Latest Updates
-
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ
ಮೇದೋಜೀರಕ ಗ್ರಂಥಿ ದಾನ ಮಾಡಿದ 2 ವರ್ಷದ ಬಾಲಕ..! ಸೆಲ್ಯೂಟ್ ಮಾಡಿದ ಸಿಬ್ಬಂದಿ..!!
ನಾವು ಮರಣ ಹೊಂದಿದ ಬಳಿಕವೂ ಜೀವಿಸಬೇಕು ಅಂದ್ರೆ ಅಂಗಾಂಗ ದಾನ ಮಾಡಬೇಕಾಗುತ್ತದೆ. ಅಂಗಾಂಗ ದಾನ ಮಾಡೋದ್ರಿಂದ ನಾವು ಮತ್ತೊಬ್ಬರಿಗೆ ಜೀವನ ನೀಡಿದಂತೆ. ಹಿಂದಿನಿಂದಲೂ ಅಂಗಾಂಗ ದಾನ ಮಾಡುವುದು ನಾವು ನೋಡಬಹುದು. ಇಡೀ ದೇಹವನ್ನೇ ದಾನ ಮಾಡುವವರು ಕೂಡ ಇದ್ದಾರೆ. ನಾವು ಮರಣ ಹೊಂದಿದ ಬಳಿಕ ನಮ್ಮ ಅಂಗಾಂಗಳು ಕೆಲಸಕ್ಕೆ ಬರುತ್ತವೆ. ಕಣ್ಣು, ಕಿಡ್ನಿ, ಹೃದಯ ಸೇರಿ ಹಲವು ಅಂಗಗಳನ್ನು ಬೇರೆಯವರಿಗೆ ಕಸಿ ಮಾಡುವ ಮೂಲಕ ಅವರ ಜೀವನ ಬೆಳಗಬಹುದು.
ಹಾಗೆ ಇಲ್ಲೊಬ್ಬ 2 ವರ್ಷದ ಬಾಲಕ ಈಗ ಮೇದೋಜೀರಕ ಗ್ರಂಥಿ ಸೇರಿ ತನ್ನ ಹಲವು ಅಂಗಗಳ ದಾನ ಮಾಡಿ ಹತ್ತಾರು ಜನರಿಗೆ ನೆರವಾಗಿರುವುದಿಲ್ಲದೆ ಮಾನವೀಯ ಕಾರ್ಯದ ಮೂಲಕ ಹೆಸರಾಗಿದ್ದಾರೆ. ಕೀನ್ಯಾದ ಬಾಲಕ ಭಾರತದಲ್ಲಿ ತನ್ನ ಅಂಗಾಂಗ ದಾನ ಮಾಡುವ ಮೂಲಕ ಈ ದೇಶದ ಮೊಟ್ಟ ಮೊದಲ ಪ್ರಕರಣ ಎಂಬುದಕ್ಕೂ ಹೆಸರಾಗಿದೆ.

2 ವರ್ಷದ ಕೀನ್ಯಾದ ಬಾಲಕ ಚಂಡೀಗಢದ PGIMER ಆಸ್ಪತ್ರೆಯಲ್ಲಿ ಅಂಗಾಂಗ ದಾನ ಮಾಡಿದ್ದು ಮೇದೋಜೀರಕ ಗ್ರಂಥಿ ದಾನ ಮಾಡಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಕೀರ್ತಿಗೂ ಪಾತ್ರರಾದರು. ಆತ ಮನೆಯಲ್ಲಿ ಆಟವಾಡುವಾಗ ಕುಸಿದು ಬಿದ್ದು ಬ್ರೈನ್ ಡೆಡ್ ಆಗಿತ್ತು. ಬರೋಬ್ಬರಿ 10 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದಾಗ ಬ್ರೈನ್ ಡೆಡ್ ಎಂದು ಘೋಷಿಸಲಾಗಿತ್ತು.
ಈಗ ಆತನಿಂದ ಮೇದೋಜೀರಕ ಗ್ರಂಥಿ, ಕಣ್ಣು, ಕಿಡ್ನಿಗಳನ್ನೂ ಪಡೆಯಲಾಗಿದೆ. ಲುಂಡಾ ಕಯುಂಬಾ ಎಂಬ 2 ವರ್ಷದ ಬಾಲಕ ಭಾರತದಲ್ಲಿ ಕುಟುಂಬಸ್ಥರೊಂದಿಗೆ ನೆಲಸಿದ್ದ ಆದ್ರೆ ಆಟವಾಡುವಾಗ ಬಿದ್ದು ಗಾಯಗೊಂಡಿದ್ದ. ಆಸ್ಪತ್ರೆಗೆ ಕರೆತಂದಾಗ ಬ್ರೈನ್ ಡೆಡ್ ಎಂದು ಘೋಷಿಸಲಾಗಿತ್ತು. ಆದ್ರೆ ಕುಟುಂಬಸ್ಥರು ಆತನ ದೇಹದ ಅಂಗಾಂಗಳ ದಾನ ಮಾಡುವ ನಿರ್ಧಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.
ವಿದೇಶಿ ಬಾಲಕನೊಬ್ಬ ಮೊಟ್ಟ ಮೊದಲ ಬಾರಿಗೆ ತನ್ನ ಅಂಗಾಂಗ ದಾನ ಮಾಡಿದ ಪ್ರಕರಣ ಇದಾಗಿದೆ. ಆತನಿಂದ ಪಡೆದ ಅಂಗಾಂಗಳನ್ನು ಒಟ್ಟು ನಾಲ್ಕು ಜನರಿಗೆ ಕಸಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಲುಂಡಾ ಕಯುಂಬಾ ಆತನನ್ನು ಪ್ರೀತಿಯಿಂದ ಪ್ರಾಸ್ಟರ್ ಎಂದು ಕರೆಯಲಾಗುತ್ತಿತ್ತು. ಆತ ಅಕ್ಟೋಬರ್ 17 ರಂದು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಪ್ರಾಸ್ಪರ್ನ ಕಾರ್ನಿಯಾಗಳ ಕಸಿ ಮಾಡುವಿಕೆಯು ಈ ಹಿಂದೆ ಕಾರ್ನಿಯಲ್ ಕುರುಡರಾಗಿದ್ದ ಇಬ್ಬರು ವ್ಯಕ್ತಿಗಳಿಗೆ ತಮ್ಮ ದೃಷ್ಟಿಯನ್ನು ಮರಳಿ ಪಡೆಯಲು ಸಹಾಯ ಮಾಡಿದೆ.
ಸಾವಿನಲ್ಲೂ ಸಾರ್ಥಕತೆ ಕಂಡ ಕುಟುಂಬಸ್ಥರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಹಾಗೆ ಅವರ ಕಾರ್ಯ ಇನ್ನೊಂದಿಷ್ಟು ಜನರಿಗೆ ಸ್ಪೂರ್ತಿಯಾಗಲಿದೆ ಎಂದು ಹೇಳಲಾಗಿದೆ. 2 ವರ್ಷದ ಬಾಲಕನಂತೆ ಉಳಿದ ಮಂದಿ ಕೂಡ ಅಂಗಾಂಗ ದಾನ, ದೇಹದಾನ, ರಕ್ತದಾನದಂತಹ ಮಹತ್ ಕಾರ್ಯಗಳ ಮಾಡುವುದಕ್ಕೆ ಪ್ರೇರೇಪಿಸಲಾಗುತ್ತಿದೆ.



Click it and Unblock the Notifications