Latest Updates
-
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು!
ಅಕ್ಷಯ ತೃತೀಯ 2023: ಕಾಕತಾಳೀಯವೆಂಬಂತೆ ಈ ವರ್ಷ 6 ಶುಭ ಯೋಗ ಏರ್ಪಟ್ಟಿದೆ
ಅಕ್ಷಯ ತೃತೀಯವನ್ನು ಅತ್ಯಂತ ಶುಭ ದಿನವೆಂದು ಆಚರಿಸಲಾಗುವುದು. ಈ ದಿನ ಹೂಡಿಕೆಗೆ, ಚಿನ್ನ ಖರೀದಿಗೆ, ಶುಭ ಕಾರ್ಯಗಳಿಗೆ ಅತ್ಯಂಥ ಶುಭ ದಿನವೆಂದು ಪರಿಗಣಿಸಲಾಗುವುದು. ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುವುದು. ಈ ವರ್ಷ ಅಕ್ಷಯ ತೃತೀಯವನ್ನು ಏಪ್ರಿಲ್ 22ರಂದು ಆಚರಿಸಲಾಗುವುದು. ಅಕ್ಷಯ ತೃತೀಯ ಮುಹೂರ್ತವು ಏಪ್ರಿಲ್ 22 ರಂದು ಬೆಳಗ್ಗೆ 7.49 ಕ್ಕೆ ಪ್ರಾರಂಭವಾಗಿ ಏಪ್ರಿಲ್ 23 ರಂದು ಬೆಳಿಗ್ಗೆ 7.47 ಕ್ಕೆ ಕೊನೆಗೊಳ್ಳುತ್ತದೆ.

ಈ ದಿನ ನಾವು ಚಿನ್ನವನ್ನು ಖರೀದಿಸುವುದರಿಂದ ನಮ್ಮಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂಬುವುದು ನಂಬಿಕೆ. ಚಿನ್ನವನ್ನು ಲಕ್ಷ್ಮಿಯ ಆಭರಣ ಎಂದು ಪರಿಗಣಿಸಲಾಗುವುದು, ಈ ದಿನವನ್ನು ಚಿನ್ನವನ್ನು ಮನೆಗೆ ತಂದರೆ ಲಕ್ಷ್ಮಿ ಮನೆನೆ ಬರುವುದು ಎಂಬ ನಂಬಿಕೆ. ಈ ಕಾರಣಕ್ಕೆ ಅಕ್ಷಯ ತೃತೀಯದ ದಿನದಂದು ಜನರು ಚಿನ್ನವನ್ನು ಖರೀದಿ ಮಾಡುತ್ತಾರೆ. ಈ ರೀತಿ ಖರೀದಿಸುವುದರಿಂದ ವ್ಯಕ್ತಿಯ ಮನೆಯಲ್ಲಿ ಹಣ ಮತ್ತು ಧಾನ್ಯಗಳ ಕೊರತೆ ಎಂದಿಗೂ ಇರುವುದಿಲ್ಲ. ಈ ಕಾರಣಕ್ಕೆ ಈ ದಿನಕ್ಕೆ ತುಂಬಾನೇ ಮಹತ್ವ ನೀಡಲಾಗಿದೆ.
ಅಕ್ಷಯ ತೃತೀಯ ದಿನದ ಪೂಜಾ ವಿಧಿ
* ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಬೇಕು.
* ಸ್ನಾನದ ನಂತರ ಹಳದಿ ಬಟ್ಟೆಗಳನ್ನು ಧರಿಸಿ. ಪೂಜಾ ಶುಭ ಕಾರ್ಯಕ್ಕೆ ತುಂಬಾನೇ ಶುಭ ಎಂದು ಪರಿಗಣಿಸಲಾಗಿರುವುದರಿಂದ ಪೂಜೆಗೆ ಕೂರುವಾಗ ಹಳದಿ ಬಣ್ಣದ ಬಟ್ಟೆ ಧರಿಸಿ.
* ಅಕ್ಷಯ ತೃತೀಯ ದಿನದಂದು ಲಕ್ಷ್ಮಿ ಮತ್ತು ಭಗವಾನ್ ವಿಷ್ಣುವನ್ನು ಪೂಜಿಸಿ. ನಂತರ ವಿಷ್ಣು ಸಹಸ್ರನಾಮ ಪಠಿಸಿ. ಈ ದಿನ ಸಹಸ್ರನಾಮ ಪಠಿಸುವುದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುವುದು.
ಅಕ್ಷಯ ತೃತೀಯದಂದು ದಾನ-ಧರ್ಮದ ಮಹತ್ವ
* ಅಕ್ಷಯ ತೃತೀಯ ದಿನದಂದು ಮಾಡುವ ದಾನ ಧರ್ಮಕ್ಕೆ ತುಂಬಾನೇ ಮಹತ್ವವಿದೆ. ಈ ದಿನ ದಾನ ಮಾಡುವುದರಿಂದ ಆರ್ಥಿಕ ಸಂಕಷ್ಟಗಳು ದೂರಾಗಲಿದೆ.
* ಈ ದಿನ ನಿರ್ಗತಿಕರಿಗೆ ಆಹಾರ, ವಸ್ತ್ರವನ್ನು ದಾನ ಮಾಡಿ.
* ಈ ದಿನ ಬ್ರಾಹ್ಮಣರಿಗೆ ಆಹಾರ, ವಸ್ತ್ರವನ್ನು ದಾನ ಮಾಡಿ.
* ಅಕ್ಷಯ ತೃತೀಯ ದಿನ ದೇವಾಲಯಕ್ಕೆ ಹೋಗಿ ಪೂಜೆಯನ್ನು ಮಾಡಿಸಿ.
ಹಿಂದೂ ಧಾರ್ಮಿಕ ನಂಬಿಕೆ ಪ್ರಕಾರ ಈ ದಿನದಂದು ಮಾಡಿದ ದಾನಗಳು ವ್ಯಕ್ತಿಯ ಜೀವನದಲ್ಲಿ ಸಮೃದ್ಧಿಯನ್ನು ತರುತ್ತವೆ ಎಂದು ಹೇಳಲಾಗುವುದು.
ಈ ವರ್ಷ ಅಕ್ಷಯ ತೃತೀಯದಂದು 6 ಶುಭಯೋಗ ಏರ್ಪಟ್ಟಿದೆ
ಈ ವರ್ಷ ಅಕ್ಷಯ ತೃತೀಯದ 6 ಶುಭ ಯೋಗಗಳ ಕಾಕತಾಳೀಯವಾಗಿ ಬಂದಿದೆ
* ತ್ರಿಪುಷ್ಕರ ಯೋಗವು 05:49 AM ಕ್ಕೆ ಪ್ರಾರಂಭವಾಗಿ ಮರುದಿನ ಬೆಳಗ್ಗೆ 07:49 AM ವರೆಗೆ ಮುಂದುವರಿಯುತ್ತದೆ.
* ಸರ್ವಾರ್ಥ ಸಿದ್ಧಿ ಮತ್ತು ಅಮೃತ ಸಿದ್ಧಿ ಯೋಗವು ರಾತ್ರಿ 11:24 ಕ್ಕೆ ಪ್ರಾರಂಭವಾಗಿ ಮರುದಿನ ಬೆಳಗ್ಗೆ 05:48 ರವರೆಗೆ ಇರುತ್ತದೆ.
* ರವಿ ಯೋಗವು ರಾತ್ರಿ 11:24 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಬೆಳಿಗ್ಗೆ 05:48 ರವರೆಗೆ ಮುಂದುವರೆಗೆ ಇರಲಿದೆ
* ಆಯುಷ್ಮಾನ್ ಯೋಗವು ಸೂರ್ಯೋದಯಕ್ಕೆ ಮುಂಚೆಯೇ ಪ್ರಾರಂಭವಾಗಿ ಬೆಳಗ್ಗೆ 9.26 ರವರೆಗೆ ಇರಲಿದೆ
* ಆಯುಷ್ಮಾನ್ ಯೋಗದ ನಂತರ ಸೌಭಾಗ್ಯ ಯೋಗವು ತಕ್ಷಣವೇ ಪ್ರಾರಂಭವಾಗುತ್ತದೆ. ಈ ಯೋಗದ ಪರಿಣಾಮ ಇಡೀ ರಾತ್ರಿ ಇರಲಿದೆ.
ಹೂಡಿಕೆ, ಚಿನ್ನ ಖರೀದಿ, ಗೃಹ ಪ್ರವೇಶ ಮುಂತಾದ ಶುಭ ಕಾರ್ಯಗಳಿಗೆ ಈ ಯೋಗ ಅತ್ಯಂತ ಶ್ರೇಷ್ಠವಾಗಿದೆ.
ಅಕ್ಷಯ ತೃತೀಯ ಧಾರ್ಮಿಕ ಮಹತ್ವ
* ಈ ದಿನ ಪರುಶುರಾಮ ಜಯಂತಿಯನ್ನು ಆಚರಿಸಲಾಗುವುದು.
* ಈ ದಿನ ತ್ರೇತಾಯುಗ ಪ್ರಾರಂಭವಾಯಿತು
* ವೇದವ್ಯಾಸರು ಈ ದಿನದಂದು ಮಹಾಭಾರತ ಬರೆಯಲು ಪ್ರಾರಂಭಿಸಿದರು.
* ಪುರಿ ಜಗ್ನನಾಥ ರಥ ಯಾತ್ರೆ ಪ್ರಾರಂಭ.



Click it and Unblock the Notifications