Latest Updates
-
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಮನುಷ್ಯನ ಶರೀರದ ಬಗ್ಗೆ 9 ಅಚ್ಚರಿಯ ವಿಷಯಗಳು
ಮನುಷ್ಯ ಇತರ ಪ್ರಾಣಿಗಳಿಗಿಂತ ಸಂಪೂರ್ಣ ಭಿನ್ನ. ತನ್ನ ಗುಣದಲ್ಲಿ ಮಾತ್ರವಲ್ಲದ ದೇಹದ ಅಂಗ ರಚನೆಯಲ್ಲೂ ಇತರ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ.ನಮ್ಮ ದೇಹವು ಬಗ್ಗೆ, ಅದರ ಕಾರ್ಯ ವೈಖರಿ ಬಗ್ಗೆ ತಿಳಿಯುವುದಾದರೆ ಸಾಕಷ್ಟು ವಿಷಯಗಳಿವೆ.
ಆದರೆ ಇಲ್ಲಿ ನಾವು ದೇಹದ ಬಗ್ಗೆ ಕೆಲವೊಂದು ಅಚ್ಚರಿಯ ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ!

ಎರಡು ಮೆದುಳು:
ಮನುಷ್ಯನಿಗೆ ಒಂದಲ್ಲಾ ಎರಡು ಮೆದುಳು ಇದೆ. ಎರಡನೇ ಮೆದುಳು ಕರುಳಿನಲ್ಲಿದೆ. ಮನುಷ್ಯನ ದೇಹದಲ್ಲಿ ಸುಮಾರು 100 ಮಿಲಿಯನ್ ನರಗಳಿವೆ. ಅದರಲ್ಲಿ ತುಂಬಾ ನರಗಳು ಬೆನ್ನುಮೂಳೆಯಲ್ಲಿದ್ದು ಅವುಗಳು ಮೂತ್ರ ಪಿಂಡಕ್ಕೆ ಜೋಡಣೆಯಾಗಿರುತ್ತದೆ. ಇದನ್ನು ವೈಜ್ಞಾನಿಕವಾಗಿ enteric nervous system ಎಂದು ಕರೆಯಲಾಗಿದೆ. ಈ ಎರಡನೇ ಮೆದುಳಿಗೆ ಬುದ್ಧಿ ಶಕ್ತಿ ಇರುವುದಿಲ್ಲ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದೇ ಕಾರಣದಿಂದ ಕೆಟ್ಟ ಅಥವಾ ಆಘಾತಕಾರಿ ಸುದ್ಧಿ ಕೇಳಿದಾಗ ಹೊಟ್ಟೆಯಲ್ಲಿ ತಳಮಳದ ಅನುಭವ ಉಂಟಾಗುವುದು.

ಮನುಷ್ಯನಿಗೆ ಆಹಾರ ನುಂಗುವಾಗ ಉಸಿರಾಡಲು ಸಾಧ್ಯವಾಗುವುದಿಲ್ಲ
ಮನುಷ್ಯನಿಗೆ ಮಾತ್ರ ಏನಾದರು ಪದಾರ್ಥಗಳನ್ನು ನುಂಗುವಾಗ ಉಸಿರಾಡುವುದಿಲ್ಲ. ಆದರೆ ಪ್ರಾಣಿಗಳು ತಿನ್ನುವಾಗ ಉಸಿರಾಡುತ್ತವೆ. ಮಗು 9 ತಿಂಗಳು ಇರುವಾಗಲೇ ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಮನುಷ್ಯನ ಧ್ವನಿ ಪೆಟ್ಟಿಗೆ ಕುತ್ತಿಗೆಯ ಕೆಳಭಾಗದಲ್ಲಿರುವುದರಿಂದ ನುಂಗುವುದು ಮತ್ತು ಉಸಿರಾಡುವ ಕ್ರಿಯೆಯನ್ನು ಜೊತೆಗೆ ಮಾಡಲು ಸಾಧ್ಯವಿಲ್ಲ.

ಮೂಗಿಗೆ ಬೆರಳು ಹಾಕುವುದು:
ನಮ್ಮ ಮನೆಯಲ್ಲಿರುವ ಚಿಕ್ಕ ಮಕ್ಕಳು ಮೂಗಿಗೆ ಬೆರಳುಹಾಕುತ್ತಿದ್ದರೆ ಹಾಗೇ ಹಾಕಬೇಡ ಎಂದು ಬೈಯ್ಯುತ್ತೇವೆ ಅಲ್ಲವೇ? ಆದರೆ ಆ ರೀತಿ ಹಾಕುವುದರಿಂದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

ಎಂಜಲು:
ವಾಂತಿ ಬರುವ ಬಾಯಲ್ಲಿ ಎಂಜಲು ಬರುತ್ತದೆ. ಈ ರೀತಿ ಎಂಜಲು ಬಂದಾಗ ಹೊಟ್ಟೆಯಿಂದ ವಾಂತಿಯ ಮುಖಾಂತರ ಹೊರಬರುವ ಆಮ್ಲವು ಗಂಟಲು ಮತ್ತು ಬಾಯಿಯನ್ನು ಹಾನಿ ಮಾಡದಂತೆ ಎಂಜಲು ಸಹಾಯ ಮಾಡುತ್ತದೆ.

ಒಂದು ಮೂಗಿನಲ್ಲಿ ಉಸಿರಾಟ:
ಶೇ. 85 ರಷ್ಟು ಜನರು ಮೂಗಿನಲ್ಲಿ ಮಾತ್ರ ಉಸಿರಾಡುತ್ತಾರೆ. ಎಡಭಾಗದ ಮೂಗಿನ ಹೊಳ್ಳೆಯ ಮುಖಾಂತ ಉಸಿರಾಟ 4 ಗಂಟೆಗಳ ಕಾಲ ಮಾಡಿದರೆ ಮತ್ತೆ 4 ಗಂಟೆಗಳ ಕಾಲ ಬಳಿಕ ಬಲಭಾಗದ ಮೂಗಿನಿಂದ ಉಸಿರಾಡುತ್ತೇವೆ.

ವರ್ಣ ಕುರುಡು:
ವರ್ಣ ಕುರುಡು ಮಹಿಳೆ ಮತ್ತು ಪುರುಷರಲ್ಲಿ ಕಂಡು ಬರುವ ಒಂದು ಕಾಯಿಲೆಯಾಗಿದೆ

ಸಿಹಿ ಕಹಿ:
ದೇಹದ ಯಾವುದಾದರೂ ಭಾಗಕ್ಕೆ ಗಾಯವಾದರೆ ಆ ಭಾಗಕ್ಕೆ ಸ್ವಲ್ಪ ಸಕ್ಕೆ ಸಿಂಪಡಿಸಿದರೆ ಸಾಕು ಬೇಗನೆ ಗುಣವಾಗಿ ನೋವು ಕೂಡ ಕಡಿಮೆಯಾಗುವುದು. ಆಫ್ರಿಕದವರು ಈ ಮನೆಮದ್ದನ್ನು ಪುರಾತನಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ.

ಮರೆವು:
ಮನೆಯ ಯಾವುದಾದರೂ ಕೋಣೆಗೆ ಹೋಗಿ ನಂತರ ಅಲ್ಲಿಗೆ ಏಕೆ ಬಂದೆ ಎಂಬ ವಿಷಯ ಮರೆತು ಹೋಗುವದು, ಈ ರೀತಿಯ ಅನುಭವ ಒಮ್ಮೆಯಾದರೂ ಆಗಿರಬಹುದಲ್ಲವೇ? ಕೋಣೆ ಒಳಗೆ ಬರದೆ ಬಾಗಿಲಿನಲ್ಲಿ ನಿಂತು ಏಕೆ ಬಂದೆ ಅಂತ ಯೋಚಿಸುವವರಿಗಿಂತ ಕೋಣೆ ಒಳಗೆ ಬಂದು ಯೋಚಿಸುವವರಿಗೆ ಮೂರು ಪಟ್ಟು ಅಧಿಕ ಮರೆವು ಇರುತ್ತದೆ.



Click it and Unblock the Notifications