Latest Updates
-
ಚಂದ್ರಗ್ರಹಣದ ದಿನ.. ಪ್ರೇಮ ಜೀವನದಲ್ಲಿ ಸಂಕಷ್ಟ! ಪ್ರಣಯ ಸಂಬಂಧಗಳಲ್ಲಿ ಎಚ್ಚರ -
March 03 Horoscope: ವರ್ಷದ ಮೊದಲ ಚಂದ್ರಗ್ರಹಣ.. ಅಪಘಾತ ಸಂಭವಿಸುವ ಸಾಧ್ಯತೆ! ಖರ್ಚುಗಳು ಹೆಚ್ಚಾಗಲಿವೆ -
ಬೆಳಗ್ಗೆ ಮಾಡಿದ ರೊಟ್ಟಿ ಸಂಜೆಯಾದರೂ ಫ್ರೆಶ್ & ಸಾಫ್ಟ್ ಆಗಿರುತ್ತೆ! ಅಮ್ಮನ ಸೂಪರ್ ಕಿಚನ್ ಟಿಪ್ಸ್ ಇಲ್ಲಿದೆ -
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ? ಯಾರಿಗೆ ಸಂಕಷ್ಟ? ನಿಮ್ಮ ರಾಶಿ ಫಲ ಇಲ್ಲಿದೆ -
ಉಳಿದ ಅನ್ನದಿಂದ ಮಾಡಿ ಗರಿಗರಿಯಾದ ಕುರ್ಕುರೆ! ಹೊರಗಿನ ಸ್ನ್ಯಾಕ್ಗೂ ಮೀರಿದ ರುಚಿ.. ಮಾಡೋದು ಹೇಗೆ? -
30 ವರ್ಷ ದಾಟಿದ್ರಾ? ಈ 5 ಅಭ್ಯಾಸಗಳನ್ನು ತಕ್ಷಣ ಬದಲಿಸಿ.. ಜೀವನಪೂರ್ತಿ ಫಿಟ್ ಆಗಿರಿ! -
Happy Holi 2026: ನಿಮ್ಮ ಪ್ರೀತಿಪಾತ್ರರಿಗೆ ಕಳಿಸಿ ಈ ಸ್ಪೆಷಲ್ ಶುಭಾಶಯಗಳು! ಸ್ನೇಹ, ಪ್ರೀತಿ, ಸಂತೋಷ ತುಂಬಿದ ಮೆಸೇಜ್ ಇಲ್ಲಿವೆ -
ಹಸಿ ಬಟಾಣಿ ಬಳಸಿ ಖಸ್ತ ಪೂರಿ ಹೀಗೆ ಮಾಡಿ.. ಪ್ರತಿ ಪುರಿಯೂ ಹೂವಿನಂತೆ ಉಬ್ಬಿ ಬರುತ್ತೆ! ಸೂಪರ್ ರುಚಿ, 15 ನಿಮಿಷಗಳಲ್ಲಿ ರೆಡಿ! -
ಈ ದಿನ ಕೌಟುಂಬಿಕ ಸುಖ ಪ್ರಾಪ್ತಿ! ಪ್ರೇಮ ಜೀವನದಲ್ಲಿ ತೊಂದರೆಗಳು -
March 02 Horoscope: ಸಾಲದ ಕುರಿತಾದ ಚಿಂತೆಯೊಂದು ದೂರಾಗಲಿದೆ!
ಆಷಾಢದಲ್ಲಿ ಹೆಣ್ಮಕ್ಕಳು ಕೈ-ಕಾಲುಗಳಿಗೆ ಮೆಹಂದಿ ಹಚ್ಚಬೇಕು ಎನ್ನುವುದರ ಹಿಂದಿದೆ ಈ ವೈಜ್ಞಾನಿಕ ಕಾರಣ
ಆಷಾಢ ಮಾಸ ಶುರುವಾಗಿದೆ. ಆಷಾಢ ಮಾಸದಲ್ಲಿ ಹಲವಾರು ಆಚರಣೆಗಳನ್ನು ಪಾಲಿಸಲಾಗುವುದು, ಕೆಲವೊಂದು ಆಚರಣೆಗಳನ್ನು ನೋಡಿದಾಗ ಮೂಢನಂಬಿಕೆ ಅನಿಸಿದರೂ ಅದರ ಹಿಂದೆ ವೈಜ್ಞಾನಿಕ ಕಾರಣಗಳಿರುತ್ತದೆ, ಆದರೆ ಬಹುತೇಕರಿಗೆ ಅದು ಗೊತ್ತಿರುವುದಿಲ್ಲ, ಉದಾಹರಣೆಗೆ ಕೈ, ಕಾಲುಗಳಿಗೆ ಮೆಹಂದಿ ಹಾಕುವುದು.
ಆಷಾಢದಲ್ಲಿ ಹೆಣ್ಮಕ್ಕಳು ಕೈ-ಕಾಲುಗಳಿಗೆ ಮೆಹಂದಿ ಹಚ್ಚಬೇಕು ಎಂದು ಹೇಳಲಾಗುವುದು. ಈಗೀನವರಿಗೆ ಈ ಬಗ್ಗೆ ಹೇಳಿದರೆ ಆಷಾಢಕ್ಕೂ, ಕೈ-ಕಾಲುಗಳಿಗೆ ಮೆಹಂದಿ ಹಾಕುವುದಕ್ಕೂ ಏನು ಸಂಬಂಧ ಎಂದನಿಸಬಹುದು. ಈ ರೀತಿ ಅನಿಸುವುದಕ್ಕೂ ಕಾರಣವಿದೆ. ಮನೆಯಲ್ಲಿ ಹಿರಿಯರು ಆಷಾಢ ಕಾಲ ನೀನು ಕೈ-ಕಾಲುಗಳಿಗೆ ಮೆಹಂದಿ ಹಾಕು ಎಂದರೆ ಸಿಟ್ಟು ಬರಬಹುದು, ಆದರೆ ಅದನ್ನು ವೈಜ್ಞಾನಿಕವಾಗಿ ತಿಳಿಸಿ ಹೇಳಿದರೆ ಹೌದಲ್ವಾ ಎಂದನಿಸುವುದು.

ಆಷಾಢದಲ್ಲಿ ಮೆಹಂದಿ ಹಾಕಬೇಕು ಏಕೆ, ಇದರ ಹಿಂದಿನ ವೈಜ್ಞಾನಿಕ ಕಾರಣಗಳೇನು ಎಂದು ನೋಡಿದರೆ:
ಕರ್ನಾಟಕ, ಆಂಧ್ರಪ್ರದೇಶದಲ್ಲಿ ಆಷಾಢದಲ್ಲಿ ಹೆಣ್ಮಕ್ಕಳು ಕೈಗಳಿಗೆ ಮೆಹಂದಿ ಹಚ್ಚುವ ಆಚರಣೆಯಿದೆ. ಅನೇಕ ಕಾರಣಗಳಿಗೆ ಮೆಹಂದಿ ಹಚ್ಚಬೇಕು ಎಂದು ಹೇಳಲಾಗುವುದು, ಅದರಲ್ಲೊಂದು ಪ್ರಮುಖ ಕಾರಣ ಆರೋಗ್ಯ. ಮೆಹಂದಿಯನ್ನು ಕಾಲುಗಳಿಗೆ, ಕೈಗಳಿಗೆ ಹಚ್ಚುವುದರಿಂದ ಮಳೆಗಾಲದಲ್ಲಿ ಉಂಟಾಗುವ ತ್ವಚೆ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.
1. ಆ್ಯಂಟಿಸೆಪ್ಟಿಕ್ ಗುಣವಿದೆ
ಮೆಹಂದಿಯಲ್ಲಿ ಆ್ಯಂಟಿಸೆಪ್ಟಿಕ್ ಗುಣವಿರುವುರಿಂದ ಮಳೆಗಾಲದಲ್ಲಿ ಓಡಾಡುವಾಗ ಕೆಸರು ಕಜ್ಜಿ ಉಂಟಾಗುವುದನ್ನು ತಡೆಗಟ್ಟಲು ಸಹಕಾರಿ. ಅಲ್ಲದೆ ಈ ಸಮಯದಲ್ಲಿ ಹಳ್ಳಿ ಕಡೆಯಲ್ಲಿ ಬೆಳೆ ಬೆಳೆಯಲಾಗುವುದು, ರೈತಾಪಿ ಮಹಿಳೆಯರು ಬೆಳಗ್ಗೆಯಿಂದ ಸಂಜೆಯವರೆಗೆ ಮಣ್ಣಿನಲ್ಲಿ ದುಡಿಯುತ್ತಾರೆ, ಆವಾಗ ಕೈ, ಕಾಲುಗಳಲ್ಲಿ ಕೆಸರು ಕಜ್ಜಿ ಉಂಟಾಗುವ ಸಾಧ್ಯತೆ, ಈ ಮೆಹಂದಿ ಹಚ್ಚುವುದರಿಂದ ಇವುಗಳನ್ನು ತಡೆಗಟ್ಟಬಹುದು.
2. ಸಂಧಿವಾತ ಸಮಸ್ಯೆ ತಡೆಗಟ್ಟುತ್ತದೆ.
ಮಳೆಗಾಲದಲ್ಲಿ ಚಳಿಯಿಂದಾಗಿ ಕೈ ಕಾಲುಗಳಲ್ಲಿ ನೋವು ಉಂಟಾಗುವುದು, ಅದರಲ್ಲೂ ಸಂಧಿವಾತದ ನೋವು ಉಂಟಾಗುವುದು. ಇನ್ನು ಹೆಣ್ಮಕ್ಕಳು ಮನೆ ಒರೆಸುವುದು, ಬಟ್ಟೆ ಹೊಗೆಯುವುದು, ಪಾತ್ರೆ ತೊಳೆಯುವುದು ಅಂತ ಅಧಿಕ ಹೊತ್ತು ನೀರಿನಲ್ಲಿ ಕೆಲಸ ಮಾಡುತ್ತಾರೆ. ಈ ಕಾರಣಕ್ಕೆ ಕೈ ಕಾಲುಗಳಲ್ಲಿ ಸೆಳೆತ ಉಂಟಾಗುವುದು. ಇದನ್ನು ತಡೆಗಟ್ಟಲು ಮೆಹಂದಿ ಸಹಕಾರಿಯಾಗಿದೆ.
3. ಮಾನಸಿಕವಾಗಿ ಕೂಡ ಒಳ್ಳೆಯದು
ಮೆಹಂದಿ ಹಚ್ಚುವುದರಿಂದ ದೇಹದಲ್ಲಿ ಪಿತ್ತದ ಅಂಶ ಕಡಿಮೆಯಾಗುವುದು. ಅಲ್ಲದೆ ಮಾನಸಿಕ ಒತ್ತಡ, ಕೋಪ ಈ ಬಗೆಯ ಕಿರಿಕಿರಿಯನ್ನು ಕೂಡ ಮೆಹಂದಿ ಕಡಿಮೆ ಮಾಡುತ್ತದೆ. ಮೆಹಂದಿಯ ಆ ಸುವಾಸನೆ ಮನಸ್ಸಿಗೆ ತುಂಬಾನೇ ಮುದ ನೀಡುವುದು, ಈ ಸುವಾಸನೆಗೆ ಕೋಪವನ್ನು ಕಡಿಮೆ ಮಾಡುವ ಸಾಮರ್ಥ್ಯವಿದೆ.
4. ಅನೇಕ ಬಗೆಯ ತ್ವಚೆ ಸಮಸ್ಯೆ ಕಡಿಮೆಯಾಗುವುದು
ಮೆಹಂದಿ ಹಚ್ಚಿದರೆ ತುರಿಕೆ, ಮೈಯಲ್ಲಿ ಬೊಬ್ಬೆ ಬರುವುದು ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ. ಅಲ್ಲದೆ ಗುಳ್ಳೆಗಳು ಅಥವಾ ಕಜ್ಜಿಗಳು ಬೇಗನೆ ಒಣಗುವಂತೆ ಮಾಡುವ ಗುಣ ಮೆಹಂದಿಗೆ ಇದೆ.
5. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಿ
ಮೆಹಂದಿ ಹಚ್ಚುವುದರಿಂದ ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿಡುತ್ತದೆ, ಹೀಗಾಗಿ ಒಟ್ಟು ಮೊತ್ತ ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು . ಇದರಿಂದ ಹೃದಯದ ಆರೋಗ್ಯಕ್ಕೆ ಕೂಡ ಒಳ್ಳೆಯದು.
ಕಾಮೋತ್ತೇಜಕ ಗುಣವೂ ಇದೆ
ಮದುವೆಗಳಲ್ಲಿ ಮೆಹಂದಿ ಹಚ್ಚುವ ಸಂಪ್ರದಾಯವೇ ಇದೆ. ಈ ಮೆಹಂದಿಗೆ ಕಾಮೋತ್ತೇಜಕ ಗುಣವಿದೆ. ಆದ್ದರಿಂದಲೇ ಮೆಹಂದಿ ಮದುವೆಯಲ್ಲಿ ತುಂಬಾನೇ ಪ್ರಾಮುಖ್ಯತೆ ಗಳಿಸಿದೆ. ಮದುವೆಯಲ್ಲಿ ಮದುಮಗ-ಮದುಮಗಳಿಗೆ ಮೆಹಂದಿ ಹಾಕಿದಾಗಲೇ ಮದುವೆಯ ಕಳೆ ಹೆಚ್ಚುವುದು ಅಲ್ವಾ?
ಹೀಗೆ ನಮ್ಮ ಹಿರಿಯರು ಪಾಲಿಸಿಕೊಂಡು ಬರುವ ಆಚರಣೆಯ ಹಿಂದೆ ಯಾವುದೋ ಒಂದು ಪ್ರಾಮುಖ್ಯತೆ ಇರುತ್ತದೆ, ಅದನ್ನು ತಿಳಿಯಲು ನಾವು ಪ್ರಯತ್ನಿಸಬೇಕಷ್ಟೇ...
ಸೂಚನೆ: ಮೆಹಂದಿ ನೈಸರ್ಗಿಕವಾದದ್ದನ್ನೇ ಬಳಸಿದರೆ ಮಾತ್ರ ಪ್ರಯೋಜನ ಪಡೆಯಲು ಸಾಧ್ಯ.



Click it and Unblock the Notifications











