Latest Updates
-
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ರಾಜ ಪರ್ಬ 2026: ಮಹಿಳೆಯರಿಗೆ ವಿಶ್ರಾಂತಿ ನೀಡುವ ಈ ಹಬ್ಬದ ಆಚರಣೆ ಮತ್ತು ವಿಶೇಷತೆಗಳೇನು? -
ದೆಹಲಿ ಮಾಲಿನ್ಯದ ಆತಂಕ: ನಿಮ್ಮ ಮನೆಯನ್ನು ವಿಷಕಾರಿ ಗಾಳಿಯಿಂದ ರಕ್ಷಿಸಲು ಈ ಸರಳ ಕ್ರಮಗಳನ್ನು ಪಾಲಿಸಿ -
ಖರ್ಜೂರದಲ್ಲಿ ಹುಳುಗಳ ಆತಂಕ: ಆನ್ಲೈನ್ನಲ್ಲಿ ಆರ್ಡರ್ ಮಾಡುವ ಮುನ್ನ ಈ ತಪ್ಪು ಮಾಡಬೇಡಿ! -
ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ 2026: ಬಾರ್ಸಿಲೋನಾದಲ್ಲಿ ಇಂದು ಹೈ-ವೋಲ್ಟೇಜ್ ರೇಸ್, ಮಿಸ್ ಮಾಡ್ಬೇಡಿ! -
ರಕ್ತದಾನದ ನಂತರ ಜಿಮ್ಗೆ ಹೋಗುವ ಮುನ್ನ ಎಚ್ಚರ! ಈ ತಪ್ಪುಗಳನ್ನು ಮಾಡಬೇಡಿ
ಮೇದೋಜೀರಕ ಗ್ರಂಥಿ ದಾನ ಮಾಡಿದ 2 ವರ್ಷದ ಬಾಲಕ..! ಸೆಲ್ಯೂಟ್ ಮಾಡಿದ ಸಿಬ್ಬಂದಿ..!!
ನಾವು ಮರಣ ಹೊಂದಿದ ಬಳಿಕವೂ ಜೀವಿಸಬೇಕು ಅಂದ್ರೆ ಅಂಗಾಂಗ ದಾನ ಮಾಡಬೇಕಾಗುತ್ತದೆ. ಅಂಗಾಂಗ ದಾನ ಮಾಡೋದ್ರಿಂದ ನಾವು ಮತ್ತೊಬ್ಬರಿಗೆ ಜೀವನ ನೀಡಿದಂತೆ. ಹಿಂದಿನಿಂದಲೂ ಅಂಗಾಂಗ ದಾನ ಮಾಡುವುದು ನಾವು ನೋಡಬಹುದು. ಇಡೀ ದೇಹವನ್ನೇ ದಾನ ಮಾಡುವವರು ಕೂಡ ಇದ್ದಾರೆ. ನಾವು ಮರಣ ಹೊಂದಿದ ಬಳಿಕ ನಮ್ಮ ಅಂಗಾಂಗಳು ಕೆಲಸಕ್ಕೆ ಬರುತ್ತವೆ. ಕಣ್ಣು, ಕಿಡ್ನಿ, ಹೃದಯ ಸೇರಿ ಹಲವು ಅಂಗಗಳನ್ನು ಬೇರೆಯವರಿಗೆ ಕಸಿ ಮಾಡುವ ಮೂಲಕ ಅವರ ಜೀವನ ಬೆಳಗಬಹುದು.
ಹಾಗೆ ಇಲ್ಲೊಬ್ಬ 2 ವರ್ಷದ ಬಾಲಕ ಈಗ ಮೇದೋಜೀರಕ ಗ್ರಂಥಿ ಸೇರಿ ತನ್ನ ಹಲವು ಅಂಗಗಳ ದಾನ ಮಾಡಿ ಹತ್ತಾರು ಜನರಿಗೆ ನೆರವಾಗಿರುವುದಿಲ್ಲದೆ ಮಾನವೀಯ ಕಾರ್ಯದ ಮೂಲಕ ಹೆಸರಾಗಿದ್ದಾರೆ. ಕೀನ್ಯಾದ ಬಾಲಕ ಭಾರತದಲ್ಲಿ ತನ್ನ ಅಂಗಾಂಗ ದಾನ ಮಾಡುವ ಮೂಲಕ ಈ ದೇಶದ ಮೊಟ್ಟ ಮೊದಲ ಪ್ರಕರಣ ಎಂಬುದಕ್ಕೂ ಹೆಸರಾಗಿದೆ.

2 ವರ್ಷದ ಕೀನ್ಯಾದ ಬಾಲಕ ಚಂಡೀಗಢದ PGIMER ಆಸ್ಪತ್ರೆಯಲ್ಲಿ ಅಂಗಾಂಗ ದಾನ ಮಾಡಿದ್ದು ಮೇದೋಜೀರಕ ಗ್ರಂಥಿ ದಾನ ಮಾಡಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಕೀರ್ತಿಗೂ ಪಾತ್ರರಾದರು. ಆತ ಮನೆಯಲ್ಲಿ ಆಟವಾಡುವಾಗ ಕುಸಿದು ಬಿದ್ದು ಬ್ರೈನ್ ಡೆಡ್ ಆಗಿತ್ತು. ಬರೋಬ್ಬರಿ 10 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದಾಗ ಬ್ರೈನ್ ಡೆಡ್ ಎಂದು ಘೋಷಿಸಲಾಗಿತ್ತು.
ಈಗ ಆತನಿಂದ ಮೇದೋಜೀರಕ ಗ್ರಂಥಿ, ಕಣ್ಣು, ಕಿಡ್ನಿಗಳನ್ನೂ ಪಡೆಯಲಾಗಿದೆ. ಲುಂಡಾ ಕಯುಂಬಾ ಎಂಬ 2 ವರ್ಷದ ಬಾಲಕ ಭಾರತದಲ್ಲಿ ಕುಟುಂಬಸ್ಥರೊಂದಿಗೆ ನೆಲಸಿದ್ದ ಆದ್ರೆ ಆಟವಾಡುವಾಗ ಬಿದ್ದು ಗಾಯಗೊಂಡಿದ್ದ. ಆಸ್ಪತ್ರೆಗೆ ಕರೆತಂದಾಗ ಬ್ರೈನ್ ಡೆಡ್ ಎಂದು ಘೋಷಿಸಲಾಗಿತ್ತು. ಆದ್ರೆ ಕುಟುಂಬಸ್ಥರು ಆತನ ದೇಹದ ಅಂಗಾಂಗಳ ದಾನ ಮಾಡುವ ನಿರ್ಧಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.
ವಿದೇಶಿ ಬಾಲಕನೊಬ್ಬ ಮೊಟ್ಟ ಮೊದಲ ಬಾರಿಗೆ ತನ್ನ ಅಂಗಾಂಗ ದಾನ ಮಾಡಿದ ಪ್ರಕರಣ ಇದಾಗಿದೆ. ಆತನಿಂದ ಪಡೆದ ಅಂಗಾಂಗಳನ್ನು ಒಟ್ಟು ನಾಲ್ಕು ಜನರಿಗೆ ಕಸಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಲುಂಡಾ ಕಯುಂಬಾ ಆತನನ್ನು ಪ್ರೀತಿಯಿಂದ ಪ್ರಾಸ್ಟರ್ ಎಂದು ಕರೆಯಲಾಗುತ್ತಿತ್ತು. ಆತ ಅಕ್ಟೋಬರ್ 17 ರಂದು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಪ್ರಾಸ್ಪರ್ನ ಕಾರ್ನಿಯಾಗಳ ಕಸಿ ಮಾಡುವಿಕೆಯು ಈ ಹಿಂದೆ ಕಾರ್ನಿಯಲ್ ಕುರುಡರಾಗಿದ್ದ ಇಬ್ಬರು ವ್ಯಕ್ತಿಗಳಿಗೆ ತಮ್ಮ ದೃಷ್ಟಿಯನ್ನು ಮರಳಿ ಪಡೆಯಲು ಸಹಾಯ ಮಾಡಿದೆ.
ಸಾವಿನಲ್ಲೂ ಸಾರ್ಥಕತೆ ಕಂಡ ಕುಟುಂಬಸ್ಥರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಹಾಗೆ ಅವರ ಕಾರ್ಯ ಇನ್ನೊಂದಿಷ್ಟು ಜನರಿಗೆ ಸ್ಪೂರ್ತಿಯಾಗಲಿದೆ ಎಂದು ಹೇಳಲಾಗಿದೆ. 2 ವರ್ಷದ ಬಾಲಕನಂತೆ ಉಳಿದ ಮಂದಿ ಕೂಡ ಅಂಗಾಂಗ ದಾನ, ದೇಹದಾನ, ರಕ್ತದಾನದಂತಹ ಮಹತ್ ಕಾರ್ಯಗಳ ಮಾಡುವುದಕ್ಕೆ ಪ್ರೇರೇಪಿಸಲಾಗುತ್ತಿದೆ.



Click it and Unblock the Notifications