Latest Updates
-
ವಿಶ್ವ ಐವಿಎಫ್ ದಿನ: ಪೋಷಕರಾಗುವ ಕನಸಿಗೆ ದಂಪತಿಗಳು ಮಾಡಬೇಕಾದ ಸಿದ್ಧತೆಗಳೇನು? -
ಮುಂಬೈ-ಥಾಣೆ ಮಳೆ ಅಲರ್ಟ್: ನಿಮ್ಮ ಮನೆಗೆ ನೀರು ನುಗ್ಗದಂತೆ ತಡೆಯಲು ಈ 20 ನಿಮಿಷದ ಟಿಪ್ಸ್ ಫಾಲೋ ಮಾಡಿ -
ಮಕ್ಕಳ ಟಿಫಿನ್ ಬಾಕ್ಸ್ನಲ್ಲಿ ಅಡಗಿದೆ ಅಪಾಯ? ಪೋಷಕರು ಮರೆಯದೆ ಪಾಲಿಸಬೇಕಾದ ಸುರಕ್ಷತಾ ಸೂತ್ರಗಳು -
ರಾಮಾಯಣದಲ್ಲಿ ರಾವಣನಾಗಿ ಯಶ್: ಸ್ಯಾನ್ ಡಿಯಾಗೋ ಕಾಮಿಕ್-ಕಾನ್ನಲ್ಲಿ ಅಬ್ಬರಿಸಲು ಸಜ್ಜಾದ ರಾಕಿಂಗ್ ಸ್ಟಾರ್! -
ಅಂತರಾಷ್ಟ್ರೀಯ ಸ್ವಯಂ ಆರೈಕೆ ದಿನ: ಕೆಲಸದ ಒತ್ತಡ ಕಡಿಮೆ ಮಾಡಲು 12 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಮಳೆಗಾಲದ WFH: ದಂಪತಿಗಳ ನಡುವಿನ ಕಿರಿಕಿರಿ ತಪ್ಪಿಸಿ, ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳಲು ಈ ಸರಳ ಸೂತ್ರಗಳು! -
ದೆಹಲಿ ಐಕಿಯಾ ಸ್ಟೋರ್: ಸಾಕೇತ್ನಲ್ಲಿ ಹೊಸ ಶಾಖೆ ಆರಂಭ, ಸಣ್ಣ ಮನೆಗಳಿಗೆ ಬೆಸ್ಟ್ ಐಡಿಯಾಸ್! -
IMD ರೆಡ್ ಅಲರ್ಟ್: ಮಳೆಗಾಲದಲ್ಲಿ ಹೊಟ್ಟೆಯ ಆರೋಗ್ಯ ಹಾಳಾಗದಂತೆ ತಡೆಯುವುದು ಹೇಗೆ? -
ನೈನಿತಾಲ್ನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ ಘೋಷಣೆ, ಪ್ರವಾಸಿಗರಿಗೆ ಹೈ ಅಲರ್ಟ್! -
ರಾಷ್ಟ್ರಧ್ವಜ ಅಂಗೀಕಾರ ದಿನ: ಧ್ವಜಾರೋಹಣದ ವೇಳೆ ಲವಲವಿಕೆಯಿಂದ ಇರಲು ಈ 'ತ್ರಿವರ್ಣ' ವ್ಯಾಯಾಮಗಳನ್ನು ಮಾಡಿ!
Vishu 2022: ತುಳು ನಾಡಿನಲ್ಲಿ ವಿಷು ಆಚರಣೆ: ಈ ಹಬ್ಬದಲ್ಲಿ ವಿಷು ಕಣಿ ಪ್ರಮುಖ ಆಕರ್ಷಣೆ
ವಿಷು ಅಥವಾ ಬಿಷು ಶ್ರೀಕೃಷ್ಣನ ಆರಾಧಗೆ ಮೀಸಲಾಗಿರುವ ಹಬ್ಬವಾಗಿದ್ದು ಸೌರಮಾನ ಯುಗಾದಿಯಂದು ವಿಷು ಹಬ್ಬವನ್ನು ಆಚರಿಸಲಾಗುವುದು. ಈ ವರ್ಷ ಸೌರಮಾನ ಯುಗಾದಿ ಏಪ್ರಿಲ್ 15ಕ್ಕೆ ಬಂದಿದೆ.
ನಮ್ಮ ಕರ್ನಾಟಕದ ಕೆಲವು ಕಡೆ ವಿಷು ಆಚರಿಸಲಾಗುವುದು, ಅಂದರೆ ದಕ್ಷಿಣ ಕನ್ನಡ -ತುಳು ನಾಡಿನಲ್ಲಿ ಹೊಸ ವರ್ಷವೆಂದು ಆಚರಿಸಲಾಗುವುದು. ಕೇರಳದಲ್ಲಿ ವಿಷು ತುಂಬಾ ದೊಡ್ಡ ಆಚರಣೆಯಾಗಿದೆ. ತಮಿಳು ನಾಡಿನಲ್ಲಿಯೂ ವಿಷು ಹಬ್ಬವನ್ನು ಆಚರಿಸಲಾಗುವುದು.

ವಿಷುವಿನ ಮಹತ್ವ
ವಿಷು ವಸಂತ ಋತುವಿನ ಕಾಲದಲ್ಲಿ ಆಚರಿಸಲಾಗುವುದು. ಶ್ರೀ ವಿಷ್ಣು ನರಕಾಸುರನನ್ನು ವಧಿಸಿದ ದಿನದ ಸಂಕೇತವಾಗಿ ವಿಷುವನ್ನು ಆಚರಿಸಲಾಗುವುದು. ವಿಷು ದಿನ ವಿಷು ಕಣಿ ಹಾಗೂ ವಿಷು ಕೈ ನೀಟ ತುಂಬಾನೇ ವಿಶೇಷವಾಗಿದೆ.
ವಿಷು ಕಣಿ ವಿಶೇಷತೆ
ವಿಷು ಹಬ್ಬದ ದಿನ ವಿಷು ಕಣಿ ಇಡಲಾಗುವುದು. ಈ ದಿನ ಒಂದು ತಟ್ಟೆಯಲ್ಲಿ ಹೂ, ಫಲ, ಚಿನ್ನ, ಬೆಳ್ಳಿ, ನಾಣ್ಯ , ಹೊಸ ಬಟ್ಟೆ, ಕನ್ನಡಿ ಇಟ್ಟು, ಹೊನ್ನೆ ಹೂವನ್ನು ಇಟ್ಟು ಶ್ರೀಕೃಷ್ಣನ ಫೋಟೋ ಮುಂದೆ ಇಟ್ಟು ಬೆಳಗ್ಗೆ ಎದ್ದು ಆ ವಿಷು ಕಣಿ ಮೊದಲು ನೋಡಲಾಗುವುದು. ಮನೆಯಲ್ಲಿ ಮಕ್ಕಳನ್ನು ಹಿರಿಯರು ಕಣ್ಣು ಮುಚ್ಚಿ ಕರೆದುಕೊಂಡು ಬಂದು ಮೊದಲು ವಿಷು ಕಣಿ ದರ್ಶನ ಮಾಡಿಸುತ್ತಾರೆ. ವಿಷು ಕಣಿ ನೋಡುವುದರಿಂದ ವರ್ಷದ ಆರಂಭ ಶುಭವಾಗುವುದು ಎಂಬ ನಂಬಿಕೆ.
ವಿಷ್ಣು ಕನಿಯನ್ನು ಮೊದಲು ನೋಡಬೇಕು. ಯಾಕೆಂದರೆ ಹೀಗೆ ಮಾಡುವ ಪರಿಣಾಮ ವರ್ಷವಿಡಿ ಅವರಿಗೆ ಒಳ್ಳೆಯ ಅದೃಷ್ಟ ಮತ್ತು ಸಮೃದ್ಧಿ ಸಿಗುವುದು. ಇದರಿಂದಾಗಿ ವಿಷ್ಣು ಕನಿಯನ್ನು ತುಂಬಾ ಎಚ್ಚರಿಕೆಯಿಂದ ಇಡಲಾಗುತ್ತದೆ ಮತ್ತು ಧನಾತ್ಮಕತೆ ಉಂಟಾಗುವಂತೆ ಇದನ್ನು ರಚಿಸಲಾಗುತ್ತದೆ.
ಇನ್ನು ಚಿಕ್ಕ ಮಕ್ಕಳು ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ, ಆಗ ಅವರಿಗೆ ಹಣವನ್ನು ನೀಡಲಾಗುವುದು, ಇದನ್ನು ಕೈ ನೀಟ ಎಂದು ಕರೆಯಲಾಗುವುದು.



Click it and Unblock the Notifications
