Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯಲ್ಲಿ ಈ ವಾಸ್ತು ದೋಷಗಳಾದರೆ ಸಾಲ ಗ್ಯಾರಂಟಿ!
ಹೆಚ್ಚಿನ ಮನೆಗಳಲ್ಲಿ ಆರ್ಥಿಕ ಮುಗ್ಗಟ್ಟು ಇದ್ದೇ ಇರುತ್ತದೆ. ಎಷ್ಟೇ ದುಡಿದ್ರೂ ಕೂಡ ಒಂದಲ್ಲ ಒಂದು ತಾಪತ್ರಯ ಎದುರಾಗುತ್ತಲೇ ಇರುತ್ತದೆ. ಕೆಲವೊಂದು ಮನೆಗಳಲ್ಲಿ ಗಂಡ-ಹೆಂಡತಿ ಇಬ್ಬರೂ ದುಡಿದರೂ ಕೂಡ ತಿಂಗಳ ಕೊನೆಯಾದ್ರೆ ಕೈಯಲ್ಲಿ ದುಡ್ಡು ಉಳಿಯೋದಿಲ್ಲ. ಕೆಲವೊಂದು ಸಲ ಅನವಶ್ಯಕ ವಿಚಾರಗಳಿಗೆ ದುಡ್ಡು ಖರ್ಚು ಮಾಡೋದ್ರಿಂದ ನೀವು ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ.

ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ ನಿಮ್ಮ ಮನೆಯಲ್ಲಿ ಇರುವ ಕೆಲವೊಂದು ವಾಸ್ತು ದೋಷಗಳು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಬಹುದು. ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವೊಂದು ತಪ್ಪುಗಳು ಆಗಿರಬಹುದು. ಅಂತಹ ತಪ್ಪುಗಳು ಆಗಿದ್ದರೆ ಇಂದೇ ಸರಿಪಡಿಸಿ. ಅಷ್ಟಕ್ಕೂ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುವ ವಾಸ್ತು ದೋಷಗಳು ಯಾವುದು ಅನ್ನೋದನ್ನು ತಿಳಿದುಕೊಳ್ಳೋಣ.
ಮಲಗುವ ಕೋಣೆಯ ಹಾಸಿಗೆ ಮುಂದೆ ಕನ್ನಡಿ ಇರಬಾರದು!
ನಿಮ್ಮ ಮಲಗುವ ಕೋಣೆಯಲ್ಲಿ ಹಾಸಿಗೆಯ ಮುಂದೆ ಕನ್ನಡಿ ಇರಬಾರದು. ಇದು ವಾಸ್ತು ದೋಷಗಳಿಗೆ ಪ್ರಮುಖ ಕಾರಣವಾಗಿದೆ. ನಿಮ್ಮ ಮನೆಯಲ್ಲಿಯೂ ಈ ರೀತಿ ಇದ್ದರೆ ಈಗಲೇ ಬದಲಾಯಿಸಿ. ಇಂತಹ ಮನೆಗಳಲ್ಲಿ ಪತಿ-ಪತ್ನಿಯರ ನಡುವೆ ಆಗಾಗ ಜಗಳ ನಡೆಯುತ್ತದೆ. ಮತ್ತಿ ಸುಖ-ಶಾಂತಿಯ ಕೊರತೆ ಕಾಡುತ್ತದೆ. ಅಪ್ಪಿತಪ್ಪಿಯೂ ಹಾಸಿಗೆಯ ಮುಂದೆ ಕನ್ನಡಿ ಹಾಕಬೇಡಿ. ಒಂದು ವೇಳೆ ಆ ಕನ್ನಡಿಯನ್ನು ತೆಗೆದು ಹಾಕಲು ಸಾಧ್ಯವಾಗದಿದ್ದರೆ ಅದನ್ನು ಮುಚ್ಚುವುದು ಒಳ್ಳೆಯದು.
ಅಡುಗೆಮನೆಯ ಒಂದೇ ದಿಕ್ಕಿನಲ್ಲಿ ಗ್ಯಾಸ್ ಸ್ಟೌವ್ ಮತ್ತು ನೀರಿನ ಮೂಲ ಇರಬಾರದು!
ನಿಮ್ಮ ಮನೆಯ ಅಡುಗೆಮನೆಯಲ್ಲಿ ಒಂದೇ ದಿಕ್ಕಿನಲ್ಲಿ ಗ್ಯಾಸ್ ಸ್ಟೌವ್ ಮತ್ತು ನೀರಿನ ಮೂಲವಿದ್ದರೆ ಅದು ಪ್ರಮುಖ ವಾಸ್ತು ದೋಷಕ್ಕೆ ಕಾರಣವಾಗುತ್ತಂತೆ. ತಕ್ಷಣ ಅದನ್ನು ಸರಿಪಡಿಸಿ. ಅಡುಗೆಮನೆಯಲ್ಲಿ ಗ್ಯಾಸ್ ಸ್ಟೌವ್ ಅನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಈ ರೀತಿ ಇದ್ದರೆ ಪರಸ್ಪರ ಸಂಬಂಧಗಳು ಮಧುರವಾಗಿರುತ್ತವೆ ಮತ್ತು ಹಣದ ಕೊರತೆ ಎದುರಾಗೋದಿಲ್ಲ.
ಮುರಿದ ಬಾಗಿಲು ಮತ್ತು ಕಿಟಕಿಗಳು!
ನಿಮ್ಮ ಮನೆಯ ಕಿಟಕಿಗಳು ಮತ್ತು ಬಾಗಿಲುಗಳು ಮುರಿದಿದ್ದರೆ ಅಥವಾ ಅವುಗಳಿಂದ ಶಬ್ದ ಬಂದರೆ ಅದನ್ನು ಪ್ರಮುಖ ವಾಸ್ತು ದೋಷವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಕಿಟಕಿಗಳು ಮತ್ತು ಬಾಗಿಲುಗಳಿಂದ ಬರುವ ಯಾವುದೇ ರೀತಿಯ ಶಬ್ದದಿಂದ ನಕಾರಾತ್ಮಕ ಶಕ್ತಿಯು ಉತ್ಪತ್ತಿಯಾಗುತ್ತದೆ. ಅದಕ್ಕೇ ಸದ್ದು ಬರದಂತೆ ಕಾಲಕಾಲಕ್ಕೆ ಅವುಗಳ ಕೀಲುಗಳಿಗೆ ಎಣ್ಣೆ ಹಾಕುತ್ತಲೇ ಇರುತ್ತಾರೆ.
ಮನೆಯ ಮಧ್ಯದಲ್ಲಿ ಬೃಹತ್ ವಸ್ತುಗಳನ್ನು ಇಡಬಾರದು!
ನಿಮ್ಮ ಮನೆಯ ಮಧ್ಯದಲ್ಲಿ ಯಾವುದೇ ಭಾರವಾದ ವಸ್ತುವನ್ನು ಇರಿಸಿದರೆ ತಕ್ಷಣ ಅದನ್ನು ತೆಗೆದುಹಾಕಿ. ಈ ರೀತಿ ಇದ್ದರೆ ಕುಟುಂಬದ ತಲೆಯ ಮೇಲೆ ಸಾಲದ ಹೊರೆ ಹಾಗೆಯೇ ಉಳಿಯುತ್ತಂತೆ. ಮತ್ತು ಅದಕ್ಕೆ ಪರಿಹಾರವೇ ಸಿಗುವುದಿಲ್ಲ. ಅಪ್ಪಿತಪ್ಪಿಯೂ ಮನೆಯ ಮಧ್ಯದಲ್ಲಿ ಭಾರವಾದ ವಸ್ತುಗಳನ್ನು ಇಡಬೇಡಿ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವನ್ನು ತಡೆಯುತ್ತದೆ.
ಮುಖ್ಯ ದ್ವಾರದ ಮುಂಭಾಗದಲ್ಲಿ ಅಡಚಣೆ ಇರಬಾರದು!
ಮನೆಯ ಮುಖ್ಯ ಬಾಗಿಲನ್ನು ಯಾವಾಘಲೂ ಸ್ವಚ್ಛವಾಗಿ ಇಡಬೇಕು. ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂವಹನಕ್ಕಾಗಿ ಸಂಘಟಿತವಾಗಿರುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಮುಖ್ಯ ಬಾಗಿಲಿನ ಮುಂದೆ ಯಾವುದೇ ದೊಡ್ಡ ಮರ ಅಥವಾ ಯಾವುದೇ ದೊಡ್ಡ ಕಂಬ ಅಥವಾ ಯಾವುದೇ ರೀತಿಯ ಅಡಚಣೆ ಇರಬಾರದು. ಇದರಿಂದ ಕೋಪಗೊಂಡ ತಾಯಿ ಲಕ್ಷ್ಮಿ ನಿಮ್ಮ ಮನೆಯಿಂದ ಹೊರಟು ಹೋಗುತ್ತಾಳೆ ಅಂತ ಹೇಳಲಾಗುತ್ತದೆ.



Click it and Unblock the Notifications