Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಝೆನ್ ಕಥೆ: ಬುದ್ಧ ನೀ ತಪ್ಪು ಭಾವಿಸಬೇಡ!

ತೊಸುಯಿಗೆ ವಯಸ್ಸಾದಾಗ ಒಬ್ಬ ಹಳೆಯ ಬಾಲ್ಯದ ಸ್ನೇಹಿತ ಸಿಕ್ಕನು. ಅವನು ತೊಸುಯಿಗೆ ಬದುಕು ನಡೆಸಲು ಅಕ್ಕಿಯಿಂದ ವಿನೆಗರ್ ಮಾಡು ಎಂದು ಸಲಹೆ ನೀಡಿ ಅದನ್ನು ತಯಾರಿಸುವುದು ಹೇಗೆ ಎಂದು ಕಲಿಸಿಕೊಟ್ಟನು. ಮುಂದೆ ಇದೇ ವೃತ್ತಿಯನ್ನು ತೊಸುಯಿ ತಾನು ಸಾಯುವವರೆಗೂ ಕೂಡಾ ನಡೆಸಿಕೊಂಡು ಹೋದ.
ಒಮ್ಮೆ ಹೀಗೆ ವಿನೆಗರ್ ತಯಾರಿಸುತ್ತಿದ್ದಾಗ, ಒಬ್ಬ ಭಿಕ್ಷುಕ ಗೆಳೆಯ ಸಿಕ್ಕಿ ಅವನು ತೊಸುಯಿಗೆ ಬುದ್ಧನ ಚಿತ್ರವನ್ನು ನೀಡಿದ. ತೊಸುಯಿ ಎಲ್ಲಾ ಧರ್ಮಗಳಿಂದಲೂ ಮುಕ್ತನಾಗಿದ್ದವನಾಗಿದ್ದರೂ ಕೂಡಾ ಈ ಚಿತ್ರವನ್ನು ಸ್ವೀಕರಿಸಿದ. ನಂತರ ಈ ಬುದ್ಧನ ಚಿತ್ರವನ್ನು ಎಲ್ಲಿ ಇಡುವುದು ಎಂದು ತನ್ನ ಕೋಣೆಯ ಸುತ್ತ ನೋಡಿದನು.
ಕೊನೆಗೆ ತನ್ನ ಪುಟ್ಟ ಗುಡಿಸಿಲಿನ ಗೋಡೆಯ ಮೇಲೆ ಬುದ್ಧನ ಫೋಟೊವನ್ನು ನೇತುಹಾಕಿದ. ನಂತರ ಅದರ ಪಕ್ಕದಲ್ಲಿ ಒಂದು ಸಾಲನ್ನು ಬರೆದ "ಮಿ. ಅಮಿದ ಬುದ್ಧ: ಈ ಕೋಣೆ ಸಣ್ಣದಾಗಿರುವವರೆಗೂ ನಿನ್ನನ್ನು ನಾನು ತಾತ್ಕಾಲಿಕವಾಗಿ ಇಲ್ಲಿ ಇರಿಸಬಲ್ಲೆ. ಆದರೆ, ನಾನು ನಿನ್ನ ಅರಮನೆಯಲ್ಲಿ ಮತ್ತೊಮ್ಮೆ ಹುಟ್ಟಿ ಬಾ ಎಂದು ಹೇಳುತ್ತೇನೆಂದು ತಪ್ಪು ಭಾವಿಸಬೇಡ..!"



Click it and Unblock the Notifications
