Latest Updates
-
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು!
ಝೆನ್ ಕಥೆ: ಕೋಡಂಗಿ ನಿನಗಿಂತ ಮೇಲು

ಗುರುಗಳು ಇವನಿಗೆ ನನ್ನ ಬಳಿ ಏನೋ ಹೇಳಬೇಕಾಗಿದೆ ಎಂದು ಆ ಯುವ ಸನ್ಯಾಸಿಯ ಮುಖ ನೋಡಿದಾಗಲೇ ತಿಳಿಯಿತು. ಝೆನ್ ಗುರುಗಳು ಅವನ ಹತ್ತಿರ "ಏನು?" ಎಂಬಂತೆ ಪ್ರಶ್ನಾರ್ಥಕವಾಗಿ ನೋಡಿದರು. ಇವನು ಗುರುಗಳ ಹತ್ತಿರ ತನಗೆ ಹೊಸ ಜ್ಞಾನ ಪ್ರಾಪ್ತಿಯಾಗಿದೆ ಎಂದು ಹೇಳಿದನು.
ಇದನ್ನು ಕೇಳಿದ ಗುರುಗಳಿಗೆ ನಗು ಸಹಿಸಲು ಸಾಧ್ಯವಾಗಲಿಲ್ಲ, ಜೋರಾಗಿ ನಕ್ಕರು. ಶಿಷ್ಯನಿಗೆ ತುಂಬಾ ಅವಮಾನವಾಯಿತು. ತುಂಬಾ ಬೇಜಾರು ಮಾಡಿಕೊಂಡು ಮೂರು ದಿನಗಳವರೆಗೆ ಊಟ ತಿಂಡಿ ಮಾಡಲಿಲ್ಲ. ಮೂರನೇ ದಿನ ಸಾಯಾಂಕಾಲ ಗುರುಗಳ ಹತ್ತಿರ ಬಂದು "ನೀವು ನಕ್ಕಿದ ಕಾರಣ ನನಗೆ ತುಂಬಾ ಬೇಜಾರಾಗಿದೆ, ನನಗೆ ಊಟ, ನಿದ್ದೆ ಕೂಡ ಬರುತ್ತಿಲ್ಲ" ಎಂದು ಹೇಳಿದ.
ಆಗ ಗುರುಗಳು "ಆ ಶಿಷ್ಯನಿಗೆ ನಿನ್ನ ಸಮಸ್ಯೆ ಏನೆಂದು ಗೊತ್ತೇ?, ನಿನ್ನಲ್ಲಿರುವ ಸಮಸ್ಯೆ ಅಂದರೆ, ನಿನಗಿಂತ ಕೋಡಂಗಿ ಮೇಲು" ಎಂದರು. ಇದನ್ನು ಕೇಳಿದ ಆ ಶಿಷ್ಯ ಆಶ್ಚರ್ಯದಿಂದ "ಕೋಡಂಗಿಯನ್ನು ನನಗಿಂತ ಮೇಲು ಎಂದು ನಿಮಗೆ ಹೇಳಲು ಹೇಗೆ ಸಾಧ್ಯವಾಯಿತು ಗುರುಗಳೇ?" ಎಂದು ಕೇಳಿದ.
ಅದಕ್ಕೆ ಗುರುಗಳು "ಮತ್ತೇನು? ಕೋಡಂಗಿ ಕೊನೆಯ ಪಕ್ಷ ಬೇರೆಯವರನ್ನು ನಗಿಸುತ್ತಾನೆ, ಆದರೆ ನಿನಗೆ ಬೇರೆಯವರು ನಕ್ಕಿದ್ದೇ ಸಹಿಸಿಕೊಳ್ಳಲಾಗಲಿಲ್ಲವಲ್ಲ" ಎಂದರು. ಆಗ ಆ ಶಿಷ್ಯನು ತನ್ನ ತಪ್ಪನ್ನು ಅರಿತುಕೊಂಡನು.



Click it and Unblock the Notifications