Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಝೆನ್ ಕಥೆ: ಕೋಡಂಗಿ ನಿನಗಿಂತ ಮೇಲು

ಗುರುಗಳು ಇವನಿಗೆ ನನ್ನ ಬಳಿ ಏನೋ ಹೇಳಬೇಕಾಗಿದೆ ಎಂದು ಆ ಯುವ ಸನ್ಯಾಸಿಯ ಮುಖ ನೋಡಿದಾಗಲೇ ತಿಳಿಯಿತು. ಝೆನ್ ಗುರುಗಳು ಅವನ ಹತ್ತಿರ "ಏನು?" ಎಂಬಂತೆ ಪ್ರಶ್ನಾರ್ಥಕವಾಗಿ ನೋಡಿದರು. ಇವನು ಗುರುಗಳ ಹತ್ತಿರ ತನಗೆ ಹೊಸ ಜ್ಞಾನ ಪ್ರಾಪ್ತಿಯಾಗಿದೆ ಎಂದು ಹೇಳಿದನು.
ಇದನ್ನು ಕೇಳಿದ ಗುರುಗಳಿಗೆ ನಗು ಸಹಿಸಲು ಸಾಧ್ಯವಾಗಲಿಲ್ಲ, ಜೋರಾಗಿ ನಕ್ಕರು. ಶಿಷ್ಯನಿಗೆ ತುಂಬಾ ಅವಮಾನವಾಯಿತು. ತುಂಬಾ ಬೇಜಾರು ಮಾಡಿಕೊಂಡು ಮೂರು ದಿನಗಳವರೆಗೆ ಊಟ ತಿಂಡಿ ಮಾಡಲಿಲ್ಲ. ಮೂರನೇ ದಿನ ಸಾಯಾಂಕಾಲ ಗುರುಗಳ ಹತ್ತಿರ ಬಂದು "ನೀವು ನಕ್ಕಿದ ಕಾರಣ ನನಗೆ ತುಂಬಾ ಬೇಜಾರಾಗಿದೆ, ನನಗೆ ಊಟ, ನಿದ್ದೆ ಕೂಡ ಬರುತ್ತಿಲ್ಲ" ಎಂದು ಹೇಳಿದ.
ಆಗ ಗುರುಗಳು "ಆ ಶಿಷ್ಯನಿಗೆ ನಿನ್ನ ಸಮಸ್ಯೆ ಏನೆಂದು ಗೊತ್ತೇ?, ನಿನ್ನಲ್ಲಿರುವ ಸಮಸ್ಯೆ ಅಂದರೆ, ನಿನಗಿಂತ ಕೋಡಂಗಿ ಮೇಲು" ಎಂದರು. ಇದನ್ನು ಕೇಳಿದ ಆ ಶಿಷ್ಯ ಆಶ್ಚರ್ಯದಿಂದ "ಕೋಡಂಗಿಯನ್ನು ನನಗಿಂತ ಮೇಲು ಎಂದು ನಿಮಗೆ ಹೇಳಲು ಹೇಗೆ ಸಾಧ್ಯವಾಯಿತು ಗುರುಗಳೇ?" ಎಂದು ಕೇಳಿದ.
ಅದಕ್ಕೆ ಗುರುಗಳು "ಮತ್ತೇನು? ಕೋಡಂಗಿ ಕೊನೆಯ ಪಕ್ಷ ಬೇರೆಯವರನ್ನು ನಗಿಸುತ್ತಾನೆ, ಆದರೆ ನಿನಗೆ ಬೇರೆಯವರು ನಕ್ಕಿದ್ದೇ ಸಹಿಸಿಕೊಳ್ಳಲಾಗಲಿಲ್ಲವಲ್ಲ" ಎಂದರು. ಆಗ ಆ ಶಿಷ್ಯನು ತನ್ನ ತಪ್ಪನ್ನು ಅರಿತುಕೊಂಡನು.



Click it and Unblock the Notifications











