Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮೇದೋಜೀರಕ ಗ್ರಂಥಿ ದಾನ ಮಾಡಿದ 2 ವರ್ಷದ ಬಾಲಕ..! ಸೆಲ್ಯೂಟ್ ಮಾಡಿದ ಸಿಬ್ಬಂದಿ..!!
ನಾವು ಮರಣ ಹೊಂದಿದ ಬಳಿಕವೂ ಜೀವಿಸಬೇಕು ಅಂದ್ರೆ ಅಂಗಾಂಗ ದಾನ ಮಾಡಬೇಕಾಗುತ್ತದೆ. ಅಂಗಾಂಗ ದಾನ ಮಾಡೋದ್ರಿಂದ ನಾವು ಮತ್ತೊಬ್ಬರಿಗೆ ಜೀವನ ನೀಡಿದಂತೆ. ಹಿಂದಿನಿಂದಲೂ ಅಂಗಾಂಗ ದಾನ ಮಾಡುವುದು ನಾವು ನೋಡಬಹುದು. ಇಡೀ ದೇಹವನ್ನೇ ದಾನ ಮಾಡುವವರು ಕೂಡ ಇದ್ದಾರೆ. ನಾವು ಮರಣ ಹೊಂದಿದ ಬಳಿಕ ನಮ್ಮ ಅಂಗಾಂಗಳು ಕೆಲಸಕ್ಕೆ ಬರುತ್ತವೆ. ಕಣ್ಣು, ಕಿಡ್ನಿ, ಹೃದಯ ಸೇರಿ ಹಲವು ಅಂಗಗಳನ್ನು ಬೇರೆಯವರಿಗೆ ಕಸಿ ಮಾಡುವ ಮೂಲಕ ಅವರ ಜೀವನ ಬೆಳಗಬಹುದು.
ಹಾಗೆ ಇಲ್ಲೊಬ್ಬ 2 ವರ್ಷದ ಬಾಲಕ ಈಗ ಮೇದೋಜೀರಕ ಗ್ರಂಥಿ ಸೇರಿ ತನ್ನ ಹಲವು ಅಂಗಗಳ ದಾನ ಮಾಡಿ ಹತ್ತಾರು ಜನರಿಗೆ ನೆರವಾಗಿರುವುದಿಲ್ಲದೆ ಮಾನವೀಯ ಕಾರ್ಯದ ಮೂಲಕ ಹೆಸರಾಗಿದ್ದಾರೆ. ಕೀನ್ಯಾದ ಬಾಲಕ ಭಾರತದಲ್ಲಿ ತನ್ನ ಅಂಗಾಂಗ ದಾನ ಮಾಡುವ ಮೂಲಕ ಈ ದೇಶದ ಮೊಟ್ಟ ಮೊದಲ ಪ್ರಕರಣ ಎಂಬುದಕ್ಕೂ ಹೆಸರಾಗಿದೆ.

2 ವರ್ಷದ ಕೀನ್ಯಾದ ಬಾಲಕ ಚಂಡೀಗಢದ PGIMER ಆಸ್ಪತ್ರೆಯಲ್ಲಿ ಅಂಗಾಂಗ ದಾನ ಮಾಡಿದ್ದು ಮೇದೋಜೀರಕ ಗ್ರಂಥಿ ದಾನ ಮಾಡಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಕೀರ್ತಿಗೂ ಪಾತ್ರರಾದರು. ಆತ ಮನೆಯಲ್ಲಿ ಆಟವಾಡುವಾಗ ಕುಸಿದು ಬಿದ್ದು ಬ್ರೈನ್ ಡೆಡ್ ಆಗಿತ್ತು. ಬರೋಬ್ಬರಿ 10 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದಾಗ ಬ್ರೈನ್ ಡೆಡ್ ಎಂದು ಘೋಷಿಸಲಾಗಿತ್ತು.
ಈಗ ಆತನಿಂದ ಮೇದೋಜೀರಕ ಗ್ರಂಥಿ, ಕಣ್ಣು, ಕಿಡ್ನಿಗಳನ್ನೂ ಪಡೆಯಲಾಗಿದೆ. ಲುಂಡಾ ಕಯುಂಬಾ ಎಂಬ 2 ವರ್ಷದ ಬಾಲಕ ಭಾರತದಲ್ಲಿ ಕುಟುಂಬಸ್ಥರೊಂದಿಗೆ ನೆಲಸಿದ್ದ ಆದ್ರೆ ಆಟವಾಡುವಾಗ ಬಿದ್ದು ಗಾಯಗೊಂಡಿದ್ದ. ಆಸ್ಪತ್ರೆಗೆ ಕರೆತಂದಾಗ ಬ್ರೈನ್ ಡೆಡ್ ಎಂದು ಘೋಷಿಸಲಾಗಿತ್ತು. ಆದ್ರೆ ಕುಟುಂಬಸ್ಥರು ಆತನ ದೇಹದ ಅಂಗಾಂಗಳ ದಾನ ಮಾಡುವ ನಿರ್ಧಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.
ವಿದೇಶಿ ಬಾಲಕನೊಬ್ಬ ಮೊಟ್ಟ ಮೊದಲ ಬಾರಿಗೆ ತನ್ನ ಅಂಗಾಂಗ ದಾನ ಮಾಡಿದ ಪ್ರಕರಣ ಇದಾಗಿದೆ. ಆತನಿಂದ ಪಡೆದ ಅಂಗಾಂಗಳನ್ನು ಒಟ್ಟು ನಾಲ್ಕು ಜನರಿಗೆ ಕಸಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಲುಂಡಾ ಕಯುಂಬಾ ಆತನನ್ನು ಪ್ರೀತಿಯಿಂದ ಪ್ರಾಸ್ಟರ್ ಎಂದು ಕರೆಯಲಾಗುತ್ತಿತ್ತು. ಆತ ಅಕ್ಟೋಬರ್ 17 ರಂದು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಪ್ರಾಸ್ಪರ್ನ ಕಾರ್ನಿಯಾಗಳ ಕಸಿ ಮಾಡುವಿಕೆಯು ಈ ಹಿಂದೆ ಕಾರ್ನಿಯಲ್ ಕುರುಡರಾಗಿದ್ದ ಇಬ್ಬರು ವ್ಯಕ್ತಿಗಳಿಗೆ ತಮ್ಮ ದೃಷ್ಟಿಯನ್ನು ಮರಳಿ ಪಡೆಯಲು ಸಹಾಯ ಮಾಡಿದೆ.
ಸಾವಿನಲ್ಲೂ ಸಾರ್ಥಕತೆ ಕಂಡ ಕುಟುಂಬಸ್ಥರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಹಾಗೆ ಅವರ ಕಾರ್ಯ ಇನ್ನೊಂದಿಷ್ಟು ಜನರಿಗೆ ಸ್ಪೂರ್ತಿಯಾಗಲಿದೆ ಎಂದು ಹೇಳಲಾಗಿದೆ. 2 ವರ್ಷದ ಬಾಲಕನಂತೆ ಉಳಿದ ಮಂದಿ ಕೂಡ ಅಂಗಾಂಗ ದಾನ, ದೇಹದಾನ, ರಕ್ತದಾನದಂತಹ ಮಹತ್ ಕಾರ್ಯಗಳ ಮಾಡುವುದಕ್ಕೆ ಪ್ರೇರೇಪಿಸಲಾಗುತ್ತಿದೆ.



Click it and Unblock the Notifications











