Latest Updates
-
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ!
ಜ. 13ಕ್ಕೆ ವೈಕುಂಠ ಏಕಾದಶಿ: ಏಕಾದಶಿ ತಿಥಿ ಹಾಗೂ ಪಾರಣೆ ಸಮಯ ಯಾವಾಗ?
ಜನವರಿ 13ಕ್ಕೆ ವೈಕುಂಠ ಏಕಾದಶಿ. ಇದನ್ನು ಮುಕ್ಕೋಟಿ ಏಕಾದಶಿಯೆಂದೂ ಕರೆಯಲಾಗುವುದು. ಧರ್ನುಮಾಸದ ಈ ಏಕಾದಶಿಯನ್ನು ಸ್ವಗದ ಬಾಗಿಲಿನ ಏಕಾದಶಿಯೆಂದೂ ಕರೆಯಲಾಗುವುದು. ಅಂದ್ರೆ ಈ ಏಕಾದಶಿಯಂದು ವ್ರತ ನಿಯಮಗಳನ್ನು ಪಾಲಿಸಿದವರಿಗೆ ಸ್ವರ್ಗ ಪ್ರಾಪ್ತಿಯಾಗುವುದು ಎಂಬ ನಂಬಿಕೆ ಇದೆ.

ಏಕಾದಶಿ ತಿಥಿ ಸಮಯ
ವೈಕುಂಠ ಏಕಾದಶಿಯನ್ನು ಜನವರಿ, 13 ಗುರುವಾರ ಆಚರಿಸಲಾಗುತ್ತಿದೆ.
ತಿಥಿ ಪ್ರಾರಂಭ : ಜನವರಿ 12, 2022 ಸಂಜೆ 04:49ಕ್ಕೆ
ತಿಥಿ ಮುಕ್ತಾಯ: ಜನವರಿ 13, 2022 ಸಂಜೆ 07:32ಕ್ಕೆ

ಉಪವಾಸ ಹಾಗೂ ಪಾರಣೆ ಸಮಯ
ಏಕಾದಶಿಯಂದು ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡಿದರೆ ಒಳ್ಳೆಯದು. ಏಕಾದಶಿ ವ್ರತ ಒಂದು ದಿನ ಮೊದಲು ಪ್ರಾರಂಭವಾಗುವುದು, ಅಂದರೆ ಜನವರಿ 12, ಸಂಜೆಯಿಂದಲೇ ಉಪವಾಸ ಪ್ರಾರಂಭಿಸುತ್ತಾರೆ. ಏಕಾದಶಿ ತಿಥಿಯಂದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ, ವಿಷ್ಣುವಿಗೆ ಹೂಗಳಿಂದ ಅಲಂಕರಿಸಿ, ವಿಷ್ಣು ಮಂತ್ರಗಳನ್ನು ಹೇಳುತ್ತಾ ಪೂಜೆ ಮಾಡಬೇಕು.
ಈ ದಿನ ಉಪವಾಸ ಮಾಡುವವರು ಹಾಲು, ಬಾಳೆ ಹಣ್ಣು ಸೇವಿಸಬಹುದು. ಉಪವಾಸ ಮಾಡುವವರು ಪಾರಣೆ ಸಮಯದವರೆಗೆ ಉಪವಾಸವಿದ್ದು, ನಂತರ ಮುರಿಯಬಹುದು.
ಉಪವಾಸ ಮುರಿಯಲು ಪಾರಣೆ ಸಮಯ
ಜನವರಿ 14, ಬೆಳಗ್ಗೆ 07:15ರಿಂದ 9:28ರವರೆಗೆ

ವೈಕುಂಠ ಏಕಾದಶಿ 2022ರ ಮಹತ್ವ
ವೈಕುಂಠ ಏಕಾದಶಿಯಂದು ವೈಕುಂಠದ ದ್ವಾರ ತೆರೆಯುವುದು, ಭಕ್ತರು ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡಿದರೆ ಅವರಿಗೆ ಮೋಕ್ಷ ಸಿಗುತ್ತದೆ, ಅವರ ಬದುಕಿನಲ್ಲಿರುವ ಕಷ್ಟಗಳು ದೂರಾಗುವುದು.



Click it and Unblock the Notifications