Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ವಿವಾಹ ಪಂಚಮಿ 2021: ಶ್ರೀರಾಮ-ಸೀತಾಮಾತೆ ಮದುವೆಯಾದ ಈ ದಿನ ಮದುವೆಯಾಗಲು ಜನರು ಭಯಪಡುವುದೇಕೆ?
ಡಿಸೆಂಬರ್ 8ರಂದು ವಿವಾಹ ಪಂಚಮಿಯನ್ನು ಆಚರಿಸಲಾಗುತ್ತಿದೆ. ಮಾಘಾ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ಶ್ರೀರಾಮ್ ಮಹೋತ್ಸವ ಎಂದು ಆಚರಿಸಲಾಗುವುದು.

ಈ ಪಂಚಮಿಯಂದು ಎರಡು ವ್ಯಕ್ತಿಗಳು ಒಂದಾದರೆ (ವಿವಾಹ), ಕನ್ಯೆಯನ್ನು ಪೂಜಿಸಿದರೆ ಒಳ್ಳೆಯದಾಗುತ್ತದೆ ಎಂದು ಹೇಳಲಾಗುವುದು, ಆದರೂ ವಿವಾಹ ಪಂಚಮಿಯಂದು ಮದುವೆಯಾಗಲು ಜನರು ಭಯ ಪಡುತ್ತಾರೆ, ಅದಕ್ಕೆ ಕಾರಣಗಳೆಂದರೆ...

ವಿವಾಹ ಪಂಚಮಿ
ವಿವಾಹ ಪಂಚಮಿಯಂದು ಮದುವೆಯಾದರೆ ಒಳ್ಳೆಯದು, ಆದರೂ ಈ ದಿನ ಮದುವೆಯಾಗಲು ಜನ ಹಿಂದೇಟು ಹಾಕುತ್ತಾರೆ, ಪಂಚಾಂಗ ನೋಡದೆ ಕೆಲವರು ಈ ದಿನ ಮದುವೆಯಾಗುತ್ತಾರೆ, ಆದರೆ ಕೆಲವರು ಈ ದಿನ ಬೇಡವೆಂದು ಹೇಳುತ್ತಾರೆ, ಅದಕ್ಕೆ ಕಾರಣ ಈ ದಿನ ಮದುವೆಯಾದರೆ ಬದುಕಿನಲ್ಲಿ ಹಲವಾರು ಸಲಾಲುಗಳು ಬರುತ್ತದೆ ಎಂಬುವುದು ಜನರ ನಂಬಿಕೆ. ಭಗವಂತ ಶ್ರೀರಾಮ ಹಾಗೂ ಸೀತಾಮಾತೆ ಈ ದಿನ ಮದುವೆಯಾದರು, ಆದರೆ ಅವರು ಅವರ ಬದುಕಿನಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು, ಆದ್ದರಿಂದ ಈ ದಿನ ಬೇಡ ಎಂದು ಹೆಳುತ್ತಾರೆ.

ವನವಾಸ ಮುಗಿಸಿ ಹಿಂತಿರುಗಿದರೂ ಸೀತಾಮಾತೆಗೆ ತಪ್ಪಲಿಲ್ಲ ಕಷ್ಟ
14 ವರ್ಷಗಳ ವನವಾಸದಲ್ಲಿ ರಾವಣನಿಂದ ಅಪಹರಿಸಲ್ಪಟ್ಟ ಸೀತೆಯನ್ನು ರಕ್ಷಿಸಲು ರಾವಣ-ರಾಮನ ನಡುವೆ ದೊಡ್ಡ ಯುದ್ಧವೇ ನಡೆಯಿತು. ಶ್ರಿರಾಮ ಸೀತಾಮಾತೆಯನ್ನು ಸುರಕ್ಷಿತವಾಗಿ ಮರಳಿ ಪಡೆದನು, ಆದರೂ ಸೀತಾಮಾತೆಯ ಕಷ್ಟ ತಪ್ಪಲಿಲ್ಲ, ವನವಾಸದಿಂದ ಹಿಂತಿರುಗಿದ ಮೇಲೆ ಜನರ ಕೊಂಕು ಮಾತುಗಳು ಕೇಳಬೇಕಾಯಿತು, ಅಗ್ನಿ ಪರೀಕ್ಷೆ ಎದುರಿಸಿ ತನ್ನ ಪಾತಿವ್ರತ್ಯ ಸಾಬೀತು ಪಡಿಸಬೇಕಾಯಿತು.
ಭಗವಂತರಾದ ಶ್ರೀರಾಮ-ಸೀತಾ ಮಾತೆಗೇ ಅಷ್ಟೆಲ್ಲಾ ಕಷ್ಟಗಳು ಎದುರಾಗಿರುವಾಗ ಹುಲು ಮನುಜರು ನಾವು... ಆದ್ದರಿಂದ ಈ ದಿನ ಮದುವೆ ಬೇಡ, ಮದುವೆಯಾದರೆ ವೈವಾಹಿಕ ಜೀವನದಲ್ಲಿ ಹಲವು ಸವಾಲುಗಳು ಎದುರಾಗುತ್ತವೆ ಎಂದು ಕೆಲವರು ನಂಬುತ್ತಾರೆ.

ಶ್ರೀವಿಷ್ಣುವಿನ ಅವತಾರ ರಾಮ
ಶ್ರೀರಾಮ ಶ್ರೀವಿಷ್ಣುವಿನ ಅವತಾರಗಳಲ್ಲಿ ಒಂದು. ಭಗವಾನ್ ಶ್ರೀವಿಷ್ಣುವಿನ ಏಳನೇ ಅವತಾರವೇ ಶ್ರೀರಾಮ. ಶ್ರೀವಿಷ್ಣುವಿನ ಪ್ರತಿಯೊಂದು ಅವತಾರಕ್ಕೂ ಒಂದೊಂದು ಉದ್ದೇಶವಿದೆ, ಅದರಂತೆ ಶ್ರೀರಾಮ ಅವತಾರದ ಹಿಂದೆಯೂ ಒಂದು ಉದ್ದೇಶವಿತ್ತು, ಅದರಂತೆಯೇ ಎಲ್ಲವೂ ನಡೆದವು.
ಶ್ರೀರಾಮ ಅಯೋಧ್ಯೆಯಲ್ಲಿ ಜನಿಸಿದ, ನಮ್ಮ ರಾಷ್ಟ್ರ ರಾಜಧಾನಿ ದೆಹಲಿಯಿಂದ ಅಯೋಧ್ಯೆ 55ಕಿ.ಮೀ ದೂರದಲ್ಲಿದೆ. ಉತ್ತರಬಾರತದ ಫೈಜಾಬಾದ್ ಜಿಲ್ಲೆಯಲ್ಲಿ ಅಯೋಧ್ಯೆ ಇದ್ದು ಅಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಭಾರತೀಯರ ಪ್ರಮುಖ ಪವಿತ್ರ ಸ್ಥಳಗಳಲ್ಲಿ ಅಯೋಧ್ಯೆಯೂ ಒಂದು.
ಶ್ರೀರಾಮ ಪೂಜಿಸಿದರೆ ಬದುಕಿನಲ್ಲಿರುವ ಬರುವ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಅವನು ನಮಗೆ ಕೊಡುತ್ತಾನೆ. ಜೈ ಶ್ರೀರಾಮ್....



Click it and Unblock the Notifications











