Latest Updates
-
मानसून में शादी का प्लान है? इन 5 स्मार्ट टिप्स से अपनी वेडिंग को बनाएं यादगार और सुरक्षित -
ದೆಹಲಿ-ಎನ್ಸಿಆರ್ ಬಿರುಗಾಳಿ ಎಚ್ಚರಿಕೆ: ನಿಮ್ಮ ಬಾಲ್ಕನಿಯನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸಗಳನ್ನು ಮಾಡಿ! -
ಎನರ್ಜಿ ಡ್ರಿಂಕ್ಸ್ ಹೆಸರಲ್ಲಿ ವಿಷ ಕುಡಿತಿದ್ದೀರಾ? ಎಫ್ಎಸ್ಎಸ್ಎಐ ಎಚ್ಚರಿಕೆ ಮತ್ತು ಸುರಕ್ಷಿತ ಪಾನೀಯಗಳ ಮಾಹಿತಿ -
2026ರ ವಿಶ್ವ ಪರಿಸರ ದಿನ: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಗ್ರೀನ್ ಚಾಲೆಂಜ್ಗಳು, ನೀವೂ ಭಾಗವಹಿಸಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಈ ಸರಳ ಟಿಪ್ಸ್ ಪಾಲಿಸಿ, ಆರೋಗ್ಯವಾಗಿರಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್ -
ಮಳೆಗಾಲ ಶುರು: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 5 ಸಿಂಪಲ್ ಟಿಪ್ಸ್ -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಹೀಟ್ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರಗಳೇ ಮದ್ದು! -
ಮುಂಗಾರು ಆಗಮನ: ಮಳೆಯಲ್ಲಿ ಸ್ಟೈಲಿಶ್ ಆಗಿರಲು ಮತ್ತು ಸುರಕ್ಷಿತವಾಗಿರಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? ನಿಮ್ಮ ವರ್ಕೌಟ್ ರೂಟೀನ್ನಲ್ಲಿ ಈ ಬದಲಾವಣೆಗಳನ್ನು ತಕ್ಷಣ ಮಾಡಿಕೊಳ್ಳಿ!
ಜ. 13ಕ್ಕೆ ವೈಕುಂಠ ಏಕಾದಶಿ: ಏಕಾದಶಿ ತಿಥಿ ಹಾಗೂ ಪಾರಣೆ ಸಮಯ ಯಾವಾಗ?
ಜನವರಿ 13ಕ್ಕೆ ವೈಕುಂಠ ಏಕಾದಶಿ. ಇದನ್ನು ಮುಕ್ಕೋಟಿ ಏಕಾದಶಿಯೆಂದೂ ಕರೆಯಲಾಗುವುದು. ಧರ್ನುಮಾಸದ ಈ ಏಕಾದಶಿಯನ್ನು ಸ್ವಗದ ಬಾಗಿಲಿನ ಏಕಾದಶಿಯೆಂದೂ ಕರೆಯಲಾಗುವುದು. ಅಂದ್ರೆ ಈ ಏಕಾದಶಿಯಂದು ವ್ರತ ನಿಯಮಗಳನ್ನು ಪಾಲಿಸಿದವರಿಗೆ ಸ್ವರ್ಗ ಪ್ರಾಪ್ತಿಯಾಗುವುದು ಎಂಬ ನಂಬಿಕೆ ಇದೆ.

ಏಕಾದಶಿ ತಿಥಿ ಸಮಯ
ವೈಕುಂಠ ಏಕಾದಶಿಯನ್ನು ಜನವರಿ, 13 ಗುರುವಾರ ಆಚರಿಸಲಾಗುತ್ತಿದೆ.
ತಿಥಿ ಪ್ರಾರಂಭ : ಜನವರಿ 12, 2022 ಸಂಜೆ 04:49ಕ್ಕೆ
ತಿಥಿ ಮುಕ್ತಾಯ: ಜನವರಿ 13, 2022 ಸಂಜೆ 07:32ಕ್ಕೆ

ಉಪವಾಸ ಹಾಗೂ ಪಾರಣೆ ಸಮಯ
ಏಕಾದಶಿಯಂದು ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡಿದರೆ ಒಳ್ಳೆಯದು. ಏಕಾದಶಿ ವ್ರತ ಒಂದು ದಿನ ಮೊದಲು ಪ್ರಾರಂಭವಾಗುವುದು, ಅಂದರೆ ಜನವರಿ 12, ಸಂಜೆಯಿಂದಲೇ ಉಪವಾಸ ಪ್ರಾರಂಭಿಸುತ್ತಾರೆ. ಏಕಾದಶಿ ತಿಥಿಯಂದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ, ವಿಷ್ಣುವಿಗೆ ಹೂಗಳಿಂದ ಅಲಂಕರಿಸಿ, ವಿಷ್ಣು ಮಂತ್ರಗಳನ್ನು ಹೇಳುತ್ತಾ ಪೂಜೆ ಮಾಡಬೇಕು.
ಈ ದಿನ ಉಪವಾಸ ಮಾಡುವವರು ಹಾಲು, ಬಾಳೆ ಹಣ್ಣು ಸೇವಿಸಬಹುದು. ಉಪವಾಸ ಮಾಡುವವರು ಪಾರಣೆ ಸಮಯದವರೆಗೆ ಉಪವಾಸವಿದ್ದು, ನಂತರ ಮುರಿಯಬಹುದು.
ಉಪವಾಸ ಮುರಿಯಲು ಪಾರಣೆ ಸಮಯ
ಜನವರಿ 14, ಬೆಳಗ್ಗೆ 07:15ರಿಂದ 9:28ರವರೆಗೆ

ವೈಕುಂಠ ಏಕಾದಶಿ 2022ರ ಮಹತ್ವ
ವೈಕುಂಠ ಏಕಾದಶಿಯಂದು ವೈಕುಂಠದ ದ್ವಾರ ತೆರೆಯುವುದು, ಭಕ್ತರು ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡಿದರೆ ಅವರಿಗೆ ಮೋಕ್ಷ ಸಿಗುತ್ತದೆ, ಅವರ ಬದುಕಿನಲ್ಲಿರುವ ಕಷ್ಟಗಳು ದೂರಾಗುವುದು.



Click it and Unblock the Notifications