಿನದ ಪೂಜಾ ವಿಧಿ
* ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಬೇಕು.
* ಸ್ನಾನದ ನಂತರ ಹಳದಿ ಬಟ್ಟೆಗಳನ್ನು ಧರಿಸಿ. ಪೂಜಾ ಶುಭ ಕಾರ್ಯಕ್ಕೆ ತುಂಬಾನೇ ಶುಭ ಎಂದು ಪರಿಗಣಿಸಲಾಗಿರುವುದರಿಂದ ಪೂಜೆಗೆ ಕೂರುವಾಗ ಹಳದಿ ಬಣ್ಣದ ಬಟ್ಟೆ ಧರಿಸಿ.
* ಅಕ್ಷಯ ತೃತೀಯ ದಿನದಂದು ಲಕ್ಷ್ಮಿ ಮತ್ತು ಭಗವಾನ್ ವಿಷ್ಣುವನ್ನು ಪೂಜಿಸಿ. ನಂತರ ವಿಷ್ಣು ಸಹಸ್ರನಾಮ ಪಠಿಸಿ. ಈ ದಿನ ಸಹಸ್ರನಾಮ ಪಠಿಸುವುದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುವುದು.
ಅಕ್ಷಯ ತೃತೀಯದಂದು ದಾನ-ಧರ್ಮದ ಮಹತ್ವ
* ಅಕ್ಷಯ ತೃತೀಯ ದಿನದಂದು ಮಾಡುವ ದಾನ ಧರ್ಮಕ್ಕೆ ತುಂಬಾನೇ ಮಹತ್ವವಿದೆ. ಈ ದಿನ ದಾನ ಮಾಡುವುದರಿಂದ ಆರ್ಥಿಕ ಸಂಕಷ್ಟಗಳು ದೂರಾಗಲಿದೆ.
* ಈ ದಿನ ನಿರ್ಗತಿಕರಿಗೆ ಆಹಾರ, ವಸ್ತ್ರವನ್ನು ದಾನ ಮಾಡಿ.
* ಈ ದಿನ ಬ್ರಾಹ್ಮಣರಿಗೆ ಆಹಾರ, ವಸ್ತ್ರವನ್ನು ದಾನ ಮಾಡಿ.
* ಅಕ್ಷಯ ತೃತೀಯ ದಿನ ದೇವಾಲಯಕ್ಕೆ ಹೋಗಿ ಪೂಜೆಯನ್ನು ಮಾಡಿಸಿ.
ಹಿಂದೂ ಧಾರ್ಮಿಕ ನಂಬಿಕೆ ಪ್ರಕಾರ ಈ ದಿನದಂದು ಮಾಡಿದ ದಾನಗಳು ವ್ಯಕ್ತಿಯ ಜೀವನದಲ್ಲಿ ಸಮೃದ್ಧಿಯನ್ನು ತರುತ್ತವೆ ಎಂದು ಹೇಳಲಾಗುವುದು.
ಈ ವರ್ಷ ಅಕ್ಷಯ ತೃತೀಯದಂದು 6 ಶುಭಯೋಗ ಏರ್ಪಟ್ಟಿದೆ
ಈ ವರ್ಷ ಅಕ್ಷಯ ತೃತೀಯದ 6 ಶುಭ ಯೋಗಗಳ ಕಾಕತಾಳೀಯವಾಗಿ ಬಂದಿದೆ
* ತ್ರಿಪುಷ್ಕರ ಯೋಗವು 05:49 AM ಕ್ಕೆ ಪ್ರಾರಂಭವಾಗಿ ಮರುದಿನ ಬೆಳಗ್ಗೆ 07:49 AM ವರೆಗೆ ಮುಂದುವರಿಯುತ್ತದೆ.
* ಸರ್ವಾರ್ಥ ಸಿದ್ಧಿ ಮತ್ತು ಅಮೃತ ಸಿದ್ಧಿ ಯೋಗವು ರಾತ್ರಿ 11:24 ಕ್ಕೆ ಪ್ರಾರಂಭವಾಗಿ ಮರುದಿನ ಬೆಳಗ್ಗೆ 05:48 ರವರೆಗೆ ಇರುತ್ತದೆ.
* ರವಿ ಯೋಗವು ರಾತ್ರಿ 11:24 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಬೆಳಿಗ್ಗೆ 05:48 ರವರೆಗೆ ಮುಂದುವರೆಗೆ ಇರಲಿದೆ
* ಆಯುಷ್ಮಾನ್ ಯೋಗವು ಸೂರ್ಯೋದಯಕ್ಕೆ ಮುಂಚೆಯೇ ಪ್ರಾರಂಭವಾಗಿ ಬೆಳಗ್ಗೆ 9.26 ರವರೆಗೆ ಇರಲಿದೆ
* ಆಯುಷ್ಮಾನ್ ಯೋಗದ ನಂತರ ಸೌಭಾಗ್ಯ ಯೋಗವು ತಕ್ಷಣವೇ ಪ್ರಾರಂಭವಾಗುತ್ತದೆ. ಈ ಯೋಗದ ಪರಿಣಾಮ ಇಡೀ ರಾತ್ರಿ ಇರಲಿದೆ.
ಹೂಡಿಕೆ, ಚಿನ್ನ ಖರೀದಿ, ಗೃಹ ಪ್ರವೇಶ ಮುಂತಾದ ಶುಭ ಕಾರ್ಯಗಳಿಗೆ ಈ ಯೋಗ ಅತ್ಯಂತ ಶ್ರೇಷ್ಠವಾಗಿದೆ.
ಅಕ್ಷಯ ತೃತೀಯ ಧಾರ್ಮಿಕ ಮಹತ್ವ
* ಈ ದಿನ ಪರುಶುರಾಮ ಜಯಂತಿಯನ್ನು ಆಚರಿಸಲಾಗುವುದು.
* ಈ ದಿನ ತ್ರೇತಾಯುಗ ಪ್ರಾರಂಭವಾಯಿತು
* ವೇದವ್ಯಾಸರು ಈ ದಿನದಂದು ಮಹಾಭಾರತ ಬರೆಯಲು ಪ್ರಾರಂಭಿಸಿದರು.
* ಪುರಿ ಜಗ್ನನಾಥ ರಥ ಯಾತ್ರೆ ಪ್ರಾರಂಭ.



Click it and Unblock the Notifications