ಝೆನ್ ಗುರು ಹತ್ತಿರ ಕಳ್ಳ ಅನುಯಾಯಿಯಾದ ಕಥೆ

Kannada Zen story
ಒಮ್ಮೆ ಝೆನ್ ಗುರು ಶಿಚಿರಿ ಕೊಝುನ್ ಸೂತ್ರಗಳನ್ನು ಪಠಿಸುತ್ತಿರುವಾಗ, ಖಡ್ಗಧಾರಿಯಾದ ಕಳ್ಳನೊಬ್ಬ ಅವನ ಮುಂದೆ ಪ್ರತ್ಯಕ್ಷನಾಗಿ ಹಣವನ್ನು ನೀಡದಿದ್ದರೆ ಕೊಲ್ಲುವುದಾಗಿ ಬೆದರಿಸಿದ.

ಶಿಚಿರಿ "ಅಲ್ಲೆ ಮೇಜಿನ ಖಾನೆಯಲ್ಲಿ ಸ್ವಲ್ಪ ಹಣವಿದೆ, ತೆಗೆದುಕೋ. ಆದರೆ ನನ್ನ ಶಾಂತಿಭಂಗ ಮಾಡಬೇಡ" ಎಂದು ಹೇಳಿ ತನ್ನ ಪಠಣ ಮುಂದುವರೆಸಿದ.

ಸ್ವಲ್ಪ ಸಮಯದ ನಂತರ ಶಿಚಿರಿ ಕಳ್ಳನಿಗೆ "ನನಗೂ ಸ್ವಲ್ಪ ಹಣ ಉಳಿಸು - ನಾಳೆ ತೆರಿಗೆ ಕಟ್ಟಲಿಕ್ಕಿದೆ, ಎಲ್ಲವನ್ನು ನೀನೇ ತೆಗೆದುಕೊಳ್ಳಬೇಡ" ಎಂದ. ಆ ಕಳ್ಳ ಸಾಕಷ್ಟು ಹಣವನ್ನು ತೆಗೆದುಕೊಂಡು ಇನ್ನೇನು ಜಾಗ ಖಾಲಿ ಮಾಡಬೇಕು ಎನ್ನುವಷ್ಟರಲ್ಲಿ ಶಿಚಿರಿ "ಯಾರಾದರೂ ನಿನಗೆ ಏನಾದರೂ ಕೊಟ್ಟರೆ ನೀನವರಿಗೆ ವಂದಿಸಬೇಕು" ಎಂದ.

ಆ ಕಳ್ಳ ಶಿಚಿರಿಗೆ ವಂದಿಸಿ ಅಲ್ಲಿಂದ ಹೊರಟ. ನಂತರದಲ್ಲಿ ಆ ಕಳ್ಳ ಈ ಕಳ್ಳತನಕ್ಕಾಗಿ ಪೊಲೀಸರಿಂದ ಬಂಧಿಸಲ್ಪಟ್ಟ. ಆ ಕಳ್ಳನ ಅಪರಾಧವನ್ನು ನಿರೂಪಿಸಲು ಶಿಚಿರಿಯನ್ನು ಸಾಕ್ಷಿಯನ್ನಾಗಿ ಕರೆಸಲಾಯಿತು.

ಶಿಚಿರಿ "ನನ್ನ ಪ್ರಕಾರ ಈ ವ್ಯಕ್ತಿ ಕಳ್ಳನಲ್ಲ. ನಾನು ಈ ವ್ಯಕ್ತಿಗೆ ಹಣವನ್ನು ನೀಡಿದೆ ಮತ್ತು ಅದಕ್ಕಾಗಿ ಆತ ನನಗೆ ವಂದಿಸಿದನು" ಎಂದನು.

ಆ ಕಳ್ಳ ತನ್ನ ಅಪರಾಧಕ್ಕಾಗಿ ಸೆರೆವಾಸ ಮುಗಿಸಿ ನೇರವಾಗಿ ಶಿಚಿರಿ ಅವರಲ್ಲಿಗೆ ಬಂದ ಮತ್ತು ಅವರ ಅನುಯಾಯಿಯಾದ!

English summary

Kannada Zen story | Inspirational short stories | ಝೆನ್ ಕಥೆ :ಕಳ್ಳ ಅನುಯಾಯಿಯಾದ ಕಥೆ

Shichiri Kojun was reciting sutras one evening when he was intruded by a thief, powered by a sword demanding him to give some money or threatened to take away his life.
Story first published: Friday, July 20, 2012, 15:47 [IST]
X
Desktop Bottom Promotion