Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಝೆನ್ ಕಥೆ: ಕೋಡಂಗಿ ನಿನಗಿಂತ ಮೇಲು

ಗುರುಗಳು ಇವನಿಗೆ ನನ್ನ ಬಳಿ ಏನೋ ಹೇಳಬೇಕಾಗಿದೆ ಎಂದು ಆ ಯುವ ಸನ್ಯಾಸಿಯ ಮುಖ ನೋಡಿದಾಗಲೇ ತಿಳಿಯಿತು. ಝೆನ್ ಗುರುಗಳು ಅವನ ಹತ್ತಿರ "ಏನು?" ಎಂಬಂತೆ ಪ್ರಶ್ನಾರ್ಥಕವಾಗಿ ನೋಡಿದರು. ಇವನು ಗುರುಗಳ ಹತ್ತಿರ ತನಗೆ ಹೊಸ ಜ್ಞಾನ ಪ್ರಾಪ್ತಿಯಾಗಿದೆ ಎಂದು ಹೇಳಿದನು.
ಇದನ್ನು ಕೇಳಿದ ಗುರುಗಳಿಗೆ ನಗು ಸಹಿಸಲು ಸಾಧ್ಯವಾಗಲಿಲ್ಲ, ಜೋರಾಗಿ ನಕ್ಕರು. ಶಿಷ್ಯನಿಗೆ ತುಂಬಾ ಅವಮಾನವಾಯಿತು. ತುಂಬಾ ಬೇಜಾರು ಮಾಡಿಕೊಂಡು ಮೂರು ದಿನಗಳವರೆಗೆ ಊಟ ತಿಂಡಿ ಮಾಡಲಿಲ್ಲ. ಮೂರನೇ ದಿನ ಸಾಯಾಂಕಾಲ ಗುರುಗಳ ಹತ್ತಿರ ಬಂದು "ನೀವು ನಕ್ಕಿದ ಕಾರಣ ನನಗೆ ತುಂಬಾ ಬೇಜಾರಾಗಿದೆ, ನನಗೆ ಊಟ, ನಿದ್ದೆ ಕೂಡ ಬರುತ್ತಿಲ್ಲ" ಎಂದು ಹೇಳಿದ.
ಆಗ ಗುರುಗಳು "ಆ ಶಿಷ್ಯನಿಗೆ ನಿನ್ನ ಸಮಸ್ಯೆ ಏನೆಂದು ಗೊತ್ತೇ?, ನಿನ್ನಲ್ಲಿರುವ ಸಮಸ್ಯೆ ಅಂದರೆ, ನಿನಗಿಂತ ಕೋಡಂಗಿ ಮೇಲು" ಎಂದರು. ಇದನ್ನು ಕೇಳಿದ ಆ ಶಿಷ್ಯ ಆಶ್ಚರ್ಯದಿಂದ "ಕೋಡಂಗಿಯನ್ನು ನನಗಿಂತ ಮೇಲು ಎಂದು ನಿಮಗೆ ಹೇಳಲು ಹೇಗೆ ಸಾಧ್ಯವಾಯಿತು ಗುರುಗಳೇ?" ಎಂದು ಕೇಳಿದ.
ಅದಕ್ಕೆ ಗುರುಗಳು "ಮತ್ತೇನು? ಕೋಡಂಗಿ ಕೊನೆಯ ಪಕ್ಷ ಬೇರೆಯವರನ್ನು ನಗಿಸುತ್ತಾನೆ, ಆದರೆ ನಿನಗೆ ಬೇರೆಯವರು ನಕ್ಕಿದ್ದೇ ಸಹಿಸಿಕೊಳ್ಳಲಾಗಲಿಲ್ಲವಲ್ಲ" ಎಂದರು. ಆಗ ಆ ಶಿಷ್ಯನು ತನ್ನ ತಪ್ಪನ್ನು ಅರಿತುಕೊಂಡನು.



Click it and Unblock the Notifications
