Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಎಲ್ಲಿ ಕೆಲಸಕ್ಕೆ ಹೋದರೂ ಕೆಲಸದಿಂದ ತೆಗೆಯುತ್ತಿದ್ದ ಯುವಕನಿಗೆ ಈಗ ತಿಂಗಳಿಗೆ 10 ಲಕ್ಷ ಆದಾಯ
ಕೆಲಸ ತಪ್ಪಿ ಹೋದರೆ ಆಕಾಶವೇ ಕಳಚಿ ಬಿದ್ದಂತೆ ಭಾಸವಾಗುವುದು. ಆದರೆ ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಹೇಳುವುದು ಸುಮ್ಮನ್ನಲ್ಲ ಎಂಬುವುದು ಈ ಯುವಕ ಕತೆ ನೋಡಿದಾಗ ಅನಿಸುವುದು. ಈತ ಇಂಗ್ಲೆಂಡ್ನಲ್ಲಿರುವ ಯುವಕ, ಹೆಸರು ರಯಾನ್ ಮ್ಯಾಕ್ಟೀರಿ ಲಿವರ್ ಪೂಲ್. ಈತ ಎಲ್ಲಿ ಕೆಲಸಕ್ಕೆ ಹೋದರೂ ಅಲ್ಲಿ ತುಂಬಾ ದಿನಗಳು ಕೆಲಸ ಮಾಡುತ್ತಿರಲಿಲ್ಲ, ಅವನನ್ನು ಕೆಲಸದಿಂದ ತೆಗೆದು ಬಿಡುತ್ತಿದ್ದರು.
ಯಾವ ಕೆಲಸವೂ ನನಗೆ ಕೈ ಹಿಡಿಯುತ್ತಿಲ್ಲ ಎಂದು ಅನಿಸಿದಾಗ ನಂದೇ ಸ್ವಂತ ಬ್ಯುಸ್ನೆಸ್ ಮಾಡಬಾರದು ಎಂದು ಯೋಚಿಸುತ್ತಾನೆ. ಸ್ವಂತ ಕಾರು ಕಂಪನಿ ಪ್ರಾರಂಭಿಸುತ್ತಾನೆ. ಈತ ಈಗ ತಿಂಗಳಿಗೆ 100,000 ಪೌಂಡ್ ಅಂದರೆ (ರು. 10,549990) ದುಡಿಯುತ್ತಿದ್ದಾನೆ.

ಆತ ತನ್ನ ಮೊದಲ ಕಾರನ್ನು 19ನೇ ವಯಸ್ಸಿಗೆ ಮಾರಿದ, ಆದರೆ ದೊಡ್ಡ ಲಾಭವೇನೂ ಗಳಿಸಲ್ಲ, ಆದ್ದರಿಂದ ಈತ ಬೇರೆ ಕಡೆ ಕೆಲಸ ಮಾಡಲು ನಿರ್ಧಸಿದ. ಒಂದು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ, ಆದರೆ ಅಲ್ಲಿಯೂ ತುಂಬಾ ಸಮಯ ಕೆಲಸ ಮಾಡಲು ಸಾಧ್ಯವಾಗಲಿಲ್ಲ, ಆದ್ದರಿಂದ ಕೆಲಸದಿಂದ ತೆಗೆದು ಹಾಕುತ್ತಾರೆ. ಏಕೆಂದರೆ ಕೆಲಸದ ಕಡೆಗೆ ಆತ ಹೆಚ್ಚು ಗಮನ ನೀಡುತ್ತಿಲ್ಲ ಎಂಬ ಕಾರಣಕ್ಕೆ ತೆಗೆದು ಹಾಕುತ್ತಾರೆ. ಆದರೆ ಆತನಿಗೆ ಕಾರು ಕಂಪನಿಗಳಲ್ಲಿ ಕೆಲಸ ಮಾಡಿದಾಗ ಗ್ರಾಹಕ ಬೇಡಿಕೆಯೇನು ಎಂದು ತಿಳಿಯಲು ಸಹಾಯ ಮಾಡುತ್ತದೆ.
22ನೇ ವರ್ಷದಲ್ಲಿ ಆತ ಕಾರು ಬ್ಯುಸ್ನೆಸ್ ಪ್ರಾರಂಭಿಸುತ್ತಾನೆ, ಆತ ತನ್ನ ಗ್ರಾಹಕರನ್ನು ಇನ್ಸ್ಟಾಗ್ರಾಂ ಮೂಲಕ ಪಡೆಯುತ್ತಾನೆ, ನಂತರ ಅವರ ಬೇಡಿಕೆಯಂತೆ ಕಾರುಗಳನ್ನು ಮಾರಾಟ ಮಾಡುವ ಕೆಲಸದಲ್ಲಿ ತೊಡಗುತ್ತಾನೆ. ಈಗ ನೋಡಿದರೆ ಆತ ತಿಂಗಳಿಗೆ ಲಕ್ಷಾಂತರ ರುಪಾಯಿ ಗಳಿಸುತ್ತಿದ್ದಾನೆ.
Rockstar Car Finance ಎಂಬ ಕಂಪನಿ ಕಟ್ಟಿಕೊಂಡು ತಿಂಗಳಿಗೆ ಲಕ್ಷಾಂತರ ರುಪಾಯಿ ದುಡಿಯುತ್ತಿದ್ದಾರೆ. ಎಲ್ಲರ ಬದುಕಿನಲ್ಲಿಯೂ ಸಾಧನೆಗೆ ಒಂದು ಮಾರ್ಗವಿರುತ್ತದೆ, ಅದನ್ನು ಕಂಡುಕೊಳ್ಳಬೇಕು ಅಷ್ಟೇ...
ಬದುಕಿನಲ್ಲಿ ಕೆಟ್ಟದ್ದು ಆದಾಗ ನನಗೆ ಮಾತ್ರ ಹೀಗೆ ಆಗುತ್ತಿದೆ, ಏಕೆ? ಎಂದನಿಸುವುದು, ಅದರಲ್ಲೂ ಕೆಲಸ ಕಳೆದುಕೊಂಡಾಗ ಮುಂದೇನು ಎಂಬ ಭಯ ಶುರುವಾಗುವುದು, ಆದರೆ ಭಯ ಪಡುವ ಅಗ್ಯತವಿಲ್ಲ, ಅದಕ್ಕಿಂತ ಉತ್ತಮವಾದದ್ದು ನಿಮಗೆ ಕಾದಿದೆ ಎಂದು ಮುಂದಕ್ಕೆ ಹೋಗಬೇಕು, ಹಾಗಾಗಿ ಈತನ ಕತೆಯೂ ನಮಗೆಲ್ಲಾ ಒಂದು ರೀತಿಯ ಸ್ಪೂರ್ತಿ ಅ ಹೌದು ಅಲ್ವೇ?



Click it and Unblock the Notifications











