Latest Updates
-
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ -
ಎಸ್ಪಿಎಫ್ ಸ್ಟಿಕ್: ಬಿಸಿಲ ಬೇಗೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್: ಅಯೋಧ್ಯೆಯಲ್ಲಿ ಯೋಗದ ಅದ್ಭುತ ಕೌಶಲ ಪ್ರದರ್ಶನ -
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ! -
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ
ಸ್ಪೂರ್ತಿ ಸೆಲೆ ತುಂಬುವ ವಿವೇಕಾನಂದರ ಮಾತುಗಳಿವು
ಸ್ವಾಮಿ ವಿವೇಕಾನಂದರ ಬಗ್ಗೆ ಭಾರತದ ಪ್ರತಿಯೊಬ್ಬ ನಾಗರೀಕನೂ ತಿಳಿದುಕೊಳ್ಳಲೇಬೇಕು. ಭಾರತದ ಆಧ್ಯಾತ್ಮಿಕ ಪಿತಾಮಹ ಸ್ವಾಮಿ ವಿವೇಕಾನಂದರು ಎಂದರೆ ತಪ್ಪಾಗಲಾರದು. ಅವರು ಭಾರತದ ಯುವ ಜನಾಂಗಕ್ಕೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಇಂದು ಅವರನ್ನು ನೆನಪಿಸಿಕೊಳ್ಳುವ ಕರ್ತವ್ಯ ಎಲ್ಲಾ ಭಾರತೀಯರದ್ದಾಗಿದೆ.
ಈ ದಿನ ಸ್ವಾಮಿ ವಿವೇಕಾನಂದರ 156ನೇ ಜನ್ಮ ದಿನದ ಜಯಂತ್ಯೋತ್ಸವವನ್ನು ದೇಶದಾದ್ಯಂತ ವಿನಮ್ರಪೂರ್ವಕವಾಗಿ ಆಚರಿಸಲಾಗುತ್ತಿದೆ.

ಅವರ ಉಪದೇಶಗಳು ಭಾರತೀಯರನ್ನು ಮೈಮನ ನವಿರೇಳಿಸುವಂತೆ ಮಾಡಿ ದೇಶ ಪ್ರೇಮ ಮತ್ತು ಅವರು ಕೈಗೊಳ್ಳಬೇಕಾದ ಜೀವನದ ಸಾಧನೆಗಳ ಬಗ್ಗೆ ಅನೇಕ ಮಾರ್ಗದರ್ಶನಗಳನ್ನು ನಮಗಾಗಿ ನೀಡಿದ್ದಾರೆ. ಇಡೀ ಭಾರತದ ಹೆಮ್ಮೆಯ ಪ್ರತೀಕ ಸ್ವಾಮಿ ವಿವೇಕಾನಂದರು. ಅವರ ಸ್ಫೂರ್ತಿಧಾಯಕ ಉಪದೇಶಗಳ ಕೆಲವು ಮುನ್ನೋಟವನ್ನು ನಿಮಗಾಗಿ ನೀಡಲಾಗಿದೆ. ಮುಂದೆ ಓದಿ.
*ನಿಮ್ಮ ಆತ್ಮವೇ ನಿಮ್ಮ ನಿಜವಾದ ಗುರು. ನೀವು ಮೊದಲು ನಿಮ್ಮನ್ನು ನೀವು ಅರಿಯುವುದನ್ನು ಪ್ರಯತ್ನಿಸಿ. ನಿಮ್ಮನ್ನು ಯಾರಿಂದಲೂ ಕಲಿಸಲು ಸಾಧ್ಯವಿಲ್ಲ. ನಿಮಗೆ ನೀವೇ ಗುರು.
*ನಿಮ್ಮನ್ನು ನೀವು ನಂಬದ ಹೊರತು ದೇವರನ್ನು ನಂಬಲು ಸಾಧ್ಯವಿಲ್ಲ.
*ಈ ಪ್ರಪಂಚವೇ ಒಂದು ವ್ಯಾಯಾಮ ಶಾಲೆಯಿದ್ದಂತೆ. ಎಲ್ಲರನ್ನೂ ಸದೃಢಗೊಳಿಸುವ ಸಂಘಟಿತ ಕೇಂದ್ರವಾಗಿದೆ.
*ನಿಮ್ಮ ಮನಸ್ಸು ಮತ್ತು ಬುದ್ಧಿಯ ಹೊಡೆದಾಟದಲ್ಲಿ ಮೊದಲು ಮನಸ್ಸಿನ ಮಾತನ್ನು ಅನುಸರಿಸಿ.
*ನಿಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಕುಂಠಿತಗೊಳಿಸುವ ಯಾವುದೇ ಸಾಧನವನ್ನು ವಿಷವೆಂದು ದೂರವಿಡಿ.
*ಸಂಬಂಧಗಳು ನಿಮ್ಮ ಜೀವನಕ್ಕಿಂತ ಅಮೂಲ್ಯವಾದದ್ದು. ಈ ಗುಣಾತ್ಮಕ ಸಂಬಂಧಗಳನ್ನು ನಿಮ್ಮ ಜೀವನದಲ್ಲಿ ಹೊಂದಲು ಪ್ರಯತ್ನಿಸಿ.
*ಪ್ರೀತಿಸಿ ಅಥವಾ ದ್ವೇಷಿಸಿ, ಎರಡೂ ನಮ್ಮಲ್ಲೇ ಇವೆ. ಪ್ರೀತಿಸಿದರೆ ಅದು ಮನಸ್ಸಿನಿಂದ ಮತ್ತು ದ್ವೇಷಿಸಿದರೆ ಅದು ಬುದ್ಧಿಯಿಂದ ಎಂಬುದನ್ನು ತಿಳಿದುಕೊಳ್ಳಿ.
*ನಿಮಗೆ ಸಹಾಯಹಸ್ತ ಚಾಚಿದವರನ್ನು ಮರೆಯಬೇಡಿ, ನಿಮ್ಮನ್ನು ಪ್ರೀತಿಸಿದವರನ್ನು ದ್ವೇಷಿಸಬೇಡಿ, ನಿಮ್ಮನ್ನು ನಂಬಿದವರಿಗೆ ಮೋಸ ಮಾಡಬೇಡಿ.
*ಮೊದಲು ಒಂದು ಕಲ್ಪನೆಯನ್ನು ಮಾಡಿಕೊಳ್ಳಿ. ಅದನ್ನು ನಿಮ್ಮ ಜೀವನದಲ್ಲಿ ಅಳವಡಿಸಲು ಪ್ರಯತ್ನಿಸಿ. ಅದನ್ನು ಸಾಕಾರಗೊಳಿಸಲು ನಿಮ್ಮ ಇಡೀ ಜೀವನವನ್ನೇ ಮುಡಿಪಾಗಿಸಿ.
*ನಿಮ್ಮ ಮೆದುಳು, ಮಾಂಸಖಂಡಾ, ನರಗಳು, ನಿಮ್ಮ ದೇಹದ ಎಲ್ಲಾ ಅಂಗಗಳು ನಿಮ್ಮ ಕಲ್ಪನೆಯನ್ನು ಸಾಕಾರಗೊಳಿಸಲು ಒಂಟಿಯಾಗಿ ಸರ್ವಪ್ರಯತ್ನ ಮಾಡಿ. ಇದೊಂದೇ ಯಶಸ್ಸಿನ ಮೆಟ್ಟಿಲು. ಈ ಸಂದರ್ಭದಲ್ಲಿ ನಿಮಗೆಲ್ಲರಿಗೂ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವದ ಹಾರ್ದಿಕ ಶುಭಾಶಯಗಳು.



Click it and Unblock the Notifications













