Latest Updates
-
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು?
Vishu 2022: ತುಳು ನಾಡಿನಲ್ಲಿ ವಿಷು ಆಚರಣೆ: ಈ ಹಬ್ಬದಲ್ಲಿ ವಿಷು ಕಣಿ ಪ್ರಮುಖ ಆಕರ್ಷಣೆ
ವಿಷು ಅಥವಾ ಬಿಷು ಶ್ರೀಕೃಷ್ಣನ ಆರಾಧಗೆ ಮೀಸಲಾಗಿರುವ ಹಬ್ಬವಾಗಿದ್ದು ಸೌರಮಾನ ಯುಗಾದಿಯಂದು ವಿಷು ಹಬ್ಬವನ್ನು ಆಚರಿಸಲಾಗುವುದು. ಈ ವರ್ಷ ಸೌರಮಾನ ಯುಗಾದಿ ಏಪ್ರಿಲ್ 15ಕ್ಕೆ ಬಂದಿದೆ.
ನಮ್ಮ ಕರ್ನಾಟಕದ ಕೆಲವು ಕಡೆ ವಿಷು ಆಚರಿಸಲಾಗುವುದು, ಅಂದರೆ ದಕ್ಷಿಣ ಕನ್ನಡ -ತುಳು ನಾಡಿನಲ್ಲಿ ಹೊಸ ವರ್ಷವೆಂದು ಆಚರಿಸಲಾಗುವುದು. ಕೇರಳದಲ್ಲಿ ವಿಷು ತುಂಬಾ ದೊಡ್ಡ ಆಚರಣೆಯಾಗಿದೆ. ತಮಿಳು ನಾಡಿನಲ್ಲಿಯೂ ವಿಷು ಹಬ್ಬವನ್ನು ಆಚರಿಸಲಾಗುವುದು.

ವಿಷುವಿನ ಮಹತ್ವ
ವಿಷು ವಸಂತ ಋತುವಿನ ಕಾಲದಲ್ಲಿ ಆಚರಿಸಲಾಗುವುದು. ಶ್ರೀ ವಿಷ್ಣು ನರಕಾಸುರನನ್ನು ವಧಿಸಿದ ದಿನದ ಸಂಕೇತವಾಗಿ ವಿಷುವನ್ನು ಆಚರಿಸಲಾಗುವುದು. ವಿಷು ದಿನ ವಿಷು ಕಣಿ ಹಾಗೂ ವಿಷು ಕೈ ನೀಟ ತುಂಬಾನೇ ವಿಶೇಷವಾಗಿದೆ.
ವಿಷು ಕಣಿ ವಿಶೇಷತೆ
ವಿಷು ಹಬ್ಬದ ದಿನ ವಿಷು ಕಣಿ ಇಡಲಾಗುವುದು. ಈ ದಿನ ಒಂದು ತಟ್ಟೆಯಲ್ಲಿ ಹೂ, ಫಲ, ಚಿನ್ನ, ಬೆಳ್ಳಿ, ನಾಣ್ಯ , ಹೊಸ ಬಟ್ಟೆ, ಕನ್ನಡಿ ಇಟ್ಟು, ಹೊನ್ನೆ ಹೂವನ್ನು ಇಟ್ಟು ಶ್ರೀಕೃಷ್ಣನ ಫೋಟೋ ಮುಂದೆ ಇಟ್ಟು ಬೆಳಗ್ಗೆ ಎದ್ದು ಆ ವಿಷು ಕಣಿ ಮೊದಲು ನೋಡಲಾಗುವುದು. ಮನೆಯಲ್ಲಿ ಮಕ್ಕಳನ್ನು ಹಿರಿಯರು ಕಣ್ಣು ಮುಚ್ಚಿ ಕರೆದುಕೊಂಡು ಬಂದು ಮೊದಲು ವಿಷು ಕಣಿ ದರ್ಶನ ಮಾಡಿಸುತ್ತಾರೆ. ವಿಷು ಕಣಿ ನೋಡುವುದರಿಂದ ವರ್ಷದ ಆರಂಭ ಶುಭವಾಗುವುದು ಎಂಬ ನಂಬಿಕೆ.
ವಿಷ್ಣು ಕನಿಯನ್ನು ಮೊದಲು ನೋಡಬೇಕು. ಯಾಕೆಂದರೆ ಹೀಗೆ ಮಾಡುವ ಪರಿಣಾಮ ವರ್ಷವಿಡಿ ಅವರಿಗೆ ಒಳ್ಳೆಯ ಅದೃಷ್ಟ ಮತ್ತು ಸಮೃದ್ಧಿ ಸಿಗುವುದು. ಇದರಿಂದಾಗಿ ವಿಷ್ಣು ಕನಿಯನ್ನು ತುಂಬಾ ಎಚ್ಚರಿಕೆಯಿಂದ ಇಡಲಾಗುತ್ತದೆ ಮತ್ತು ಧನಾತ್ಮಕತೆ ಉಂಟಾಗುವಂತೆ ಇದನ್ನು ರಚಿಸಲಾಗುತ್ತದೆ.
ಇನ್ನು ಚಿಕ್ಕ ಮಕ್ಕಳು ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ, ಆಗ ಅವರಿಗೆ ಹಣವನ್ನು ನೀಡಲಾಗುವುದು, ಇದನ್ನು ಕೈ ನೀಟ ಎಂದು ಕರೆಯಲಾಗುವುದು.



Click it and Unblock the Notifications
