ಝೆನ್ ಕಥೆ: ಸೈಕಲ್ ಬಳಸಿದ್ದು ಏಕೆ?

Kannada Zen story
ಝೆನ್ ಗುರುಗಳ ಮೂರು ಮಂದಿ ಶಿಷ್ಯರು ಮಾರ್ಕೆಟ್ ಗೆ ತಮ್ಮ ಸೈಕಲ್ ನಲ್ಲಿ ಹೋಗಿ ಸಾಮಾನುಗಳನ್ನು ತಂದರು. ಶಿಷ್ಯರು ಸೈಕಲ್ ನಲ್ಲಿ ಹೋಗಿ ಬಂದದ್ದನ್ನು ನೋಡಿದ ಝೆನ್ ಗುರು ಶಿಷ್ಯರ ಹತ್ತಿರ ಬಂದು "ನೀವು ಸೈಕಲ್ ನಲ್ಲಿ ಹೋಗಿ ಬಂದದ್ದು ಏಕೆ? : ಎಂದು ಕೇಳಿದರು.

ಅದಕ್ಕೆ ಆ ಮೂರು ಮಂದಿ ಶಿಷ್ಯರು ನೀಡಿದ ಉತ್ತರ ಮಾತ್ರ ಬೇರೆ-ಬೇರೆಯಾಗಿತ್ತು.

ಒಬ್ಬ ಶಿಷ್ಯ ಹೇಳಿದ "ಒಂದು ಗೋಣಿ ಚೀಲ ತುಂಬಾ ಆಲೂಗೆಡ್ಡೆಯನ್ನು ಸೈಕಲ್ ನಲ್ಲಿ ತರಲು ಸುಲಭವಾಯಿತು ಇಲ್ಲದಿದ್ದರೆ ಬೆನ್ನು ಮೇಲೆ ಆ ಭಾರದ ಚೀಲ ಹೊತ್ತು ತರಲು ಕಷ್ಟವಾಗುತ್ತಿತ್ತು" ಎಂದು ಹೇಳಿದನು.

ಅದಕ್ಕೆ ಗುರುಗಳು "ನೀನು ತುಂಬಾ ಬುದ್ಧಿವಂತ, ನಿನಗೆ ವಯಸ್ಸಾದಾಗ ನನಗೆ ಕಾಣಿಸುವಂತಹ ಬೆನ್ನು ನೋವಿನ ಸಮಸ್ಯೆ ಇರುವುದಿಲ್ಲ" ಎಂದು ಹೇಳಿದರು.

ಎರಡನೆಯವನು "ನಾನು ಸೈಕಲ್ ಓಡಿಸುವಾಗ ಆರಾಮವಾಗಿ ಪ್ರಕೃತಿ ಸೌಂದರ್ಯವನ್ನು ನೋಡುತ್ತಾ ಬರುವೆ" ಎಂದು ಹೇಳುತ್ತಾನೆ.

ಅದಕ್ಕೆ ಗುರುಗಳು "ಈ ಪ್ರಪಂಚವನ್ನು ನೋಡಲು ನಿನ್ನ ಕಣ್ಣಿಗಳನ್ನು ತೆರೆದಿಟ್ಟಿರುವೆ, ಒಳ್ಳೆಯದು" ಎಂದರು.

ಮೂರನೆಯವನು ಮಾತ್ರ "ಗುರುಗಳೆ ನಾನು ಸೈಕಲ್ ಓಡಿಸುವಾಗ ಮಂತ್ರ ಹೇಳುತ್ತಾ ಬರುತ್ತೇನೆ" ಎಂದು ಹೇಳಿದನು. ಗುರುಗಳು ತೃಪ್ತಿಯಿಂದ ಮುಗುಳ್ನಕ್ಕರು.

English summary

Kannada Zen story | Inspirational short stories | ಝೆನ್ ಕಥೆ : ಸೈಕಲ್ ಬಳಸಿದ್ದು ಏಕೆ?

Students of a Zen master was back from the market on their bicycles. As they dismounted, their master asked : Why are you riding your bicycles ?"
X
Desktop Bottom Promotion