Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಅಮಾವಾಸ್ಯೆ-ಹುಣ್ಣಿಮೆ ನಡುವಿನ ಇಂಟರೆಸ್ಟಿಂಗ್ ಕಥಾಲೋಕ
ಹಿಂದೂ ಪುರಾಣದಲ್ಲಿ ಚಂದ್ರನ ಬಗ್ಗೆ ಹಲವಾರು ಮಿಥ್ಯೆಗಳಿವೆ. ಅದರಲ್ಲೂ ಚಂದ್ರನಿಲ್ಲದ ಅಥವಾ ಅಮಾವಾಸ್ಯೆಯನ್ನು ವಿವರಿಸುವ ಒಂದು ಕಥೆಯೂ ಇದೆ. ಹಿಂದೂ ಪುರಾಣದ ಪ್ರಕಾರ ಸೋಮದೇವ ಅಥವಾ ಚಂದ್ರದೇವ ಚಂದ್ರನ ಅಧಿಪತಿಯಾಗಿದ್ದಾನೆ. ಈತನ ರಥವನ್ನು ಹತ್ತು ಶ್ವೇತ ಕುದುರೆಗಳು ಅಥವಾ ಜಿಂಕೆಗಳು ಎಳೆಯುತ್ತವೆ. ಈತ ಅತ್ಯಂತ ಸ್ಪುರದ್ರೂಪ ಪಡೆದಿರುವ, ಬೆಳ್ಳಗಿನ ಯುವಕನಾಗಿದ್ದು ಕೈಯಲ್ಲಿ ದಂಡ ಹಾಗೂ ಕಮಲವನ್ನು ಹಿಡಿದಿರುತ್ತಾನೆ.
ಎಲ್ಲಾ ಮೊಲಗಳು ಈತನ ರಕ್ಷಣೆಯಲ್ಲಿವೆ ಹಾಗೂ ಈತ ಸೋಮವಾರದ ಅಧಿಪತಿಯೂ ಆಗಿದ್ದಾನೆ. ಹಾಗಾದರೆ ಚಂದ್ರ ಬೆಳೆಯುವ ಅಥವಾ ಕುಂದುವ ಮೂಲಕ ಅಮಾವಾಸ್ಯೆ ಹುಣ್ಣಿಮೆಯಾಗುವುದೇಕೆ? ಬನ್ನಿ, ಈ ನೈಸರ್ಗಿಕ ವಿದ್ಯಮಾನದ ಬಗ್ಗೆ ಹಿಂದೂ ಪುರಾಣ ಏನು ಹೇಳುತ್ತದೆ ಎಂದು ನೋಡೋಣ...
ಸೋಮದೇವ ಪ್ರಜಾಪತಿ ದಕ್ಷ ಎಂಬಾತನ ಇಪ್ಪತ್ತೇಳು ಹೆಣ್ಣು ಮಕ್ಕಳೊಂದಿಗೆ ವಿವಾಹ ಮಾಡಿಕೊಂಡಿದ್ದ. ಇವರಲ್ಲಿ ಅತ್ಯಂತ ಸುಂದರಿಯಾಗಿದ್ದ ರೋಹಿಣಿಯನ್ನು ಆತ ಅತಿ ಹೆಚ್ಚಾಗಿ ಪ್ರೀತಿಸುತ್ತಿದ್ದ. ಆಗ ಉಳಿದವರು ಈ ಬಗ್ಗೆ ತಮ್ಮ ತಂದೆ ದಕ್ಷನಲ್ಲಿ ದೂರು ನೀಡಿದರು. ಇದನ್ನು ಕೇಳಿ ದಕ್ಷ ಸಿಟ್ಟಿನಿಂದ ಕುದಿಯತೊಡಗಿದ. ಈ ಕೋಪದಲ್ಲಿ ಆತ ಸೋಮದೇವನನ್ನು ತನ್ನ ಸೌಂದರ್ಯ ಮತ್ತು ಕಾಂತಿಯನ್ನು ಕಳೆದುಕೊಳ್ಳುವಂತೆ ಶಪಿಸಿದ.

ಆದರೆ ಈ ಶಾಪದಿಂದ ಭೂಲೋಕಕ್ಕೆ ರಾತ್ರಿ ಪ್ರಕಾಶವೇ ಇಲ್ಲದೇ ಕತ್ತಲಲ್ಲಿ ಮುಳುಗಿತು. ಬಳಿಕ ಚಂದ್ರದೇವ ಭೂಲೋಕಕ್ಕೆ ಇಳಿದು ಭಗವಂತ ಶಿವನನ್ನು ಈ ಶಾಪದಿಂದ ಮುಕ್ತಿಗೊಳಿಸಲು ಪ್ರಾರ್ಥಿಸತೊಡಗಿದ. ಈತನ ಭಕ್ತಿಯನ್ನು ಮೆಚ್ಚಿದ ಶಿವ ಈತನನ್ನು ಶಾಪವಿಮುಕ್ತಿಗೊಳಿಸಿದ ಆದರೆ ಪೂರ್ಣವಾಗಿ ಅಲ್ಲ. ಬದಲಿಗೆ ಪ್ರತಿ ಹದಿನೈದು ದಿನಕ್ಕೊಂದು ಬಾರಿ ತನ್ನ ಸೌಂದರ್ಯವನ್ನು ಪಡೆದುಕೊಳ್ಳುವಂತೆ ಮಾಡಿದ. ಇದೇ ಕಾರಣಕ್ಕೆ ತಿಂಗಳಿಗೊಂದು ಬಾರಿ ಚಂದ್ರ ಸೌಂದರ್ಯರಹಿತನಿಂದ (ಅಮಾವಾಸ್ಯೆ) ಪರಿಪೂರ್ಣ ಸೌಂದರ್ಯ (ಹುಣ್ಣಿಮೆ) ಪಡೆಯುತ್ತಾ ಸಾಗಿದ್ದಾನೆ.
ಇನ್ನೊಂದು ಕಥೆಯಲ್ಲಿ ಪ್ರಾರಂಭ ಒಂದೇ ತರನಾಗಿದ್ದರೂ ಚಂದ್ರ ರೋಹಿಣಿಯ ಪ್ರೇಮದಲ್ಲಿ ತನ್ನ ಉಳಿದ ಇಪ್ಪತ್ತಾರು ಮಕ್ಕಳಿಗೆ ನಿರ್ಲಕ್ಷ್ಯ ತೋರುತ್ತಿದ್ದಾನೆ ಎಂದು ದಕ್ಷ ಅರಿತಾಕ್ಷಣ ಕೋಪಗೊಂಡು ಚಂದ್ರನನ್ನು ಶಪಿಸುತ್ತಾನೆ. ಈತನ ಗರ್ವಕ್ಕೆ ಕಾರಣವಾದ ಸೌಂದರ್ಯವೇ ಇಲ್ಲದಂತಾಗಲಿ ಎಂದು ಶಪಿಸುತ್ತಾನೆ.
ಆ ಪ್ರಕಾರ ಈತ ಯಾವಾಗ ರೋಹಿಣಿಯೊಂದಿಗಿದ್ದು ಇತರ ಪತ್ನಿಯರನ್ನು ಕಡೆಗಣಿಸುತ್ತಾನೋ ಆಗ ಆಗಸದಲ್ಲಿ ಚಂದ್ರನಿರುವುದಿಲ್ಲ. ಬಳಿಕ ತನ್ನ ಇತರ ಪತ್ನಿಯರ ಕಡೆಗೂ ಗಮನ ಹರಿಸಿದರೆ ನಿಧಾನವಾಗಿ ತನ್ನ ಮೊದಲಿನ ಸೌಂದರ್ಯವನ್ನು ಪಡೆದುಕೊಳ್ಳುತ್ತಾ ಬರುತ್ತಾನೆ. ವೈದಿಕ ಕಾಲದಲ್ಲಿ ಕುಡಿಯಲಾಗುತ್ತಿದ್ದ ಸೋಮರಸ ಅಂದಿನ ಕಾಲದ ಪ್ರಬಲ ಮದ್ಯವಾಗಿತ್ತು.
ಕೆಲವು ಮರದ ತೊಗಟೆಗಳನ್ನು ಕುದಿಸಿ ಸೋಸಿ ಈ ರಸವನ್ನು ತಯಾರಿಸಲಾಗುತ್ತಿತ್ತು. ಚಂದ್ರನ ಅಧಿಪತಿಯಾದ ಸೋಮದೇವ ಈ ಸೋಮರಸಕ್ಕೂ ಅಧಿಪತಿಯಾಗಿದ್ದ ಹಾಗೂ ಈತನಲ್ಲಿಯೇ ಇದರ ಸಂಗ್ರಹವಿರುತ್ತಿತ್ತು. ದೇವತೆಗಳು ಈ ಸೋಮರಸವನ್ನು ಕುಡಿದು ಸಂಗ್ರಹವನ್ನು ಬರಿದು ಮಾಡಿದಾಗ ಚಂದ್ರ ತನ್ನ ಕಾಂತಿಯನ್ನು ಕಳೆದುಕೊಂಡು ಅಮಾವಾಸ್ಯೆಯಾಗುತ್ತದೆ.
ಸಂಗ್ರಹ ಮತ್ತೆ ತುಂಬಿಕೊಂಡಾಗ ಹುಣ್ಣಿಮೆಯಾಗುತ್ತದೆ. ಈ ಎಲ್ಲಾ ಕಥೆಗಳು ಹಿಂದೂ ಪುರಾಣದ ಅಂಗವಾಗಿವೆ. ವಾಸ್ತವದಲ್ಲಿ ಅಮಾವಾಸ್ಯೆ ಹುಣ್ಣಿಮೆಗಳಿಗೆ ಸೂಕ್ತವಾದ ವೈಜ್ಞಾನಿಕ ವಿವರಣೆ ಇದೆ ಹಾಗೂ ಇಂದು ಈ ಬಗ್ಗೆ ನಿಖರವಾದ ಲೆಕ್ಕಾಚಾರವನ್ನು ತಿಳಿಸಲು ಸಾಧ್ಯ. ಈ ವೈಜ್ಞಾನಿಕ ಯುಗದಲ್ಲಿಯೂ ಈ ಪುರಾಣದ ಕಥೆಗಳು ರೋಚಕತೆಯನ್ನು ಮೂಡಿಸಿ ಭ್ರಮಾಲೋಕದಲ್ಲೊಂದು ವಿಹಾರ ಮಾಡಲು ಖಂಡಿತಾ ನೆರವಾಗುತ್ತವೆ.



Click it and Unblock the Notifications
