Latest Updates
-
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ
ಝೆನ್ ಕಥೆ: ಕೋಡಂಗಿ ನಿನಗಿಂತ ಮೇಲು

ಗುರುಗಳು ಇವನಿಗೆ ನನ್ನ ಬಳಿ ಏನೋ ಹೇಳಬೇಕಾಗಿದೆ ಎಂದು ಆ ಯುವ ಸನ್ಯಾಸಿಯ ಮುಖ ನೋಡಿದಾಗಲೇ ತಿಳಿಯಿತು. ಝೆನ್ ಗುರುಗಳು ಅವನ ಹತ್ತಿರ "ಏನು?" ಎಂಬಂತೆ ಪ್ರಶ್ನಾರ್ಥಕವಾಗಿ ನೋಡಿದರು. ಇವನು ಗುರುಗಳ ಹತ್ತಿರ ತನಗೆ ಹೊಸ ಜ್ಞಾನ ಪ್ರಾಪ್ತಿಯಾಗಿದೆ ಎಂದು ಹೇಳಿದನು.
ಇದನ್ನು ಕೇಳಿದ ಗುರುಗಳಿಗೆ ನಗು ಸಹಿಸಲು ಸಾಧ್ಯವಾಗಲಿಲ್ಲ, ಜೋರಾಗಿ ನಕ್ಕರು. ಶಿಷ್ಯನಿಗೆ ತುಂಬಾ ಅವಮಾನವಾಯಿತು. ತುಂಬಾ ಬೇಜಾರು ಮಾಡಿಕೊಂಡು ಮೂರು ದಿನಗಳವರೆಗೆ ಊಟ ತಿಂಡಿ ಮಾಡಲಿಲ್ಲ. ಮೂರನೇ ದಿನ ಸಾಯಾಂಕಾಲ ಗುರುಗಳ ಹತ್ತಿರ ಬಂದು "ನೀವು ನಕ್ಕಿದ ಕಾರಣ ನನಗೆ ತುಂಬಾ ಬೇಜಾರಾಗಿದೆ, ನನಗೆ ಊಟ, ನಿದ್ದೆ ಕೂಡ ಬರುತ್ತಿಲ್ಲ" ಎಂದು ಹೇಳಿದ.
ಆಗ ಗುರುಗಳು "ಆ ಶಿಷ್ಯನಿಗೆ ನಿನ್ನ ಸಮಸ್ಯೆ ಏನೆಂದು ಗೊತ್ತೇ?, ನಿನ್ನಲ್ಲಿರುವ ಸಮಸ್ಯೆ ಅಂದರೆ, ನಿನಗಿಂತ ಕೋಡಂಗಿ ಮೇಲು" ಎಂದರು. ಇದನ್ನು ಕೇಳಿದ ಆ ಶಿಷ್ಯ ಆಶ್ಚರ್ಯದಿಂದ "ಕೋಡಂಗಿಯನ್ನು ನನಗಿಂತ ಮೇಲು ಎಂದು ನಿಮಗೆ ಹೇಳಲು ಹೇಗೆ ಸಾಧ್ಯವಾಯಿತು ಗುರುಗಳೇ?" ಎಂದು ಕೇಳಿದ.
ಅದಕ್ಕೆ ಗುರುಗಳು "ಮತ್ತೇನು? ಕೋಡಂಗಿ ಕೊನೆಯ ಪಕ್ಷ ಬೇರೆಯವರನ್ನು ನಗಿಸುತ್ತಾನೆ, ಆದರೆ ನಿನಗೆ ಬೇರೆಯವರು ನಕ್ಕಿದ್ದೇ ಸಹಿಸಿಕೊಳ್ಳಲಾಗಲಿಲ್ಲವಲ್ಲ" ಎಂದರು. ಆಗ ಆ ಶಿಷ್ಯನು ತನ್ನ ತಪ್ಪನ್ನು ಅರಿತುಕೊಂಡನು.



Click it and Unblock the Notifications