Latest Updates
-
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಮಲೇರಿಯಾಕ್ಕೆ ಬಲಿಯಾದ ಪ್ರಮುಖ 5 ವ್ಯಕ್ತಿಗಳು
ಮಲೇರಿಯಾ, ಡೆಂಗ್ಯೂ ಈ ಕಾಯಿಲೆಗಳು ಬಂದರೆ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚು. ಕಳೆದ ಒಂದು ಶತಕದಿಂದ 150-300 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ. ಮಲೇರಿಯಾ ಕಾಯಿಲೆಗೆ ಸೊಳ್ಳೆಗಳು ಕಾರಣವಾಗಿವೆ. ಅದರಲ್ಲೂ ಹೆಣ್ಣು ಸೊಳ್ಳೆಗಳು ಮಲೇರಿಯಾ ಕಾಯಿಲೆ ಹರಡಲು ಪ್ರಮುಖ ಕಾರಣವಾಗಿವೆ. ಹೆಣ್ಣು ಸೊಳ್ಳೆ 2 ತಿಂಗಳ ಕಾಲ ಬದುಕಿದರೆ, ಗಂಡು ಸೊಳ್ಳೆ 14 ದಿನಗಳ ಕಾಲ ಮಾತ್ರ ಬದುಕುತ್ತದೆ.
ಸೊಳ್ಳೆಗಳು ಕೊಳಚೆ ಪ್ರದೇಶದಲ್ಲಿ ಮೊಟ್ಟೆ ಹಾಕಿ ಮರಿ ಮಾಡುತ್ತವೆ. ಈ ರೀತಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿ ಸಂಜೆ ಹೊತ್ತಿನಲ್ಲಿ ಹೆಚ್ಚಿನ ಚಟುವಟಿಕೆಯಿಂದ ಇರುತ್ತವೆ. ಈ ಸೊಳ್ಳೆ ಮನುಷ್ಯನ್ನು ಕಚ್ಚಿದಾಗ ಮಲೇರಿಯಾ, ಡೆಂಗ್ಯೂ ಎಂಬ ಅಪಾಯಕಾರಿ ಕಾಯಿಲೆಗಳು ಬರುತ್ತವೆ. ಈಗೆಲ್ಲಾ ಈ ಕಾಯಿಲೆಗೆ ಔಷಧಿ ದೊರೆಯುತ್ತಿದ್ದು ಬದುಕಿ ಉಳಿಯುವ ಸಾಧ್ಯತೆ ಇದೆ, ಕೆಲವರಷ್ಟೆ ಸಾವನ್ನಪ್ಪುತ್ತಾರೆ . ಹಿಂದೆ ಈ ಕಾಯಿಲೆಗೆ ಅನೇಕ ಜನರು ಬಲಿಯಾಗಿದ್ದಾರೆ. ಇಲ್ಲಿ ನಾವು ಮಲೇರಿಯಾ ಕಾಯಿಲೆಯಿಂದ ಸಾವನ್ನಪ್ಪಿದ ಪ್ರಮುಖ ವ್ಯಕ್ತಿಗಳ ಬಗ್ಗೆ ಚಿತ್ರ ಮಾಹಿತಿ ನೀಡಿದ್ದೇವೆ ನೋಡಿ:

ಅಲೆಕ್ಸಾಂಡರ್:
ಅಲೆಕ್ಸಾಂಡರ್ ದಿ ಗ್ರೇಟ್ ಎಂದು ಪ್ರಸಿದ್ದವಾಗಿರುವ ಮಸೆಡೊನಿಯದ ಮುಮ್ಮುಡಿ ಅಲೆಕ್ಸಾಂಡರ್ ಗ್ರೀಸ್ ದೇಶದ ಒಬ್ಬ ಮಹಾನ್ ದಂಡನಾಯಕ. ಇವನು ಬಹುದೊಡ್ಡ ಸಾಮ್ರಾಜ್ಯವನ್ನು ನಿರ್ಮಿಸಿದನು. ಅಲೆಕ್ಸಾಂಡರ್ ಸಾಯುವ ಹೊತ್ತಿಗೆ ಸಾಕಷ್ಟು ಪ್ರದೇಶವನ್ನು ವಶಪಡಿಸಿಕೊಂಡಿದ್ದು ಗ್ರೀಸ್ ನಿಂದ ಹಿಮಾಲಿಯದ ತಪ್ಪಲಿನವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದನು.

ಕ್ಯಾರಾವಾಗ್ಗಿಯೋ:
ಈತ ಇಟಲಿಯ ಪ್ರಸಿದ್ಧ ಚಿತ್ರಕಾರನಾಗಿದ್ದ. ಈತನ ಚಿತ್ರಗಳು ವಾಸ್ತವಕ್ಕೆ ತುಂಬಾ ಹತ್ತಿರವಾಗಿದ್ದವು. ಬದುಕಿರುವಾಗ ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದ ಈತ ಮಲೇರಿಯಾ ಕಾಯಿಲೆಯಿಂದ ಸಾವನ್ನಪ್ಪಿದನು.

ಲಾರ್ಡ್ ಬೈರೂನ್ :
ಬೈರೂನ್ ಇಂಗ್ಲೇಂಡ್ ನ ಪ್ರಸಿದ್ಧ ಕವಿಯಾಗಿದ್ದು ಅತೀ ಚಿಕ್ಕ ವಯಸ್ಸಿನಲ್ಲಿ ಮರಣವಪ್ಪಿದನು. ಈತ ಬರೆದ ರೊಮ್ಯಾಂಟಿಕ್ ಕವತೆಗಳು ಇಂದಿಗೂ ಜನಪ್ರಿಯತೆಯನ್ನು ಗಳಿಸಿದ್ದು 1824 ಏಪ್ರಿಲ್ 19 ರಂದು ಮಲೇರಿಯಾದಿಂದ ಇಹಲೋಕವನ್ನು ತ್ಯಜಿಸಿದರು.

ಅಮರೇಶ್ ಪುರಿ:
ಅಮರೇಶ್ ಪುರಿ ಭಾರತೀಯ ನಟ. ಹಿಂದಿ, ಕನ್ನಡ, ಹಾಲಿವುಡ್, ಪಂಜಾಬಿ, ಮಲೆಯಾಳ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇವರು 2005ರಲ್ಲಿ ಮಲೇರಿಯಾ ಬಂದು ಚಿಕಿತ್ಸೆ ತೆಗೆದುಕೊಳ್ಳುತ್ತಿರುವಾಗ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದರು.

ಓಲಿವರ್ ಕ್ರಾಂವೆಲ್:
ಇವರು ಇಂಗ್ಲೀಷ್ ಮಿಲಿಟರಿ ಹಾಗೂ ಬ್ರಿಟನ್ ನ ರಾಜಕೀಯ ನಾಯಕರಾಗಿದ್ದರು. ನಂತರ ಕಾಮನ್ ವೆಲ್ತ್ ಇಂಗ್ಲೇಂಡ್ ನ ಲಾರ್ಡ್ ಪ್ರೊಟೆಕ್ಟರ್ ಆಗಿದ್ದರು. 1658 ಸೆಪ್ಟಂಬರ್ 3 ರಂದು ಮಲೇರಿಯಾ ಕಾಯಿಲೆಯಿಂದ ಮೃತಪಟ್ಟರು.



Click it and Unblock the Notifications